ಬಾಗೇಪಲ್ಲಿ ಕೃಷ್ಣಮೂರ್ತಿ ಅವರ ಗಜಲ್

ಪ್ರೇಮಿಗಳ ಪಿಸುಮಾತೇ ಇಲ್ಲವಾಯ್ತಲ್ಲೋ
ಗಜಲ್ಕಾರ
ಹರಿಣಿಯ ರೋಧನವದು ಕೇಳಿಸದಾಯ್ತಲ್ಲೋ
ಗಜಲ್ಕಾರ

ಪವಿತ್ರ ಪ್ರೇಮವದು ಪ್ರಜ್ವಲ ಉರಿದು
ಬಹಿರಂಗವಾಯ್ತು
ಎಲ್ಲರೂ ತರ್ಹೀಗಜಲ್
ಯತ್ನಿಸಿದಂತಾಯ್ತಲ್ಲೋ ಗಜಲ್ಕಾರ

ಅನುಭವ ಮಂಟಪದಂತ ಮದಿರಾಲಯವು
ಮಲಿನವಾಯ್ತು
ಅರಮನೆ ಪೈಶಾಚಿಕ ರಾಸಲೀಲಾ
ತಾಣವಾಯ್ತಲ್ಲೋ ಗಜಲ್ಕಾರ

ಸೌಂದರ್ಯದುಗ್ರಾಣ ನಗ್ನತೆ ವಿಕೃತ
ವಿವಸ್ತ್ರವಾಯ್ತಲ್ಲೋ
ಮದಿರೆಯ ಹೂಜಿಯದು ಒಡೆದು
ಮೈಲಿಗೆಯಾಯ್ತಲ್ಲೋ ಗಜಲ್ಕಾರ

ವಿರಹಿಗಳಿಗೆ ಸಾಂತ್ವನ ನೀಡುತಿದ್ದ ಸಾಕಿಯ
ಗತಿ ಹೆಂಗಿನ್ನುಮುಂದೆ
ಕೃಷ್ಣಾ! ಗೃಹಸ್ಥರಾರೂ ಆಕೆಗೆ ಆಶ್ರಯ
ನೀಡದಂತಾಯ್ತಲ್ಲೋ ಗಜಲ್ಕಾರ

Leave a Reply

Back To Top