ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನಸಿನ ಗಡಿಯೊಳಗೆ
ನೂರು ಬೇಲಿಗಳು
ಭಾವ ಚೆಂದಕೆ ಮಾತು ಬೆಸುಗೆಗೆ
ಆದರೂ ಒಂದಿಷ್ಟು ದೂರ ಅಂತರ
ಏಕೆ ಮನಸೇ ನಿನ್ನೊಳಗೆ
ಬೀಸುವ ಗಾಳಿ ತಂಗಾಳಿ
ಎಳೆ ಬಿಸಿಲ ಸ್ಪರ್ಶ ಸೋಜಿಗ
ಹೂವಿನ ಅಂದ ಚೆಂದ
ಹಕ್ಕಿಗಳ ಉಲಿವಿನಾನಂದ
ಆದರೂ ಒಂದಿಷ್ಟು ಬೇಸರ

ಪಾತ್ರ ಪರಿಚಯ ಹಲವು
ಕೆಲವು ಅದರಲ್ಲಿ ಒಲವು
ಇನ್ನು ಕೆಲ ಸರಿಸುಮಾರು ಆಚೆಈಚೆ
ಒಂದರ್ಥ ಹಲವರ್ಥ ನಾನಾರ್ಥ ಜೊತೆಗೆ
ಎಲ್ಲವುಗಳ ಆಚೆ ಮತ್ತೆ ಗಡಿ
ಹೀಗೆ ಇರಬೇಕಿತ್ತು
ಹಾಗೇ ಇದ್ದರೆ ಸಾಕೇ
ಅರಿವು ಬೇಡವೇ ಒಂದಿಷ್ಟು
ನಡೆವ ಹೆಜ್ಜೆ ಬೇಡವೇ
ಅದರಾಚೆ ಭರವಸೆ ಸುಪ್ತ ತರಂಗ
ಕಿವಿಯಾಗಬೇಡವೇ ಮನದ ಮಾತಿಗೆ
ಒಟ್ಟಂದದ ಬದುಕು ಪಲ್ಲವಿಯಂತೆ
ಪದೇಪದೇ ಗುನುಗುನಿಸುವ
ಮಗುವಿನ ತೊದಲಂತೆ
ಹುಡುಕಿದರೆ ಸಾವಿರ ಗಡಿಗಳು
ಮಾತಿಗೆ ಭಾವಕೆ ತಲ್ಲಣಕೆ
ದಾಟಿದರೆ ಎಲ್ಲವೂ ಸುಸೂತ್ರ
ಬದುಕು ಆರಾಧನೆಯ ಸಚಿತ್ರ


About The Author

3 thoughts on “ನಾಗರಾಜ ಬಿ.ನಾಯ್ಕ ಕವಿತೆ ಹಾಗೇ ಸುಮ್ಮನೆ.”

  1. ಸಮಾಜದಲ್ಲಿ ಬದುಕುವಾಗ ಒಂದು ಚೌಕಟ್ಟು ಇರುತ್ತದೆ. ಯೋಚನೆ ಮೀರಿ ಚೌಕಟ್ಟು ದಾಟುವುದು ಸುಲಭವಲ್ಲ.. ಭಾವಕ್ಕೆ ಯಾವ ಬೇಲಿಯೂ ಇಲ್ಲ. ಸಮಾಜದ ಹತ್ತು ಹಲವು ಪಾತ್ರಗಳಲ್ಲಿ 11ನೇದಾಗಿ ಉಳಿಯುವುದರಲ್ಲಿ ಯಾವ ಅರ್ಥವೂ ಇಲ್ಲ.. ಅದು ಕೇವಲ ವ್ಯರ್ಥ ಪ್ರಲಾಪವಾಗಿ ಬಿಡುತ್ತದೆ. ಮಾತಿಗೆ ಭಾವಕ್ಕೆ ಒಂದು ಸೂತ್ರವಿದ್ದಾಗಲೇ ಚಂದ. ಅದನ್ನು ದಾಟಿ ಹೊರಬರುವ ಪ್ರಯತ್ನ ಇನ್ನೂ ಇನ್ನೂ ಚೆಂದ!!ಪ್ರತಿ ಸಾಲಿನಲ್ಲಿ ಜೀವಂತಿಕೆ ಇದೆ. ಬದುಕಿನ ಆರಾಧನೆ ಇದೆ. ಜೀವನ್ಮುಖಿ ಯೋಚನೆಗಳಿವೆ..ಹಾಗೆ ಸುಮ್ಮನೆ ಓದಿ, ಸುಮ್ಮನಾಗಲು ಬಿಡುವುದಿಲ್ಲ. ಯೋಚನೆಗೆ ಹಚ್ಚುತ್ತದೆ. ವಾಸ್ತವದ ಆಚೆಯ ನೋಟವಿದೆ. ಈ ಸುಂದರ ಕವಿತೆ ಕವಿ ಮನೆಗಳ ಸೆಳೆಯುತ್ತದೆ.. ಇದರಲ್ಲಿಯೇ ಕವಿತೆಯ ಸಾರ್ಥಕತೆ ಅಡಗಿದೆ

    ನಾನಾ

Leave a Reply

You cannot copy content of this page

Scroll to Top