ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

“ಬೇಂದ್ರೆ ಅಜ್ಜರ ಹುಟ್ಟುಹಬ್ಬಕ್ಕೊಂದು ಕವಿತೆ” ಶ್ರೀನಿವಾಸ್ ಕೆ ಎಂ

ಕಾವ್ಯ ಸಂಗಾತಿ ಶ್ರೀನಿವಾಸ್ ಕೆ ಎಂ “ಬೇಂದ್ರೆ ಅಜ್ಜರ ಹುಟ್ಟುಹಬ್ಬಕ್ಕೊಂದು ಕವಿತೆ” ಮೂಡಣದ ಬಾನಲಿ ಹೊನ್ನ ಕಿರಣವ ಸೂಸುವಉದಿಸಿತೊಂದು ತಾರೆ,ಅಂಬಿಕಾ ತನಯರಾಗಿ,ಅರವಿಂದರ ತತ್ವದೊಳು,ರವೀಂದ್ರರ ಕಾವ್ಯದಲಿಮಿಂದು ಪುನೀತರಾದರಂದು, ಶಬ್ಧಗಾರುಡಿಗಾನಾಗಿ,ಮಾತು ಮಾತು ಮಥಿಸಿ,ನಾದವ ಝೇಂಕರಿಸುತಅಕ್ಕರದ ಅಕ್ಕರೆಯ ಪದವ ಹೊಸೆಯುತ ,ಶಬ್ಧ ನಿಶ್ಶಬ್ಧಗಳ ಜೊತೆಆಡಿ, ಹಾಡಿ, ಕುಣಿದು, ನಲಿಸಿದಾತ,ಹೃದಯಗವ್ವರದೊಳುಒಲವ ಹಣತೆಯ ಬೆಳಗಿಸಿ,ಒಳಗಣ್ಣ ತೆರಸಿ ಅಂತಃಕರಣದಕದವ ತಟ್ಟಿ ಎಬ್ಬಿಸಿದಾತಬದುಕು ಹಿಡಿಗಾಳಿನಂತಿರಲಿಬಿಡಿಗಾಳಿನಂತೆ ಬಿಡಿಯಾಗದಿರಲಿಸರಸದೊಂದಿಗೆ ಸೇರಿವಿರಸವ ತೊರೆದುಸಮರಸದ ಬದುಕನುಜಗಕೆ ತಿಳಿಸಿದಾತ ವಿಧಾತ. ಶ್ರೀನಿವಾಸ ಕೆ.ಎಮ್.

“ಬೇಂದ್ರೆ ಅಜ್ಜರ ಹುಟ್ಟುಹಬ್ಬಕ್ಕೊಂದು ಕವಿತೆ” ಶ್ರೀನಿವಾಸ್ ಕೆ ಎಂ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ಚೂರಾದ ಹೃದಯ ತೆರೆದು ತೋರಿಸಲಿ ಹೆಂಗ ಹೇಳನೋವಿನಲಿ ಒದ್ದಾಡೊ ಮನಸ ಬಚ್ಚಿಡಲಿ ಹೆಂಗ ಹೇಳ ನೂರು ಮಾತು ಎದೆಯಲ್ಲೇ ಉಳಿದು ಕೊರೆಯುತಿವೆಉಕ್ಕೊ ಬಯಕೆ ಬಾಂಧಳವ  ಬತ್ತಿಸಲಿ ಹೆಂಗ ಹೇಳ ದುಃಖದೊಡಲ ಕೊರೆದ ನೋವಿನಲೆಗಳು ಬೊಬ್ಬಿಡುತಿವೆದಿನರಾತ್ರಿ ಕಂಡ ಕನಸನೆಲ್ಲ ಕೊಂದುಬಿಡಲಿ ಹೆಂಗ ಹೇಳ ತುಂಟತನದಿ ಮಾಡಿದ ಆ ಗಾಯಕೆ ಮುಲಾಮು ಸಿಕ್ಕೀತೇಕಂಗೋಳಿಸುವ ಆಸೆಗಳ ತೋಟಕೆ ಕಿಚ್ಚಚ್ಚಲಿ ಹೆಂಗ ಹೇಳ ಕಾದು ಕಾದು ಕಂಗೆಟ್ಟು ಬೆಂಗಾಡ ಹೊಕ್ಕು ಬೆಚ್ಚಿಬಿದ್ದಿರುವೆಒತ್ತರಿಸಿ ಬರೋ ಹಂಬಲದ ಹಸಿವ ಹಿಂಗಿಸಲಿ ಹೆಂಗ ಹೇಳ ಸಂಗದಾಟ ತಂದ ಸಂಕಷ್ಟದ ಬೇನೆ ಸುಡುತಿವೆ ನನ್ನೊಡಲತಾಳದ ತುಡಿತಗಳ ತಾಪವೇರಿರಲು ತಗ್ಗಿಸಲಿ ಹೆಂಗ ಹೇಳ ಅನು ಹತ್ತು ಜನುಮಕಾಗುವಷ್ಷು ಅನುರಾಗ ಕಟ್ಟಿಟ್ಟಿದ್ದಳುತೋಡಿದ ಒಲವಿನೊರತೆ ಬತ್ತುತಿರಲು ಸಹಿಸಲಿ ಹೆಂಗ ಹೇಳ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಗಜಲ್ Read Post »

ಇತರೆ, ಪ್ರಬಂದ

“ಊರ ಮುಂದಿನ ಅರಳಿ ಮರ”ಗೊರೂರು ಅನಂತರಾಜು ಅವರ ಪ್ರಬಂಧ

ಪ್ರಬಂಧ ಸಂಗಾತಿ “ಊರ ಮುಂದಿನ ಅರಳಿ ಮರ” ಗೊರೂರು ಅನಂತರಾಜು ‘ಬನ್ನಿ ಕವಿಗಳೇ, ಬಹಳ ದಿನಗಳ ಮೇಲೆ ಊರಿಗೆ ಬಂದಿದ್ದೀರಿ. ಚೆನ್ನಾಗಿದ್ದೀರಿ ತಾನೇ? ಯಾರೋ ಮಾತನಾಡಿದಂತಾಗಿ ಹಿಂತಿರುಗಿ ನೋಡಿದೆ. ಯಾರೂ ಕಾಣಿಸಲಿಲ್ಲ. ಸುತ್ತಾ ಕಣ್ಣಾಯಿಸಿದೆ ಉಹೂಂ ಯಾರೂ ಇಲ್ಲ..!‘ಅಲ್ಲಿ ಇಲ್ಲಿ ಯಾಕೆ ನೋಡುವಿರಿ ಕವಿಗಳೇ, ನಾನು ಅರಳಿಮರ ಮಾತನಾಡುತ್ತಿರುವೆ. ಎಷ್ಟೋ ವರ್ಷಗಳಿಂದ ಎತ್ತರಕ್ಕೆ ಬೆಳೆದು ನಿಂತಿರುವೆ. ಇನ್ನೂ ಬಿದ್ದಿಲ್ಲ. ಯಾರೋ ಮಹನೀಯರು ನನ್ನ ಸುತ್ತಲೂ ಕಟ್ಟೆ ಕಟ್ಟಿದ್ದಾರೆ. ಬನ್ನಿ ಇಲ್ಲಿ  ಕುಳಿತು  ವಿಶ್ರಮಿಸಿ. ಕೊಂಚ ನಿಮ್ಮೊಂದಿಗೆ ಮಾತನಾಡುವ ಬಯಕೆ ಇದೆ.‘ಆಯ್ತು ಅರಳಿಮರವೇ ಕುಳಿತುಕೊಂಡೆ. ಹೇಳಿ ನಿಮಗೀಗ ವಯಸ್ಸು ಎಂತಾ?  ‘ನನಗೆ ತಿಳಿಯದು ಮಾರೆಯರೇ. ಯಾರಿಗಾದರೂ ತಿಳಿದಿದ್ದರೇ ತಿಳಿದು ನನಗೂ ತಿಳಿಸಿ.   ಈಗ ನಿಮ್ಮ ಕಥೆ ಹೇಳಿ. ಈಗಲೂ ಕಥೆ ಕವನ ಬರೆಯುತ್ತಿದ್ದೀರಾ. ಎಷ್ಟು ಪುಸ್ತಕ ಬರೆದಿರುವಿರಿ. ನಮ್ಮೂರು ಹಿಂತಿರುಗಿ ನೋಡಿದಾಗ ಎಂಬ ನಿಮ್ಮ ಪುಸ್ತಕದಲ್ಲೂ ನನ್ನ ಪ್ರಸ್ತಾಪವಿಲ್ಲ. ನನ್ನನ್ನು ನೀವು ಏಕೆ ಮರೆತಿರಿ..?  ‘ಇಲ್ಲ ಅರಳಿಮರವೇ, ನಾನು ಅರಳಿಕಟ್ಟೆ ಎಂಬ ನಾಟಕ ಬರೆದಿದ್ದು ನಿನ್ನ ನೆನಪಿನಲ್ಲೇ.  ‘ಹೌದೇ, ತುಂಬಾ ಸಂತೋಷ. ಆ ನಾಟಕ ಇಲ್ಲಿ ಪ್ರದರ್ಶಿಸಬಹುದಿತ್ತಲ್ಲ..‘ನಾನು ನಾಟಕ ಬರೆಯಬಹುದು ಅಷ್ಟೇ. ಅದನ್ನು ಕಲಿತು ಪ್ರದರ್ಶಿಸುವರು ಸಿಗಬೇಕಷ್ಟೇ.  ‘ನಿಂತುಹೋದ ಕನ್ನಡ ರಂಗವೈಭವ ಎಂಬ ನಾಟಕ ಪುಸ್ತಕದ ಮುಖಪುಟದಲ್ಲಿ ಚಿತ್ರನಟ ನರಸಿಂಹರಾಜು ಪೋಟೋ ಹಾಕಿದ್ದೀರಿ. ಅವರು ಇಲ್ಲಿ ಬಂದು ನಾಟಕ ನಟಿಸಿದ್ದರು..‘ನರಸಿಂಹರಾಜು ಕುರಿತಾಗಿಯೇ ಪುಸ್ತಕದಲ್ಲಿ ಬರೆದಿದ್ದೇನೆ. ಅವರು ಇಲ್ಲಿ ಬಂದಾಗ್ಗೆ ನಾನು ಹೈಸ್ಕೂಲು ವಿದ್ಯಾರ್ಥಿ. ಅಗ ಊರಿನ ರಥೋತ್ಸವ ಜಾತ್ರೆಗೆ ಅಪಾರ ರಾಸುಗಳು ಕಟ್ಟುತ್ತಿದ್ದವು. ಅಂದು ನಾಟಕ ಕಂಪನಿಯೊAದು ಇಲ್ಲಿ ಮೊಕ್ಕಾಂ ಮಾಡಿ  ನರಸಿಂಹರಾಜು, ಸುದರ್ಶನ್, ಶಕ್ತಿಪ್ರಸಾದ್ ನಾಟಕದಲ್ಲಿ ನಟಿಸಲು ಬಂದಿದ್ದರು.‘ಅಲ್ಲಿ ಒಂದು ಟೆಂಟ್ ಸಿನಿಮಾ ಇತ್ತು..‘ಹೌದು. ಆಗ ವಾರಕ್ಕೆರಡು ಸಿನಿಮಾ ತೋರಿಸುತ್ತಿದ್ದರು. ಭಾನುವಾರದಿಂದ ಮೂರು ದಿನ ತಮಿಳು, ನಾಲ್ಕು ದಿನ ಕನ್ನಡ ಸಿನಿಮಾ. ಆ ಸಿನಿಮಾ ಪೋಸ್ಟರ್ ನೋಡೇ ಆನಂದಿಸುತ್ತಿದ್ದವು. ಕದ್ದು ಸಿನಿಮಾ ನೋಡಿ ಅಪ್ಪನಿಂದ ಹೊಡೆಸಿಕೊಂಡ ಮಂಡಿಚಿಪ್ಪಿನ ಗಾಯದ ಗುರುತು ಇನ್ನು  ಇದೆ.  ‘ ಆ ಟೆಂಟ್ ಸಿನಿಮಾ ಜಾಗದಲ್ಲೇ ಗ್ರಾಮ ಪಂಚಾಯ್ತಿ ಕಛೇರಿ ಕಟ್ಟಡ ಇತ್ತಲ್ಲ.. ಅಲ್ಲಿ ಗಣೇಶೋತ್ಸವಕ್ಕೆ  ಹರಿಕಥೆ, ಚೌಡಿಕೆ ಕಥೆ, ನಾಟಕ, ಆರ್ಕೆಸ್ಟಾç..‘ನಿಜ, ನಮಗೆ ಟೆಂಟ್ ಸಿನಿಮಾ ಹೋದಮೇಲೆ ನಮಗೆ ಹತ್ತು ದಿನ ಇದೇ ಮನರಂಜನೆ. ಭಾನುವಾರ ಗಣೇಶನ ವಿಸರ್ಜನೆ. ಹಾಸನ ಬಂಗಾರಿ ತಂಡದ ಕೀಲುಕುದುರೆ ಮನರಂಜನೆ..‘ಇಲ್ಲೇ, ನೀವು ಜಿ.ಎಸ್.ಪ್ರಕಾಶ್ ಬರೆದ ಸರಿದ ತೆರೆ ನಾಟಕದಲ್ಲಿ ಮಾತು ಮರೆತು..‘ಅದೆಂತು ಮರೆಯಲಿ. ಮೊದಲ ರಂಗ ಪ್ರವೇಶ ಗಾಬರಿ..  ‘ಮತ್ತೇ ಅಲ್ಲಿ ನೀವು ಜಿಲ್ಲಾ ನಾಟಕೋತ್ಸವ..‘ಹೌದು, ಬೇಲೂರು ಸಿ.ಎಸ್.ಆಚಾರ್ ಅವರ ಹೆಣದ ನಾಟಕ ನೋಡಿ ಮೊದಲ ಬಾರಿ ವಿಮರ್ಶೆ ಬರೆದಿದ್ದೇ.‘ನೀವು ವೀರಪ್ಪನ್ ಭೂತ  ನಾಟಕ ಬರೆದಾಡಿಸಿದ್ದು..!‘ಹೌದು ೧೯೯೧ರಲ್ಲಿ. ಹೇಮಾವತಿ ತೀರಿದ ಗಾಂಧಿ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ನಿಧನರಾದ ಆ ವರ್ಷ ನಾವು ಹುಡುಗರು ಡಾ. ಗೊರೂರು ಸ್ಮರಣ ಸಮಿತಿ ರಚಿಸಿಕೊಂಡು, ನಾನು ಡಾ.ಗೊರೂರು ಬದುಕು ಬರಹ ಪ್ರಬಂಧ ಮಂಡಿಸಿ ಅವರು ಹುಟ್ಟಿದ ಮನೆ ಸ್ಮಾರಕವಾಗಬೇಕೆಂದು  ಪ್ರಯತ್ನ ನಡೆಸಿದೆವು.  ‘ಅವರ ಭೂತಯ್ಯನ ಮಗ ಅಯ್ಯು ಸಿನಿಮಾ ನೋಡಿರುವೆಯಾ.?‘ನೋಡಿದ್ದೇನೆ. ಅದು ಬಿಡುಗಡೆ ಆಗಿ ೫೦ ವರ್ಷ ಕಳೆದಿದೆ.‘ಅದರಲ್ಲಿ ತೋರಿಸಿದ್ದಾರಲ್ಲಾ ಮಾರಿ ಹಬ್ಬ. ಅದು ಹಿಂದೆ ಇಲ್ಲೇ ನಡೆಯುತ್ತಿತ್ತು ಗೊತ್ತೇ.?‘ ಗೊತ್ತಿಲ್ಲ.  ಆದರೆ ಆ ಸಿನಿಮಾದಲ್ಲಿ ಊರಿಗೆ ಪ್ರವಾಹ ಬಂದ ಸೀನ್ ಇದೆಯೆಲ್ಲಾ. ಅಂತಹ ಸೀನ್ ೧೯೯೧ರಲ್ಲಿ ನೋಡಿದ್ದೆ.  ‘ ಇರಲಿ ಈಗ ಊರಿನ ಶ್ರೀ ಯೋಗನರಸಿಂಹಸ್ವಾಮಿ ತೇರು ಜಾತ್ರೆ ನೋಡಲು ಬಂದಿರುವೆ.  ಊರಿನ ಕಲಾವಿದರು ಪೌರಾಣಿಕ ನಾಟಕೋತ್ಸವ ಏರ್ಪಡಿಸಿದ್ದಾರೆ. ನೋಡಿ ಹೋಗು. ನಾನು ಇನ್ನು ಕೆಲವು ವರ್ಷ ಬದುಕಿರುವೆ. ಮತ್ತೇ ಎಂದಾದರೂ ಒಂದು ದಿನ ಬಾ..— ಗೊರೂರು ಅನಂತರಾಜು,

“ಊರ ಮುಂದಿನ ಅರಳಿ ಮರ”ಗೊರೂರು ಅನಂತರಾಜು ಅವರ ಪ್ರಬಂಧ Read Post »

ಕಾವ್ಯಯಾನ

“ಮಹಾತ್ಮ” ಕವಿತೆ ಇಮಾಮ್ ‌ಮದ್ಗಾರ

ಕಾವ್ಯ ಸಂಗಾತಿ “ಮಹಾತ್ಮ” ಕವಿತೆ ಇಮಾಮ್ ‌ಮದ್ಗಾರ ನೀಲಗಗನದಲಿ ಲೀನನಾದೆನೀ ಬೆಳಗಿದಾ ಬೆಳಕು ಜಗವೆಲ್ಲ ಹರಡಿತ್ತು ಮತ್ತೆಲ್ಲಿಹುದು ?ಸತ್ಯದಾ ಕಿರಣ !ಮಿಥ್ಯೆಯ ಗಾಳಿಗೆ ಸತ್ಯದ ಹಣತೆ ನಂದಿಹೋಯಿತು ಸಂಧ್ಯಾಸಮಯ ರಾಘವನ ಪೂಜೆಗೆ ಅಣಿಯಾದದೇಹನಡೆಯುತ್ತಿತ್ತು ಎಂದಿನಂತೆದೇವರ ದಾರಿಯಲಿ…ಹಂತಕನ ಕಾಡುತೂಸು ಕಾಯುತ್ತಿತ್ತು ಸತ್ಯದಾ ಜ್ಯೋತಿ ನಂದಿಸಲೆಂದೇ ಬರಸಿಡಿಲಿನಂತೆ ಬಂದೆರಗಿದ ಗುಂಡು ನಾಟಿತೆದೆಗೆ.ಜಗವನ್ನೆ ನಡುಗಿಸಿದ್ದ ಗುಬ್ಬಿಯಷ್ಟಿದ್ದ ದೇಹ ಸಾವ ಸುಖವನಪ್ಪುತ್ತಾ ಸತ್ಯದಾ..ರಕುತ ಭಾರತಂಬೆಯ ನೆಲವ ತೋಯಿಸಿತ್ತು ತಾನೇ ಬಿಡುಗಡೆ ಗೊಳಿಸಿದ ನೆಲವಂದು ಬಿಕ್ಕಳಿಸುತ್ತಿತ್ತು ನಗುವ ಮುಖದಲಿ ಕ್ಷಮೆಯ ಕಳೆಯಿತ್ತು ತ್ಯಾಗವೇ ಜೀವನ ತಿಳಿಭಾವವಿತ್ತುಅವಸರ ವೇನಿತ್ತೊ ಬಲ್ಲವರಾರು ?ನಾಕಕ್ಕೂ ಸ್ವಾತಂತ್ರ್ಯ ಕೊಡಿಸಲು ಅವಸರಸಿ ಪಯಣಿಸಿದ ಮಹಾತ್ಮನೇನಿಮಗಿಂದು ಗೌರವ ಪೂರ್ಣನಮನಗಳು ಇಮಾಮ್ ‌ಮದ್ಗಾರ

“ಮಹಾತ್ಮ” ಕವಿತೆ ಇಮಾಮ್ ‌ಮದ್ಗಾರ Read Post »

ಕಾವ್ಯಯಾನ

“ಗಾಂಧಿಯನೇಕೆ ಕೊಂದರು?” ವಿಜಯಲಕ್ಷ್ಮಿ ಹಂಗರಗಿ

ಕಾವ್ಯ ಸಂಗಾತಿ “ಗಾಂಧಿಯನೇಕೆ ಕೊಂದರು?” ವಿಜಯಲಕ್ಷ್ಮಿ ಹಂಗರಗಿ ನಿಜ ಸತ್ಯ ಶಾಂತಿ ಮೂರ್ತಿಅಹಿಂಸೆ ಯಿಂದ ನಡೆದ ಜೀವಿನ್ಯಾಯ ನೀತಿ ನಿನ್ನ ಉಸಿರುದೇಶಕ್ಕಾಗಿ ದುಡಿದ ತ್ಯಾಗಮಯಿ ಮಹಾತ್ಮ ಗಾಂಧಿ ನೀನು… ದೇಶದ ಸ್ವತಂತ್ರಕ್ಕಾಗಿ ಹೋರಾಡಿಶ್ರಮ ಜೀವಿ ಗಾಂಧಿತುಂಡು ಪಂಚೆ ತೊಟ್ಟುಬಡವರ ಏಳಿಗೆಗೆ ಬಯಸಿದೆಮಹಾತ್ಮ ಗಾಂಧಿ ನೀನು… ಅನ್ನ ನೀರು ಬಿಟ್ಟುಉಪವಾಸದಿ ಜೀವನ ಸವಸಿನಿನ್ನ ನಿಜ ಸ್ವರೂಪಅರಿಯದ ಭಂಡರಗುಂಡಿಗೆ ಬಲಿಯಾದೆ ನೀನು … ದೇಶ ವಿಭಜನೆಯಾಗದಂತೆದೇಶದ ಒಗ್ಗಟ್ಟಿಗಾಗಿಮಿಡಿದ ಜೀವಿ ನೀನುನಿನ್ನ ಆಶಯ ಅದೇಮಾರಕವಾಗಿ ಹುತಾತ್ಮವಾದಿ … ಇಂಥ ಗಾಂಧಿಯನ್ನುಮೌಢ್ಯ ಜನರ ಗುಂಡೇಟಿಗೆದೇಹ ತ್ಯಜಿಸಿದ ಮಹಾತ್ಮಇಂದಿಗೂ ನಿನ್ನ ಆದರ್ಶ ಜೀವನಪ್ರೇರಕ ಶಕ್ತಿಯಾಗಿ ಹೊರಹೊಮ್ಮುತಿದೆ ಇಂದು ನಿನ್ನ ಸ್ಮರಣೆ ಮಾಡುವೆವುಆದರೂ ಒಂದು ಪ್ರಶ್ನೆ ಕಾಡಿದೆದೇಶದ ಜನತೆಗೆ, ಮುಗ್ಧ ಮಕ್ಕಳಿಗೆಉತ್ತರಿಸಲಾರದ ಪ್ರಶ್ನೆಗಾಂಧಿಯನೇಕೆ ಕೊಂದರು? ವಿಜಯಲಕ್ಷ್ಮಿ ಹಂಗರಗಿ

“ಗಾಂಧಿಯನೇಕೆ ಕೊಂದರು?” ವಿಜಯಲಕ್ಷ್ಮಿ ಹಂಗರಗಿ Read Post »

ಇತರೆ

“ಒಂದು ತಪ್ಪು” ಪೃಥ್ವಿರಾಜ್ ಟಿ ಬಿ

ವಿಶೇಷ ಸಂಗಾತಿ “ಒಂದು ತಪ್ಪು” ಪೃಥ್ವಿರಾಜ್ ಟಿ ಬಿ ಜೀವನದಲ್ಲಿ ನಾವು ಮಾಡುವ ಒಂದು ತಪ್ಪು ನಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ.ನಾವು ಹಾಗಲ್ಲ ಎಂದು ತಿಳಿದಿದ್ದರೂ ಪರಿಸ್ಥಿತಿ ಅವರಿಗೆ ನಮ್ಮ ಆ ಒಂದು ತಪ್ಪು ದೊಡ್ಡದಾಗಿ ಕಾಣುತ್ತದೆ.ನಾವು ಮಾಡಿದ ಆ ಒಂದು ತಪ್ಪು ನಮ್ಮನ್ನು ಒಳಗೊಳಗೆ ಕೊಲ್ಲುತ್ತದೆ.ಕೆಲವೊಮ್ಮೆ ಅದನ್ನು ನೆನಪು ಮಾಡಿಕೊಂಡಾಗ ಅದರಿಂದ ನಮ್ಮ ವ್ಯಕ್ತಿತ್ವದ ದೃಷ್ಟಿಕೋನ ನಾವೇನೆಂದು ತಿಳಿದವರೇ ಬದಲಿಸಿ ನೋಡುವಾಗ ಬದುಕಿನ ಮೇಲೆ ಜಿಗುಪ್ಸೆ ಬರುತ್ತದೆ. ಏನೇನೋ ಯೋಚನೆಗಳು ಬರುತ್ತವೆ. ಜೀವನವೆಂಬುದು ನಿರಂತರ ಕಲಿಕೆಯ ಪಯಣ. ಪ್ರತಿದಿನ ನಾವು ಹೊಸ ಅನುಭವಗಳನ್ನು ಸಂಗ್ರಹಿಸುತ್ತೇವೆ, ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ, ಹೊಸ ಸಂಬಂಧಗಳನ್ನು ಕಟ್ಟುತ್ತೇವೆ. ಈ ಪಯಣದಲ್ಲಿ ನಾವು ಸಾಧಿಸುವ ಯಶಸ್ಸಿನಷ್ಟೇ, ಮಾಡುವ ತಪ್ಪುಗಳೂ ನಮ್ಮನ್ನು ರೂಪಿಸುತ್ತವೆ. ಆದರೆ ಕೆಲವೊಮ್ಮೆ ನಾವು ಮಾಡುವ ಒಂದು ಸಣ್ಣ ತಪ್ಪು ನಮ್ಮ ಸಂಪೂರ್ಣ ವ್ಯಕ್ತಿತ್ವದ ಮೇಲೆ ಆಳವಾದ ಛಾಯೆಯನ್ನು ಬೀರುತ್ತದೆ. ಆ ತಪ್ಪು ನಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಬಲ್ಲ ಶಕ್ತಿಯನ್ನು ಹೊಂದಿರುತ್ತದೆ.ಮಾನವನ ಸ್ವಭಾವವೇ ತಪ್ಪುಮಾಡುವದು. ಯಾರೂ ಸಂಪೂರ್ಣರಾಗಿಲ್ಲ. ಆದರೂ ಸಮಾಜ ನಮ್ಮ ತಪ್ಪನ್ನು ಕ್ಷಮಿಸಲು ಯಾವಾಗಲೂ ಸಿದ್ಧವಿರುವುದಿಲ್ಲ. ನಾವು “ನಾವು ಹಾಗಲ್ಲ” ಎಂದು ಒಳಗೊಳಗೆ ತಿಳಿದಿದ್ದರೂ, ಹೊರಗಿನ ಜಗತ್ತಿಗೆ ನಮ್ಮ ಆ ಒಂದು ತಪ್ಪೇ ನಮ್ಮ ಗುರುತಾಗಿ ಕಾಣುತ್ತದೆ. ನಮ್ಮ ಶುದ್ಧ ಉದ್ದೇಶಗಳು, ಒಳ್ಳೆಯ ಕಾರ್ಯಗಳು, ಮೌಲ್ಯಗಳು ಎಲ್ಲವೂ ಆ ಒಂದು ತಪ್ಪಿನ ನೆರಳಲ್ಲಿ ಮಸುಕಾಗಿಬಿಡುತ್ತವೆ. ಇದೇ ನಮ್ಮ ಮನಸ್ಸಿಗೆ ಅತಿದೊಡ್ಡ ನೋವನ್ನು ಉಂಟುಮಾಡುತ್ತದೆ.ಒಂದು ತಪ್ಪು ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ನಾವು ನಮ್ಮನ್ನೇ ಪ್ರಶ್ನಿಸಿಕೊಳ್ಳಲು ಪ್ರಾರಂಭಿಸುತ್ತೇವೆ – “ನಾನು ನಿಜವಾಗಿಯೂ ಇಷ್ಟು ಕೆಟ್ಟವನಾಗಿದ್ದೇನಾ?”, “ನನ್ನಿಂದಲೇ ಇದು ನಡೆಯಿತೇ?” ಎಂದು. ಈ ಪ್ರಶ್ನೆಗಳು ನಿಧಾನವಾಗಿ ನಮ್ಮ ಮನಸ್ಸನ್ನು ಕಿತ್ತುಕೊಳ್ಳುತ್ತವೆ. ಕೆಲವೊಮ್ಮೆ ನಾವು ಹೊರಗೆ ನಗುತ್ತಾ ಬದುಕುತ್ತೇವೆ, ಆದರೆ ಒಳಗೊಳಗೆ ಅದೇ ತಪ್ಪು ನಮ್ಮನ್ನು ಮೌನವಾಗಿ ಕೊಲ್ಲುತ್ತಿರುತ್ತದೆ. ಇದು ಕಾಣದ ನೋವು, ಆದರೆ ಅತ್ಯಂತ ತೀವ್ರವಾದ ನೋವು.ಅತ್ಯಂತ ನೋವುಂಟುಮಾಡುವ ಸಂಗತಿ ಎಂದರೆ ನಮ್ಮನ್ನು ಚೆನ್ನಾಗಿ ಅರಿತವರು ಕೂಡ ಆ ತಪ್ಪಿನ ಆಧಾರದ ಮೇಲೆ ನಮ್ಮನ್ನು ಅಳೆಯಲು ಪ್ರಾರಂಭಿಸುವುದು. ಒಮ್ಮೆ ನಮ್ಮನ್ನು ಗೌರವದಿಂದ ನೋಡಿದ ಕಣ್ಣುಗಳು, ಈಗ ಸಂಶಯದಿಂದ ನೋಡುವಾಗ ಮನಸ್ಸು ಕುಗ್ಗುತ್ತದೆ. ಅವರ ದೃಷ್ಟಿಕೋನದ ಬದಲಾವಣೆ ನಮ್ಮ ಆತ್ಮಗೌರವಕ್ಕೆ ದೊಡ್ಡ ಆಘಾತವನ್ನು ಉಂಟುಮಾಡುತ್ತದೆ. ಇದರಿಂದ ಜೀವನದ ಮೇಲೆ ಜಿಗುಪ್ಸೆ ಹುಟ್ಟುತ್ತದೆ. ಬದುಕು ಅರ್ಥವಿಲ್ಲದಂತೆ ಕಾಣಲು ಶುರುವಾಗುತ್ತದೆ. ಮನಸ್ಸಿನಲ್ಲಿ ಅಶಾಂತ ಯೋಚನೆಗಳು, ನಿರಾಶೆ, ಭಯ, ಅಪರಾಧಬೋಧ ಮೇಳೈಸುತ್ತವೆ.ಕೆಲವರಿಗೆ ಆ ತಪ್ಪು ಒಂದು ಪಾಠವಾಗುತ್ತದೆ; ಇನ್ನೂ ಕೆಲವರಿಗೆ ಅದು ಶಾಪವಾಗಿಬಿಡುತ್ತದೆ. ವ್ಯತ್ಯಾಸ ಇರುವುದು ನಮ್ಮ ಅದನ್ನು ನೋಡುವ ದೃಷ್ಟಿಕೋನದಲ್ಲಿ. ತಪ್ಪನ್ನು ನಾವು ಒಪ್ಪಿಕೊಂಡು, ಅದರಿಂದ ಪಾಠ ಕಲಿದು ಮುಂದೆ ಸಾಗಿದರೆ ಅದು ನಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತದೆ. ಆದರೆ ಅದನ್ನೇ ನಮ್ಮ ಅಸ್ತಿತ್ವದ ಗುರುತಾಗಿ ಮಾಡಿಕೊಂಡರೆ, ಅದು ನಮ್ಮನ್ನು ನಿಧಾನವಾಗಿ ಕುಗ್ಗಿಸುತ್ತದೆ.ಸಮಾಜದ ಪಾತ್ರವೂ ಇಲ್ಲಿ ಅತ್ಯಂತ ಮಹತ್ವದ್ದಾಗಿದೆ. ಸಮಾಜ ಸಾಮಾನ್ಯವಾಗಿ ತಪ್ಪನ್ನು ತೀರ್ಪಿನ ಕಣ್ಣಿನಿಂದ ನೋಡುತ್ತದೆ; ಸಹಾನುಭೂತಿಯ ಕಣ್ಣಿನಿಂದ ಅಲ್ಲ. ಒಬ್ಬ ವ್ಯಕ್ತಿಯ ಒಂದು ತಪ್ಪನ್ನು ಸಂಪೂರ್ಣ ಜೀವನದ ತೂಕಕ್ಕೆ ಹಾಕಿ ತೀರ್ಮಾನಿಸುವುದು ಸುಲಭ. ಆದರೆ ಆ ವ್ಯಕ್ತಿಯ ಒಳಗಿನ ನೋವು, ಪಶ್ಚಾತ್ತಾಪ, ಬದಲಾವಣೆಯ ಪ್ರಯತ್ನಗಳು ಬಹುತೇಕ ಯಾರಿಗೂ ಕಾಣುವುದಿಲ್ಲ. ನಾವು ಸಹ ಇತರರ ತಪ್ಪನ್ನು ಕ್ಷಮಿಸುವ ಮನಸ್ಸು ಬೆಳೆಸಬೇಕು. ಏಕೆಂದರೆ ಇಂದು ಅವರ ಸ್ಥಾನದಲ್ಲಿ ನಾವಿರಬಹುದು; ನಾಳೆ ನಮ್ಮ ಸ್ಥಾನದಲ್ಲಿ ಅವರು ಇರಬಹುದು.ತಪ್ಪುಗಳು ನಮ್ಮನ್ನು ಮಾನವೀಯರನ್ನಾಗಿಸುತ್ತವೆ. ತಪ್ಪಿಲ್ಲದ ಬದುಕು ಕಲ್ಪನೆಯಲ್ಲಷ್ಟೇ ಸಾಧ್ಯ. ಪ್ರತಿಯೊಂದು ತಪ್ಪು ನಮ್ಮೊಳಗೆ ಒಂದು ಪಾಠವನ್ನು ಅಡಗಿಸಿಕೊಂಡಿರುತ್ತದೆ. ಅದು ನಮ್ಮನ್ನು ಜಾಗರೂಕರನ್ನಾಗಿಸುತ್ತದೆ, ವಿನಮ್ರತೆಯನ್ನು ಕಲಿಸುತ್ತದೆ, ಇತರರ ನೋವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಾವು ನಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಅವುಗಳಿಂದ ಕಲಿಯುವ ಧೈರ್ಯವನ್ನು ಹೊಂದಿದಾಗ ಮಾತ್ರ ನಿಜವಾದ ವ್ಯಕ್ತಿತ್ವ ಬೆಳೆಯುತ್ತದೆ.ಒಂದು ತಪ್ಪಿನಿಂದ ಹೊರಬರುವುದು ಸುಲಭವಲ್ಲ. ಕೆಲವೊಮ್ಮೆ ಸಮಯ ಬೇಕಾಗುತ್ತದೆ, ಕೆಲವೊಮ್ಮೆ ಕ್ಷಮೆ ಕೇಳಬೇಕಾಗುತ್ತದೆ, ಇನ್ನೊಮ್ಮೆ ಸ್ವತಃ ನಮ್ಮನ್ನೇ ಕ್ಷಮಿಸಿಕೊಳ್ಳಬೇಕಾಗುತ್ತದೆ. ನಮ್ಮನ್ನು ನಾವು ಕ್ಷಮಿಸಿಕೊಳ್ಳುವ ಕಲಿಕೆ ಅತ್ಯಂತ ಕಠಿಣವಾದರೂ ಅತ್ಯಂತ ಅಗತ್ಯವಾದದ್ದು. ಏಕೆಂದರೆ ನಾವು ನಮ್ಮನ್ನೇ ಕ್ಷಮಿಸದಿದ್ದರೆ, ಮುಂದೆ ಸಾಗಲು ಸಾಧ್ಯವಿಲ್ಲ.ನಮ್ಮ ಮನಸ್ಸಿನಲ್ಲಿ ಮರುಮರು ಅದೇ ತಪ್ಪಿನ ನೆನಪುಗಳು ಬಂದಾಗ, ನಾವು ನಮ್ಮನ್ನು ತಡೆದುಕೊಳ್ಳಬೇಕು. “ನಾನು ಆ ತಪ್ಪಿಗಿಂತ ದೊಡ್ಡವನು”, “ನನ್ನ ಬದುಕು ಒಂದು ತಪ್ಪಿನಿಂದ ಸೀಮಿತವಾಗುವುದಿಲ್ಲ” ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಧನಾತ್ಮಕ ಚಿಂತನೆ, ಉತ್ತಮ ಸಂಗಾತಿ, ಸೃಜನಶೀಲತೆ, ಸೇವಾಭಾವ – ಇವುಗಳು ನಮ್ಮ ಮನಸ್ಸನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿವೆ.ವಿಶೇಷವಾಗಿ ಯುವಜನರಲ್ಲಿ ಒಂದು ತಪ್ಪು ದೊಡ್ಡ ನಿರಾಶೆಗೆ ಕಾರಣವಾಗುತ್ತದೆ. ಜೀವನವೇ ಮುಗಿದಂತೆ ಭಾಸವಾಗಬಹುದು. ಆದರೆ ಅದೇ ತಪ್ಪು ಭವಿಷ್ಯದ ಬಲಿಷ್ಠ ವ್ಯಕ್ತಿತ್ವಕ್ಕೆ ಬೀಜವಾಗಬಹುದು ಎಂಬುದನ್ನು ಅವರು ಅರಿಯಬೇಕು. ಇತಿಹಾಸದಲ್ಲಿನ ಅನೇಕ ಮಹಾನ್ ವ್ಯಕ್ತಿಗಳು ತಮ್ಮ ಜೀವನದಲ್ಲಿ ದೊಡ್ಡ ತಪ್ಪುಗಳನ್ನು ಮಾಡಿದ್ದಾರೆ; ಆದರೆ ಅದನ್ನೇ ತಮ್ಮ ಶಕ್ತಿಯಾಗಿ ಪರಿವರ್ತಿಸಿಕೊಂಡಿದ್ದಾರೆ.ಕೊನೆಗೆ ಹೇಳಬೇಕೆಂದರೆ, ಒಂದು ತಪ್ಪು ನಮ್ಮನ್ನು ಮುರಿಯಬಹುದು, ಅಥವಾ ನಮ್ಮನ್ನು ಕಟ್ಟಬಹುದು — ಅದು ನಮ್ಮ ಆಯ್ಕೆ. ತಪ್ಪು ನಮ್ಮ ಗುರುತು ಅಲ್ಲ; ನಾವು ಅದರಿಂದ ಏನು ಕಲಿತೆವು ಎಂಬುದೇ ನಮ್ಮ ನಿಜವಾದ ಗುರುತು. ಬದುಕು ಎಂದರೆ ಪರಿಪೂರ್ಣತೆ ಅಲ್ಲ, ನಿರಂತರ ಸುಧಾರಣೆ. ತಪ್ಪುಗಳನ್ನು ಒಪ್ಪಿಕೊಂಡು, ಆತ್ಮವಿಶ್ವಾಸದಿಂದ ಮುಂದೆ ಸಾಗುವವನೇ ನಿಜವಾದ ಗೆದ್ದವನು. ಪೃಥ್ವಿರಾಜ್ ಟಿ ಬಿ

“ಒಂದು ತಪ್ಪು” ಪೃಥ್ವಿರಾಜ್ ಟಿ ಬಿ Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾಚೇತನ
ಜಯದೇವಿ ತಾಯಿ ಲಿಗಾಡೆ ಅವರ ಜೀವನಗಾಥೆ
ಸವಿತಾ ದೇಶಮುಖ

Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ “ಮತ್ತೆ ಹುಟ್ಟಿ ಬಾ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಮತ್ತೆ ಹುಟ್ಟಿ ಬಾ” ಹೋಮ ಹವನ ಮಾಡುವರುಅಂದ ಶ್ರದ್ದೆ ಆಚಾರ ಅನಾಚಾರಪ್ರಾಣಿ ಮಕ್ಕಳ ಬಲಿ ಕೊಡುವರುಅರಿವಿದ್ದು ಮೌಢ್ಯ ನೆಚ್ಚಿಹರುಇಂಥ ಕಂದಾಚಾರ ತೊಡೆದುಹಾಕಲು ಜಗಜ್ಯೋತಿ ಬಸವಣ್ಣಮತ್ತೆ ಹುಟ್ಟಿ ಬಾ… ಮನ ಶುದ್ಧ ವಿಲ್ಲಚಿತ್ತ ಶುದ್ದ ವಿಲ್ಲವೇಷ ಭಾಷೆಯಲ್ಲ ವಿಷ ಪಾಶ ಹರಿಯುವುದು ನಿತ್ಯಪರಿಶುದ್ಧ ಸ್ವತಂತ್ರರು ಆದಬಸವಣ್ಣ ಮತ್ತೆ ಹುಟ್ಟಿ ಬಾ… ಸತ್ಯ ಶುದ್ಧವಿಲ್ಲದ ಕಾಯಕದ ಮಧ್ಯೆ ಆಸೆ ಎಂಬ ಭವದ ಬೀಜ ಬಿತ್ತಿಹಲಬೂತಿಹರು ಧನ ಕನಕಕ್ಕಾಗಿಬಕಾಸುರ ರಂತೆ ಬಾಚುವರುಕಾಯಕ ಯೋಗಿ ಬಸವಣ್ಣಮತ್ತೆ ಹುಟ್ಟಿ ಬಾ… ಕೊಲೆ ಸುಲಿಗೆ ಮಾಡುವರುಕ್ರೂರಿಗಳು ಜಾತಿ ಮತ ಲಿಂಗಗಳ ಎಣಿಸುವರು ನಿತ್ಯ ನಿರಂತರಭೇದ ಭಾವ ಅಳಿಸಿ ಹಾಕಲುಕ್ರಾಂತಿಯೋಗಿ ಬಸವಣ್ಣಮತ್ತೆ ಹುಟ್ಟಿ ಬಾ… ಕಾಯಕ ನಿಷ್ಠೆ ತೋರಿಧರ್ಮದ ಬುನಾದಿಯಾಗಿವಚನ ತತ್ವ ಸಂಸ್ಕೃತಿ ಪರಂಪರೆ  ಜಗಕೆ ಅರುಹಲುಮಹಾ ಮಾನವತಾವಾದಿಬಸವಣ್ಣ ಮತ್ತೆ ಹುಟ್ಟಿ ಬಾ… ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ “ಮತ್ತೆ ಹುಟ್ಟಿ ಬಾ” Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-108 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಆತಂಕದಲ್ಲಿಯೇ ರಾತ್ರಿ ಕಳೆದ ಕುಟುಂಬ “ಮುಂದಿನ ಬಾರಿ ಈ ತರದ ಯಾವ ಅದೃಷ್ಟವೂ ಇವರನ್ನು ಖಂಡಿತಾ ಕಾಪಾಡುವುದಿಲ್ಲ…. ಸರಿಯಾಗಿ ಪ್ಲಾನ್ ಮಾಡಿಕೊಳ್ಳೋಣ”…. ಎಂದು ಮತ್ತೊಬ್ಬ ಹೇಳಿದ. ಆಗ ಇನ್ನೊಬ್ಬ ಹೌದೆನ್ನುವಂತೆ ತಲೆ ಆಡಿಸಿದ. ಮಾತನಾಡುತ್ತಲೇ ಆ ಇಬ್ಬರು ಯುವಕರ ಸಂಭಾಷಣೆಯನ್ನು ಅಕ್ಕತಂಗಿಯರು ಗಮನಿಸಿದರು. ಅವರ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದವು. ಆದರೂ ಅದನ್ನು ತೋರ್ಪಡಿಸಿಕೊಳ್ಳದೇ ಎಂದಿನಂತೆ ಸಹಜವಾಗಿ ಇರುವ ಪ್ರಯತ್ನ ಮಾಡಿದರು. ಅವರು ಹೇಳಿದ ಮಾತುಗಳು ತಮಗಲ್ಲವೇನೋ ಅನ್ನುವಂತೆ ಕಿಟಕಿಯಿಂದ ಆಚೆ ನೋಡುತ್ತಾ ಕುಳಿತುಕೊಂಡರು. ಆದರೆ ಮನಸ್ಸಿನಲ್ಲಿ ಆತಂಕ ಮನೆ ಮಾಡಿತ್ತು. ಅಕ್ಕನ ಕೈಯನ್ನು ತಂಗಿ, ತಂಗಿಯ ಕೈಯನ್ನು ಅಕ್ಕ ಬಲವಾಗಿ ಹಿಡಿದು ಮೌನವಾಗಿ ಒಬ್ಬರಿಗೊಬ್ಬರು ಧೈರ್ಯ ಹೇಳಿಕೊಂಡರು.  ಇಬ್ಬರ ಮನಸ್ಸು ಭಾರವಾಯಿತು. ತಮ್ಮ ಬಸ್ ನಿಲ್ದಾಣ ಬಂದಾಗ ಅಂಜುತ್ತಲೇ ಇಳಿದರು. ಆದರೆ ಹಿಂತಿರುಗಿ ನೋಡಲಿಲ್ಲ. ಸ್ವಲ್ಪ ದೂರ ಕ್ರಮಿಸಿದ ನಂತರ ತಿರುಗಿ ನೋಡಿದರು. ಅವರ ಜೊತೆ ಈ ಬಸ್ ನಿಲ್ದಾಣದಲ್ಲಿ ದಿನವೂ ಇಳಿಯುವ ಇತರೆ ಪ್ರಯಾಣಿಕರಿದ್ದರೇ ಹೊರತು ಆ ಇಬ್ಬರು ಯುವಕರು ಕಾಣಲಿಲ್ಲ. ಇಬ್ಬರೂ ನೆಮ್ಮದಿಯ ನಿಟ್ಟುಸಿರೊಂದನ್ನು ಬಿಟ್ಟು ವೇಗವಾಗಿ ಹೆಜ್ಜೆ ಹಾಕುತ್ತಾ ಆತುರದಿಂದ ಮನೆಯ ಕಡೆಗೆ ನಡೆದರು. ಮನೆ ತಲುಪಿದಾಗ ಅಮ್ಮ ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡುತ್ತಿದ್ದುದು ಕಂಡರು. ಅಕ್ಕ-ತಂಗಿಯರಿಬ್ಬರೂ ಬಟ್ಟೆ ಬದಲಿಸಿ, ಕೈಕಾಲು ಮುಖ ತೊಳೆದು ತಾವೂ ದೇವರಿಗೆ ಕೈ ಮುಗಿದರು.  ಕಣ್ಣು ಮುಚ್ಚಿ ಪ್ರಾರ್ಥಿಸುತ್ತಿದ್ದರೂ ಸುಮತಿಗೆ ಮಕ್ಕಳಿಬ್ಬರ ಆಗಮನದ ಅರಿವಾಯಿತು. ಪ್ರಾರ್ಥನೆ ಮುಗಿದ ನಂತರ ಮಕ್ಕಳಿಬ್ಬರನ್ನು ಗಮನಿಸಿದಳು. ಇಂದು ಕೂಡ ಅವರ ಮುಖ ಬಾಡಿತ್ತು. ಬಹುಶಃ ನಿನ್ನಯ ಘಟನೆಯನ್ನು ನೆನೆದು ಮಕ್ಕಳು ಈ ರೀತಿ ಇರಬಹುದು ಎಂದುಕೊಂಡಳು. ಆದರೂ….” ಏನಾಯ್ತು ಮಕ್ಕಳೇ”…. ಎಂದು ಕೇಳಿದಳು. ಅಕ್ಕ-ತಂಗಿಯರಿಬ್ಬರು ಪರಸ್ಪರ ನೋಡಿಕೊಂಡು ಹೇಳೋಣ ಎನ್ನುವಂತೆ ಕಣ್ಣಲ್ಲಿ ಸನ್ನೆ ಮಾಡಿಕೊಂಡರು. ಇಬ್ಬರೂ ಒಕ್ಕೊರಲಿನಿಂದ…. “ಅಮ್ಮಾ….. ನಮ್ಮನ್ನು ಹಿಂಬಾಲಿಸಿ ಬಂದು ತೊಂದರೆ ಕೊಟ್ಟಂತಹ ಯುವಕರು ಯಾರೆಂದು ತಿಳಿಯಿತು”…. ಎಂದು ಮಕ್ಕಳು ಹೇಳಿದಾಗ, ಸುಮತಿ ಕಾತರದಿಂದ ಯಾರವರು?… ನಿಮಗೆ ಪರಿಚಿತರೇ?… ಅಥವಾ ಹೊರಗಿನವರೇ?… ಎಂದು ಕೇಳಿದಳು. ಆಗ ತಮಗೆ ತಿಳಿದಿರುವ ವಿಷಯಗಳನ್ನು ಮಕ್ಕಳು ತಿಳಿಸಿದರು. ಜೊತೆಗೆ ತಾವು ಬಸ್ಸಿನಲ್ಲಿದ್ದಾಗ ಅವರು ಮಾತನಾಡಿಕೊಂಡ ಬಗ್ಗೆಯೂ ಹೇಳಿದರು. ಮಕ್ಕಳ ಮಾತುಗಳನ್ನು ಆಲಿಸಿದ, ಸುಮತಿ ಹೌಹಾರಿದಳು. ಮುಂದೆ ಏನು ಮಾಡುವುದು? ಎನ್ನುವ ಚಿಂತೆಯು ಅವಳ ಮನವನ್ನು ಆವರಿಸಿತು. ದೇವರೇ ಗಂಡಿನಾಶ್ರಯವಿಲ್ಲದ ನಮ್ಮ ಬದುಕು ಎಷ್ಟೊಂದು ದುಸ್ತರವಾಗುತ್ತಿದೆ. ಆರೋಗ್ಯವಿರದ, ಅಬಲೆಯಾದ ನಾನು ನನ್ನ ಮಕ್ಕಳನ್ನು ಹೇಗೆ ದುಷ್ಟರಿಂದ ಕಾಪಾಡಲಿ.? ಒಂದು ಕಾಲದಲ್ಲಿ ಸಣ್ಣ ವಯಸ್ಸಿನಲ್ಲಿಯೇ ವಿಧವೆಯಾದ ನನ್ನನ್ನು ನಾನು ಕಾಪಾಡಿಕೊಳ್ಳಲು ಬಹಳ ಕಷ್ಟಪಟ್ಟಿದ್ದೇನೆ…. ನನಗಿರುವವರು ನಾಲ್ಕು ಹೆಣ್ಣು ಮಕ್ಕಳು…. ಒಬ್ಬಳದು ಮದುವೆಯಾಗಿದೆ…. ಉಳಿದ ಹೆಣ್ಣು ಮಕ್ಕಳಿಗೆ ಒಂದು ದಾರಿಯಾಗುವವರೆಗೂ ಹೇಗೆ ನಾನು ಕಾಪಾಡಲಿ? ನನ್ನ ಮಕ್ಕಳು ಕೂಡ ಇಂತಹವರಿಂದ ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ? ಕೃಷ್ಣಾ ನೀನೇ ಏನಾದರೂ ಒಂದು ದಾರಿ ತೋರು ನಮಗೆ ಎಂದು ಮೌನವಾಗಿ ಕೃಷ್ಣನನ್ನು ಪ್ರಾರ್ಥಿಸುತ್ತಿದ್ದಳು. ಅಮ್ಮನ ಚಿಂತಾಕ್ರಾಂತವಾದ ಮುಖವನ್ನು ನೋಡಿ ಮಕ್ಕಳಿಬ್ಬರೂ ಅಮ್ಮನ ಹೆಗಲ ಮೇಲೆ ಕೈಯಿಟ್ಟು ಏನು ಯೋಚಿಸುತ್ತಿರುವೆ? ಎಂಬಂತೆ ಅವಳ ಮುಖ ನೋಡಿದರು. ಸುಮತಿ ಬಾರದ ಮುಗುಳ್ನಗೆಯನ್ನು ಮುಖದ ಮೇಲೆ ತಂದುಕೊಳ್ಳುತ್ತಾ….”ಹೆದರಬೇಡಿ ಮಕ್ಕಳೇ, ದೇವರು ನಮಗೆ ಏನಾದರೂ ಒಂದು ದಾರಿ ತೋರುವನು. … ಬನ್ನಿ ಮಕ್ಕಳೇ ಊಟ ಮಾಡೋಣ”… ಎಂದು ಅಡುಗೆ ಮನೆಯ ಕಡೆಗೆ ಮಕ್ಕಳನ್ನು ಬರುವಂತೆ ಸೂಚಿಸಿದಳು. ಇಬ್ಬರೂ ಸುಮತಿಯ ಜೊತೆಗೆ ಅಡುಗೆ ಮನೆಗೆ ಬಂದರು. ತಾವು ಕುಳಿತುಕೊಳ್ಳುವ ಮಣೆಯನ್ನು ಇಟ್ಟುಕೊಂಡು ಅಮ್ಮನಿಗೂ ಒಂದು ಮಣೆಯನ್ನು ಇಟ್ಟರು. ಸುಮತಿ ಇಬ್ಬರಿಗೂ ಊಟ ಬಡಿಸಿದಳು. ತಾನು ತಟ್ಟೆಯಲ್ಲಿ ಊಟವನ್ನು ಹಾಕಿಕೊಂಡು ಅನ್ಯಮನಸ್ಕಳಾಗಿ ಏನನ್ನೋ ಯೋಚಿಸುತ್ತಾ ಊಟ ಮಾಡುತ್ತಿದ್ದಳು. ಇದ್ದಕ್ಕಿದ್ದ ಹಾಗೆ ಅನ್ನವು ಅವಳ ನೆತ್ತಿಗೇರಿತು. ಜೋರಾಗಿ ಕೆಮ್ಮಲು ಪ್ರಾರಂಭಿಸಿದಳು. ಮಕ್ಕಳಿಬ್ಬರೂ ನೀರಿನ ಲೋಟವನ್ನು ಅಮ್ಮನೆಡೆಗೆ ಹಿಡಿದರು. ಸುಮತಿಯ ಕಣ್ಣುಗಳಲ್ಲಿ ನೀರು ತುಂಬಿ ಕನ್ನಡಕದ ಮೇಲೆ ಬಿದ್ದು ದೃಷ್ಟಿ ಮಂಜಾಯಿತು. ತನ್ನ ದಪ್ಪ ಕನ್ನಡಕವನ್ನು ತೆಗೆದು ಸೀರೆಯಿಂದ ಒರೆಸಿ ಪುನಹ ಹಾಕಿಕೊಳ್ಳುತ್ತಾ ನೀರನ್ನು ಕುಡಿದಳು. ಊಟ ಮುಗಿಸಿ, ಪಾತ್ರೆ ತೊಳದಿಟ್ಟು ಮಕ್ಕಳ ಜೊತೆಗೆ ಹೊರಗೆ ವರಾಂಡದಲ್ಲಿ ಬಂದು ಕುಳಿತಳು.  ಮಕ್ಕಳಿಬ್ಬರೂ ಅಮ್ಮನ ಅಕ್ಕಪಕ್ಕ ಕುಳಿತುಕೊಂಡು ಅಮ್ಮನ ಹೆಗಲ ಮೇಲೆ ತಲೆ ಇಟ್ಟುಕೊಂಡರು. ಅಮಾವಾಸ್ಯೆಯು ಹತ್ತಿರ ಬರುತ್ತಿದ್ದುದರಿಂದ ಆಗಸದಲ್ಲಿ ನಕ್ಷತ್ರಗಳು ಇನ್ನೂ ಹೆಚ್ಚು ಹೊಳಪಾಗಿ ಕಾಣುತ್ತಿದ್ದವು. ಸುಮತಿ ಗಿಡ ಮರಗಳ ನಡುವೆ ಆವರಿಸಿರುವ ಕತ್ತಲೆಯಲ್ಲಿ ಶೂನ್ಯತೆಯನ್ನು ನೋಡುತ್ತಾ, ಮನಸ್ಸಿನಲ್ಲಿ ಉಪಾಯವೊಂದು ಹೊಳೆದಂತಾಗಿ…. “ಮಕ್ಕಳೇ ನಾಳೆ ನೀವುಗಳು ಶಾಲಾ-ಕಾಲೇಜಿನಿಂದ ಹಿಂತಿರುಗಿ ಬರುವಾಗ ತೋಟದ ದೊಡ್ಡ ಬಂಗಲೆಯ ಗೇಟಿನ ಬಳಿ ಇಳಿದುಕೊಳ್ಳಿ….. ನಾನು ಶಾಲೆ ಮುಗಿದ ನಂತರ ಸಂಜೆ ಬಂದು ಅಲ್ಲಿ ಬಂಗಲೆಯ ಬಳಿ ನಿಮಗಾಗಿ ಕಾಯುತ್ತಿರುತ್ತೇನೆ….. ಸಾಹುಕಾರರನ್ನು ಕಂಡು ಮಾತನಾಡೋಣ…. ಅವರು ಏನಾದರೂ ಒಂದು ಪರಿಹಾರ ಸೂಚಿಸಬಹುದು”…. ಎಂದು ಸುಮತಿ ಮಕ್ಕಳಿಗೆ ಹೇಳಿದಳು. ಅಮ್ಮನ ಮಾತನ್ನು ಕೇಳಿದ ಮಕ್ಕಳು ಹಾಗೆಯೇ ಆಗಲಿ ಎನ್ನುವಂತೆ ತಲೆಯಾಡಿಸಿದರು. ಮನಸ್ಸಿನಲ್ಲಿ ಸಣ್ಣ ಆಶಾ ಭಾವನೆ ಹೊಳೆದಿದ್ದರಿಂದ ಸುಮತಿಯ ಮನಸ್ಸು ಸ್ವಲ್ಪ ತಿಳಿಯಾಯಿತು. ಏನಾದರೂ ಒಂದು ದಾರಿ ಖಂಡಿತಾ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆಯಿಂದ ಮಕ್ಕಳಿಬ್ಬರನ್ನು ಕರೆದುಕೊಂಡು ಮನೆಯ ಒಳಗೆ ನಡೆದಳು. ಬಾಗಿಲ ಚಿಲಕವನ್ನು ಹಾಕಿ, ಇಬ್ಬರನ್ನೂ ತನ್ನ ಪಕ್ಕದಲ್ಲಿ ಮಲಗಿಸಿಕೊಂಡು ನಿದ್ರಿಸುವ ಪ್ರಯತ್ನ ಮಾಡಿದಳು. ಅಮ್ಮನ ತೋಳನ್ನು ತಲೆದಿಂಬಾಗಿಸಿಕೊಂಡು ಮಕ್ಕಳಿಬ್ಬರೂ ಅಮ್ಮನನ್ನು ಅಪ್ಪಿ ಮಲಗಿದರು. ದಿನವೂ ಮಲಗುವಾಗ ಸುಮತಿ ಮಕ್ಕಳಿಗೆ ಯಾವುದಾದರೊಂದು ನೀತಿ ಕಥೆಯನ್ನು ಹೇಳುತ್ತಿದ್ದಳು. ವಿಶೇಷವಾಗಿ ತನ್ನ ಇಷ್ಟದೈವ ಶ್ರೀ ಕೃಷ್ಣನ ಕಥೆಯನ್ನೇ ಹೆಚ್ಚಾಗಿ ಹೇಳುತ್ತಿದ್ದಳು. ಮಕ್ಕಳಿಗೂ ಅಮ್ಮ ಹೇಳುವ ಶ್ರೀ ಕೃಷ್ಣನ ಕಥೆ ಎಂದರೆ ಬಹಳ ಇಷ್ಟವಾಗುತ್ತಿತ್ತು. ಅಮ್ಮ ಹೇಳುತ್ತಿದ್ದ ಕಥೆಯನ್ನು ಕೇಳುತ್ತಾ, ಹೂಂಗುಟ್ಟುತ್ತಾ ಮಕ್ಕಳಿಬ್ಬರೂ ನಿದ್ರೆಗೆ ಜಾರಿದರು. 

Read Post »

ಕಾವ್ಯಯಾನ

“ಹೃದಯ ವೀಣೆ” ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ

ಕಾವ್ಯ ಸಂಗಾತಿ “ಹೃದಯ ವೀಣೆ” ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಶುರುವಾಗಿದೆಆಸೆಗಳ ಆಂದೋಲನಅತಿಯಾಗಿಹೇಳಲಾಗದೆಉಳಿದಿವೆ ಅದೆಷ್ಟೋಮಾತುಗಳುಮುದುರಿ ಹೋಗಿವೆಎದೆಯ ಗೂಡೊಳಗೆಬಂದೊಮ್ಮೆ ಮೀಟುಹೃದಯ ವೀಣೆಕಾಯುತಿವೆ ನಿನ್ನಬರುವಿಗಾಗಿ ಭಾವಲತೆಗಳುನೀ ಬಂದು ಸಂತೈಸುಮಿಡಿಯುವ ಮನವಬಂದುಬಿಡೊಮ್ಮೆಅಂತರಂಗದ ಹೂ ಬನಕೆಮಧುವರಿಸಿ ಬರುವ ದುಂಬಿಯಂತೆಮಿಲನವಾಗಲಿಮಧುರ ಪ್ರೇಮಕಾವ್ಯಕಾಯುತಿದೆ ಮನವುಬಾಹುಬಂಧನದ ಬೆಸುಗೆತವಕದ ತಲ್ಲಣಕೆಮುನಿಸದೆಕಟ್ಟಿ ಬಿಡುಹೃದಯಕ್ಕೆ ಸೇತುವೆ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ

“ಹೃದಯ ವೀಣೆ” ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ Read Post »

You cannot copy content of this page

Scroll to Top