ಹಮೀದಾ ಬೇಗಂ ದೇಸಾಯಿ-ಗಜಲ್

ಕಾವ್ಯಸಂಗಾತಿ

ಹಮೀದಾ ಬೇಗಂ ದೇಸಾಯಿ

ಗಜಲ್

ಒಳಿತು ಜಗದಿಂದ ಹೋಗುತಿವೆ ಬೇಸರದಿಂದ
ಕೆಡುಕು ಹರಿದು ತುಂಬುತಿವೆ ನಲಿವಿನಿಂದ

ವಿಶ್ವಾಸವೆಲ್ಲಿ ಉಳಿದಿದೆ ವಿಷವರ್ತುಲದಿ
ಒಡಕು ಮಾತುಗಳೇ ಬರುತಿವೆ ಕುಹಕದಿಂದ

ಮಮತೆ ವಾತ್ಸಲ್ಯ ಕಳೆದು ಹೋಗಿವೆ
ಹಣದ ಸದ್ದುಗಳೇ ಕೇಳುತಿವೆ ಥೈಲಿಗಳಿಂದ

ಸೋಗಿನ ವಂಚನೆಯ ಮುಖವಾಡ ಸುತ್ತಲೂ
ಸ್ನೇಹದ ಬಂಧಗಳೇ ಕಳಚಿವೆ ಮನಗಳಿಂದ

ಆಯುಸ್ಸು ಸರಿಯುತಿದೆ ದುಸ್ತರದಿ ಬೇಗಂ
ಒಲವಿನ ಗಳಿಗೆಗಳೇ ಮರೆಯಾಗಿವೆ ಬದುಕಿನಿಂದ


Leave a Reply

Back To Top