ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ನನ್ನೆದೆಯ ಖಾಲಿ ಪುಟದ ಮೇಲೆ ಬರೆದೆ ನೋವಿನ ಶಾಯರಿಹೃದಯದಾ ಗೋಡೆಯ ಮೇಲೆ ಕೊರೆದೆ ನೋವಿನ ಶಾಯರಿ ಪುಟಿದೇಳುವ ಭಾವಗಳ ಸಲುಹಲಾರದೆ ನೆಚ್ಚಿದೆ ಮಧುಶಾಲೆಮನದಂಗಳ ರಂಗವಲ್ಲಿ ತುಂಬಾ ಹಾಸಿದೆ ನೋವಿನ ಶಾಯರಿ ನೆನಪಿನಲೆ ಅಪ್ಪಳಿಸೋ ವೇಗಕೆ ತುಟಿಗಂಟಿತು ಮಧುಬಟ್ಟಲುತಲ್ಲಣಿಸೋ ದೇಹಧರೆ ಮೇಲೆಲ್ಲಾ ಹೊಸೆದೆ ನೋವಿನ ಶಾಯರಿ ಪ್ರೇಮದೋಲೆಯ ಅಕ್ಷರಗಳು ಕಾಣದಂತೆ ಕುಡಿದೆ ಮಧುಪಾಕಸಂತಸದ ಸರಸದಲೆಯ ಅಬ್ಬರಕೆ ಬೆಸೆದೆ ನೋವಿನ ಶಾಯರಿ ತನು ಒಲವ ಒಸುಗೆಯ ಕಸಿವಿಸಿಯಲಿರೆ ಸುರೆ ಒಳಗೆ ಸುರಿದೆಜೀವ ತರಂಗದ ಆಲಾಪಕೆ ಕಲ್ಲಂತೆ ಎಸೆದೆ ನೋವಿನ ಶಾಯರಿ ಆ ಸಮ್ಮಿಲನ ಸಲುಗೆಗಳ ನೆನೆನೆನೆದು ಮಧಿರೆಯ ಬೆನ್ನತ್ತಿರುವೆತೋಂ ತನನನ ರಾಗ ತಾಳಕೆ ಹೊದಿಸಿದೆ ನೋವಿನ ಶಾಯರಿ ಅನು ಹುಚ್ಚೆದ್ದಾಸೆಗಳ ತಣಿಸಲಾರದೆ ನಂಜು ಗುಟುಕಿಸಿದಳುಸವಿ ಸಲ್ಲಾಪದ ಅಂದದ ಚಿತ್ರಕೆ ಅಂಟಿಸಿದೆ ನೋವಿನ ಶಾಯರಿ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಗಜಲ್ Read Post »

ಕಾವ್ಯಯಾನ

ಕೆ.ಬಿ.ವೀರಲಿಂಗನ ಗೌಡ್ರ ಅವರ ಕವಿತೆ “ಗುಂಪಿಗರ್ಥವಾಗಲಿಲ್ಲ”

ಕಾವ್ಯ ಸಂಗಾತಿ ಕೆ.ಬಿ.ವೀರಲಿಂಗನ ಗೌಡ್ರ “ಗುಂಪಿಗರ್ಥವಾಗಲಿಲ್ಲ” ಆಒಬ್ಬಂಟಿಯನ್ನುತಂಗಾಳಿ ತಬ್ಬಿಕೊಂಡಾಗನೆರಳು ನಾಚಿ ನೀರಾಯಿತು ಆಒಬ್ಬಂಟಿಯನ್ನುಪುಸ್ತಕ ನೆತ್ತಿನೇವರಿಸಿದಾಗಬೆಳಕು ಕತ್ತಲೆಗೆ ಮುತ್ತಿಕ್ಕಿತು ಆಒಬ್ಬಂಟಿಯನ್ನುಕ್ಯಾಂಟೀನ್ ಉಣಿಸಿದಾಗಇಂದಿರಮ್ಮನಾತ್ಮ ತಣಿಯಿತು ಆಒಬ್ಬಂಟಿಯನ್ನುಆಲಯ ನೋಡಿ ನಕ್ಕಾಗಬಯಲು ಎದೆಗಾಣಿಸಿಕೊಂಡಿತು ಆಒಬ್ಬಂಟಿಗುಂಪಿಗರ್ಥವಾಗಲಿಲ್ಲಗಾಳಿ ಬೆಳಕು ನೆರಳಿಗರ್ಥವಾದ. -ಕೆ.ಬಿ.ವೀರಲಿಂಗನಗೌಡ್ರ.

ಕೆ.ಬಿ.ವೀರಲಿಂಗನ ಗೌಡ್ರ ಅವರ ಕವಿತೆ “ಗುಂಪಿಗರ್ಥವಾಗಲಿಲ್ಲ” Read Post »

ಕಾವ್ಯಯಾನ

ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು”

ಕಾವ್ಯ ಸಂಗಾತಿ ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು” ಚಿವುಟಿದಷ್ಟು ಚಿಗುರುವ ರೀತಿಯುನಿನ್ನದಾಗಲಿ ಮನವೆಕವಿಯುವ ಕತ್ತಲ ಹಾದಿಯಲಿದೀಪವಾಗು ಮನವೆ// ತಿವಿಯುವ ಮುಳ್ಳಿನ ಮೇಲೆ ಹೆಜ್ಜೆಯಹಾಕದಿರು ತನುವೆಅವಿತಿಹ ಧೈರ್ಯವ ಹೊರಗೆ ಎಳೆದುಬಾಳುತಿರು ಸುಮವೆ// ಛಲವದು ಇದ್ದರೆ ಚಿವುಟಿದ ಹಾಗೆಚಿಗುರುವೆ ನೀಗಿಡವೆಒಲವನು ಬದುಕಲಿ ಅನುಕ್ಷಣ ತೋರುತಸಾಗುತಿರು ಬಲವೆ// ಚುಚ್ಚುವ ಮಾತಿಗೆ ಇರಿಯುವ ನುಡಿಗೆಅಳುಕದಿರು ಎಂದೂಹಚ್ಚು ಎಲ್ಲರ ಮನದಲಿ ಸಮತೆಯ ಹಣತೆಯ ನೀ ಮುಂದೂ// ಗೋಳನು ಹೊಯ್ಸುತ ಖುಷಿಯ ಪಡುವರುಕುಹಕದ ಜನರಿಲ್ಲಿಗಾಳವ ಹಾಕುತ ಸಿಕ್ಕಿಸಿ ಹಾಕಲುಕಾಯುವ ಸ್ಥಿತಿಯಿಲ್ಲಿ// ಕಮರದೆ ಕುಂದದೆ ಬಾಡಿ ಹೋಗದೆಬೆಳೆಯೋ ಬದುಕಲ್ಲಿವಿಮಲ ಚರಿತಗೆ ಸಕಲವ ಒಪ್ಪಿಸಿಶರಣಾಗು ಬಾಳಲ್ಲಿ// ಶುಭಲಕ್ಷ್ಮಿ ಆರ್ ನಾಯಕ

ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು “ಮೂರ್ಖರ ಯುದ್ದ”

ಕಾವ್ಯಸಂಗಾತಿ ಹಮೀದ್ ಹಸನ್ ಮಾಡೂರು “ಮೂರ್ಖರ ಯುದ್ದ” ಯುದ್ಧ ರಣರಂಗದಲ್ಲಿ …ಬೆಂಕಿಯುಂಡೆ ಹಾರಿತು ಅತ್ತಿತ್ತ,ಪುಣ್ಯ ರಮಝಾನ್ ಮಾಸದಲ್ಲೂಸೈತಾನನ ಬಿಚ್ಚಿ ಹೊರ ಬಿಟ್ಟರೇಕೆ?ರಕ್ತದಾಹಕೆ ಮಕ್ಕಳ ಬಲಿ ಕೊಟ್ಟರೇಕೆ? ರಕ್ತದಾಹಿ ದುಷ್ಟರವರುಜಗದೊಳು ಕಂಟಕ ದುರಾಂಕಾರಿಗಳುಮಾನವೀಯತೆಯ ನರರಹಿತರಾಕ್ಷಸಪುತ್ರ ಅಧಿಕಾರಶಾಹಿಗಳವರುಕೆಣಕಿ ನೋಡ ಬಾರದಿತ್ತು ಶತ್ರುಗಳನು,! ಕಂದಮ್ಮಗಳ ಸರಣಿ ಕೊಲೆಅದೊಂದು ಅಮಾನವೀಯ ಕೃತ್ಯಪಾಪಿಗಳು ಅನುಭವಿಸುತ್ತಿಹರುಪ್ರತಿಕಾರ ಪ್ರಾರಂಭ ಅವಕಾಶವೆಲ್ಲೊ?ರಕ್ತದಾಹಿಗೆ ರಕ್ತದಿಂದ ಪ್ರತ್ಯೂತ್ತರವಷ್ಟೇ,! ಯಾರ ಬೆವರಿನ ಬಂಗಲೆ,ಯಾರದ್ದೊ ಬಾಂಬಿಗೆ ಉರುಳಲುಕನಸು ಹಲವರ ನುಚ್ಚುನೂರಾಗಲುಯುದ್ದವೆಂಬ ಭಯಾನಕತೆ ಕಾವೇರಿದೆಸರ್ವನಾಶಕ್ಕೆ ಹೊಸ ಇತಿಹಾಸ ಬರೆಯಲಿದೆ,! ಸೋತು ಹೋದರೇನು?ಗೆದ್ದು ಪ್ರತಿಕಾರ ತೀರಿಸಿದರೇನು?,ಈ ಸಾವು ನೋವಿಗೆ ಬಲಿಗಳಾರೊ,ಬೆವರಿಳಿಸಿ ಕಟ್ಟಿಸಿದ ಬೆಚ್ಚನೆ ಆ ಮನೆಗಳು,ಯುದ್ಧದ ಕಾರ್ಮೊಡಕೆ ಸಿಲುಕಿ ಮಣ್ಣಾಗಲು.! ಹಮೀದ್ ಹಸನ್ ಮಾಡೂರು

ಹಮೀದ್ ಹಸನ್ ಮಾಡೂರು “ಮೂರ್ಖರ ಯುದ್ದ” Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-114 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಸುಮತಿಯ ತಳಮಳ ಮಕ್ಕಳಿಗೆ ಊಟವನ್ನು ಬಡಿಸಿ ನಂತರ ತಾನು ತಟ್ಟೆಯಲ್ಲಿ ಅನ್ನ-ಸಾರು, ಹೀರೇಕಾಯಿ ಪಲ್ಯವನ್ನು ಬಡಿಸಿಕೊಂಡು ಅನ್ನಕ್ಕೆ ಸಾರನ್ನು ಹಾಕಿ ಕಲಸಿ ಪಲ್ಯ ಸೇರಿಸಿ ಮೂವರಿಗೂ ಒಂದೊಂದು ತುತ್ತು ತಿನಿಸಿ ತಾನು ಊಟ ಮಾಡಿದಳು. ಅಮ್ಮ ಊಟ ಮಾಡುವ ಮುನ್ನ ಅಮ್ಮನ ಕೈಯಿಂದ ಒಂದೊಂದು ತುತ್ತು ತಿನ್ನುವುದೆಂದರೆ ಮಕ್ಕಳಿಗೆ ಪಂಚಪ್ರಾಣ. ಸುಮತಿ ಮಾಡುತ್ತಿದ್ದ ಅಡುಗೆಯೂ ಅಷ್ಟೇ ರುಚಿಕರವಾಗಿರುತ್ತಿತ್ತು. ಒಮ್ಮೊಮ್ಮೆ ಮನೆಯಲ್ಲಿ ಏನೂ ಇಲ್ಲದಿದ್ದಾಗ ಒಣ ಮೆಣಸಿನಕಾಯಿಯನ್ನು ಕೆಂಡದ ಮೇಲೆ ಹಾಕಿ ಸುಟ್ಟು ಈರುಳ್ಳಿಯನ್ನು ಸಣ್ಣ ಸಣ್ಣದಾಗಿ ಹೆಚ್ಚಿ ಹುಣಸೆಹಣ್ಣನ್ನು ಸೇರಿಸಿ ಸ್ವಲ್ಪ ಉಪ್ಪು ಹಾಕಿ ಕಿವುಚಿ ಅಮ್ಮ ಮಾಡವ ಗೊಜ್ಜು ಬಹಳ ರುಚಿಕರವಾಗಿರುತ್ತದೆ ಎಂದು ಹೇಳುತ್ತಾ ಮಕ್ಕಳು ಬೆರಳುಗಳನ್ನು ಚಪ್ಪರಿಸಿ ನೆಕ್ಕುತ್ತಾ ಆಸ್ವಾದಿಸುತ್ತಿದ್ದರು. ಊಟದ ನಂತರ ಮಕ್ಕಳು ಚಾಪೆ ಹಾಸಿ ಸುಮತಿಯ ಕೈಯನ್ನು ದಿಂಬಾಗಿಸಿಕೊಂಡು ಮಲಗಿ ಅಮ್ಮ ಹೇಳುವ ಕಥೆಯನ್ನು ಕೇಳುತ್ತಾ ಮಕ್ಕಳು ನಿದ್ರೆಗೆ ಜಾರಿದರು. ಸುಮತಿ ಬೆಳಗ್ಗೆ ಬೇಗನೆ ಎದ್ದು ತಿಂಡಿ ಮಾಡಿದಳು. ಭಾನುವಾರ ಬೆಳಗ್ಗೆ ಸುಮತಿಯ ಜೊತೆ ಮೂವರು ಮಕ್ಕಳು ಶಾಲೆಗೆ ಹೊರಟರು. ಮಕ್ಕಳು ಬಂದರೆ ಸುಮತಿಗೆ ಸ್ವಲ್ಪ ನಿರಾಳವಾಗಿರುತ್ತಿತ್ತು. ತೋಟದ ಕೂಲಿ ಕೆಲಸಗಾರರ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲು ಮಕ್ಕಳು ಅವಳಿಗೆ ನೆರವಾಗುತ್ತಿದ್ದರಿಂದ ಅಷ್ಟು ಆಯಾಸವಾಗುತ್ತಿರಲಿಲ್ಲ. ಶಾಲೆಗೆ ಹೊರಡುವ ಮುನ್ನ ಮಧ್ಯಾಹ್ನದ ಊಟಕ್ಕೆ ಬೇಕಾದ ಬುತ್ತಿ ತುಂಬಿಕೊಳ್ಳುತ್ತಿದ್ದರು. ಅಲ್ಲಿನ ಬಂಗಲೆಯ ಮೇಲ್ವಿಚಾರಕ ಬಂಗಲೆಯ ಸುತ್ತಲಿರುವ ಹಣ್ಣಿನ ಗಿಡಗಳಿಂದ ಹಣ್ಣುಗಳನ್ನು ಕಿತ್ತು ತಂದು ಕೊಡುವರು.. ಆ ಹಣ್ಣುಗಳನ್ನು ಶಾಲೆಯ ಮಕ್ಕಳಿಗೂ ಕೊಟ್ಟು ಸುಮತಿ ಮತ್ತು ಮಕ್ಕಳು ತಿನ್ನುತ್ತಿದ್ದರು.  ಸಂಜೆ ಹೊತ್ತಿಗೆ ಶಾಲೆಯಿಂದ ಹೊರಟು ಮಾತನಾಡುತ್ತಾ ಅಮ್ಮನ ಕೈಹಿಡಿದು ಮಕ್ಕಳು ಜೊತೆಗೆ ನಡೆಯುವರು. ದಾರಿ ಹೋಕರಿಗೆ ಈ ತಾಯಿ ಮಕ್ಕಳ ಬಾಂಧವ್ಯ ಕಂಡು ಸಂತಸವಾಗುತ್ತಿತ್ತು. ಸುಮತಿ ಟೀಚರಿಗೆ ಹಣ ಐಶ್ವರ್ಯ ಇಲ್ಲದಿದ್ದರೇನು, ಮಕ್ಕಳು ಆಕೆಗೆ ನೆರಳಾಗಿ ಇರುವರು ಎಂದು ಹೇಳಿಕೊಳ್ಳುತ್ತಿದ್ದರು. ಮಕ್ಕಳೊಂದಿಗೆ ಮಾತನಾಡುತ್ತಾ ನಡೆದರೆ ಸುಮತಿಗೆ ದಾರಿ ಸಾಗುವುದು ತಿಳಿಯುತ್ತಿರಲಿಲ್ಲ. ಮನೆ ತಲುಪಿದ ಮೇಲೆಯೂ ಮಕ್ಕಳು ಸುಮತಿಯ ಹಿಂದೆ ಮುಂದೆ ಸುಳಿದಾಡುತ್ತಾ ಕೀಟಲೆ ಮಾಡುತ್ತಾ ನಗಿಸುತ್ತಾ ಕಾಲ ಕಳೆಯುವರು. ಮಾರನೇ ದಿನ ಬೇಗನೆ ಎದ್ದು ಮಗಳು ಹೊರಡಲು ಅನುವಾದಳು. ವಾರಕ್ಕೊಮ್ಮೆ ಮಗಳು ಬರುವಾಗ ಎಷ್ಟು ಸಂಭ್ರಮಿಸುತ್ತಿದ್ದಳೋ ಅವಳನ್ನು ಕಳುಹಿಸಿಕೊಡುವಾಗ ಸುಮತಿಗೆ ಅಷ್ಟೇ ಸಂಕಟವಾಗುತ್ತಿತ್ತು. ಹೀಗೆ ಕೆಲವು ತಿಂಗಳುಗಳು ಕಳೆದವು. ಸುಮತಿಗೆ ಈಗ ಮೊದಲಿಗಿಂತ ಆಯಾಸ ಹೆಚ್ಚಾಗುತ್ತಿತ್ತು. ಒಂದು ದಿನ ಸುಮತಿ ಬೆಳಗಿನ ಬಸ್ಸಿನಲ್ಲಿ ಎರಡನೇ ಮಗಳು ಕೆಲಸ ಮಾಡುತ್ತಿದ್ದ ಅನಾಥಾಶ್ರಮದ ಕಡೆಗೆ ಹೊರಟಳು. ಮೂರನೇ ಮಗಳು ಬಸ್ಸು ಹತ್ತಲು ಅಮ್ಮನಿಗೆ ಸಹಾಯ ಮಾಡಿದಳು. ಸುಮತಿಯ ಬದಲಿಗೆ ಶಾಲೆಗೆ ಹೋಗಬೇಕಾಗಿದ್ದ ಕಾರಣ ಅವಳು ತಾಯಿಯೊಂದಿಗೆ ಸಕಲೇಶಪುರಕ್ಕೆ ಹೊರಡಲಿಲ್ಲ. ಒಂದು ದಿನವೂ ಶಾಲೆಯ ಕೆಲಸ ತಪ್ಪಿಸುವಂತೆ ಇರಲಿಲ್ಲ. ತಪ್ಪಿದರೆ ಎಲ್ಲಿ ಕೆಲಸ ಕೈಬಿಟ್ಟು ಹೋಗುವುದೋ ಎನ್ನುವ ಭಯ ಸುಮತಿಯನ್ನು ಸದಾ ಕಾಡುತ್ತಿತ್ತು. ವರಮಾನಕ್ಕೆ ಇದೊಂದೇ ಮಾರ್ಗವಿತ್ತು. ಎರಡನೇ ಮಗಳು ಈಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಅವಳಿಗೆ ಸಿಗುವ ಸಂಬಳದಿಂದ ಮನೆಯ ಪೂರ್ತಿ ಖರ್ಚು ವೆಚ್ಚಗಳನ್ನು ಸರಿತೂಗಿಸಲು ಸಾಧ್ಯವಾಗುತ್ತಿರಲಿಲ್ಲ.  ಅದೂ ಅಲ್ಲದೇ ಇತ್ತೀಚೆಗೆ ಕೆಲವು ತಿಂಗಳುಗಳಿಂದ ತಾನೇ ಅವಳು ಕೆಲಸಕ್ಕೆ ಹೋಗುತ್ತಿರುವುದು. ಜೊತೆಗೆ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾಳೆ. ಹಾಗಾಗಿ ನನ್ನ ಬದಲು ಈ ಮಗಳಾದರೂ ಶಾಲೆಗೆ ಹೋಗಲೇಬೇಕು ಎಂದು ಆಲೋಚಿಸಿ ಮೂರನೇ ಮಗಳನ್ನು ಶಾಲೆಗೆ ಹೋಗುವಂತೆ ತಿಳಿಸಿದಳು. ಸಕಲೇಶಪುರ ನನಗೆ ಗೊತ್ತಿಲ್ಲದ ಊರಲ್ಲ. ಮಗಳು ಕೆಲಸ ಮಾಡುತ್ತಿರುವ ಅನಾಥಾಶ್ರಮ ಹುಡುಕುವುದು ಕಷ್ಟವೇನಲ್ಲ ಎಂದೂ ಮಗಳಿಗೆ ತಿಳಿಸಿದಳು. ಆದರೆ ಸಕಲೇಶಪುರದ ಬಸ್ ನಿಲ್ದಾಣ ಬಂದಾಗ ಬಸ್ಸಿಂದ ಕೆಳಗಿಳಿಯಲು ಸುಮತಿ ಬಹಳ ಕಷ್ಟ ಪಡಬೇಕಾಯಿತು. ಒಂದೊಂದು ಹೆಜ್ಜೆ ಇಡುವುದೂ ಅವಳಿಗೆ ಕಷ್ಟಕರವೆನಿಸುತ್ತಿತ್ತು. ಬಸ್ ನಿಲ್ದಾಣದಿಂದ ಮಗಳು ಇರುವ ಅನಾಥಾಶ್ರಮದ ಬಳಿಗೆ ಹೋಗಲು ಹೆಚ್ಚು ದೂರವೇನೂ ಇರಲಿಲ್ಲ. ಎಂದಿಲ್ಲದ ಇಂದೇಕೋ ಅವಳ ಕಣ್ಣುಗಳಿಗೆ ಎಲ್ಲವೂ ಮಸುಕಾಗಿ ಕಾಣುತ್ತಿತ್ತು. ತಡವರಿಸುತ್ತಾ ಹೇಗೋ ಮಗಳು ವಾಸವಿದ್ದ ಅನಾಥಾಶ್ರಮದ ಬಾಗಿಲ ಮುಂದೆ ಬಂದು ನಿಂತಳು. ತಲೆ ಸುತ್ತು ಬಂದಂತೆ ಅನುಭವವಾಯಿತು. ಅಲ್ಲಿಯೇ ಮೆಟ್ಟಿಲ ಮೇಲೆ ಕುಳಿತಳು. ಸ್ವಲ್ಪ ಸುಧಾರಿಸಿದ ನಂತರ ಮೆಲ್ಲನೆ ಎದ್ದು ಬಾಗಿಲನ್ನು ತಟ್ಟಿದಳು. ಅನಾಥಾಶ್ರಮದ ಮಕ್ಕಳಲ್ಲಿ ಒಬ್ಬ ಹುಡುಗಿ ಬಂದು ಬಾಗಿಲು ತೆರೆದಳು…. ಯಾರು ನೀವು? ಯಾರು ಬೇಕಿತ್ತು ನಿಮಗೆ? ಎಂದು ಕೇಳಿದಳು. ಆ ಹುಡುಗಿಯ ಮುಖ ಸುಮತಿಗೆ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಹಾಗಾಗಿ ತನ್ನ ಮಗಳ ಹೆಸರನ್ನು ಹೇಳಿ…”ಅವರು ಇಲ್ಲಿದ್ದಾರೆಯೇ”…. ಎಂದು ಕೇಳಿದಳು. ಒಳಗೆ ಕುಳಿತು ಆಶ್ರಮಕ್ಕೆ ಬೇಕಾದ ದಿನಸಿಗಳ ಪಟ್ಟಿಯನ್ನು ಮಾಡುತ್ತಿದ್ದ ಸುಮತಿಯ ಎರಡನೇ ಮಗಳು ಅಮ್ಮನ ಧ್ವನಿ ಕೇಳಿದಂತಾಗಿ ಎದ್ದು ಹೊರಗೆ ಬಂದಳು.  ಓಹ್!! ಅಮ್ಮ ಬಂದಿದ್ದಾಳೆ…. ಎಂದು ಹೇಳುತ್ತಾ ಕೋಣೆಯಿಂದ ಹೊರ ಬಂದ ಮಗಳ ಮುಖದಲ್ಲಿ ಮಂದಹಾಸ ಮೂಡಿತು. ಆದರೆ ಮರುಕ್ಷಣವೇ ಅವಳ ಹಣೆಯಲ್ಲಿ ಗೆರೆಗಳು ಮೂಡಿದವು. ಅಮ್ಮ ಏಕೆ ಇಷ್ಟು ಬೆಳಗ್ಗೆ ನನ್ನನ್ನು ಹುಡುಕಿಕೊಂಡು ಬಂದಿದ್ದಾಳೆ? ನಾನು ಮನೆಗೆ ಹೋಗಿ ಬಂದು ಒಂದೆರಡು ದಿನಗಳಷ್ಟೇ ಆಗಿವೆ ಎಂದುಕೊಳ್ಳುತ್ತಾ ಅಚ್ಚರಿಯಿಂದ ಅಮ್ಮನನ್ನು ಒಮ್ಮೆ ನೋಡಿದಳು. ಓಡು ನಡಿಗೆಯಲ್ಲಿ ಸುಮತಿಯ ಬಳಿ ಬಂದು ಕೈಹಿಡಿದುಕೊಂಡು, … “ನಾನು ಇಲ್ಲೇ ಇರುವುದು…. ಅಮ್ಮ ಒಳಗೆ ಬಾ”…. ಎಂದಳು. ಮಗಳ ಧ್ವನಿ ಕೇಳಿ ಸುಮತಿ ಅವಳೆಡೆಗೆ ನೋಡಿದಳು. ಅವಳ ಮುಖ ಅಸ್ಪಷ್ಟವಾಗಿ ಕಂಡಿತು. ಕಣ್ಣುಗಳು ಹನಿಗೂಡಿದವು. ಮಗಳ ಕೈ ಹಿಡಿದು ತಡವರಿಸುತ್ತಾ ಅನಾಥಾಶ್ರಮದ ಒಳಗೆ ಹೆಜ್ಜೆ ಇಟ್ಟಳು. ಕುತೂಹಲದಿಂದ ಯಾರಿರಬಹುದೆಂದು ನೋಡಲು ಅನಾಥಾಶ್ರಮದ ಮಕ್ಕಳೆಲ್ಲ ಅಲ್ಲಿ ಬಂದು ಸೇರಿದರು….”ಇವರು ನನ್ನ ತಾಯಿ”…. ಎಂದು ಮಕ್ಕಳಿಗೆ ಪರಿಚಯಿಸಿದಳು. ಮಕ್ಕಳೆಲ್ಲರೂ….”ನಮಸ್ತೆ ಅಮ್ಮಾ”….ಎಂದು ಕೈ ಮುಗಿದರು. ಸುಮತಿ ಮುಗುಳ್ನಕ್ಕಳಷ್ಟೇ, ಮಾತನಾಡಲು ಅವಳಿಂದ ಸಾಧ್ಯವಾಗಲಿಲ್ಲ. ಇದನ್ನರಿತ ಮಗಳು ತನ್ನ ಕೋಣೆಯ ಕಡೆಗೆ ಅಮ್ಮನನ್ನು ಕರೆದುಕೊಂಡು ಹೋದಳು. ಸುಮತಿಯ ಕೈಗಳು ನಡುಗುತ್ತಿದ್ದವು. ಬಾಯಿ ಒಣಗಿತ್ತು. ಏನೋ ಹೇಳಲು ಮುಂದಾದಳು ಆದರೆ ಧ್ವನಿ ಗಂಟಲಿನಿಂದ ಆಚೆ ಬರಲಿಲ್ಲ. ಅಮ್ಮನ ಈ ಸ್ಥಿತಿಯನ್ನು ಕಂಡು ಮಗಳಿಗೆ ತುಂಬಾ ಗಾಬರಿಯಾಯಿತು. ಮೂರು ಬೆಂಚುಗಳನ್ನು ಸೇರಿಸಿ ಮಂಚದಂತೆ ಮಾಡಿಕೊಂಡಿದ್ದ ಹಾಸಿಯ ಮೇಲೆ ಅಮ್ಮನನ್ನು ಕುಳ್ಳಿರಿಸಿ, ಒಬ್ಬ ಹುಡುಗಿಯನ್ನು ಕರೆದು ಸ್ವಲ್ಪ ನೀರನ್ನು ತರುವಂತೆ ತಿಳಿಸಿದಳು. 

Read Post »

ಕಾವ್ಯಯಾನ

ಡಾ. ಗೀತಾ ದಾನಶೆಟ್ಟಿಬಾಗಲಕೋಟ “ನೀ ನನ್ನ ಕವಿತೆ”

ಕಾವ್ಯ ಸಂಗಾತಿ ಡಾ. ಗೀತಾ ದಾನಶೆಟ್ಟಿ ಬಾಗಲಕೋಟ “ನೀ ನನ್ನ ಕವಿತೆ” ದೇಹಕ್ಕೆ ಉಸಿರಾದೆಭಾವಕ್ಕೆ ಬೆಸುಗೆಮೌನಕ್ಕೆ ಮಾತಾದೆಮಾತಿಗೆ ಮುತ್ತಾದೆನೀ ನನ್ನ ಕವಿತೆ ಸ್ನೇಹಕ್ಕೆ ಗೆಳೆಯಪ್ರೇಮಕ್ಕೆ ಇನಿಯಹೃದಯಕ್ಕೆ ಸನಿಹಪ್ರೀತಿಗೆ ನೀ ಪ್ರಾಣನೀ ನನ್ನ ಕವಿತೆ ಅರಿವಿಗೆ ಗುರು ನೀನುಸಾಧನೆಗೆ ಸ್ಪೂರ್ತಿಜ್ಞಾನದ ದೇಗಲವುಬಾಳಿಗೆ ನೀ ಬೆಳಕುನೀ ನನ್ನ ಕವಿತೆ ಮಮತೆಗೆ ತಾಯ್ಮಡಿಲುಮುಗ್ದತೆಗೆ ನೀ ಮಗವುಭೇದವಿಲ್ಲದ ಒಲವುಸಂಬAಧಕ್ಕೆ ಜೀವ ಸೆಲೆನೀ ನನ್ನ ಕವಿತೆ ರಾಗಕ್ಕೆ ಸ್ವರ ನೀನುನೆರಳಿಗೆ ನೀ ಮರವುನೋವಿಗೆ ನಲಿವುಮನಸಿಗೆ ಮುದವುನೀ ನನ್ನ ಕವಿತೆ ಬರಹಕ್ಕೆ ಮುಣ್ಣುಡಿಯುನುಡಿಗೆ ನೀ ಜೀವನಾಡಿಬದುಕಿಗೆ ಬರವಸೆಬಾಳಸಂಗಾತಿ ನೀನುನೀ ನನ್ನ ಕವಿತೆ ಡಾ. ಗೀತಾ ದಾನಶೆಟ್ಟಿ

ಡಾ. ಗೀತಾ ದಾನಶೆಟ್ಟಿಬಾಗಲಕೋಟ “ನೀ ನನ್ನ ಕವಿತೆ” Read Post »

ಪುಸ್ತಕ ಸಂಗಾತಿ

 ಬಿ. ಆರ್. ಲಕ್ಷ್ಮಣರಾವ್ ಅವರ ಕಿರುಕಾದಂಬರಿ “ಎಂಥಾ ಮೋಜಿನ ಕುದುರಿ!” ಅವಲೋಕನ ವಿಮಲಾರುಣ ಪಡ್ಡoಬೈಲು

ಪುಸ್ತಕ ಸಂಗಾತಿ ವಿಮಲಾರುಣ ಪಡ್ಡoಬೈಲು  ಬಿ. ಆರ್. ಲಕ್ಷ್ಮಣರಾವ್ “ಎಂಥಾ ಮೋಜಿನ ಕುದುರಿ!” ಕೃತಿ: *ಎಂಥಾ ಮೋಜಿನ ಕುದುರಿ!* ಕಿರು ಕಾದಂಬರಿಲೇಖಕರು; ಬಿ. ಆರ್. ಲಕ್ಷ್ಮಣರಾವ್ಬೆಲೆ: 60 ರೂದೂರವಾಣಿ:9845693614 *ರಸಗವಳ  ಎಂಥಾ ಮೋಜಿನ ಕುದುರಿ!*                  ಪ್ರೇಮಕವಿ ಎಂದೇ ಚಿರಪರಿಚಿತರಾದ ಶ್ರೀ ಬಿ.ಆರ್. ಲಕ್ಷ್ಮಣ ರಾವ್ ಅವರ ಸಾಹಿತ್ಯ ಸೃಜನಶೀಲತೆ ಸದಾ ಭಾವಲೋಕವನ್ನು ಆಳವಾಗಿ ತಟ್ಟುವ ಶಕ್ತಿಯನ್ನು ಹೊಂದಿದೆ. ಅವರ ಕವಿತೆಗಳು ಹಾಗೂ ಭಾವಗೀತೆಗಳು ಓದುಗರ ಮನಸ್ಸಿನಲ್ಲಿ ಪ್ರೀತಿಯ ಸೂಕ್ಷ್ಮತೆಯನ್ನು ಮೂಡಿಸುವಂತೆ, ಅವರ ಕಿರು ಕಾದಂಬರಿ “ಎಂಥಾ ಮೋಜಿನ ಕುದುರಿ” ಕೂಡ ಕಲ್ಪನೆ, ರಸಿಕತೆ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆಯ ಮೂಲಕ ವಿಭಿನ್ನ ಅನುಭವವನ್ನು ನೀಡುತ್ತದೆ.ಶೀರ್ಷಿಕೆ ಸೂಚಿಸುವಂತೆ ” ಎಂಥಾ ಮೋಜಿನ ಕುದುರಿ!” ಹಲವು ದಿಕ್ಕುಗಳಲ್ಲಿ ತನ್ನ ಪಯಣವನ್ನು ವಿಸ್ತರಿಸುತ್ತದೆ.ಈ ಕಾದಂಬರಿಯ ಕಾಲಯಂತ್ರದ  ಕೇಂದ್ರಬಿಂದು ‘ಮನಸ್ಸು’ ಆಗಿದೆ. ಆ ಮನಸ್ಸಿಗೆ ಕಡಿವಾಣ ಹಾಕಲು ಯತ್ನಿಸುತ್ತಾ, ಅನೇಕ ಅವಘಡಗಳನ್ನು ಎದುರಿಸುವ ಮೂಲಕ ಕಾಲಯಂತ್ರದ ಅನುಭವ ಮತ್ತು ಸಂಕಷ್ಟಕರ ಪರಿಸ್ಥಿತಿಗಳನ್ನು ಲೇಖಕರು ಓದುಗರ ಮುಂದೆ ತೆರೆದಿಟ್ಟಿದ್ದಾರೆ. ಭೌತಶಾಸ್ತ್ರಜ್ಞ ಪ್ರೊಫೆಸರ್ ನರಸಿಂಗರಾಯರ ಕಾಲಯಂತ್ರ ಎಂಬ ಕಲ್ಪನೆಯೇ ಕಾದಂಬರಿಯ ಪ್ರಮುಖ ಆಧಾರ. ಈ ಕಾಲಯಂತ್ರ ಕೇವಲ ವೈಜ್ಞಾನಿಕ ಉಪಕರಣವಷ್ಟೇ ಅಲ್ಲದೆ, ಕಥಾನಾಯಕನ ಅಂತರಂಗದ ಮನೋಯಾನಕ್ಕೆ ದಾರಿ ಮಾಡಿಕೊಡುತ್ತದೆ. ಕಾದಂಬರಿಯ ಪ್ರತಿಯೊಂದು ತಿರುವು ಓದುಗರಲ್ಲಿ ‘ಮುಂದೇನು?’ ಎಂಬ ಕುತೂಹಲವನ್ನು ಜೀವಂತವಾಗಿಡುತ್ತದೆ.               ಸುಂದರ ಮೈಮಾಟದ ಲಲನೆಯರನ್ನು ಕಂಡಾಗ ಚಂಚಲಗೊಳ್ಳುವ ಮನಸ್ಸು, ಪ್ರೀತಿಸಿದ ಹುಡುಗಿ ‘ಮಿನಿ’ಯ ನೆನಪು ಬಂದಾಗ ಅವಳ ಪ್ರೀತಿಗೆ ತನ್ನನ್ನು ತಾನೇ ನಿಯಂತ್ರಿಸುವ ಕಥಾನಾಯಕನ ಯತ್ನ, ಮಾನವ ಮನಸ್ಸಿನ ಸಹಜ ದ್ವಂದ್ವವನ್ನು ಸುಂದರವಾಗಿ ಅನಾವರಣಗೊಳಿಸುತ್ತದೆ. ಕಾಮಕ್ಕಿಂತ ಪ್ರೀತಿಗೆ ಹೆಚ್ಚಿನ ಗೌರವ ನೀಡುವ ಕಥಾನಾಯಕನ ಶೀಲ, ಕೃತಿಗೆ ನೈತಿಕ ಘನತೆಯನ್ನು ನೀಡುತ್ತದೆ.ಕಾದಂಬರಿಯಲ್ಲಿನ ಪ್ರತಿಯೊಂದು ಘಟನೆಯಲ್ಲಿ ಹೆಣ್ಣಿನ ಭಾವೋದ್ರೇಕದ ಮನಸ್ಸು ಸೂಕ್ಷ್ಮವಾಗಿ ಚಿತ್ರಿತವಾಗಿದೆ. ಹಳ್ಳಿಯಿಂದ ಪಟ್ಟಣದವರೆಗೆ, ಅಲ್ಲಿಂದ ಪುರಾಣದ ಸುರ -ಅಸುರರ ಆಸ್ಥಾನಗಳವರೆಗೆ ಕಥೆ ಸಾಗಿದರೂ, ಎಲ್ಲೆಡೆಯೂ ಹೆಣ್ಣಿನ ಮನಸ್ಸಿನ ಹರೆಯದ ಭಾವನೆಗಳು ಹಾಗು ಅವಳ ಮನಸ್ಸಿನ ಹಳಹಳಿಕೆ, ಕಾಮ ದಹನಕೆ ಸೂಕ್ತ ವ್ಯಕ್ತಿಯ ತಡಕಾಟದಲ್ಲಿ  ಸಾಗುತ್ತಾ  ಕಥಾ ನಾಯಕನೇ ಬಲಿಪಶುವಾಗುವುದು. ರೋಮಾಂಚನ ನೀಡುವ ಈ ರಸಮಯ ಕ್ಷಣಗಳು  ಖುಷಿ ಕೊಟ್ಟರು, ಕ್ಷಣದಲ್ಲಿ ಜಾಗೃತನಾಗುತ್ತ ಮೂಲ ಸ್ಥಿತಿಗೆ ಮರಳುವುದು  ಹೀಗೆಯೇ ಕಾದಂಬರಿಯ  ಉದ್ದಕ್ಕೂ  ನಾಯಕನ ಸೂತ್ರದಾರಿಕೆಯಲ್ಲಿ ಕಥೆ ಸಾಗುತ್ತದೆ.  ಈ ಕೃತಿ ಕೇವಲ ಕಾಲಯಾನ ಕಥೆಯಾಗದೆ, ಮಾನವ ಮನಸ್ಸಿನ ಅಧ್ಯಯನವಾಗುತ್ತದೆ.       ಕಾಲತಂತ್ರವೆಲ್ಲಾ ಕಲ್ಪನೆಯೇ ಎಂಬ ಅರಿವು ಇದ್ದರೂ, ಕಥಾನಾಯಕನಲ್ಲಿ ಮೂಡುವ ತೃಪ್ತಭಾವ ಗಮನಾರ್ಹ. ಭ್ರಮಾಲೋಕದಲ್ಲಿ ವಿಹರಿಸಿದ ಹನ್ನೆರಡು ತಾಸುಗಳು ಹಲವಾರು ದಿನಗಳಂತೆ ಅನುಭವವಾಗುವುದು ಕಾಲದ ಅನಿಶ್ಚಿತತೆಯ ಭಾವವನ್ನು ಮೂಡಿಸುತ್ತದೆ. ಕಾಲ್ಪನಿಕ ವೈಜ್ಞಾನಿಕ ತಂತ್ರ ವಾಸ್ತವ ಬದುಕಿನಲ್ಲಿ ಅಸ್ತಿತ್ವಕ್ಕೆ ಬಂದರೆ ಜೀವನ ಹೇಗಿರಬಹುದು? ಎಂಬ ಪ್ರಶ್ನೆಯನ್ನು ಕಾದಂಬರಿ ಓದುಗರ ಮುಂದಿಡುತ್ತದೆ. ಹಾಗು ಓದುಗನಿಗೂ ಆ ಕ್ಷಣಗಳು ರೋಮಾಂಚನಗೊಳಿಸುತ್ತದೆ.ಈ ಕಿರು ಕಾದಂಬರಿ ಸರಳವಾದರೂ ಅರ್ಥಪೂರ್ಣವಾದ ಭಾಷಾಶೈಲಿ, ಕಾದಂಬರಿಯನ್ನು ಒಂದೇ ಉಸಿರಲ್ಲಿ ಓದಿಸಿಕೊಳ್ಳುವ ಶಕ್ತಿಯನ್ನು ಹೊಂದಿದೆ.ಒಟ್ಟಿನಲ್ಲಿ “ಎಂಥಾ ಮೋಜಿನ ಕುದುರಿ!”  ಕಿರು ಕಾದಂಬರಿಯು ಭ್ರಮಾ ಲೋಕಕ್ಕೆ  ಸೆಳೆದೊಯ್ದು ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುತ್ತಾ ಮನ   ಮುದಗೊಳಿಸುವ ಕೃತಿ. ಚಂಚಲ ಮನಸ್ಸನ್ನು ಹತ್ತೋಟಿ ಇಡುವುದರಲ್ಲಿಯು  ಕಥಾನಾಯಕ ಗೆದ್ದಿದ್ದಾನೆ.  ಕಾಲ್ಪನಿಕವಾದ ಈ ಕಾದಂಬರಿ  ಓದುಗರ ಮನಸ್ಸಿನಲ್ಲಿ ಬೆಚ್ಚನೆಯ ತಾಪವನ್ನುಂಟುಮಾಡಿ,   ನಂತರ ತಂಪಾಗಿ ನೆಲೆಸುವ ಕೃತಿ.  ತಮಗೆ ಅಭಿನಂದನೆಗಳು ಸರ್ ವಿಮಲಾರುಣ ಪಡ್ಡoಬೈಲು

 ಬಿ. ಆರ್. ಲಕ್ಷ್ಮಣರಾವ್ ಅವರ ಕಿರುಕಾದಂಬರಿ “ಎಂಥಾ ಮೋಜಿನ ಕುದುರಿ!” ಅವಲೋಕನ ವಿಮಲಾರುಣ ಪಡ್ಡoಬೈಲು Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಭಗವಂತ ನೀ ಹಿಂಗ್ಯಾಕೋ?”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಭಗವಂತ ನೀ ಹಿಂಗ್ಯಾಕೋ?” ದೊಡ್ಡ ಮಂದಿ ತಲ್ಯಾಗೆಲ್ಲ ಸಣ್ಣತನ ತುಂಬಿದಿ.ಸಣ್ಣ ಮಂದಿಗ್ಯಾಕ ಬೇಕಾದಷ್ಟ ದೊಡ್ಡತನ ಇಟ್ಟಿ.ಆದ್ರ ಅವರನ್ನ ಬಡವರನ್ನಾಗಿಮಾಡಿ ಬಿಟ್ಟಿ.ಯಾಕೋ ನೀ ಹಿಂಗ್ಯಾಕೋಭಗವಂತ ಯಾಕೋ ನೀ ಹಿಂಗ್ಯಾಕೋ?ಕೊಡೊ ಮನಸ್ಸಿದ್ದವಗ ಏನೂ ಇಲ್ಲದಂಗ ಬದಕಾಕ ಹಚ್ಚಿದಿಹಂಚುವ ಗುಣ ಇಲ್ಲದವನಸಿರಿವಂತನಾಗಿಸಿದಿಯಾಕೋ ನೀ ಹಿಂಗ್ಯಾಕೋಭಗವಂತ ಯಾಕೋ ನೀ ಹಿಂಗ್ಯಾಕೋ?ಹಸಿದ ಹೊಟ್ಟಿಗಿ ಅನ್ನ ಇಲ್ಲದಂಗ(ಸಿಗದಂಗ) ಮಾಡಿದಿಎಲ್ಲ ತಿನ್ನಾಕ ಇದ್ದವಗ ಮೈ ತುಂಬನೂರೆಂಟ ರೋಗ ಇರಿಸಿದಿಕಷ್ಟದೊಳಗಿದ್ದವ್ರಿಗೆ ಇನ್ನಷ್ಟ ಕಷ್ಟ ಕೊಟ್ಟ ಪರೀಕ್ಷೆ  ಮಾಡತಿದಿಹರಾಮಿ ಮಂದಿನೆಲ್ಲ ಹೊರಗತಿರಗಾಕ ಬಿಟ್ಟಿದಿಯಾಕೋ ನೀ ಹಿಂಗ್ಯಾಕೋ?ಹೇ ಭಗವಂತ ಯಾಕೋ ನೀ ಹಿಂಗ್ಯಾಕೋ?ಕೊಲ್ಲವ್ರಿಗಿಂತ ಕಾಯಾವ ಲೇಸಂತನಾ ನಿನ್ನ ನಂಬಿದ್ನಿನೀನ ಕೊಂದರ ನಾ ಯಾರನ್ನ ನಂಬಲಿನೀನ ಹೇಳಾಕೋನೀ ಹಿಂಗ್ಯಾಕೋ?ಹೇಳೊ ಭಗವಂತ ಯಾಕೋ,ನೀ ಹಿಂಗ್ಯಾಕೋ?ನೀ ಹಿಂಗ ಅಂದ್ರ ಹಿಂಗನೀ ಹಂಗ ಅಂದ್ರ ಹಂಗನಾ ಬೇಡೂದೊಂದ ಇರಸಬ್ಯಾಡಪ್ಪನನ್ನ ಯಾರದೂ ಹಂಗನ್ಯಾಗ.ಈ ಕಾಯ ಈ ಉಸಿರ ಕಡಿತನಕಿರಲಿ ನಿನ್ನ ಕೈಯ್ಯಾಗ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಭಗವಂತ ನೀ ಹಿಂಗ್ಯಾಕೋ?” Read Post »

ಅನುವಾದ, ಕಥಾಗುಚ್ಛ

“ವೈರುಧ್ಯಗಳು” ಭಾಗವತುಲ ಕೃಷ್ಣಾರಾವು ಅವರತೆಲುಗು ಕಥೆಯ ಕನ್ನಡಾನುವಾದ‌ ಕೋಡೀಹಳ್ಳಿಮುರಳೀ ಮೋಹನ್

ಅನುವಾದ ಸಂಗಾತಿ “ವೈರುಧ್ಯಗಳು” ತೆಲುಗು ಮೂಲ: ಭಾಗವತುಲ ಕೃಷ್ಣಾರಾವುಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್ ಸಮಯ ರಾತ್ರಿ ಹತ್ತೂವರೆ. ನಿವೃತ್ತ ಇಂಗ್ಲಿಷ್ ಉಪನ್ಯಾಸಕ ಆನಂದರಾಯರಿಗೆ ಇದು ಗಾಢ ನಿದ್ರೆಯ ಸಮಯ. ಶಿಸ್ತಿನ ಸಿಪಾಯಿಯಂತಿದ್ದ ಅವರಿಗೆ ಹತ್ತು ಗಂಟೆಯಾದರೆ ಸಾಕು, ಬಾಹ್ಯ ಪ್ರಪಂಚದ ಸಂಪರ್ಕ ಕಡಿತಗೊಳ್ಳುತ್ತಿತ್ತು. ಆದರೆ ಅಂದು ರಾತ್ರಿ ಫೋನಿನ ಕರ್ಕಶ ಶಬ್ದ ಅವರ ನಿಶ್ಯಬ್ದ ಲೋಕವನ್ನು ಸೀಳಿತು. ನಿದ್ರೆಗಣ್ಣಿನಲ್ಲೇ ಫೋನು ಎತ್ತಿದ ರಾಯರು, ಮಂಪರಿನ ಧ್ವನಿಯಲ್ಲೇ “ಹಲೋ” ಎಂದರು. ಅತ್ತ ಕಡೆಯಿಂದ ಸಹೋದ್ಯೋಗಿ ನಾಗರಾಜು ಮಾತಾಡುತ್ತಿದ್ದರು. “ಏನಪ್ಪಾ ಆನಂದ್.. ಮನೆಯಲ್ಲೇ ‘ಅಂಗಡಿ’ (ಬಾರ್) ತೆರೆದಿದ್ದೀಯಾ ಅನ್ಸುತ್ತೆ? ಆ ಧ್ವನಿ ಕೇಳಿದರೆ ಹಾಗೇ ಅನ್ನಿಸುತ್ತಿದೆಯಲ್ಲಪ್ಪಾ!” ಎಂದು ವ್ಯಂಗ್ಯವಾಗಿ ನಕ್ಕರು. ರಾಯರಿಗೆ ಆಘಾತವಾಯಿತು. ಅದು ಕುಡಿತದ ಅಮಲಲ್ಲ, ನಿದ್ರೆಯ ಮಂಪರು ಎಂದು ನಾಗರಾಜುಗೆ ಅನಿಸಲೇ ಇಲ್ಲ. ಬೇಸರದಿಂದಲೇ ಫೋನು ಇಟ್ಟರು. ಕೆಲವೇ ನಿಮಿಷಗಳಲ್ಲಿ ಮತ್ತೊಂದು ಕರೆ. ಈ ಬಾರಿ ವಿಶ್ವನಾಥ್ ಎಂಬ ಇನ್ನೊಬ್ಬ ಸಹೋದ್ಯೋಗಿ. ಅದೇ ನಿದ್ರೆಯ ಧ್ವನಿಯನ್ನು ಕೇಳಿದ ವಿಶ್ವನಾಥ್ ತಕ್ಷಣ ಗಾಬರಿಗೊಂಡು, “ಆನಂದ್, ಯಾಕೋ ಧ್ವನಿ ಸರಿ ಇಲ್ಲ. ಹಲ್ಲು ನೋವೇನಾದರೂ ಇದೆಯೇ? ಸುಮ್ಮನೆ ನರಳಬೇಡ, ನಾಳೆನೇ ಒಬ್ಬ ಒಳ್ಳೆ ದಂತವೈದ್ಯರನ್ನು ಹೋಗಿ ನೋಡು” ಎಂದು ಪ್ರೀತಿಯಿಂದ ಸಲಹೆ ನೀಡಿದರು. ಮರುದಿನ ಬೆಳಗ್ಗೆ ಪೆಟ್ರೋಲ್ ಬಂಕ್ ಹತ್ತಿರ ಆನಂದರಾಯರ ಜೀವನದ ಎರಡನೇ ಪಾಠ ಕಾದಿತ್ತು. ಬಂಕ್‌ನ ಉದ್ದನೆಯ ಸಾಲಿನಲ್ಲಿ ನಿಂತಿದ್ದಾಗ, ಒಬ್ಬ ಯುವಕ ಓಡುತ್ತಾ ಬಂದು ಅವರ ಪಾದಗಳಿಗೆ ನಮಸ್ಕರಿಸಿದ. ಆತ ಅವಿನಾಶ್. ವರ್ಷಗಳ ಹಿಂದೆ ತೆಲುಗು ಮಾಧ್ಯಮದಿಂದ ಬಂದು ಇಂಗ್ಲಿಷ್ ಮಾತಾಡಲು ಒದ್ದಾಡುತ್ತಿದ್ದ ಆ ಹುಡುಗನಿಗೆ ರಾಯರು ಮಾರ್ಗದರ್ಶನ ನೀಡಿದ್ದರು. ಇಂದು ಆತ ಐಐಟಿ ಪದವೀಧರನಾಗಿ ಉನ್ನತ ಸ್ಥಾನದಲ್ಲಿದ್ದಾನೆ. ಕೃತಜ್ಞತೆಯಿಂದ ಹೂಗುಚ್ಛ ನೀಡಿ, “ನಾಳೆ ಮನೆಗೆ ಬಂದು ಅಮ್ಮನವರ ಆಶೀರ್ವಾದ ಪಡೆಯುತ್ತೇನೆ” ಎಂದು ವಿನಯದಿಂದ ಹೊರಟುಹೋದ. ರಾಯರು ಗಾಡಿ ಸ್ಟಾರ್ಟ್ ಮಾಡುವಷ್ಟರಲ್ಲಿ ಮತ್ತೊಬ್ಬ ಹಳೆಯ ಶಿಷ್ಯ ತರುಣ್ ಎದುರಾದ. ಕೈಯಲ್ಲೊಂದು ಸಿಗರೇಟು, ಕಣ್ಣಿಗೆ ಕಪ್ಪು ಕನ್ನಡಕ—ಪಕ್ಕಾ ಇಂದಿನ ‘ಜುಲಾಯಿ’ ಯುವಕನಂತೆ ಕಾಣುತ್ತಿದ್ದ. ಅಂದು ತರಗತಿಯಲ್ಲಿ ಕೊನೆಯ ಬೆಂಚಿನಲ್ಲಿದ್ದು ಕಿಡಿಗೇಡಿತನ ಮಾಡುತ್ತಾ ಫೇಲ್ ಆಗುತ್ತಿದ್ದವನು ಈತ. “ಅಂಕಲ್, ಜಂಕ್ಷನ್ ವರೆಗೆ ಲಿಫ್ಟ್ ಕೊಡ್ತೀರಾ?” ಎಂದು ತರುಣ್ ಕೇಳಿದಾಗ, ರಾಯರ ಮುಖದಲ್ಲಿ ಅಸಹ್ಯ ಮೂಡಿತು. ಏನೂ ಕೇಳದವರಂತೆ ಅವರು ಗಾಡಿ ಓಡಿಸಿ ಮುಂದೆ ಹೋದರು. ಮನೆಗೆ ಹಿಂದಿರುಗುವಾಗ ರಾಯರ ಮನಸ್ಸಿನಲ್ಲಿ ದ್ವಂದ್ವಗಳ ಸಂತೆ. ಒಂದೇ ಧ್ವನಿಯನ್ನು ಕೇಳಿದ ಇಬ್ಬರು ಸಹೋದ್ಯೋಗಿಗಳು ಬೇರೆ ಬೇರೆಯಾಗಿ ಹೇಗೆ ಅರ್ಥೈಸಿಕೊಂಡರು? ಒಬ್ಬನೇ ಗುರುವಿನ ಹತ್ತಿರ ಓದಿದ ಇಬ್ಬರು ಶಿಷ್ಯರು ಇಷ್ಟು ವ್ಯತಿರಿಕ್ತವಾಗಿ ಹೇಗೆ ಬೆಳೆದರು? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಒಂದು ಕೃಷ್ಣ ಮಂದಿರದ ಹತ್ತಿರ. ಅಲ್ಲಿ ಘಂಟಸಾಲ ಅವರ ಕಂಠಸಿರಿಯಲ್ಲಿ ಭಗವದ್ಗೀತೆಯ ಶ್ಲೋಕಗಳು ಕೇಳಿಬರುತ್ತಿದ್ದವು. ‘ಶ್ರದ್ಧಾತ್ರಯ ವಿಭಾಗ’ ಯೋಗದ ಆ ಶ್ಲೋಕಗಳು ರಾಯರ ಸಂಶಯಗಳಿಗೆ ಕನ್ನಡಿ ಹಿಡಿದವು. ಮನುಷ್ಯರು ನೋಡಲು ಒಂದೇ ರೀತಿ ಇದ್ದರೂ, ಅವರ ಆಹಾರ ಮತ್ತು ಅಭ್ಯಾಸಗಳಿಂದ ರೂಪುಗೊಳ್ಳುವ ಸಾತ್ವಿಕ, ರಾಜಸ ಮತ್ತು ತಾಮಸ ಗುಣಗಳು ಅವರ ವರ್ತನೆಯನ್ನು ನಿರ್ಧರಿಸುತ್ತವೆ ಎಂಬ ಸತ್ಯ ಅವರಿಗೆ ಹೊಳೆಯಿತು. “ಮೆಣಸಿನ ಗಿಡಕ್ಕೆ ಎಷ್ಟು ಸಿಹಿ ನೀರು ಹಾಕಿದರೂ ಅದು ಖಾರವಾದ ಮೆಣಸಿನಕಾಯಿಯನ್ನೇ ನೀಡುತ್ತದೆ. ಮಾವು ಮತ್ತು ಸಪೋಟ ಗಿಡಗಳು ಯಾವಾಗಲೂ ಸಿಹಿಯಾದ ಹಣ್ಣುಗಳನ್ನೇ ಕೊಡುತ್ತವೆ.” ಆನಂದರಾಯರಿಗೆ ಜ್ಞಾನೋದಯವಾಯಿತು. ಒಬ್ಬ ಗುರುವಾಗಿ ಅವರು ಎಲ್ಲರಿಗೂ ಒಂದೇ ರೀತಿಯ ಪಾಠ ಮಾಡಿದ್ದರು, ಆದರೆ ವಿದ್ಯಾರ್ಥಿಗಳು ಅವರವರ ಸ್ವಭಾವಕ್ಕೆ ತಕ್ಕಂತೆ ಅದನ್ನು ಸ್ವೀಕರಿಸಿದ್ದರು. ಸಂಶಯಗಳೆಲ್ಲಾ ಮಂಜಿನಂತೆ ಕರಗಿದವು. ಅವರು ಕೇವಲ ಇಂಗ್ಲಿಷ್ ಮೇಷ್ಟ್ರಾಗಿ ಅಲ್ಲ, ಜೀವನದ ದೊಡ್ಡ ಪಾಠವನ್ನು ಕಲಿತ ವಿದ್ಯಾರ್ಥಿಯಾಗಿ ಸಂತೋಷದಿಂದ ಮನೆಗೆ ಹೆಜ್ಜೆ ಇಟ್ಟರು. ತೆಲುಗು ಮೂಲ: ಭಾಗವತುಲ ಕೃಷ್ಣಾರಾವುಕನ್ನಡ ಅನುವಾದ : ಕೋಡೀಹಳ್ಳಿ ಮುರಳೀ ಮೋಹನ್

“ವೈರುಧ್ಯಗಳು” ಭಾಗವತುಲ ಕೃಷ್ಣಾರಾವು ಅವರತೆಲುಗು ಕಥೆಯ ಕನ್ನಡಾನುವಾದ‌ ಕೋಡೀಹಳ್ಳಿಮುರಳೀ ಮೋಹನ್ Read Post »

ಕಾವ್ಯಯಾನ

ಎನ್.ಜಯಚಂದ್ರನ್‌ ಅವರಕವಿತೆ”ಆರ್ಥನಾದ”

ಕಾವ್ಯ ಸಂಗಾತಿ ಎನ್. ಜಯಚಂದ್ರನ್ “ಆರ್ಥನಾದ” ದಟ್ಟ ಕಾನನದ ಮಡಿಲಲ್ಲಿ ಹುಟ್ಟಿದ ಕಾಳಿ ನದಿ,ಹಾರ್ನಬಿಲ್‌ ಪಕ್ಷಿಗಳ ಹಾಡಿಗೆ ತೂಗಿದ ನದಿ,ಮರಗಳ ನೆರಳಲ್ಲಿ ಹರಿದ ಕನಸು,ಹಸಿರು ಕಾಡಿನ ತತ್ವಉಸಿರೇ ಅವಳು. ಆದರೆ ಇಂದು ಯಂತ್ರಗಳ ಗರ್ಜನೆ.,ನಿಶ್ಶಬ್ದ ಕಾಡಿನ ನೋವಿನ ಘೋಷಣೆ.ಅಭಿವೃದ್ಧಿಯ ಹೆಸರಿನ ಕಲ್ಲಿನ ಗೋಡೆ,ನದಿಯ ಸ್ವಾತಂತ್ರ್ಯಕ್ಕೆ ಅಡ್ಡಿಯಾದ ಬೇಡಿ ?ಕಾಳಿ ಕಣಿವೆಯ ಮಡಿಲಲ್ಲಿ ಮೌನ, ಪ್ರಕೃತಿಯ ಹೃದಯದಲ್ಲಿ ಕಾಣದ ಗಾಯ.ಮೀನುಗಳ ಕನಸುಗಳು ಕಣ್ಣೀರಾದವು,ಪಕ್ಷಿಗಳ ಗಾನವೂ ಮೌನವಾದವು.ಈ ಸುಂದರ ಕಾಳಿಯ ಕಣ್ಣೀರ ಕಥೆ,ಕೇಳುವವರಿಲ್ಲದ ಪ್ರಕೃತಿಯ ವ್ಯಥೆ ಎನ್. ಜಯಚಂದ್ರನ್ .ದಾಂಡೇಲಿ.ಹಿರಿಯ ಪತ್ರಕರ್ತರು.9740635196

ಎನ್.ಜಯಚಂದ್ರನ್‌ ಅವರಕವಿತೆ”ಆರ್ಥನಾದ” Read Post »

You cannot copy content of this page

Scroll to Top