ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಳಲಿದ ಭೂತಾಯಿ ನೀರಾಗ ನೆನೆದವ್ಳೆ
ಗಂಗೆಯು ಹರಿದು ಕುಣಿದಾವ್ಳೆ|ರೈತನ|
ಮನದಾಗ ಖುಷಿಯ ತುಂಬವ್ಳೆ

 ಗದ್ದೇಲಿ ಬಿತ್ತಿದ ನೇಜಿಯ ಹರಿದವ್ರೆ
ನಾಟಿಯ ಮಾಡಲು ಒಯ್ತವ್ರೆ|ನಾರಿಯರು|
ಸಂತಸದಿ ಎತ್ಕೊಂಡು ನಡೆದವ್ರೆ

ಹೊಲವನ್ನು ಉತ್ರವ್ರೆ ನಾಟಿಯ ಮಾಡವ್ರೆ
ಧರಣಿಯು ಹಸಿರನ್ನು ಹೊದ್ದವ್ಳೆ|ಸುತ್ತೆಲ್ಲ|
ಬೆಳೆಯಿಂದ ಕಂಗೋಳಿಸಿ ನಿಂದವ್ಳೆ.

ಹಸಿರಲ್ಲಿ ಭೂತಾಯಿ ಉಸಿರನ್ನು ನೀಡವ್ಳೆ
ಬಸಿರಿಗೆ ಜೀವವ ತುಂಬವ್ಳೆ |ನಮ್ಮವ್ವ|
ಹಸನಾಗಿ ಪೋಷಣೆ ಮಾಡ್ತವ್ಳೆ.

ಡಾ.ಸುಮತಿ ಪಿ

About The Author

Leave a Reply

You cannot copy content of this page

Scroll to Top