ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೃದಯ ಮಂದಿರದಿ ಒಳ ಕರೆದು
ಭಾವ ಬುತ್ತಿಯ ಉಣಿಸಿ
ಮತ್ತೆ ಹೊರ ನೂಕುವ
ಕಾರಣವ ನೀ ಹೇಳು…

ನಿನ್ನೆದೆಯ ಆಗಸದಿ
ಕಿರು ತಾರೆಯಾಗಿಸಿ
ಮಿನುಗಿಸಿ ಮೆರೆಸಿ
ಮತ್ತೆ ಕರಗಿಸುವ ಕಾರಣವ ನೀ ಹೇಳು..

ನಿನ್ನ ಮನದಂಗಳದ
ಮಲ್ಲಿಗೆಯಾಗಿಸಿ
ಮತ್ತೆ ಹೊಸಕಿ ಹಾಕುವ
ಕಾರಣವ ನೀ ಹೇಳು…

ಬರ ಸೆಳೆದು ಬಳಿ ಕರೆದು
ಭಾವ ಜೀವವ ಸ್ಫುರಿಸಿ
ಮತ್ತೆ ಬರಿದು ಮಾಡುವ
ಕಾರಣವ ನೀ ಹೇಳು

ಸಾವಿರ ಹೊಂಗನಸುಗಳ
ಕಂಗಳಲಿ ಅರಳಿಸಿ
ಮತ್ತೆ ಈಗ ನಿತ್ಯ ಕಣ್ಣೀರು
ನೀಡುತಿಹ ಕಾರಣವ ನೀ ಹೇಳು..

ಮಾತುಗಳ ಬೆಟ್ಟವನೆ
ಹೊತ್ತು ತಂದು ನಿರಪರಾಧಿಯ
ಮತ್ತೆ ಮೌನ ಕೂಪದಲೀ
ತಳ್ಳಿರುವ ಕಾರಣವ ನೀ ಹೇಳು …

ಮೊಗದದಂಗಳದಿ ನಗೆ
ಬೆಳದಿಂಗಳ ಸುರಿಸಿ
ಮೋಡದಲಿ ಮೊಗ ಮರೆಸಿ
ಕತ್ತಲಾಗಿಸಿಹ ಶಶಿಯೇ
ಕಾರಣವ ನೀ ಹೇಳು…

ಆತ್ಮವನೇ ಸೆಳೆದೊಯ್ದೆ
ಉಸಿರನ್ನೆ ಕಸಿದೊಯ್ದೆ
ಹಿಡಿಜೀವ ಉಳಿಸಿರುವ
ಕಾರಣವ ನೀ ಹೇಳು…

ಜೀವವನೇ ಕೊಂಡೊಯ್ದು
ಜೀವಂತವಾಗಿಸಿರುವೆ…
ಕಣಕಣ ಕ್ಷಣಕ್ಷಣ ಕೊಲ್ಲುತಿಹೆ
ಕಾರಣವ ನೀ ಹೇಳು…


About The Author

Leave a Reply

You cannot copy content of this page

Scroll to Top