ಪುಸ್ತಕ ದಿನದ ಕವಿತೆ

ಕಾವ್ಯ ಸಂಗಾತಿ

ಪುಸ್ತಕ

ರೇಷ್ಮಾ ಕಂದಕೂರ

ಮಸ್ತಕಕೆ ಧೀಮಂತ
ವಸ್ತು ವಿಷಯ ಅರಿಯುತ
ಏಕಾಂತವ ಕಳೆವ ಸ್ನೇಹಿತ‌.

ಬದುಕು ಬದಲಿಸಿ
ಅಂತಃಕರಣ ತುಂಬಿಸಿ
ಜ್ಞಾನದಾಗರವ ಹೊರಹೊಮ್ಮಿಸಿ.

ಏಕಾಗ್ರತೆಗೆ ಕಾರಣ
ಸಮಗ್ರತೆಯ ಹೂರಣ
ಸ್ವಸ್ಥ ಸಮಾಜಕೆ ಧಾರಣ.

ಮಾನಸಿಕ ಸ್ಥೈರ್ಯ ತುಂಬುತ
ಶಾಶ್ವತ ಗೆಳೆಯ ನಂಬುತ
ಭರವಸೆಯ ಸಂಗಾತ.

ಓದಿನ ಹಂಬಲಕೆ ರಹದಾರಿ
ಮನೋಬಲಕೆ ಸರಿದಾರಿ
ಭೀತಿ ಕಳೆವ ಹೆದ್ದಾರಿ.

ಉತ್ತಮ ಹವ್ಯಾಸದ ರೂಪಕ
ಜ್ಞಾನ ದೀವಿಗೆಯ ಜ್ಞಾಪಕ
ಬಾವನೆಗಳ ರೂಪಕ.

ಸಂಸ್ಕೃತಿಯ ಉಪಾಸನೆ
ವಿವೇಚನೆಯ ಸಾಧನೆ
ಸಮಾಲೋಚನೆಯ ಪ್ರತಿಪಾಧನೆ.

ಪುಸ್ತಕವೆಂಬ ಸಾಧನ
ನೀತಿ ನೇಮದ ಸದನ
ಅರಿವಿನರಮನೆಯ ಗಾನ.


Leave a Reply

Back To Top