ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾನು ಸಾಯುವುದಿಲ್ಲ
ಬದುಕುತ್ತೇನೆ
ಸೂರ್ಯ ಚಂದ್ರರ ಜೊತೆಗೆ
ಮಿನುಗುವ ಚುಕ್ಕಿ
ಸುಳಿವ ಗಾಳಿ
ಹರಿವ ನೀರು
ರೆಕ್ಕೆ ಬಿಚ್ಚಿ ಆಗಸಕ್ಕೆ
ಹಾರುವ ಹಕ್ಕಿಗಳ
ಅಮಿತ ಆನಂದದ ಅಲೆಗಳಲ್ಲಿ
ತೇಲುತ್ತಲಿರುವೆ

ನಡೆವ ನೆಲದ ಕೆಳಗೆ
ಕಲ್ಲು ಮುಳ್ಳು
ನಿಗಿ ನಿಗಿ ಕೆಂಡ
ಎಂದೂ ಅಳುಕುವದಿಲ್ಲ
ನನ್ನ ಬದುಕು ನನ್ನ ದಾರಿ
ಬದುಕುತ್ತೇನೆ ನಾನು
ನೆರೂದ ಪುಷ್ಕಿನ್ ರ ಬಂಡೆದ್ದ
ಭಾವಗಳ ಜೊತೆಗೆ
ಅಂಟಿಸಿ ಹೋಗುವದಿಲ್ಲ
ಜಗದ ಎದೆಗೆ ಅರ್ಥವಿರದ
ಕವನ ಕಾವ್ಯ
ಕೆತ್ತುವದಿಲ್ಲ ಕಲ್ಲಿನಲ್ಲಿ
ಸ್ವಾಭಿಮಾನದ ಶಾಸನ
ಬಿತ್ತಿ ಹೋಗುವೆ
ನಿಮ್ಮ ಎದೆಯಲ್ಲಿ
ಭರವಸೆಯ ಕ್ರಾಂತಿ ಬೀಜ
ಮೊಳಕೆಯೊಡೆದು
ಚಿಗುರಿ ಮರವಾಗಬಹುದು
ಹಣ್ಣು ಹೂವು ಕಾಯಿ
ಪಕ್ಷಿ ಪ್ರಾಣಿಗಳ ಜೊತೆಗೆ
ಬದುಕುತ್ತೇನೆ
ನಾನು ಸಾಯುವುದಿಲ್ಲ
ಉಳಿದವರಂತೆ
ಸತ್ತರೂ ಸಮಾಧಿಯಲ್ಲಿ
ನಾನು ಕವನ ಬರೆಯುತ್ತೇನೆ
ನೀವು ನನ್ನ ಕವನ
ಓದಿ ನಕ್ಕರೆ ಸಾಕು
ನಿಮ್ಮ ನಗೆಯಲ್ಲಿ ನಕ್ಕು ಬದುಕುತ್ತೇನೆ
ಸಮತೆಯ ದೀಪ ಹಚ್ಚಿ


About The Author

8 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ನಾನು ಸಾಯುವುದಿಲ್ಲ”

  1. ಬಿತ್ತಿ ಹೋಗುವೆ
    ನಿಮ್ಮ ಎದೆಯಲ್ಲಿ
    ಭರವಸೆಯ ಕ್ರಾಂತಿ ಬೀಜ
    ಎಷ್ಟು ಉದಾತ್ತವಾದ ಪರಿಕಲ್ಪನೆ

    ಕೆತ್ತುವುದಿಲ್ಲ ಕಲ್ಲಿನಲಿ
    ಸ್ವಾಭಿಮಾನದ ಶಾಸನ
    ಎಷ್ಟು ಹೆಮ್ಮೆ ಮೂಡುವ ಸಾಲುಗಳು

    ನಿಮ್ಮ ನಗೆಯಲ್ಲಿ ನಕ್ಕು ಬದುಕುತ್ತೇನೆ…
    ಸುಂದರವಾದ ಮನೋಭಾವನೆ

    ಸುಶಿ

  2. ನಿಜವಾದ ಕವಿಯ ಬದುಕು ಬಾಳ್ವೆ.ಭಾವ ಸಮ್ಮೀಲನ ಜೊತೆಗೆ ಮತ್ತು ಯಾರ ಹಂಗಿಲ್ಲದ ನಿಸರ್ಗದ ಸ್ವತಂತ್ರ. ಸ್ವಚ್ದಂದ ಬಂಧ ಲಹರಿಯನಾದ ನಿನಾದ ಪಕ್ಷಿ ಕಾಶಿಯಲ್ಲಿ.. ತುಡಿತವಿದೆ..
    ಡಾ.ಕಸ್ತೂರಿ ದಳವಾಯಿ.

Leave a Reply

You cannot copy content of this page

Scroll to Top