ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರೆಕ್ಕೆ ಬಲಿತ ಹಕ್ಕಿಗಳು ನಾವು
ಆಗಸದೆತ್ತರಕ್ಕೆ ಹಾರೋಣ ಬಾ
ರೆಕ್ಕೆ ಮುರಿದ ಮೇಲೆ
ಹಾರುವ ಚಿಂತೆ ಈಗೇಕಂತೆ

ಸುಗಂಧ ಬೀರುವ ಹೂವಿನಂತೆ
ಅರಳಿ ಬದುಕೋಣ ಬಾ
ದೇವರ ಶಿರಕೊ,ನಾರಿಯ ಮುಡಿಗೊ
ಸೇರುವ ಚಿಂತೆ ಈಗೇಕಂತೆ

ಚಿಂತೆಗಳಿಲ್ಲದ ಜೀವನ ಇದಲ್ಲ
ಕಂತೆ ಕನಸುಗಳಿವೆಯಲ್ಲ!
ಮತ್ತೆ ಕಾಡುವ ಸಾಲು ಸಾಲು
ಸವಾಲುಗಳಿವೆಯಲ್ಲ!

ಬಿರಿದು ನಿಂತಿಹೆನು ನಾನು
ದುಂಬಿಯಾಗಿ ಬರುವೆಯ ನೀನು
ಮಕರಂದವನು ಹೀರುತ್ತಿರು
ಸಮರಸದಿ ಸರಸವಾಡೋಣ ಬಾ

ಮುಂದಿನ ಬದುಕಿನ ಭರವಸೆಗೆ
ಭಯದ ನೆರಳಿದೆಯಲ್ಲ
ಚಿಂತಿಸದಿರು,ಮರೆತು ಬಿಡು ಸಾಕು
ಬದುಕಲಿ ಇಂದು ನೆಮ್ಮದಿಯಿರಬೇಕು.


About The Author

Leave a Reply

You cannot copy content of this page

Scroll to Top