ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಭಾರತಿ ಅಶೋಕ್

ಕನಕ ನಿನ್ನನರಿಯದೇ

ಮನುಜ ಕುಲಕಿತ್ತ ಬುತ್ತಿಯ
ಬಿಚ್ಚಿ ಉಣ್ಣಲರಿಯದೆ
ಜಾತಿ ಬೀಜ ಬಿತ್ತಿ
ಮತದ ಕಟ್ಟೆ ಕಟ್ಟಿ
ಜಾತಿ,ಮತದ ಬೆಳೆ ತೆಗೆವರ
ಕಂಡು ಕರುಬದಿರು ಕನಕ

ಅರಿವಿನಾಲಯದಿ ನಿಂದು
ಕುಲದ ನೆಲೆಯನರಸುವ
ಪಾಮರನೆತ್ತ ಅರಿಯನು.
ಬಯಲಿಗಾವ ಕುಲ ಕನಕ

ಜ್ಞಾನ ಜ್ವಾಲೆ ಉರಿಯುತಿರಲು
ಅದಮನೊಬ್ಬ ಬೆಳಕಿನ ಕಿಡಿಯ
ಅರಸುವುದ ಕಂಡ್ಯ ಕನಕ

ಕನಕನ ರೊಟ್ಟಿಗೆ ಗೋಪಾಲನ ಬೆಣ್ಣೆ
ರೊಟ್ಟಿ ಬೆಣ್ಣೆಯ ಹದವರಿತು
ಗೆಳೆತನಕೆ ಭಾಷ್ಯ ಬರೆದುದ ಅರಿಯದೆ
ರೊಟ್ಟಿ ಎಸೆದು ಬೆಣ್ಣೆಗೆ ಮಣ್ಣಾಗುವ
ಮನುಜನೇನೆನ್ನುವೆ ಕನಕ


ಭಾರತಿ ಅಶೋಕ್

About The Author

Leave a Reply

You cannot copy content of this page

Scroll to Top