ಗಝಲ್

ಕಾವ್ಯ ಸಂಗಾತಿ

ಗಝಲ್

ಶಂಕರಾನಂದ ಹೆಬ್ಬಾಳ

ಅನ್ಯಾಯವ ದಿಕ್ಕರಿಸಿ ಎದೆಗೊಟ್ಟವರು
ಕೋಟಿ ಚನ್ನಯ್ಯ
ಬಡವರ ನೋವುಗಳಿಗೆ ದನಿಯಾದವರು
ಕೋಟಿ ಚನ್ನಯ್ಯ

ಮಲ್ಲಯ್ಯ ಬುದ್ಯಂತನ ಯಮಪುರಿಗೆ
ಅಟ್ಟಿದರೇಕೆ
ಕಿನ್ನಿದಾರುವಿನ ಆಶ್ರಯವ ಪಡೆದವರು
ಕೋಟಿ ಚನ್ನಯ್ಯ

ತುಳುನಾಡಿನಲಿ ದಂತಕಥೆಯಾಗಿ ಉಳಿದ
ಮಹಾಚೇತನರಿವರು
ಸಾಯಿನ ಬೈದ್ಯನ ಮಮಕಾರದಿ ಬೆಳೆದವರು
ಕೋಟಿ ಚನ್ನಯ್ಯ

ಚಂದುಗಿಡಿಯ ಕುತಂತ್ರಕ್ಕೆ ಬಲಿಯಾಗಿ
ಬಂಧಿತರಾದವರು
ಎಣ್ಮೂರಿನ ದೇವಬಲ್ಲಾಳನಲಿ ಇರುವವರು
ಕೋಟಿ ಚನ್ನಯ್ಯ

ಪಂಜದ ಗಡಿಯಲ್ಲಿ ವಾಸಸ್ಥಳವನು
ಮಾಡಿಕೊಂಡರೇಕೆ
ಸುಂಕದ ಕಟ್ಟೆಯ ಜೋಯಿಸರ ಕೇಳಿದವರು
ಕೋಟಿ ಚನ್ನಯ್ಯ

ಪಡುಮಲೆಯ ಬಲ್ಲಾಳರ ಆಕ್ರಮಣಕೆ
ತುತ್ತಾದವರು
ಹೋರಾಡುತ್ತ ವೀರಮರಣ ಅಪ್ಪಿದವರು
ಕೋಟಿಚನ್ನಯ್ಯ

ಜನಪರ ಕಾರ್ಯದಿಂದಲೆ ದೈವತ್ವವನು
ಏರಿದವರಿವರು
ಅಭಿನವನ ಗಝಲಿನಲಿ ಮೆರೆದವರು
ಕೋಟಿ ಚನ್ನಯ್ಯ


Leave a Reply

Back To Top