ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದಿನ ತಿಥಿ ನಕ್ಷತ್ರ
ಒಂದೇ
ಆದರೂ ಆಗಲಿಲ್ಲ ನಾ
ಬುದ್ಧ.
ಆಸೆ ಬಿಡಲಿಲ್ಲ
ಮೋಹ ತೊರೆಯಲ್ಲ
ಮೋಸ ಮುಂದುವರಿಸದೆ ಇರಲಿಲ್ಲ .
ಹೇಗೆ ಆಗಲಿ ನಾನೂ ಒಬ್ಬ ಬುದ್ಧ!

ತಂದೆ
ನೀನು ಆಗಿ
ಹೋಗಿದ್ದು
ಸಹಸ್ರಾರು ಸಂವತ್ಸರಗಳ
ಹಿಂದೆ.
ಕಾಲ ಬದಲಿದೆ ಈಗ
ಸ್ವಾರ್ಥಿ ಮನವೀಗ ಕಲುಷಿತವಾಗಿದೆ

ನಿನ್ನ
“ಆಸೆಯೇ ದುಃಖಕ್ಕೆ ಮೂಲ”
ಈಗ
ನೀತಿ ಪಾಠದಲ್ಲಷ್ಟೆ ಮೂಲ
ನಿನ್ನ
ರಾಜ್ಯ ಕೋಶ ಸಂಸಾರ
ತೊರೆವ ಮನಸ್ಥಿತಿ,
ನಿನ್ನ ದೇಶ ದೇಹಗಳ ಮೀರಿ
ಮುಕ್ತಿ ಹೊಂದುವ ಧಾಟಿ
ಈಗೆಲ್ಲ ವರ್ಜ್ಯ !
ತ್ಯಾಜ್ಯ ಈಗೆಲ್ಲ ನಿನ್ನ
ಸಾಧನೆ ಸಂಕೀರ್ತನೆ
ಉಪದೇಶ ಪರಿವರ್ತನೆ

ಈಗ
“ಆಸೆಯೇ ಸುಖದ ಮೂಲ”
ಗುರಿ
“ಧನವೇ ಸುಖದ ಮೂಲ “

ಎಂದೇ ನನ್ನ
ಹುಟ್ಟಿದ ದಿನ
ತಿಥಿ ಘಳಿಗೆ ಕಾಲ
ನಿನ್ನದೇ ಆದರೂ
ಕಾಲ ಬದಲಾಯಿಸಿದೆ
ಕಾಲ ಚಕ್ರನ ಓಘ!

ಕಾಲಾಯ ತಸ್ಮೈನಮಃ


About The Author

3 thoughts on “ಡಾ ಡೋ.ನಾ.ವೆಂಕಟೇಶ ಕವಿತೆ-ನನ್ನ ಬುದ್ದನ ಹುಟ್ಟಿದ ದಿನ”

  1. ಬುದ್ಧ ಬಸವ ಅಂಬೇಡ್ಕರ ಬಂದು ಹರಿಸಿ ಹೋದರು
    ನಾವು ಸ್ಮರಿಸಿ ಕೊಂಡರೂ ಇಲ್ಲ ತತ್ವಾಚರಣೆ
    ಮತ್ತದೇ ಖಾಲಿ ಡಬ್ಬಿ ಸದ್ದು

    ಅಶೋಕ್ ಹಂಪಣ್ಣವರ
    ಸವದತ್ತಿ

  2. ನಿಮ್ಮ ಭಾವನೆಗಳನ್ನು
    ಸುಂದರವಾಗಿ ವ್ಯಕ್ತಪಡಿಸಿದ್ದೀರಿ.
    ಕವಿತೆ ಪ್ರಭಾವಶಾಲಿಯಾಗಿದೆ.

Leave a Reply

You cannot copy content of this page

Scroll to Top