ರಸ ಋಷಿ ಕುವೆಂಪು ನೆ ನಪಿನಲ್ಲಿಅಭಿಜ್ಞಾ ಪಿ.ಎಮ್.ಗೌಡ-ಗಜಲ್

ಕರುನಾಡಿನ ಮನ ಮನೆಗಳಲಿ ನಿತ್ಯ
ರಾರಾಜಿಸಿದವರು ಕುವೆಂಪು
ಅರ್ಬಿಯಂತೆಯೆ ಉತ್ಕೃಷ್ಟ ಬರೆಹಗಳ
ಹರಿಸಿದವರು ಕುವೆಂಪು

ಶ್ರೀರಾಮಾಯಣ ದರ್ಶನಂ ಗ್ರಂಥವನು
ಮಲೆಕಾನನಗಳರಳಿಸಿದರೆ
ಪ್ರೇಮಕಾಶ್ಮೀರದೊಳಗೆ ಸುಂದರ ನವಿಲನು
ಕುಣಿಸಿದವರು ಕುವೆಂಪು

ಮೊದಲು ಜ್ಞಾನಪೀಠ ಪ್ರಶಸ್ತಿಯನ್ನು
ಮುಡಿಗೇರಿಸಿಕೊಂಡವರಿವರು
ಭಾಷೆಯ ಉಳಿಸುವ ವಿಚಾರ ಕ್ರಾಂತಿಗೆ
ಆಹ್ವಾನಿಸಿದವರು ಕುವೆಂಪು

ಮನುಜಮತ ವಿಶ್ವಪಥಗಳ ಸತ್ವವನು
ಸಾರಿದ ಮಹಾನ್ ಚೇತನ
ಸಾಹಿತ್ಯದ ಶ್ರೇಷ್ಟತೆಗಾಗಿ ಚೇತನ್ಯದ
ಹನಿಯಾದವರು ಕುವೆಂಪು

ಮಲೆಗಳಲಿ ಮದುಮಗಳ ಸ್ವಚ್ಛಂದ
ಪರಿಚಯ ಮಾಡಿಸಿದರು ಅಭಿ
ಕಲಾತಪಸ್ವಿಯಾಗಿ ಮೆರೆದು ಪಕ್ಷಿಕಾಶಿಯ
ತೋರಿಸಿದವರು ಕುವೆಂಪು


Leave a Reply

Back To Top