ಕಾಡಜ್ಜಿ ಮಂಜುನಾಥ ಅವರ ಕವಿತೆ-ಶಾಲೆ ತೆರೆದಿದೆ……!!

ಬನ್ನಿ ಮಕ್ಕಳೇ
ಶಾಲೆ ತೆರೆದಿದೆ
ಹೊಸ ಬಟ್ಟೆ, ಪಠ್ಯ ಪುಸ್ತಕ
ಪಡೆಯಿರಿ;
ನಗುತ ಬನ್ನಿರಿ
ಹಾಲು ಕುಡಿಯಿರಿ
ಆಟ ಪಾಠದಿ ಕಲಿಯಿರಿ
ಗುರುಗಳ ಮಾತಿಗೆ
ಕಿವಿಯಾಗಿರಿ;
ಅನುಪಾಲಿಸಿ ಬದುಕನು
ಬದಲಿಸಿಕೊಳ್ಳಿರಿ;
ಹಾಡು ಹೇಳುತ ಕುಣಿದು
ಕುಪ್ಪಳಿಸಿ
ರಜೆಯ ಮರೆಯುತ
ಹೊಸ ಕಲಿಕೆಗೆ
ಮರಳಿರಿ;
ಬಿಸಿಯೂಟದ ಸವಿಯ
ಜೊತೆಗೆ
ಜ್ಞಾನದೂಟವ
ಸವಿಯಿರಿ;
ನೀತಿಕಥೆಗಳ
ಕೇಳುತ
ನೈತಿಕತೆಯನು
ಬೆಳೆಸಿಕೊಳ್ಳಿರಿ;
ಅರಿಯದ ವಿಷಯವ
ಗುರುಗಳೊಂದಿಗೆ
ಚರ್ಚಿಸಿ
ಆತ್ಮವಿಶ್ವಾಸ
ಪಡೆಯಿರಿ;
ಅಂಕಗಳಿಕೆಯ
ಹಾದಿ ತುಳಿಯದೆ
ಬದುಕಿನ ಪಾಠವ
ತಿಳಿಯಿರಿ;
ನೆಮ್ಮದಿಯ ನಾಳೆಗಾಗಿ
ಶಿಕ್ಷಣವೆಂಬ
ಮಂತ್ರವ ಸದಾ
ಪಠಿಸಿರಿ;
ತಂದೆತಾಯಿಯರ
ನಂಬಿಕೆಯ ಗೋಡೆಯ
ಬೀಳಿಸದಿರಿ;
ಗುರುಹಿರಿಯರ
ಗೌರವಿಸಿ
ತಮ್ಮ ಆತ್ಮ ಗೌರವ
ಹೆಚ್ಚಿಸಿಕೊಳ್ಳಿ;
ಬನ್ನಿ ಮಕ್ಕಳೇ
ಶಾಲೆ ತೆರೆದಿದೆ
ಬನ್ನಿರಿ……


Leave a Reply

Back To Top