ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಝಲ್

ಶಂಕರಾನಂದ ಹೆಬ್ಬಾಳ

ಅನ್ಯಾಯವ ದಿಕ್ಕರಿಸಿ ಎದೆಗೊಟ್ಟವರು
ಕೋಟಿ ಚನ್ನಯ್ಯ
ಬಡವರ ನೋವುಗಳಿಗೆ ದನಿಯಾದವರು
ಕೋಟಿ ಚನ್ನಯ್ಯ

ಮಲ್ಲಯ್ಯ ಬುದ್ಯಂತನ ಯಮಪುರಿಗೆ
ಅಟ್ಟಿದರೇಕೆ
ಕಿನ್ನಿದಾರುವಿನ ಆಶ್ರಯವ ಪಡೆದವರು
ಕೋಟಿ ಚನ್ನಯ್ಯ

ತುಳುನಾಡಿನಲಿ ದಂತಕಥೆಯಾಗಿ ಉಳಿದ
ಮಹಾಚೇತನರಿವರು
ಸಾಯಿನ ಬೈದ್ಯನ ಮಮಕಾರದಿ ಬೆಳೆದವರು
ಕೋಟಿ ಚನ್ನಯ್ಯ

ಚಂದುಗಿಡಿಯ ಕುತಂತ್ರಕ್ಕೆ ಬಲಿಯಾಗಿ
ಬಂಧಿತರಾದವರು
ಎಣ್ಮೂರಿನ ದೇವಬಲ್ಲಾಳನಲಿ ಇರುವವರು
ಕೋಟಿ ಚನ್ನಯ್ಯ

ಪಂಜದ ಗಡಿಯಲ್ಲಿ ವಾಸಸ್ಥಳವನು
ಮಾಡಿಕೊಂಡರೇಕೆ
ಸುಂಕದ ಕಟ್ಟೆಯ ಜೋಯಿಸರ ಕೇಳಿದವರು
ಕೋಟಿ ಚನ್ನಯ್ಯ

ಪಡುಮಲೆಯ ಬಲ್ಲಾಳರ ಆಕ್ರಮಣಕೆ
ತುತ್ತಾದವರು
ಹೋರಾಡುತ್ತ ವೀರಮರಣ ಅಪ್ಪಿದವರು
ಕೋಟಿಚನ್ನಯ್ಯ

ಜನಪರ ಕಾರ್ಯದಿಂದಲೆ ದೈವತ್ವವನು
ಏರಿದವರಿವರು
ಅಭಿನವನ ಗಝಲಿನಲಿ ಮೆರೆದವರು
ಕೋಟಿ ಚನ್ನಯ್ಯ


About The Author

Leave a Reply

You cannot copy content of this page

Scroll to Top