ನಾಗರಾಜ ಜಿ. ಎನ್. ಬಾಡ ಕವಿತೆ-ಪೂರ್ಣಮಿಯ ಬೆಳಕಲ್ಲಿ

ಎಲ್ಲ ಬಿಟ್ಟು ಸಿದ್ದ
ಮಧ್ಯರಾತ್ರಿಯಲ್ಲಿ ಹೊರಟ
ಅರಮನೆಯ ಸಕಲ
ಐಶ್ವರ್ಯವ ಮರೆತ
ಜ್ಞಾನದ ಬೆಳಕು ಪಡೆದ
ಸಿದ್ಧ ಬುದ್ಧನಾದ
ಬುದ್ಧನಾಗಿ ಪ್ರಬುದ್ಧನಾಗಿ
ಜಗದ ಬೆಳಕಾದ

ಪೂರ್ಣಮಿಯ ಬೆಳಕಲ್ಲಿ
ಬೆಳಕಾಗಿ ಹೋದ
ಶಾಂತಿಯಿಂದ ಬುದ್ಧ
ಎಲ್ಲವನ್ನು ಪಡೆದ
ಪಡೆದ ಜ್ಞಾನವನ್ನೆಲ್ಲ
ಜನರಿಗೆ ಧಾರೆ ಎರೆದ

ಜ್ಞಾನ ದೀಪವ ಬೆಳಗಿಸಿ
ಅಜ್ಞಾನವ ದೂರಸರಿಸಿದ
ಶಾಂತಿದೂತನಾಗಿ ಜಗದ
ಕಣ್ಣ ತೆರೆದ
ಬುದ್ಧನ ನಗು ಜಗವ ಬೆಳಗಲಿ
ಶಾಂತಿ ನೆಮ್ಮದಿ ಜಗದಿ ಉಳಿಯಲಿ

ನಮ್ಮ ಮನದಲ್ಲಿಯ ರಾಕ್ಷಸ
ಭಾವ ಅಳಿಯಲಿ
ಶಾಂತಿ ಸೌಹಾರ್ದತೆ
ಎಲ್ಲೆಡೆ ನೆಲೆಸಲಿ

ನಮ್ಮೊಳಗೂ ಒಬ್ಬ
ಬುದ್ಧ ಹುಟ್ಟಿ ಬರಲಿ
ನಾನು ನನ್ನದೆಂಬ
ಅಹಂಕಾರವ ತೊರೆಯಲಿ
ಎಲ್ಲರೂ ನಮ್ಮವರೇಂಬ
ಭಾವ ಬಿತ್ತಿ ಬೆಳೆಯಲಿಬೆಳೆಯಲಿ

ಕಷ್ಟಗಳಿಂದ ಮುಕ್ತಿಯ ಕೊಡಲಿ
ಪಂಚೇಂದ್ರಿಯಗಳ ಹಿಡಿತ
ನಮ್ಮೊಳಗಿರಲಿ
ದ್ವೇಷ ಅಸೂಯೆ ಮೋಹ
ಮದ ಮತ್ಸರವ ನಮ್ಮಿಂದ ದೂರ ತಳ್ಳಲಿ

4 thoughts on “ನಾಗರಾಜ ಜಿ. ಎನ್. ಬಾಡ ಕವಿತೆ-ಪೂರ್ಣಮಿಯ ಬೆಳಕಲ್ಲಿ

  1. ಬುದ್ಧನ ಜೀವನ ಜ್ಞಾನದ ದೀವಿಗೆ
    ಸುಂದರ ಕವನ ರಚನೆ ಸರ್

    Sripad Algudkar ✍️

    1. ನಿಜ, ನಮ್ಮೊಳಗೂ ಒಬ್ಬ ಬುದ್ಧ ಹುಟ್ಟಿ ಬರಲಿ.

  2. ಜಗಕೆ ಬೆಳಕು ಬುದ್ಧನ ನಗು. ಅದೊಂದು ನಿರಂತರ ಶಕ್ತಿ ಬದುಕಿಗೆ ಮತ್ತು ಬದುಕುವ ಭಾವಕ್ಕೆ. ಪರಿಶುದ್ಧತೆ, ಶಾಂತಿ,ಸಹನೆ ನೆಮ್ಮದಿಯ ಪ್ರತಿರೂಪ. ಶಾಂತಿ ಬದುಕಿನ ಅನುರೂಪವಾಗಿ ನಿಂತ ಅನಂತತೆ ಎಲ್ಲರ ಬದುಕಿಗೆ ದಾರಿದೀಪ. ನಮ್ಮೊಳಗೆ ಒಳಿತಿನ ಭಾವ ಬೆಳೆಯಲಿ ಉಳಿದು ಉಪಕಾರಿಯಾಗಿ ಎನ್ನುವ ಸಾಲುಗಳು ಕವನದ ಸೂಕ್ಷ್ಮತೆ ಎನಿಸುತ್ತದೆ…… ಚೆನ್ನಾಗಿದೆ

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ
    ಕುಮಟಾ.

Leave a Reply

Back To Top