ಟಿ.ದಾದಾಪೀರ್ ತರೀಕೆರೆಯವರ ಕವಿತೆ-ಹೀಗೊಂದು ಅಭಿನಂದನೆ

ಕಾವ್ಯ ಸಂಗಾತಿ

ಹೀಗೊಂದು ಅಭಿನಂದನೆ

ಟಿ.ದಾದಾಪೀರ್ . ತರೀಕೆರೆ

‘ಪುಷ್ಪ ಸೌಗಂಧಿಕೆ ನೀನು’
ಎಲ್ಲೆಲ್ಲು ನಿನ್ನ ಪರಿಮಳದ ಕಂಪು
ಅಭಿನಂದಿಸಲು ನಿನ್ನ
ದೇವ ಬನದ ಮಂದಾರವೇ ನಾಚಿದೆ

‘ ಹಾಲ್ಬೆಳಕು ಚೆಲ್ಲಿರಲು ನೀನು’
ಅಭಿನಂದಿಸಲು ನಿನ್ನ
ಹುಣ್ಣಿಮೆಯ ಅಂದ ಸಾಲದೇ ಕೊಂಚ ಮಂದ ಎನಿಸಿದೆ

‘ಬೆಳ್ಮುಗಿಲು ನೀನು’
ಬೆಳ್ಳಕ್ಕಿ ಸಾಲು , ಸಂಜೆ ಬಂಗಾರದ ಬಣ್ಣ ನಿನ್ನ ಮೈ ಎಲ್ಲ
ಅಭಿನಂದಿಸಲು
ಕಲಾವಿದರ ಕುಂಚಗಳಲಿ ಬಣ್ಣ ಮಾಸಿದೆ

‘ ಕಣ್ಣು ಹಾಯಿಸಿದಷ್ಟು ಕಾಣುವ
ಕಡಲು ನೀನು’
ನೈದಿಲೆಯ ಸಂಭ್ರಮ ,ಅಲೆಗಳ ಕುಣಿತ ನಿನ್ನಲಿ
ಆಕಾಶ ಸುಮ್ಮನಾದಂತಿದೆ
ಅಭಿನಂದಿಸಲು ದೈಯ೯ವಿಲ್ಲದೆ


Leave a Reply

Back To Top