ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬುದ್ಧನ ಧ್ಯಾನದಲ್ಲಿ

ಬಿ.ಶ್ರೀನಿವಾಸ

೧.

ತೊಡಲೇಬೇಕು ಎಂದು
ಅವನ ನಗುವನ್ನು ಧರಿಸಿದೆ
ಜಗತ್ತು ಬೆಳದಿಂಗಳಮಯವಾಯಿತು.

೨.

ಅವನ
ಹೆಜ್ಜೆಯನರಸುತ್ತಾ ಹೋದೆ
ದೂರವಾಗುತ್ತ ಹೋಯಿತು ಯುದ್ಧ ಭೂಮಿ.

೩.

ಅರ್ಧನಿಮೀಲಿತ ನೇತ್ರಗಳಿಗೆ ಕಿವಿಯಾನಿಸಿದೆ
ಜ್ಞಾನ ಕಡಲಿನ ಅಲೆಗಳ ಸಪ್ಪಳ ಕೇಳಿಸಿತು‌

೪.

ಮುಗಿಬಿದ್ದ ಜನರ ನಡುವೆ
ಬಟ್ಟಲು ತುಂಬಿದ ಕರುಣೆ
ಹಂಚುತ್ತಿದ್ದ ಒಬ್ಬ,
ಯಾರೆಂದು ಕೇಳಿದೆ
ನನ್ನ ಎದೆ ತೋರಿಸಿದ!

೫.

ಈ ಕಾಲಕೆ
ಆ ದಾರಿ ಇಲ್ಲ ಎಂದರು ಕೆಲವರು.
ನಸು ನಕ್ಕನಾತ,
ನೂರಾರು ಕಾಲುದಾರಿಗಳ ತೋರಿ!


About The Author

Leave a Reply

You cannot copy content of this page

Scroll to Top