ನಿಜಗುಣಿ ಎಸ್ ಕೆಂಗನಾಳ ಕವಿತೆ- ಹಣವೇ ಮುಖ್ಯ

ನಮ್ಮ ಬದುಕಿನಲ್ಲಿ ಅಂದು ಹೇಳುತಿದ್ದರು
ಮುಂದೆ ಗುರಿ ಇರಬೇಕು ಅಂತ
ಹಿಂದೆ ಗುರು ಇರಬೇಕು ಅಂತ
ಆದರೆ ಇಂದು ಹಣವೀರಬೇಕು ಅಂತ..!!

ಇಂದು ನಮ್ಮ ಬದುಕಿನಲ್ಲಿ ಹಣ
ಒಂದಿದ್ದರೆ ಸಾಕು ಯಾವ ಗುರಿಯು
ಗುರಿಯು ಬೇಕಾಗಿಲ್ಲ ಯಾವ
ಗುರುವಿನ ಆಶಿವಾ೯ದವು ಬೇಕಾಗಿಲ್ಲ..!!

ಎಲ್ಲವೂ ಹಣದ ಆಟ ಎಲ್ಲೆಡೆ
ಹಣಕ್ಕಾಗಿ ಕಿತ್ತಾಟ ಕಾದಾಟ
ಹಣದ ಮುಂದೆ ಸಂಬಂಧಗಳು
ಹೇಣವಾಗಿ ಸ್ಮಶಾನದ ಪಾಲಂತ..!!

ಇಂದು ಎಷ್ಟೇ ಕಷ್ಟಪಟ್ಟು ಓದಿದರು
ಪ್ರಯೋಜನವಿಲ್ಲ ಏನೇ ಸಾಧನೆ
ಮಾಡಿದರು ಉಪಯೋಗವಿಲ್ಲ
ಎಲ್ಲವೂ ಹಣದ ಮೇಲೆ ನಿಂತಿರುವಾಗ
ನೀನೇನು ಸಾಧಿಸಿದರು ಏನು ಪ್ರಯೋಜನ
ಅಂತ..!!


Leave a Reply

Back To Top