ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಾಲಾ ಚೆಲುವನಹಳ್ಳಿ

ಕವಿತೆ

ಗಝಲ್

ನಾಡಿನ ವೈಭವ ಸಾಹಿತ್ಯದಿ ಬರೆದು
ತೇರನು ಎಳೆದು ಬಿಡು
ಹಾಡಿನ ಸಾಲಲು ಸಾಹಸಗಾತೆಯ
ಪಾಡುತ ನಲಿದು ಬಿಡು

ಶಿಲೆಯಲಿ ತಳೆದಿಹ ಕಲೆಯನು ನೋಡಲು
ಸಾಲವು ಕಂಗಳು ಎರಡು
ದಿಕ್ಕಲು ದಿಕ್ಕಲು ಹೊಕ್ಕಿದೆ ಚರಿತೆಯು
ಅರಿವಿನ ಪರದೆ ತೆರೆದು ಬಿಡು

ಋಷಿಗಳು ಮುನಿಗಳು ಸಂಚರಿಸಿಹರಿಲ್ಲಿ
ಪಾವನ, ಪುಣ್ಯ ಭೂಮಿಯಿದು
ಖುಷಿಯಲಿ ಸಂಸ್ಕೃತಿ ಸಾರವ ಸಾರುತಲಿ
ಬಿಗುವಿನ ಭಾವ ತೊರೆದು ಬಿಡು

ಶತಮಾನಗಳ ಹಿಂದೆ ಜನಿಸಿದ ಭಾಷೆಯು
ವ್ಯಸನವ ಪಡದೇ ನುಡಿಯುತಿರು
ಲತೆಯಂತೆ ಹಬ್ಬಿಸಿ ಪುಷ್ಪಗಳಿಂದ ಸಿಂಗರಿಸಿ
ಸುಂದರ ನಿಲುವನ್ನು ತಳೆದು ಬಿಡು

ಪೀಳಿಗೆಗಳಿಗೂ ಏಳಿಗೆ ತಂದ ಭಾಷೆ
ಕನ್ನಡವೆಂದು ಅರಿತವಳು ಮಾಲಾ
ಸೀಳಲಿ ನಾಲಿಗೆ ಮರೆಯದು ಆತ್ಮವು
ಬಾಳಿಗೆ ನೆಮ್ಮದಿ ತಿಳಿದು ಬಿಡು


ಮಾಲಾ ಚೆಲುವನಹಳ್ಳಿ

About The Author

Leave a Reply

You cannot copy content of this page

Scroll to Top