ಎಸ್ಕೆ ಕೊನೆಸಾಗರ ಅವರ ಭಾನುವಾರದ ಹಾಯ್ಕುಗಳು

ಸ್ವಾಮಿಗಳಿಗೂ
ರಾಜಕೀಯದ ಗೀಳು
ಕೆಟ್ಟಿತು ಧರ್ಮ

ದೇವರು, ದೆವ್ವ
ನಿಜವಲ್ಲವೆಂದರೂ
ನಂಬಿದ ಜನ

ಗಂಡ ಹೆಂಡತಿ
ಕ್ಷಣದ ಮೋಹ ; ನಾಳೆ
ಜಗದುದಯ

ರಾಜಕಾರಣಿ
ಭರವಸೆ, ನಾಳೆಯ
ಮೋಹ ಪರದೆ

ಸಾವು ಎಂಬುದು
ನಮಗೆಲ್ಲ ನಾಳೆಯ
ಬಿಡದ ಬಂಧು

————–

Leave a Reply

Back To Top