ಡಾ.ರೇಣುಕಾತಾಯಿ.ಸಂತಬಾ ಅವರ ಕವಿತೆ-ಮುಂಗಾರಿನ ಜೀವೋತ್ಸವ

ಮಿದುವಾಯಿತು ಮುಂಗಾರಿಗೆ ನೆಲ
ಮುದ ತಂದಿತು ಅಭಿಷೇಕದ ಜಲ
ಸುಡುವ ಧರೆಗೆಲ್ಲಾ ತಂಪೆರೆಯಿತು
ಧಗೆ ಆರಿದ ಎದೆಯೆಲ್ಲ ಇಂಪಾಯಿತು

ಕೊಂಬೆಗಳ ಮೈ ಮನದಲಿ
ಚಿಗುರಿತು ಹುಮ್ಮಸ್ಸಿನ ಚಿಗುರು
ನಾಳೆಯ ಕನಸನು ಕಂಡಿತು
ಮೊಗ್ಗಾಗಿ ಅರಳುವ ಸುಮವು

ಬಯಕೆಯ ಬೇಗುದಿಗೆ ಬಾಯಾರಿದ
ಬಾಯಿಗಳಿಗೆಲ್ಲ ಚುಮುಕಿತು ಪನ್ನೀರು
ಕಂಗಳಿಗೆಲ್ಲ ತಣ್ಣನೆಯ ತಂಗಾಳಿ
ಮುದ್ಧಿಸುತಿದೆ ಪ್ರೀತಿಯಲಿ ಹಸಿರು

ಬ್ರಹ್ಮಾಂಡ ಭರವಸೆಗಳಲಿ
ನೇಗಿಲ ಗೆರೆಗಳು ಹೊಲದಲಿ
ಧರೇಯ ರತ್ನ ರೈತನ ಬೆವರಲಿ
ಮುಂಗಾರಿನ ಗಾನ ಜೀವೋತ್ಸವದಲಿ

3 thoughts on “ಡಾ.ರೇಣುಕಾತಾಯಿ.ಸಂತಬಾ ಅವರ ಕವಿತೆ-ಮುಂಗಾರಿನ ಜೀವೋತ್ಸವ

Leave a Reply

Back To Top