ಹುಳಿಯಾರ್ ಷಬ್ಬೀರ್-ಅತ್ಯಾಧುನಿಕ ವಚನಗಳು

ಕಾವ್ಯ ಸಂಗಾತಿ

ಅತ್ಯಾಧುನಿಕ ವಚನಗಳು

ಹುಳಿಯಾರ್ ಷಬ್ಬೀರ್

) ಕುಡುಕನಯ್ಯಾ
ಸತ್ಯವೇ ನಾಚುವ
ಆಚಾರದ ನಾಲಿಗೆಯಯ್ಯಾ
ಅನಾಚಾರದ ನಡವಳಿಕೆಯಯ್ಯಾ
ಬೇರೆಯವರಿಗೆ ಹೇಸಿಗೆಯಯ್ಯಾ
ನನಗೆ ನೆಲವೇ ಹಾಸಿಗೆಯಯ್ಯಾ
ಜಟಾ ಜೂಟೇಶ್ವರಾ…!!

2) ಆತ್ಮದೊಳಗಿನ ಒಲವಿಗೆ
ಸಾವಿಲ್ಲವಯ್ಯಾ
ದೇಹದೊಳಗಣ ವಾಂಛೆಗೆ
ಬದುಕಿಲ್ಲವಯ್ಯಾ
ತನುಮನಗಳ ಅರಿವೇ
ದಾಂಪತ್ಯದ ಯಶಸ್ಸಯ್ಯಾ
ಅಹಂ ಬಿಟ್ಟು ಬದುಕಿದರೆ
ಬಾಳು ಸ್ವರ್ಗವಯ್ಯಾ
ಛೋಟಾ ಜೂಟೇಶ್ವರಾ..!!

3) ಶ್ವಾನದ ಚುರುಕಿಗೆ
ಮೋಟು ಬಾಲ ಮಾಡಿದರೆಯ್ಯಾ
ಆಘ್ರಾಣಿಸುವ ಶಕ್ತಿಯೇ
ಇಲ್ಲದೆ ಕಳ್ಳನನ್ನೇ ಮಾಲೀಕನೆಂದು
ಕಾಲು ನೆಕ್ಕಿತಯ್ಯಾ
ಜಟಾ ಜೂಟೇಶ್ವರಾ…!!

4) ಸಾವಿಲ್ಲದ ಮನೆಯಿಲ್ಲವಯ್ಯಾ
ನೋವಿಲ್ಲದ ಹೃದಯವಿಲ್ಲವಯ್ಯಾ
ನೋಟಿಗೆ ಓಟು ಹಾಕದಿರಯ್ಯಾ
ಹೆಂಡಕ್ಕೆ ನಿನ್ನ ತನ ಮಾರದಿರಯ್ಯಾ
ಮತದಾರ ಪ್ರಭುವೇ ಎಂದನಯ್ಯಾ
ಜಟಾ ಜೂಟೇಶ್ವರಾ…!!

5) ಅಂದುಕೊಂಡಿದ್ದೆಲ್ಲವೂ
ನಡೆದಿಲ್ಲವೆಂದು ನೊಂದುಕೊಳ್ಳಬೇಡಯ್ಯಾ
ಫಕೀರನಂತೆ ಬೇಡಿದರೆ
ಎಲ್ಲವೂ ದಕ್ಕುವುದಯ್ಯಾ
ಜಟಾ ಜೂಟೇಶ್ವರಾ..!!

————————–

Leave a Reply

Back To Top