ಶಂಕರಾನಂದ ಹೆಬ್ಬಾಳರ ಗಜಲ್

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳರ ಗಜಲ್

ಈ ಕ್ರೂರ ಜಗದೊಳಗೆ ಬಾಳುವುದು ಬಲುಕಷ್ಟ
ಆಕ್ರೋಶದ ವೇಳೆಯಲಿ ತಾಳುವುದು ಬಲುಕಷ್ಟ

ಚಾಕುಚೂರಿಗಳ ಒಡನಾಟದ ಓಡಾಟವಿದೆ ಇಲ್ಲಿ
ದುಗುಡದಿಂದ ಜೀವನವನು ಕಳೆವುದು ಬಲುಕಷ್ಟ

ಮುದುಡುತ್ತಿವೆ ಹಸುಗೂಸಿನ ಭವ್ಯ ಕನಸುಗಳು
ಪ್ರೀತಿಯಿಲ್ಲದ ನಾಡಿನಲ್ಲಿ ಇರುವುದು ಬಲುಕಷ್ಟ

p

ಸಂಬಂಧಕ್ಕೆ ಬೆಲೆಯಿಲ್ಲದೆ ಹೋಯಿತಲ್ಲ ದೇವರೆ
ಮಸಣದ ಭೂಮಿಯಲ್ಲಿ ಉಳಿವುದು ಬಲುಕಷ್ಟ

ಶಾಂತಿಯ ಪ್ರತೀಕವಾಗಿ ನಿಂತಿದ್ದಾನೆ ಅಭಿನವ
ನಿರ್ದಯಿಗಳಲಿ ಕರುಣೆ ಹುಟ್ಟುವುದು ಬಲುಕಷ್ಟ


Leave a Reply

Back To Top