ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪಯಣ

ರೇಷ್ಮಾ ಕಂದಕೂರ

.

ಸಾಗುತಿದೆ ನಿರಂತರ
ಸಾವು ನೋವಿಗಿಲ್ಲದ ಅಂತರ
ಭಾವನಾ ಲೋಕದ ಅತಿರೇಕ
ನೆಲೆಕಾಣಲು ಹತೊರೆದು.

ಬತ್ತದ ಸೆಲೆ ಜೀವಂತ
ಸ್ಥಿತಿ ಲಯಕೂ ಆಯಾತ
ರೂಪಾದಿಗಳ ನೂಕಿ
ಸಮರೋಪಾದಿಯ ಜಾಡು ಹಿಡಿದು.

ಆರೋಪ ಪ್ರತ್ಯಾರೋಪದ ಕೇಕೆ
ಅರೋಹ ಅವರೋಹದಿ ನೆಪ
ಜಾರಿದರೂ ಮತ್ತೆ ಹರಾಜಿನಲಿ
ಗತ್ತಿನ ನಡಿಗೆಯಲಿ.

ಸುತ್ತ ಹಾಕಿದ ಪರಿಧಿ ದಾಟಿ
ಮುತ್ತಿ ತಿನ್ನುವ ಕೀಟಕೂ ರಹದಾರಿ
ಮುಕ್ತಿ ಕಾಣುವ ಧಾವಂತ
ಯುಕ್ತಿಯ ಸಶಕ್ತಿಯ ನಡಿಗೆಯಲಿ.

ಸಾಗುವ ತವಕ ಹೆಚ್ಚು
ಬಾಗಿ ಬೀಗಿ ತಗಾದೆಯಲಿ
ಜೀವನಾನುರಾಗಿಯಲಿ ತೇಲಿ
ಬವಬಂಧನದಿ ನೂಕುವ ಭರದಲಿ.

ಸರಹದ್ದು ಮೀರಿ
ತೆರೆದ ಹಂದರಕೂ ಹಿಂಜರಿಕೆ
ತರಾವರಿಯಲಿ ಜರಿದರೂ
ಮತ್ತೆ ಹೆಣಗಾಟ ಜೀವಂತ.


About The Author

Leave a Reply

You cannot copy content of this page

Scroll to Top