ನಿಜಗುಣಿ ಎಸ್ ಕೆಂಗನಾಳ ಕವಿತೆ-ಇನ್ಯಾರ ಭಯ

ಕಾವ್ಯ ಸಂಗಾತಿ

ಇನ್ಯಾರ ಭಯ

ನಿಜಗುಣಿ ಎಸ್ ಕೆಂಗನಾಳ

ಈ ಕಣ್ಣುಗಳಲ್ಲಿ ಬರುವ
ಕಣ್ಣಿರ ಹನಿಗಳೇ ನೀ ಬಯಸುವ
ಆ ಕನಸುಗಳಿಗೆ ಆಸರೆಯಾಗಿ
ನಿಂತಿರಲು ನಿನಗೆ ಇನ್ಯಾರ ಭಯ.

ಈ ಮನಸೆಂಬ ಪುಸ್ತಕದೋಳು
ಅರಳಿ ನಿಂತಿರುವ ಸಾವಿರಾರು
ಹಳೆಯ ನೆನಪುಗಳಿಗೆ ಆ ಭಗವಂತನೇ
ಬರಹಗಾರನಾಗಿ ಹೊಸ ರೂಪವನ್ನು
ಕೊಟ್ಟು ನಮ್ಮನ್ನೆಲ್ಲ ಕಾಯುತ್ತಿರುವಾಗ
ನಿನಗೆ ಇನ್ಯಾರ ಭಯ.

ಈ ಬದುಕನ್ನ ಕಟ್ಟಿ ಕೊಟ್ಟವನು ಅವನೇ.
ಆ ಬದುಕಿನಲ್ಲಿ ನಮಗೆ ನಾನಾ
ರೀತಿಯ ಹೊಸ ಅನುಭವಗಳನ್ನು ಕೊಟ್ಟು,
ನಮ್ಮ ಬದುಕಿನ ಅಧ್ಯಾಯಕ್ಕೆ ಒಂದು
ಉತ್ತಮ ಸಂದೇಶ ಸಾರುವವನು ಅವನೇ
ಆಗಿರುವಾಗ ನಿನಗೆ ಇನ್ಯಾರ ಭಯ.

ಈ ಜಗವೇ ಒಂದು ಪೂಜಾ ಮಂದಿರ.
ನಾವೆಲ್ಲರೂ ಆ ತಾಯಿ ಭಾರತ ಮಾತೆಯ
ಮಡಿಲಲ್ಲಿ ಅರಳುವ ಹೂವುಗಳಾಗಿ
ಸದಾ ಅವಳ ಸೇವೆಯನ್ನೇ ಮಾಡುತ್ತ
ನಮ್ಮ ಬದುಕಿನ ದಾರಿಯಲ್ಲಿ ಸಾಗುತ್ತಿರುವಾಗ
ನಿನಗೆ ಇನ್ಯಾರ ಭಯ.


Leave a Reply

Back To Top