ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಇಮಾಮ್ ಮದ್ಗಾರ ಅವರ ಕವಿತೆ ” ಪ್ರೀತಿ”

ಕಾವ್ಯ ಸಂಗಾತಿ ಇಮಾಮ್ ಮದ್ಗಾರ ” ಪ್ರೀತಿ” ಹೆರಿಗೆ ನೋವಮರೆತ ಅಮ್ಮನಂತೆಎದೆಗಪ್ಪಿ ಕೊಳ್ಳುತ್ತದೆ ಪ್ರೀತಿ ಮನಸಲ್ಲಿ ಹುಟ್ಟಿಕನಸಲ್ಲಿ ಸತ್ತುಮಾತನ್ನೇ ಮೌನವಾಗಿಸಿನಿದ್ದೆ ಇರದ ಕನಸುಕಾಣುವದು ಪ್ರೀತಿ.. ಭಾವನೆಗಳ ಬರಿದಾಗಿಸಿಭರವಸೆಗಳ ಹುಸಿಯಾಗಿಸಿದಿನಚರಿಯನ್ನೇಉಸಿರಾಗಿಸುವದು ಪ್ರೀತಿ…. ಗುರಿಯಿಲ್ಲದ ಪಯಣಬೆಳಕಿಲ್ಲದ ದಾರಿ.ಕಷ್ಟ.ಕಣ್ಣೀರು.ನಿಟ್ಟುಸಿರ ದಾಟಿಬಿಡುವೆನೆಂಬಹುಸಿನಂಬಿಕೆ ಪ್ರೀತಿ.. ಆಕಾಶದಿಹಾರಾಡಿಸಾಗರಗಳನೇ..ಜಾಲಾಡಿಮುತ್ತು.ರತ್ನ.ಹರಳು…ತಂದುಬಿಡುವೆನೆಂಬಮರುಳು..ಪ್ರೀತಿ ದ್ವೇಷದ ಅಗ್ಗಿಷ್ಠಿಕೆಯಲ್ಲಿಬೆಂದರೂಬೆವರದೇಸದ್ದು ಮಾಡದೇನುಗ್ಗಿ ಬರುವಾಗಎದೆಗುಂದ ದಿರುವದುಪ್ರೀತಿ ಭರವಸೆಗಳಿಗೆ ಬಣ್ಣತುಂಬಿಬಯಕೆಗಳಿಗೆಭಯವಾಗದಂತೆಉತ್ಸಾಹದ ಚಿಗುರುಚಿಮ್ಮಿಸುವದು ಪ್ರೀತಿ ತೆತ್ತು ಗಳಿಸುವದಿಲ್ಲಉತ್ತು ಬೆಳೆಸುವದು ಪ್ರೀತಿಮೂಡಣ ದಿಕ್ಕಿನಮೂಡುಗಾಳಿಯಲ್ಲ ಪ್ರೀತಿ ಕಪಟ ಪ್ರೇಮದ ಉಳಿ ಎಟಿಗೆಶಿಲೆಯಾದರೂಮನದಲ್ಲೆ ನಗುವದು ಪ್ರೀತಿ ರೆಕ್ಕೆ ಮುರಿದಹಕ್ಕಿಯಂತಾದರೂ..ಮುರಿದ ವೀಣೆಗೆಒಲವಿನ ಸ್ವರವಕಲಿಸುವದುಪ್ರೀತಿ ಗಡಿಗಳೆಲ್ಲೇ ಮೀರಿಅಡಿಯಿಡುವಪ್ರೀತಿಯ ದಾರಿಗೆ ಸುಂಕವಿಲ್ಲಸ್ವಾಭಿಮಾನದ ಬಿಂಕವಿಲ್ಲ ಬಲ್ಲವರು ಎಂಬುವರುಕಣ್ಣಿಲ್ಲ ಪ್ರೀತಿಗೆಅಂತರಂಗದ ಬೆಳಕಿರುವದುಸುಳ್ಳಲ್ಲ ಪ್ರೀತಿಗೆ ಬೊಗಸೆಯೊಡ್ಡಿ ಕಾಯುವದುಸಾವಿನ ತನಕಮಸಣದಲ್ಲೂಜೊತೆ ಯಾಗಿರುವದು ಪ್ರೀತಿ ಇಮಾಮ್ ಮದ್ಗಾರ

ಇಮಾಮ್ ಮದ್ಗಾರ ಅವರ ಕವಿತೆ ” ಪ್ರೀತಿ” Read Post »

ಕಥಾಗುಚ್ಛ

ಶ್ರೀದೇವಿ ಮ ಗುಮ್ಮಗೋಳ ಅವರ ಸಣ್ಣಕಥೆ “ಬದುಕು ಇಬ್ಬದಿ”

ಕಥಾ ಸಂಗಾತಿ ಶ್ರೀದೇವಿ ಮ ಗುಮ್ಮಗೋಳ “ಬದುಕು ಇಬ್ಬದಿ” ಅಂದು ರಜನಿ ಮಕ್ಕಳಿಗೆ ಕ್ಲಾಸಿನಲ್ಲಿ ಸಮಾಜಶಾಸ್ತ್ರದ ಕುಟುಂಬದ ಕುರಿತು ಪಾಠ ಮಾಡುತ್ತಿದ್ದಳು. ಸಮಾಜದಲ್ಲಿ ಕುಟುಂಬ ಅಂದರೆ ಏನು ಕುಟುಂಬದ ಪ್ರಕಾರಗಳಾವವು, ಮಹತ್ವ  ಏನು ಎನ್ನುವದನ್ನು ಮಕ್ಕಳಿಗೆ ವಿವರಿಸಿ ಹೇಳುತ್ತಿದ್ದಳು. “ನೋಡಿ ಒಂದು ಕುಟುಂಬ ಸಮಾಜದ ಸಂಸ್ಥೆ. ಕುಟುಂಬದ ಸಂತೊಷ ನೆಮ್ಮದಿ ಮತ್ತು ಸ್ಥಿರತೆ ಆ ಕುಟುಂದಲ್ಲಿರುವ ಪ್ರತಿಯೊಬ್ಬರ ನಡುವಿನ ಪ್ರೀತಿ, ಸಹಕಾರ, ಹೊಂದಾಣಿಕೆ, ಸಹಬಾಳ್ವೆಯ ಮೇಲೆ ನಿಂತಿದೆ. ನಾನು ಹೆಚ್ಚು ನೀನು ಕಡಿಮೆ ಎನ್ನುವ ಮನೊಭಾವ ಇರುವ ಕುಟುಂಬ ನೆಮ್ಮದಿಯಾಗಿ ಇರಲಾರದು. ಕುಟುಂಬದ ಪ್ರತಿ ಸದಸ್ಯ ಆ ಕುಟುಂಬದ ಗೋಡೆ ಇದ್ದ ಹಾಗೆ. ಪ್ರತಿಯೊಬ್ಬರ ಮದ್ಯೆ ಸಹಾನುಭೂತಿ, ಪ್ರೀತಿ, ಕಾಳಜಿಯ ಸಿಮೆಂಟು ಗಟ್ಟಿಯಾಗಿದ್ದಾಗ ಕುಟುಂಬದ ಗೊಡೆಗಳ ಮದ್ಯೆ ಬಿರುಕು ಬೀಳಲಾರದು.” ಎಂದು ಹೇಳುತ್ತಿದ್ದಂತೆ ಒಳಗಡೆ ಬಂದ ಪ್ಯೂನ್ “ಮೆಡಮ್ ನಿಮ್ಮನ್ನು ಯಾರೊ ಬೇಟಿ ಆಗಲು ಬಂದಿದ್ದಾರೆ” ಎಂದು ಹೇಳಿ ಹೊರಟ. ರಜನಿ ಯಾರಿರಬಹುದು? ನನಗೆ ಈಗ ನನ್ನಮ್ಮನ ಕಡೆಯ ಸಂಬಂಧಿಕರಾದ ಇಬ್ಬರೂ ಮಾವಂದಿರು ಒಬ್ಬ ತಂಗಿಯನ್ನು ಬಿಟ್ಟರೆ ಯಾರೂ ಸಂಬಂಧಿಕರಿಲ್ಲ. ಅವರೆಲ್ಲಾ ಸೀದ ಮನೆಗೆ ಬರುತ್ತಿದ್ದರು. ನನ್ನ ಕಾಲೇಜ ಕಡೆ ಬರುವಂತದೇನಿದೆ. ಅದು ಅಲ್ಲದೇ ಈ ಊರಿಗೆ ಬಂದು ಕೇವಲ ಒಂದು ವರ್ಷವಾಯಿತು ಕರಾವಳಿ‌ ತೀರದ   ಈ ಊರಲ್ಲಿ ನನಗಿನ್ನೂ ಅತೀಯಾಗಿ ಪರಿಚಿತರು ಯಾರು ಇಲ್ಲ. ಅಂದ ಮೇಲೆ ಮಕ್ಕಳ ಪಾಲಕರು ಯಾರಾದರೂ ಬಂದಿರುವರಾ? ಎಂದು ಹೀಗೆ ಮನದಲ್ಲೆ ಗೇಣಿಕೆ ಹಾಕುತ ರಜನಿ ಕ್ಲಾಸ್ ರೂಮಿನಿಂದ ಹೋರಗೆ ಬಂದಳು. ರಜನಿ ಕಾರವಾರದ ಪಿ.ಯು. ಕಾಲೇಜ ಒಂದಕ್ಕೆ ಉಪನ್ಯಾಸಕಳಾಗಿ ನೇಮಕಗೊಂಡಿದ್ದಳು. ದೂರದಲ್ಲಿ ಪ್ರಶಾಂತ ಅವಳಿಗಾಗಿ ಕಾಯುತ ನಿಂತಿದ್ದ. ಅವನನ್ನು ನೋಡಿ ರಜನಿಯ ಎದೆ ಒಮ್ಮೆಲೆ ಜಲ್ಲೆಂದಿತು. ಏಕೆ ಇವನು ಇಲ್ಲಿ ಬಂದಿದ್ದಾನೆ.  ಅವನ ಬದುಕಿನಿಂದ ದೂರಾಗಿ ಎರಡು ವರ್ಷದ ಮೇಲಾಯಿತು. ತನ್ನ ಅವನ ಋಣ ತೀರಿದ ಮೇಲೆ ಮತ್ಯಾವ ಋಣಕ್ಕಾಗಿ, ಘನ ಕಾರ್ಯಕ್ಕೆ ತನಗೆ ಬೇಟಿಯಾಗಿತ್ತಿದ್ದಾನೆಂದು ರಜನಿಗೆ ತಿಳಿಯದಾಯಿತು. ರಜನಿಯನ್ನು ನೋಡಿದ ಪ್ರಶಾಂತ ಅವಳಡೆಗೆ ಬಂದು “ರಜನಿ ನನಗೆ ಗೊತ್ತು ನನ್ನನ್ನು ನೀನು ಇಲ್ಲಿ ನೋಡಿ ನಿನಗೆ ಬೇಸರವಾಗಿರಬಹುದು. ಯಾಕಪ್ಪ ಇವನು ಇಲ್ಲಿ ಬಂದ ಎಂದುಕೊಳ್ಳುತಿರಬಹುದು. ನಿನ್ನ ಜೊತೆ ಸ್ವಲ್ಪ ಮಾತನಾಡುವದಿತ್ತು ಮಾತನಾಡಬಹುದಾ?” ಎಂದಾಗ ರಜನಿಗೆ ಏನು ಹೇಳಬೇಕು ತಿಳಿಯದಾಯಿತು. ರಜನಿಯ ಮನಸ್ಸು ಬೆಣ್ಣೆಯಂತದ್ದು.  ನಾನು ಅವನಂತೆ ವರ್ತಿಸಿದರೆ ಅವನಿಗೂ ನನಗೂ ಏನು ವ್ಯತ್ಯಾಸ ಎಂದುಕೊಂಡು “ಆಯಿತು ಈಗ ನನಗೆ ಕ್ಲಾಸ್ ಇದೆ. ನಾಲ್ಕು ಗಂಟೆಗೆ ಕಾಲೇಜ ಬಿಡುತ್ತದೆ. ಆಗ ಮಾತನಾಡೋನ” ಅಂದಳು. ಆಗ ಪ್ರಶಾಂತ “ಹಾಗಾದರೆ ಅಲ್ಲಿಯವರೆಗೆ ಇಲ್ಲಿ ನನಗೆ ಸ್ವಲ್ಪ ಕೆಲಸವಿದೆ. ನಾಲ್ಕು ಗಂಟೆಗೆ ನೀನು ಬೀಚ್ ಹತ್ತಿರ ಬಾ” ಎಂದು ಹೇಳಿದವನೆ ಹೊರಟು ಬಿಟ್ಟನು. ಪ್ರಶಾಂತನ ಬದುಕಿನಿಂದ ಹೊರ ಬಂದು ಈಗ ತಾನೆ ತಣ್ಣಗೆ ಉಸಿರಾಡುತ್ತಿರುವ ರಜನಿಗೆ ಮತ್ತೆ ಬೆಂಕಿಯ ಸಹವಾಸ ತನಗೇಕೆ ಬೇಕಿತ್ತು ಸುಮ್ಮನೆ ನಾನು ಬರುವದಿಲ್ಲವೆಂದು ಹೇಳಿಬಿಡಬಾರದಿತ್ತೆ ಎಂದು ಮತ್ತೊಮ್ಮೆ ಮನ ಹೋಯ್ದಾಡಿತು. ಆದದ್ದಾಗಲಿ ನಮ್ಮಿಬ್ಬರ ಮದ್ಯೆ ಈಗ ಯಾವ ಸಂಬಂಧವು ಉಳಿದಿಲ್ಲ ನೋಡೊಣ ಏತಕ್ಕೆ ಬಂದಿರುವನು ಎಂದು ತಿಳಿದ ಮೇಲೆ ಯೋಚಿಸಿದರಾಯಿತು ಎಂದುಕೊಂಡಳು. ಅದೇಕೊ ಪ್ರಶಾಂತನಿಂದಾಗಿ ಕ್ಲಾಸಿಗೆ ಬಂದರು ಅವಳಿಗೆ ಪಾಠ ಮಾಡುವ ಮೂಡೆ ಬರಲಿಲ್ಲ. ಅಷ್ಟಕ್ಕೆ ಪಾಠ ನಿಲ್ಲಿಸಿ ಸ್ವಲ್ಪ ಕೆಲಸವಿದೆ ನಾಳೆ ಪಾಠ ಮುಂದುವರೆಸುವೆ ಎಂದು ಹೇಳಿ ಸ್ಟಾಪ್ ರೂಮ್ ಗೆ ಬಂದು ತನ್ನ ಚೇರ ಮೇಲೆ ಕುಳಿತಳು. ಕಿಟಕಿಯ ಆಚೆ ತೂರಿಬರುತ್ತಿದ್ದ ಗಾಳಿ ಹಿತ ನೀಡಿತಾದರೂ ಮನದಾಳದ ಕಹಿ ನೆನಪುಗಳು ಕಣ್ಮುಂದೆ ಹಾದು ಹೋದವು. ******* ರಜನಿ ಮಾಸ್ಟರ ಡಿಗ್ರಿ ಓದಿ ಮುಂದೆ ಪಿ. ಎಚ್. ಡಿ ಮಾಡುತ್ತಿದ್ದಳು. ಅವಳಿಗೆ ತಾನು ಮುಂದೆ ಲೆಕ್ಚರ್ ಆಗಬೇಕೆಂಬ ಮಹದಾಸೆ ಇತ್ತು. ಆದರೆ ಪಿ.ಎಚ್.ಡಿ ಮುಗಿಯುತ್ತಲೇ ಅವರ ತಂದೆ ಅವಳಿಗೆ ಗಂಡು ನೋಡಿ ಮದುವೆ ಮಾಡಲು ತಯಾರಿ ನಡೆಸಿದರು. ಅವಳಿಗೆ ಇಷ್ಟವಿಲ್ಲದಿದ್ದರೂ ತನ್ನ ಹಿಂದೆ ಇರುವ ಇನ್ನೊಬ್ಬ ತಂಗಿಗಾಗಿ ತಾನು ಮದುವೆಯಾಗಲೇಬೇಕೆಂಬ ಅಪ್ಪನ ಒತ್ತಾಯಕ್ಕೆ ಕಟ್ಟು ಬಿದ್ದು ಒಪ್ಪಿಕೊಂಡಳು. ಒಬ್ಬ ಸುಂದರನಾದ ಪ್ರಶಾಂತ ಎನ್ನುವ ಹುಡಗನೊಂದಿಗೆ ಅವಳ ಮದುವೆಯಾಯಿತು. ಅವನು ಸರಕಾರಿಯಲ್ಲಿ ಗುಮಾಸ್ತನಾಗಿದ್ದ. ಮದುವೆಯ ಬಗ್ಗೆ, ಗಂಡ ಸಂಸಾರದ ಬಗ್ಗೆ ನೂರಾರು ಕನಸು ಕಂಡಿದ್ದ ರಜನಿಗೆ ಕನಸುಗಳು ಬರೀ ಕನಸಾಗಿಯೇ ಉಳಿದವು. ಮದುವೆಯಾದ ಹೊಸತರಲ್ಲಿ ರಾಮನಂತೆ ಕಂಡ ಗಂಡ ಅವಳ ಬಾಳಿನ ರಾವಣನಾದ. ರಜನಿಗೆ ಸ್ವಾತಂತ್ರ್ಯವೇ ಇರಲಿಲ್ಲ. ಮನೆಯಲ್ಲಿ ಗುಲಾಮಳಂತೆ ಕಾಣುತ್ತಿದ್ದ. ಅತ್ತೆ ಮಾವರ ಸೇವೆ ಮಾಡಿ ಗಂಡನಿಗೆ ಬೇಕಾದ ಅಚ್ಚುಕಟ್ಟಾದ ಅಡುಗೆ ಮಾಡಿದರೂ ಒಂದು ದಿನವೂ ಅವಳನ್ನ ನೀನು ನಮಗಾಗಿ ದುಡಿಯುತ್ತಿದ್ದಿಯಾ ಎಂದು ಹೇಳಲಿಲ್ಲ. ರಜನಿಯ ಅತ್ತೆ ಮಾವ ಗಂಡ ಎಲ್ಲರೂ ಸ್ವಾರ್ಥಿಗಳೆ. ತಮಗೆ ಏನೆಲ್ಲಾ ಬೇಕು ಎಲ್ಲವನ್ನು ಮಶಿನ್ ನಂತೆ ರಜನಿಯಿಂದ ಮಾಡಿಸಿಕೊಳ್ಳುತ್ತಿದ್ದರೂ. ಆದರೆ ಒಂದು ದಿನವೂ ನೀನು ನಮ್ಮಂತೆಯೇ ಮನುಷ್ಯಳು ನಿನಗೂ ಸ್ವಲ್ಪ ವಿಶ್ರಾಂತಿ ಬೇಕು ಎಂದು ಒಂದು ದಿನವೂ ಅತ್ತೆಯಾಗಲಿ, ಮಾವನಾಗಲಿ ಕಡೆಗೆ ಗಂಡನಾಗಲಿ ಹೇಳುತ್ತಿರಲಿಲ್ಲ. ಪ್ರಶಾಂತ ಅವಳನ್ನು ಹೊರಗಡೆ ಸಿನಿಮಾ, ಹೊಟೆಲು, ಪಾರ್ಕು ಅಂತ ಒಂದು ದಿನವೂ ಸುತ್ತಾಡಿಸಿಕೊಂಡು ಬರುತ್ತಿರಲಿಲ್ಲ. ಅವಳಿಗೂ ಒಂದು ಬದುಕಿದೆ. ಅವಳಿಗೂ ಆಸೆ ಆಕಾಂಕ್ಷೆಗಳಿವೆ ಎಂದು ಒಂದು ದಿನವೂ ಯೊಚಿಸಲಿಲ್ಲ. ಹೀಗೆಯೇ ಸಾಗಿರುವಾಗ ಒಮ್ಮೆ ರಜನಿಯ ಮಾವ ಕರುಳು ಬೇನೆಯಿಂದ ಕಾಯಿಲೆ ಬಿದ್ದ. ಮಾವನಿಗೆ ಹೊತ್ತು ಹೊತ್ತಿಗೆ ಸರಿಯಾಗಿ ಬಿಸಿ ಬಿಸಿ ಅಡುಗೆ ಮಾಡಿ ಬಡಿಸುತ್ತಿದ್ದಳು.  ಅತ್ತೆ ಮಾಡಿಟ್ಟದ್ದನ್ನು ಗಂಡನಿಗೆ ಒಂದು ದಿನವೂ ಬಡಿಸದೇ ಎಲ್ಲವನ್ನು ಸೊಸೆಯ ಮೇಲೆ ಹಾಕಿ ಮನೆ ಮನೆ ತಿರುಗುತ್ತಿದ್ದಳು. ಅವಳ ಸೇವೆಯಿಂದ ಮಾವ ಗುಣಮುಖನಾದ. ಅದನ್ನು ಒಂದು ದಿನವೂ ಹೇಳದೇ ಎಲ್ಲರ ಮುಂದೆ ತಾನೇ ಪತಿವೃತೆಯಂತೆ ಗಂಡನ ಸೇವೆ ಮಾಡಿದಂತೆ ಮಾತಿನಲ್ಲಿ ಮನೆ ಕಟ್ಟೆ ಎಲ್ಲರನ್ನೂ ನಂಬಿಸುತ್ತಿದ್ದಳು. ಗಂಡನೂ ಕೂಡಾ ನಿನ್ನಂದಲೇ ಅಪ್ಪ ಗುಣಮುಖನಾದ ಅದರಲ್ಲಿ ನಿನ್ನ ಪಾತ್ರ ದೊಡ್ಡದು ಎಂದು ಒಂದೂ ದಿನವೂ ಹೇಳಲಿಲ್ಲ.  ಜೊತೆಗೆ ಅತ್ತೆ ಎಷ್ಟೆ ಮಾಡಿದರು ಏನಾದರೊಂದು‌ ಖ್ಯಾತೆ ತೆಗೆದು ಮಗನ ಮುಂದೆ ಸೊಸೆಯ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿ ಗಂಡ ಹೆಂಡಿರ ಮದ್ಯೆ ಜಗಳ ತಂದಿಡುತ್ತಿದ್ದಳು. ಅನೇಕ ಬಾರಿ ರಜನಿಯ ಮೇಲೆ ಕೈಯನ್ನು ಮಾಡಿದ್ದ. ಹೀಗರಲೂ ಒಮ್ಮೆ ರಜನಿಯ ತಂದೆಗೆ ಸಿರಿಯಸ್ಸಾಗಿ ಆಸ್ಪತ್ರೆಗೆ ದಾಖಲಿಸಿದರು. ರಜನಿಯ ತಂದೆಗೆ ಹೃದಯಘಾತವಾಗಿತ್ತು. ತನ್ನ ತಂದೆಯ ಸೇವೆಯನ್ನು ಮಾಡಿಸಿಕೊಂಡ ಪ್ರಶಾಂತ ತನ್ನ ತಂದೆಯಂತೆ ಅವಳಿಗೂ ಅವಳ ತಂದೆ ಇದ್ದಾರೆ ಗಂಡಮಕ್ಕಳಾರು ಇಲ್ಲ ಹೆಂಡತಿಯನ್ನು ಇಂತಹ ಸಮಯದಲ್ಲಿ ಮಗಳನ್ನು ತವರು ಮನೆಗೆ ಕಳಿಸಿ ಅವಳ ತಂದೆಯ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂಬ ದೊಡ್ಡ ಮನಸ್ಸು ಪ್ರಶಾಂತನಲ್ಲಿರಲಿಲ್ಲ. ಸಂಕುಚಿತ ಮನೋಭಾವನೆಯ ಪ್ರಶಾಂತ ರಜನಿಯನ್ನು ತವರು ಮನೆಗೆ ತಂದೆಯನ್ನು ನೋಡಲು ಕಳಿಸಲೇ ಇಲ್ಲ. “ಇದಾರಲ್ಲ ನಿನ್ನ ತಂಗಿ ತಾಯಿ ನೋಡಿಕೊಳ್ಳುತ್ತಾರೆ” ಎಂದು ಉಡಾಪೆ ಉತ್ತರಕೊಟ್ಟು ರಜನಿಯ ಮನಸ್ಸಿಗೆ ಗಾಯ ಮಾಡಿದ. ಕರಳು ತಂದೆಯನ್ನು ಕಾಣಲು ಹಾತೊರೆಯುತ್ತಿತ್ತು. ಗಂಡನ ವರ್ತನೆ ರಜನಿಯ ಮನಸ್ಸಿನ ಮೇಲೆ ದೊಡ್ಡದೊಂದು ಕಂದಕವನ್ನೆ ಕೊರೆಯಿತು. ತಂದೆಯನ್ನು ನೋಡಲು ಗಂಡ ಕಳಿಸಲೇ ಇಲ್ಲ. ರಜನಿಯ ಅಪ್ಪ ತೀರಿಕೊಂಡ.ಮಾವನ ಸೇವೆಯನ್ನು ಮಾಡಿದ ರಜನಿಯನ್ನು ಸ್ವತಃ ಅವಳ ತಂದೆ ಅನಾರೊಗ್ಯ ಬಳಲಿದಾಗ ಆಗಲಿ ಕಡೆಗೆ ಸತ್ತಾಗ ಅಪ್ಪನ ಮುಖವನ್ನು ನೋಡಲು ಕಳಿಸದೆ ಮೆರೆದ ಗಂಡನ ಅಮಾನವಿಯತೆ ರಜನಿಯ ಮನಸ್ಸಿಗೆ ಮತ್ತೊಂದು ಆಘಾತ ನೀಡಿತು. ಏನೆನೊ ಕನಸುಗಳನ್ನು ಕಟ್ಟಿಕೊಂಡು ಅವಳ ಬದುಕು ಒಂದಾದ ಮೇಲೊಂದರಂತೆ ಗಂಡ, ಗಂಡನ ಮನೆಯ ಅತ್ತೆ ಮಾವರ ವರ್ತನೆಯಿಂದ ದುಃಖದ ಅಲೆಗಳ ಹೊಡೆತ ಸಂಸಾರದ ಬಗ್ಗೆ ಗಂಡನಿಂದ ಒಂದೊಂದೆ ಹೆಜ್ಜೆ ದೂರ ಸರೆಯುವಂತೆ ಮಾಡಿತು. ಇದರ ಜೊತೆಗೆ ಮತ್ತೊಂದು ಆಘಾತ ಅವಳನ್ನು ಮತ್ತಷ್ಟು ಕುಗ್ಗುವಂತೆ ಮಾಡಿತು. ಅವಳಿಗೆ ಆ ಒಂದು ಘಟನೆಯಿಂದ ಪ್ರೀತಿ, ವಿಶ್ಚಾಸದ ಬಗ್ಗೆ ಇದ್ದ ನಂಬಿಕೆಯನ್ನೆ ಕೊನೆಗಾನುವಂತೆ ಮಾಡಿತು. ಒಂದು ದಿನ ರೂಮಿನಲ್ಲಿ ಗಂಡ ಬಹಳ ಹೊತ್ತು ಒಂದು ಹೆಣ್ಣಿನ ಜೊತೆ ಮಾತನಾಡುವದನ್ನು ಕೇಳಿಸಿಕೊಂಡಳು. ಆ ಮಾತಿನಲ್ಲಿ ಯಾವುದೊ ಅನೈತಿಕ ಸಂಬಂಧದ ವಾಸನೆ ಹೊಡೆಯಿತು. ರಜನಿ ಗಂಡನನನ್ನು ವಿಚಾರಿಸಿದಾಗ ಮೊದಲೆಲ್ಲಾ ಅಂತಹದೇನಿಲ್ಲ ಎನ್ನುತ ನಡೆದ. ಇಬ್ಬರ ಮದ್ಯೆ ಈ ವಿಷಯಕ್ಕೆ ಆಗಾಗ ಜಗಳ ಶುರುವಾಯಿತು. ಒಂದು ದಿನ ಪ್ರಶಾಂತ “ಹೌದು ನನಗೆ ಅವಳಿಗೂ ಸಂಬಂಧವಿದೆ. ಅವಳು ನನ್ನ ಆಫಿಸಿನಲ್ಲಿ ಕೆಲಸ ಮಾಡುತ್ತಾಳೆ. ಗಂಡ ಕುಡುಕ. ನನ್ನ ಮದುವೆಗೂ ಮುಂಚೆ ಅವಳು ಗಂಡನನ್ನು ಬಿಟ್ಟು ನಿನ್ನನ್ನು ಗಾಡವಾಗಿ ಪ್ರೀತಿಸುತ್ತೇನೆ ಎಂದು ನನ್ನ ದುಂಬಾಲು ಬಿದ್ದಳು. ಅವಳ ಪ್ರೀತಿಗೆ ಕರಗಿದೆ. ನಮ್ಮಿಬ್ಬರ ಮದ್ಯೆ ದೈಹಿಕ ಸಂಬಂಧವಿದೆ. ನಾನು ಅವಳನ್ನು ಮದುವೆಯಾಗಬೆಕೆಂದೆ. ಮನೆಯಲ್ಲಿ ಮನೆಯ ಮರ್ಯಾದೆಗೊಸ್ಕರ ಬೇರೆ ಹೆಣ್ಣನ್ನು ಮದುವೆಯಾಗು ಎಂದು ಗಂಟು ಬಿದ್ದರು. ಅದಕ್ಕಾಗಿ ನಿನ್ನ ಮದುವೆಯಾದೆ. ಈಗೇನು… ನಿನಗೆ ಬೇಕಾದರೆ ಇರು ಬೇಡವಾದರೆ ಹೋಗು…” ಎಂದು ಎಷ್ಟು ಸಲೀಸಾಗಿ ಹೇಳಿ ಬಿಟ್ಟ. ಮದುವೆ,  ದಾಂಪತ್ಯ ಬಂಧನ, ಕುಟುಂಬದ ಬಗ್ಗೆ ಇವನೀಗೇನಾದರೂ ಅರಿವಿದೆಯಾ? ಇವನಿಗೆ ಸಮಾಜಿಕ ಬದ್ದತೆ ಇದೆಯಾ?. ಕುಟುಂಬದ ಬಗ್ಗೆ ಸಂಸಾರದ ಬಗ್ಗೆ ಕಾಳಜಿ ಕಳಿಕಳಿ ಇದ್ದರೆ ತನ್ನ ಅನೈತಿಕ ಸಂಬಂಧವನ್ನು ಈ ರೀತಿ ಮುಂದುವರೆಸುತ್ತಿದ್ದಿಲ್ಲಾ.  ಪ್ರಶಾಂತನ ದೃಷ್ಟಿಯಲ್ಲಿ ರಜನಿ ಕೇವಲ ತನಗಾಗಿ ಮಕ್ಕಳನ್ನು ಹೆರಲು ಬಂದ, ತಂದೆ ತಾಯಿಯ ಮತ್ತು ತನ್ನ ಚಾಕರಿಯನ್ನು ಮಾಡಲು ಬಂದ ಒಂದು ಯಂತ್ರವಾಗಿದ್ದಳೇ ಹೊರತು. ಒಂದು ಜೀವವಾಗಲಿ ಅವಳಿಗೂ ಭಾವನೆಗಳು ಆಸೆ ಆಕಾಂಕ್ಷೆಗಳಿವೆ. ಅವಳಿಗೂ ಒಂದು ಬದುಕಿದೆ ಎಂದು ತಿಳಿಯಲೇ ಇಲ್ಲ . ಹೆಣ್ಣಿನ ಮನಸ್ಸು ನಂಬಿಕೊಂಡು ಬಂದವನ ನಿಷ್ಕಲ್ಮಷವಾದ ಪ್ರೀತಿ ಆಸರೆ, ಕಾಳಜಿ, ಕನಿಕರಕ್ಕೆ ಜೀವ ಹಾತೊರೆಯುವದು ಎಂದು ಪ್ರಶಾಂತನಿಗೆ ಅನಿಸಲೇ ಇಲ್ಲ.  ಅವಳ ಮತ್ತು ತನ್ನ ಸುಃಖ ದುಃಖಗಳನ್ನು ಇಬ್ಬರೂ ಸಮನಾಗ ಹಂಚಿಕೊಂಡು ಸಂತೋಷದಿಂದ ಜೀವನ ನಡೆಸಬೇಕು ಎಂದು ಅವನು ಬಯಸಲೇ ಇಲ್ಲವೆಂಬಂತೆ ಕಾಣುತ್ತಿತ್ತು. ಗಂಡನನಿಂದ ಬೇರೆಯಾಗಬೇಕೆಂದಳು.   ಅಷ್ಟರಲ್ಲಿ ರಜನಿಯು ಮೂರು ತಿಂಗಳ ಗರ್ಬಿಣಿಯಾದಳು.  ತನಗಲ್ಲವಾದರೂ ಇನ್ನ ಮೇಲೆ ಹುಟ್ಟುವ ಮಗುವಿಗಾದರೂ, ಭವಿಷ್ಯದಲ್ಲಿ ತನ್ನೊಡಲೊಳಗೆ ಚಿಗುರೆಡುಯುತ್ತಿದ್ದ ಹೊಸ ಜೀವದಲ್ಲಿ ಹೊಸ ಕನಸುಗಳನ್ನು, ಆಸೆಗಳನ್ನು ಹೊತ್ತು  ಗಂಡನ ಗಂಡನ‌ಮನೆಯವರ ನೋವನ್ನು ಬದುಕಿದರಾಯಿತೆಂದು ನಿರ್ದಾರ ಮಾಡಿದಳು.  ಒಮ್ಮೆ ರಜನಿಯ ಅತ್ತೆ ಬಿದ್ದು ಕಾಲಿಗೆ ಪೆಟ್ಟಾಯಿತು ಅದನ್ನೆ ನೆವ ಮಾಡಿಕೊಂಡು ಮಲಗಿಕೊಂಡೆ ಎಲ್ಲ ಸೇವೆಯನ್ನು ಸೊಸೆ ಕಡೆ ಮಾಡಿಸಿಕೊಳ್ಳತೊಡಗಿದಳು. ತಿಂಗಳು ತುಂಬುತ್ತಿದ್ದ ಸೊಸೆಗೆ ಹೊಟ್ಟೆಯಲ್ಲಿ ಒಂದು ಕೂಸಿದೆ ಅವಳಿಗೆ ಆಯಾಸವಾಗುತ್ತದೆ ಅವಳಿಗೂ ವಿಶ್ರಾಂತಿ ಬೇಕು ಎಂದು ಯೊಚಿಸಿದ ಸ್ವಾರ್ಥಿ ಮತ್ತು ಕಟುಕ ಹೆಣ್ಣಾಗಿದ್ದಳು. ಎಲ್ಲರೂ ಎರಡು ಹೊತ್ತು ಉಂಡರೆ ಇವಳು ಕೂತಲ್ಲೆ ನಾಲ್ಕೈದು ಬಾರಿ ಸೊಸೆ ಕಡೆಯಿಂದ ನೀಡಿಸಿಕೊಂಡು ಉಂಡರು ಮಗನ ಮುಂದೆ ನನಗೆ ಸರಿಯಾಗಿ ‌ನೀಡುತ್ತಿಲ್ಲ ಎಂದು ಸೊಸೆಯ ಬಗ್ಗೆ ಮಗನ ಮುಂದೆ ಅಪಾದನೆ ಹೊರೆಸಿದಳು. ಹೊಡೆತಗಳ ಮೇಲೆ ಹೊಡೆತಗಳನ್ನು ತಿಂದು ಮಾನಸಿಕವಾಗಿ ಜರ್ಜಿತಳಾಗಿ ರೊಸಿ ಹೋಗಿದ್ದ ರಜನಿ ಅತ್ತೆಯನ್ನು ತರಾಟೆಗೆ ತೆಗೆದುಕೊಂಡಳು. ಆಗ ಪ್ರಶಾಂತ ಅವಳು

ಶ್ರೀದೇವಿ ಮ ಗುಮ್ಮಗೋಳ ಅವರ ಸಣ್ಣಕಥೆ “ಬದುಕು ಇಬ್ಬದಿ” Read Post »

ಇತರೆ, ರಂಗಭೂಮಿ

“ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಜಮಹಾತ್ಮ ಬಾಬಾ ಸಾಹೇಬ” ನಾಟಕದ ಒಂದು ರಿವ್ಯು ಗೊರೂರು ಅನಂತರಾಜು ಅವರಿಂದ.

ರಂಗ ಸಂಗಾತಿ ಗೊರೂರು ಅನಂತರಾಜು “ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಜಮಹಾತ್ಮ ಬಾಬಾ ಸಾಹೇಬ” ನಾಟಕದ ಒಂದು ರಿವ್ಯು ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮೊನ್ನೆ ರಂಗಭೂಮಿ ಟ್ರಸ್ಟ್ ಕೊಡಗು ಕಲಾವಿದರು ಶ್ರೀ ಅಡ್ಡಂಡ ಕಾರ್ಯಪ್ಪ ರಚನೆಯ ನಿಜಮಹಾತ್ಮ ಬಾಬಾ ಸಾಹೇಬ ನಾಟಕ ಪ್ರದರ್ಶಿಸಿದರು. ಮೈಸೂರು ರಂಗಾಯಣ ನಿಕಟಪೂರ್ವ ನಿರ್ದೇಶಕರು ಶ್ರೀ ಅಡ್ಡಂಡ ಕಾರ್ಯಪ್ಪನವರು ಕೊಡಗು ಜಿಲ್ಲೆಯವರು. ಬಾಲ್ಯದಿಂದಲೂ ರಂಗಭೂಮಿ ಹಾಗೂ ಸಾಹಿತ್ಯದ ಬಗ್ಗೆ ತೀವ್ರವಾದ ಒಲವು ಬೆಳೆಸಿಕೊಂಡು ಇವರು ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ ರಾಜ್ಯಾದ್ಯಂತ ಪ್ರದರ್ಶಿಸಿದ ಹೆಗ್ಗಳಿಕೆ ಇವರದು. ಇವರು ಈ ಹಿಂದೆ ಹಾಸನದಲ್ಲಿ ಪರ್ವ ಕಾದಂಬರಿಯನ್ನು ನಾಟಕವಾಗಿ  ಪ್ರದರ್ಶಿಸಿದ್ದರು. ಹಿಂದೆ ಇವರ ತಂಡದ ಟಿಪ್ಪು ನಿಜಕನಸುಗಳು ಮತ್ತು ಕರಿನೀರ ವೀರ ನಾಟಕಗಳನ್ನು ನೋಡಿ  ಬರೆದಿದ್ದೆ. ಇವರ ಇನ್ನೊಂದು ನಾಟಕ ಸತ್ಯವನ್ನೇ ಹೇಳುತ್ತೇನೆ. ಈ ನಾಟಕವು ಡಾ. ಅಂಬೇಡ್ಕರ್ ವಿಷಯದಲ್ಲಿ ಬಚ್ಚಿಟ್ಟ  ಸತ್ಯಗಳನ್ನು ಬಿಚ್ಚಿಡುವ ಪ್ರಯತ್ನ ಎಂದಿದ್ದಾರೆ.  ಡಾ. ಬಾಬಾಸಾಹೇಬ ಅಂಬೇಡ್ಕರ್ ತಮ್ಮ ಸ್ವಪ್ರಯತ್ನ ಸಾಧನೆಗಳಿಂದ ಮಾನವತಾವಾದಿಯಾಗಿ ಒಂದು ಅರ್ಥದಲ್ಲಿ ನಿಜಮಹಾತ್ಮರಾಗಿ ಬೆಳೆದಿದ್ದು ಅದ್ಭುತ ಯಶೋಗಾಥೆ. ಅವರ ವ್ಯಕ್ತಿತ್ವ, ವಿದ್ವತ್ತು, ನಾಯಕತ್ವ ಗುಣ, ಸಂಘಟನಾ ಸಾಮರ್ಥ್ಯ, ಅಸ್ಪೃಶ್ಯತೆಯ ವಿರುದ್ಧದ ಹೋರಾಟ ಶ್ರಮ ಅದ್ವಿತೀಯ. ಬಾಬಾ ಸಾಹೇಬರ ಬಗ್ಗೆ ಸಾಮಾಜಿಕ ಕ್ರಾಂತಿ ಸೂರ್ಯ ಪುಸ್ತಕ ಬರೆದ ದತ್ತೋಪಂತ್ ಠೇಂಗಡಿ ಅವರ  ನಿರೂಪಣೆಯಲ್ಲಿ ತೆರೆದುಕೊಳ್ಳುತ್ತದೆ ನಾಟಕ. ಅವರ ಜೀವನವನ್ನು ರಾಜಕೀಯ ಕಥಾನಕಗಳಿಂದ ಹೊರತಂದು ರಾಷ್ಪ್ರೀಯತೆಯ ನೆಲೆಯಲ್ಲಿ ಪುನರ್ ಸ್ಥಾಪಿಸಿದೆ. ಅವರನ್ನು ಯಾವುದೋ ಒಂದು ರಾಜಕೀಯ ಚೌಕಟ್ಟಿಗೆ ಸೀಮಿತಗೊಳಿಸದೆ ಅವರ ನೈಜ ಸ್ವಭಾವಗಳಾದ ಚಿಕಿತ್ಸಕ ಬುದ್ಧಿ, ತಪ್ಪನ್ನು ಪ್ರಶ್ನಿಸುವ ವಿರೋಧಿಸುವ ಧೈರ್ಯ, ಸತ್ಯಕ್ಕಾಗಿ ಒಬ್ಬಂಟಿಯಾಗಲು ಸಿದ್ಧರಾಗುವ ಮಹಾ ಮಾನವತೆಯನ್ನು  ನೋಡಬಯಸುತ್ತದೆ.   ಬಾಬಾಸಾಹೇಬರ ಜೀವನದ ಅನೇಕ ಘಟನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ರಂಗದಲ್ಲಿ ತರಲಾಗಿದೆ. ಅವರ ವೈವಾಹಿಕ ಜೀವನ, ರಾಷ್ಪ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಅವರಿಗಿದ್ದ ನಿಲುವು, ಸಂವಿಧಾನ ಕರಡು ತಿದ್ದುಪಡಿಯ ಸಂದರ್ಭದಲ್ಲಿ ಸಂಸತ್ತಿನಲ್ಲಿ ನಡೆದ ಚರ್ಚೆಗಳು, ಡಾ. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ನಡುವಿನ ಸಂಬಂಧ ಇವೆಲ್ಲವನ್ನು ಐತಿಹಾಸಿಕ ದಾಖಲೆಗಳನ್ನು ಇಟ್ಟುಕೊಂಡು ಪರದೆಯ ಮೇಲೆ ಸಾಕ್ಷ್ಯ ಚಿತ್ರಗಳನ್ನು ತೋರಿಸಿ ಪ್ರಸ್ತುತಿಪಡಿಸುತ್ತದೆ. ರಾಷ್ಪ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹಡ್ಗೆವಾರ್ ಮತ್ತು ಬಾಬಾ ಸಾಹೇಬರು ಒಂದೇ ಕಾಲಘಟ್ಟದಲ್ಲಿದ್ದವರು. ಇವರಿಬ್ಬರ ಭೇಟಿ  ವಿಚಾರ ವಿನಿಮಯ ಸಂಘದ ಶಿಬಿರಕ್ಕೆ ಭೇಟಿಯಿತ್ತ ಬಾಬಾ ಸಾಹೇಬರು ಅಲ್ಲಿ ಯಾರೂ ಜಾತಿಯಿಂದ ಗುರುತಿಸಿಕೊಳ್ಳದೇ ಹಿಂದೂಗಳಾಗಿ ಗುರುತಿಸಿಕೊಂಡಿದ್ದನ್ನು ವಿಶೇಷವಾಗಿ ಗಮನಿಸುತ್ತಾರೆ.ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ಕಾನೂನುಬದ್ಧ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದ ಹಿಂದೂ ಕೋಡ್ ಬಿಲ್ ಅನ್ನು  ೧೯೫೧ರಲ್ಲಿ  ಸರಕಾರ ಮುಂದೂಡಿದ ಕಾರಣ ಬಾಬಾ ಸಾಹೇಬರು ನೆಹರು ಸಂಪುಟಕ್ಕೆ ರಾಜೀನಾಮೆ ನೀಡಿದರು. ೧೯೫೨ರ ಮೊದಲ ಲೋಕಸಭಾ ಚುನಾವಣೆಯಲ್ಲಿ ಅವರ ಸೋಲು  ಅಘಾತಕಾರಿ.  ೧೯೫೬ರ ಡಿಸೆಂಬರ್ ೬ರಂದು ಅಂಬೇಡ್ಕರ್ ಅಸ್ತಂಗತರಾದಾಗ ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ದೊರಕದಿರುವುದು ವಿಷಾದನೀಯ. ಈ ಅಂಶಗಳ ಮೇಲೆ ನಾಟಕ ಬೆಳಕು ಚೆಲ್ಲುತ್ತದೆ.೧೯೨೭ರಲ್ಲಿ ಮಹಾರಾಷ್ಟ್ರದ ಮಹಾಡ್ನಲ್ಲಿ ನಡೆದ ಚವದಾರ್ ಕೆರೆ ಸತ್ಯಾಗ್ರಹ ಮತ್ತು ೧೯೩೦ರಲ್ಲಿ ನಾಸಿಕ್‌ನ ಕಾಳಾರಾಮ ದೇವಸ್ಥಾನ ಪ್ರವೇಶ ಚಳುವಳಿ ಇವು ಅವರ ಸಾಮಾಜಿಕ ಹೋರಾಟಗಳ ಪ್ರಮುಖ ಮೈಲಿಗಲ್ಲು. ದೇವಸ್ಥಾನಕ್ಕೆ ಹೋಗಿಬರಬೇಕೆಂದು ಬಯಸುವ ಪತ್ನಿಯನ್ನು ಸಂಭಾಳಿಸುವ ಸನ್ನಿವೇಶವು ಮನ ಕಲಕುತ್ತದೆ.    ಸ್ವಾತಂತ್ರ್ಯ  ದೊರಕಿದ ಆರು ವರ್ಷಗಳ ಮೊದಲೇ ಬಾಬಾ ಸಾಹೇಬರು ಬರೆದ ಥಾಟ್ಸ್ ಆಫ್ ಪಾಕಿಸ್ಥಾನ (Thoughts of Pakisthan) ಕೃತಿಯನ್ನು ಪ್ರೇಕ್ಷಕರು ಓದಬೇಕೆಂದು ನಾಟಕದ ಮಧ್ಯಾಂತರದಲ್ಲಿ  ಬಂದು ನಾಟಕಕಾರರು ನಿವೇದಿಸುತ್ತಾರೆ. ಬಾಬಾಸಾಹೇಬರ ಬದುಕು ತೆರೆದ ಪುಸ್ತಕ. ಅವರು ಬದುಕನ್ನು ಅಕ್ಷರಗಳಲ್ಲಿ ಬರೆದಿಟ್ಟಿದ್ದಾರೆ. ಅದನ್ನು ನಾವು ಓದಬೇಕಷ್ಟೇ.  ಅವರು ಇದನ್ನು ಬರೆದಿದ್ದು ದೇಶ ವಿಭಜನೆಯ ಉದ್ದೇಶದಿಂದಲ್ಲ. ವಿಭಜನೆ ತರುವ ರಾಜಕೀಯ, ಸಾಮಾಜಿಕ ಮತ್ತು ಭೌಗೋಳಿಕ ಪರಿಣಾಮಗಳನ್ನು ಅದರಲ್ಲಿ ವಿಶ್ಲೇಷಿಸಿದ್ದರು. ಧರ್ಮದ ಆಧಾರದಲ್ಲಿ ದೇಶ ಒಡೆಯುವುದೇ ಆದರೆ ಸಂಪೂರ್ಣ ಪ್ರಜಾ ವಿನಿಮಯವಾಗಬೇಕು ಎಂಬುದು ಅವರ ನಿಲುವು. ಗಾಂಧೀಜಿಯವರು ಪ್ರಜಾ ವಿನಿಯಯ ಮಾಡಿಕೊಳ್ಳಬೇಕೆಂಬ ಅವರ ಬೇಡಿಕೆಯ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಿ ಬಾಬಾ ಸಾಹೇಬರು ತಮ್ಮ ಬೇಡಿಕೆಯಿಂದ ಹಿಂದೆ ಸರಿಯುವಂತೆ ಮಾಡುವ  ದೃಶ್ಯ ಯಾಕೋ  ಗಾಂಧೀ ಪಾತ್ರ ವ್ಯಂಗ್ಯವಾಗಿ ಗೋಚರಿಸಿತು. ಇತ್ತ ಸಾರ್ವಕರರು ಧರ್ಮಾಧಾರಿತ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಅಖಂಡ ಬಾರತ ಎಂಬ ರಾಷ್ಪ್ರ  ಕಲ್ಪನೆಯನ್ನು ಸ್ಫಷ್ಟವಾಗಿ ಪ್ರತಿಪಾದಿಸಿದರು. ಬಾಬಾ ಸಾಹೇಬರು ಮತ್ತು ಸಾವರ್ಕರರ ನಡುವೆ ರಾಷ್ಟ್ರ ಧರ್ಮ ಮತ್ತು ಭವಿಷ್ಯದ ಭಾರತದ ಕುರಿತ ಚರ್ಚೆಗಳು ಮುಖಾಮುಖಿ ಸಂಭಾಷಣೆಯಲ್ಲಿ ಅಭಿವ್ಯಕ್ತವಾಗುತ್ತದೆ. ಚುರುಕು ಮಾತುಗಳು, ದೃಶ್ಯದಿಂದ ದೃಶ್ಯಕ್ಕೆ ಬದಲಾಗುವ ಸನ್ನಿವೇಶಗಳು, ಎಲ್ಲೂ ಬಿಗಿ ತಪ್ಪದ ಕಥಾ ನಿರೂಪಣೆ, ಪಕ್ಕ ಲೈಟಿಂಗ್ಸ್ (ತೀರ್ಥಳ್ಳಿ ಶಿವಕುಮಾರ್) ನಾಟಕದ ಹೈಲೆಟ್ಸ್. ಸುಮಾರು ೨ ಗಂಟೆ ೧೦ ನಿಮಿಷದ ನಾಟಕದಲ್ಲಿ ಪ್ರಮುಖವಾಗಿ ಇಡೀ ನಾಟಕ ಆವರಿಸಿಕೊಂಡಿರುವ  ಬಾಬಾಸಾಹೇಬರ ಪಾತ್ರವನ್ನು ಅಜಿತ್‌ಕುಮಾರ್ ಸಮರ್ಥವಾಗಿ ನಿಭಾಯಿಸಿದರು. ನಾಟಕದ ಇತರ ಕಲಾವಿದರು ನಾಟಕದ ಹಲವಾರು ಪಾತ್ರಗಳನ್ನು ಹಂಚಿಕೊಂಡರು. ಅಶೋಕ್‌ಗೌಡ ಅವರು ಸುಧಾಮ, ಅರುಣ್‌ಚಂದ್ರ ಗುಹಾ ಪಾತ್ರಗಳನ್ನು, ಉಡುಪಿ ಸರ್ವೇಶ್ ಅವರು ರತ್ತು,  ಮೆಹಬೂಬ್ ಆಲಿಬೇಗ್ ಪಾತ್ರಗಳನ್ನು, ಶರಣು ಯಳವಾರ ಅವರು ಬೋನ್ಸಲೆ, ಮಹಾವೀರ್ ತ್ಯಾಗಿ ಪಾತ್ರಗಳನ್ನು ಶಿವಕುಮಾರ್ ಅವರು ಶಂಕರಾನಂದ ಶಾಸ್ತ್ರೀ ಗಾಯಕ್‌ವಾಡ್, ಹೆಚ್.ವಿ.ಕಾಮತ್ ಪಾತ್ರಗಳನ್ನು, ಮನೋಜ್ ಅವರು ಅಮಿನ್ ಚಂದ್ ಗಾಂಧಿ, ಮೌಲಾನ ಆಶ್ರತ್ ಮೊಹಾನಿ ಪಾತ್ರಗಳನ್ನು, ಮಧು ಎಂ. ಕೇಶವ ಬಲಿರಾಮ್ ಹೆಡಗೆವಾರ್, ಡಾ. ಬಾಬು ರಾಜೇಂದ್ರ ಪ್ರಸಾದ್ ಪಾತ್ರಗಳನ್ನು, ಶ್ರೇಯಸ್ ವೆಂಕಟೇಶ್ ವೀರಸಾವರ್‌ಕರ್ ಪಾತ್ರ ಹಾಗೂ ಸಚಿನ್‌ರಾಜ ಅವರು ದತ್ತೋಪಂಥ ಶೇಂಗಡಿ, ಟಿ.ಟಿ.ಕೃಷ್ಣಮಾಚಾರಿ ಪಾತ್ರಗಳನ್ನು ನಿಭಾಯಿಸಿದರು. ಇದೇ ಕಲಾವಿದರು ನಾಟಕದಲ್ಲಿ ಬಂದು ಹೋಗುವ  ಗಾಂಧಿ ಭಕ್ತರು, ಸ್ವಯಂ ಸೇವಕರು ದಲಿತರ ಪಾತ್ರಗಳನ್ನು ನಿರ್ವಹಿಸಿದರು.  ಅನಿತಾ ಕಾರ್ಯಪ್ಪರವರು ನಾಟಕದ  ಸ್ತ್ರೀ ಪಾತ್ರಗಳು ಡಾ. ಸವಿತ ಅಂಬೇಡ್ಕರ್, ರಮಾದೇವಿ ಮತ್ತು ರೇಣುಕಾ ರೇ ಪಾತ್ರಗಳಲ್ಲಿ ಅಭಿನಯಿಸಿದರು. ರಘುಪ್ರಸಾದ್ ನೀನಾಸಮ್ ಅವರಿಂದ ಸ್ಕ್ರೀನ್  ಮೇಲೆ ಮೂಡಿಬಂದ ದೃಶ್ಯ ಚಿತ್ರ ದಾಖಲೀಕರಣ ಗಮನಾರ್ಹ.  ಗೊರೂರು ಅನಂತರಾಜು

“ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಜಮಹಾತ್ಮ ಬಾಬಾ ಸಾಹೇಬ” ನಾಟಕದ ಒಂದು ರಿವ್ಯು ಗೊರೂರು ಅನಂತರಾಜು ಅವರಿಂದ. Read Post »

ನಿಮ್ಮೊಂದಿಗೆ

ಡಾ ಡೋ ನಾ ವೆಂಕಟೇಶ ಅವರ “ಪ್ರೀತಿ-ಚಿಟ್ಟೆ”

ಕಾವ್ಯಸಂಗಾತಿ ಡಾ ಡೋ ನಾ ವೆಂಕಟೇಶ “ಪ್ರೀತಿ-ಚಿಟ್ಟೆ” ಯಾರೂ ಪ್ರೀತಿಸಲಾಗದಷ್ಟುಪ್ರೀತಿಸಿದೆ ನಿನ್ನಪ್ರೀತಿ ಮೇಲ್ಪಂಕ್ತಿಯಾದೆ ಪ್ರೀತಿಗೆ ನೀಸವಿಗೂಡಾದೆಜೇನಾದೆ! ಗೆಳೆಯ ಗುಂಪುಗಳು ಮುತ್ತಿಡುವ ಮುನ್ನ ನಿನ್ನ  ಚಿನ್ನ ,ನೀ ರಾಣಿ ಜೇನಾದೆಪದ ತಲಗಳಿಂದಗುಯ್ ಗುಡುವ ಗಾನವಾದೆ ಹೃದಯಕ್ಕೆ ಹಾಡಾದೆಹಾರಾಡುವ ಹರಿಣಿಯಾದೆಬಣ್ಣದ ಪಾತರಗಿತ್ತಿಯೂ ನೀನಾದೆ ಕಡೆಗೆ. ಕಂಬಳಿ ಹುಳಗಳಿಂದ ಬಂದಿದ್ದ ಮರೆತೆನೀ ಹುಟ್ಟಿದ ಹಾದಿ ಮರೆತೆ ಮೆರೆದಾಡಿದೆ ಪ್ರೀತಿ ನೀಬಟರ್ ಫ್ಲೈ ಆದೆ ಮುಟ್ಟಿದವರಿಗೆಅಂಟಿಕೊಂಡೆ,ಶಾಖಕ್ಕೆ ಕರಗಿ ಹೋದೆ ನೀ!ಪ್ರೀತಿ ಹೀಗೆನೀ ಅಲ್ಪಾವಧಿಯ ಚಿಟ್ಟೆಯಾದೆಸ್ಪರ್ಶಿದರೆ ಬಣ್ಣದಿಂದ          ಧರಾಶಾಯಿಯಾದೆ ಪ್ರೀತಿನೀ ಹೀಗೂ ಹಾಗೂ  ಮರೆತೆಅಮರಳಾದೆ! ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ ಅವರ “ಪ್ರೀತಿ-ಚಿಟ್ಟೆ” Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ-30 ಸುಜಾತಾ ರವೀಶ್ ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೩೦ ಬುಕ್ ಮಾಡಿದ್ದ ಬೈಕ್ ಬಂದಿದ್ದು ಅಷ್ಟರೊಳಗೆ ಪರ್ಮನೆಂಟ್ ಲೈಸೆನ್ಸ್ ಸಹ ಸಿಕ್ಕಿತ್ತು . ಆದರೆ ನನಗೆ ಗಾಡಿ ಓಡಿಸಲು ಬರುತ್ತಿರಲಿಲ್ಲ. ಬೈಕ್ ಪೂಜೆ ಮಾಡಿಸಿ ಮೈಸೂರಿನಿಂದ ರವೀಶ್ ಬೈಕ್ ಓಡಿಸಿಕೊಂಡು ಸಕಲೇಶಪುರಕ್ಕೆ ಬಂದಿದ್ದರು. ಕೆಲವೊಮ್ಮೆ ಹಾಗೆ ಶುಕ್ರವಾರ ಸಕಲೇಶಪುರಕ್ಕೆ ಬರುತ್ತಿದ್ದರು ಶನಿವಾರ ಮಧ್ಯಾಹ್ನ ಆಫೀಸ್ ಮುಗಿದ ನಂತರ ಅವರ ಊರಿಗೆ ಬೈಕ್ ನಲ್ಲೆ ಹೋಗುತ್ತಿದ್ದೆವು. ಕೆಲವೊಮ್ಮೆ ಅವರು ಮೊದಲೇ ಬಂದು ಮೈಸೂರಿಗೆ ಸಹ ಬೈಕ್ ನಲ್ಲಿ ನಾಲ್ಕು ಐದು ಬಾರಿ ಬಂದಿದ್ದೇವೆ .ಹಾಗೆ ಬರುವಾಗ ಒಮ್ಮೆ ಸಕಲೇಶಪುರದಿಂದ ರಾಮನಾಥಪುರದ ಬಳಿ ಇರುವ ಇವರ ಊರಿನ ತನಕವೂ ಒಂದೇ ಸಮ ಮಳೆ. ಪಕ್ಕದಲ್ಲಿ ನದಿ ಹರಿಯುತ್ತಿದ್ದು ಆ ಅನುಭವ ಇಂದಿಗೂ ಮರೆಯಲಾಗದಷ್ಟು ಮನಸ್ಸಿನಲ್ಲಿ ನಿಂತುಬಿಟ್ಟಿದೆ.ಇನ್ನು ಸಕಲೇಶಪುರದ ಮಳೆಯ ಬಗ್ಗೆ ಹೇಳದಿದ್ದರೆ ಖಂಡಿತ ಆಗುವುದಿಲ್ಲ. ಜೂನ್ ತಿಂಗಳಿನಲ್ಲಿ ಆರಂಭವಾಗುವ ಮಳೆ ಕೆಲವೊಮ್ಮೆ ರಭಸ ಕೆಲವೊಮ್ಮೆ ಮೆತ್ತಗೆ ಅಷ್ಟೇ ದಿನವಿಡೀ ಸುರಿಯುತ್ತಲೇ ಇರುತ್ತಿತ್ತು ಮಳೆ ಅಂದರೆ ಪ್ರಾಣ ಬಿಡುವ ನನಗಂತೂ ಅಲ್ಲಿದ್ದ ಎರಡು ವರ್ಷವೂ ಒಂದು ರೀತಿ ಖುಷಿ ಕೊಟ್ಟಿತ್ತು. ಆದರೆ ಬಟ್ಟೆಗಳು ಒಣಗುತ್ತಿರಲಿಲ್ಲ ಒರೆಸಿಕೊಂಡ ಟವಲ್ ಹರವದಿದ್ದರೆ ಸಂಜೆಯ ವೇಳೆಗೆ ಕಪ್ಪಗೆ ಬೂಸ್ಟು ಬರುತ್ತಿತ್ತು .ಸಾಮಾನುಗಳಂತೂ ಸ್ವಲ್ಪವೇ ತೆಗೆದುಕೊಂಡು ಬರಬೇಕಿತ್ತು. ಅಕಸ್ಮಾತ್ ಊರಿಗೆ ಹೋಗಿ ಬಿಟ್ಟರೆ ಬರುವ ವೇಳೆಗೆ ಅವೆಲ್ಲ ಬೂಸ್ಟ್ ಹಿಡಿದದ್ದೇ ಹೌದು. ತರಕಾರಿಗಳು ಅಷ್ಟೇ ಆಗ ಫ್ರಿಜ್ ಸಹ ಇರಲಿಲ್ಲ .ತಂದ ತರಕಾರಿಗಳನ್ನು ಕ್ಲೀನಾಗಿ ಒರೆಸಿ ಒಂದಕ್ಕೊಂದು ತಾಗದಂತೆ ಹರವಿ ಇಟ್ಟರೆ ಬಚಾವ್. ಇಲ್ಲದಿದ್ದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬೆಳ್ಳನೆಯ ಬೂಸ್ಟು ಅವುಗಳನ್ನು ಅಲಂಕರಿಸಿ ಬಿಟ್ಟಿರುತ್ತಿತ್ತು.ಆ ಮಳೆಯ ಆರ್ಭಟಕ್ಕೆ ಎಲ್ಲೋ ಬಿದ್ದ ಮರ ವಿದ್ಯುತ್ ತಂತಿ ಕಟ್ಟಾಗಿ ದಿನವಿಡೀ ಏನು! ವಾರವಿಡೀ ವಿದ್ಯುತ್ ಸರಬರಾಜು ಬಂದಾಗುತ್ತಿತ್ತು. ಆಗೆಲ್ಲಾ ನೀರು ಹೊತ್ತು ಹೊತ್ತು ಸಾಕಾಗುತ್ತಿತ್ತು. ಮಹಡಿಯ ಮೇಲಿನ ಮನೆ ಎಂದು ಹೇಳಿದ್ದೆ ಅಲ್ಲವೇ ಆ ಮೆಟ್ಟಲುಗಳು ಸಹ ಪಾಚಿ ಕಟ್ಟಿಕೊಂಡು ಬಿಡುತ್ತಿದ್ದವು. ಸದ್ಯ ಒಂದು ಬಾರಿಯೂ ಬಿದ್ದಿಲ್ಲ ಅದು ನನ್ನ ಪುಣ್ಯ.ಈ ಎಲ್ಲಾ ತೊಂದರೆಗಳ ಮಧ್ಯೆಯೂ ಆ ಜಿಟಿ ಜಿಟಿ ಸುರಿಯುವ ಮಳೆಯ ಸದ್ದು ಒಂದು ರೀತಿ ಜೋಗುಳದ ಹಾಗೆ ಕೇಳಿಸುತ್ತಿತ್ತು. ಸದಾ ಕಚೇರಿಗೆ ಹೋಗುವಾಗ ಬರುವಾಗ ಛತ್ರಿ ಎಡೆಬಿಡದ ಆಪ್ತ ಸಂಗಾತಿಯಾಗಿ ಬಿಟ್ಟಿತ್ತು. ಆದರೆ ಮೈಸೂರಿನಲ್ಲಿ ಇದ್ದಾಗ ಆಗಾಗ ಕಾಡುತ್ತಿದ್ದ ಮೈಗ್ರೇನ್ ಸಕಲೇಶಪುರಕ್ಕೆ ಹೋದಮೇಲೆ ಎಲ್ಲೋ ಮಾಯವೇ ಆಗಿಬಿಟ್ಟಿತ್ತು . ಆ ಚಳಿ ಪ್ರದೇಶದಲ್ಲಿ ತಲೆನೋವು ಇನ್ನೂ ಹೆಚ್ಚಾಗಬಹುದು ಎಂದ ಎಂದು ಹೆದರಿದ್ದ ನನಗೆ ಇದೊಂದು ನಿರಾಳತೆ.ಊರಿನಿಂದ ಆಚೆ ಒಂದೆರಡು ಕಿಲೋಮೀಟರ್ ಹೋದರೆ ಸಾಕಿತ್ತು ಕಣ್ಣಿಗೆ ರಾಚುವಷ್ಟು ಹಸಿರು .ತುಂಬಾ ಸುಂದರ ವಾತಾವರಣ ಬೈಕಿನಲ್ಲಿ ಸುತ್ತೆಲ್ಲಾ ಓಡಾಡಿದ್ದೆವು.ಹೀಗೆ ಬಂದು ಶನಿವಾರ ಸುಲೋಚನಾ ಅವರು ಮೈಸೂರಿಗೆ ಹೋಗಿದ್ದರು. ರವೀಶ್ ಸಕಲೇಶಪುರಕ್ಕೆ ಬಂದು ನಾವು ಧರ್ಮಸ್ಥಳ ಸುಬ್ರಹ್ಮಣ್ಯಕ್ಕೆ ಹೋಗುವ ಪ್ರೋಗ್ರಾಮ್ ಆಗಿತ್ತು ಆದರೆ ಆ ಬುಧವಾರವೇ ನನಗೆ ಮದ್ರಾಸ್ ಐ ಬಂದು ವಕ್ಕರಿಸಿ ಬಿಟ್ಟಿತ್ತು. ಆಫೀಸಿನ ಬಳಿಯೇ ಇದ್ದ ಒಂದು ಡಾಕ್ಟರ್ ಶಾಪ್ ಗೆ ತೋರಿಸಿ ಔಷಧಿ ಅಯಿಂಟ್ಮೆಂಟ್ ತೆಗೆದುಕೊಂಡಿದ್ದೆ. ಅದೇನೋ ಭಂಡ ಧೈರ್ಯದಲ್ಲಿ ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿ ಬಸ್ಸಿನಲ್ಲೇ ಧರ್ಮಸ್ಥಳಕ್ಕೆ ಹೋಗಿ ಬಂದಿದ್ದೆವು. ಅಲ್ಲೇ ಒಂದು ಮೂಲೆಯಲ್ಲಿ ಕುಟೀರದಂತೆ ಇದ್ದ ಹೋಟೆಲ್ ನಲ್ಲಿ ತಿಂದ ಮಂಗಳೂರು ಬಜ್ಜಿಯ ರುಚಿ ಇನ್ನು ಸ್ಮೃತಿ ಪಟಲದಲ್ಲಿ ಹಸಿರಾಗಿಯೇ ಇದೆ. ಅಲ್ಲಿ ದರ್ಶನ ಮುಗಿಸಿ ಸುಬ್ರಹ್ಮಣ್ಯಕ್ಕೆ ಬಂದು ಸಂಜೆಯ ವೇಳೆಗೆ ಸಕಲೇಶಪುರಕ್ಕೆ ವಾಪಸಾಗಿದ್ದೆವು. ಸುಬ್ರಹ್ಣಣ್ಯದ ಅವಲಕ್ಕಿ ತುಂಬಾ ಫೇಮಸ್. ತುಂಬಾ ರುಚಿಕರ ಕೂಡ. ಕಟ್ಡಿಸಿಕೊಂಡು ಬಂದಿದ್ದೆವು.ಒಂದು ಬಾರಿ ಮೈಸೂರಿಗೆ ಬಂದಾಗ ಅಮ್ಮನನ್ನು ಸ್ವಲ್ಪ ದಿನ ಇರಲು ಕರೆದುಕೊಂಡು ಬಂದಿದ್ದೆ ಬೆಂಗಳೂರಿಗೆ ಹೋಗಿದ್ದ ನಮ್ಮ ತಂದೆ ಅಲ್ಲಿಂದ ನೇರವಾಗಿ ಬಂದರು. ನಮ್ಮ ಸುಮಿತ್ರ ದೊಡ್ಡಮ್ಮ ಅವರ ಪತಿ ಶಿವಾನಂದ್ ದೊಡ್ಡಪ್ಪ ಸಹ ಬಂದು ನಮ್ಮೊಡನೆ ಹದಿನೈದು ದಿನಗಳ ಕಾಲ ಇದ್ದಿದ್ದು ನಿಜಕ್ಕೂ ಮರೆಯಲಾಗದ ಒಂದು ಸುಂದರ ನೆನಪು.ಬಂದು ರಿಪೋರ್ಟ್ ಮಾಡಿಕೊಂಡ ಮಾರನೆಯ ದಿನವೇ ಅಲ್ಲೇ ಮುಖ್ಯರಸ್ತೆಯಲ್ಲಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ 2 ಸದಸ್ಯ ಕಾರ್ಡುಗಳನ್ನು ಮಾಡಿಸಿಕೊಂಡಿದ್ದೆವು ಅಲ್ಲಿನ ಗ್ರಂಥಪಾಲಕರು ಚಂದ್ರಶೇಖರ್ ಧೂಲೇಕರ್ ಅನ್ನುವವರು. ಅವರು ಸಹ ಲೇಖಕರು. ನಮ್ಮ ಆಸಕ್ತಿ ನೋಡಿ ಅವರಿಗೂ ಖುಷಿಯಾಗಿತ್ತು. ಕೆಲವೊಮ್ಮೆ  ಪೇಯಿಂಗ್ ಗೆಸ್ಟ್ ನಲ್ಲಿ ಇದ್ದಾಗ ಮಾಡಲು ಬೇರೆ ಕೆಲಸವಿಲ್ಲದೆ ಓದುವುದೊಂದೇ ಹವ್ಯಾಸ. ಪ್ರತಿದಿನ ಪುಸ್ತಕ ಬದಲಾಯಿಸಿ ಕೊಂಡು ಬರುತ್ತಿದ್ದೆವು.  ಬಹಳಷ್ಟು ಪುಸ್ತಕಗಳನ್ನು ಅಲ್ಲಿ ಓದಿದ್ದೇವೆ. ಹಾಗೆಯೇ ಕಚೇರಿಯ ನಿಯತಕಾಲಿಕೆಗಳು ಸಹ ಬಸ್ಟ್ಯಾಂಡ್ ಎದುರಿಗೆ ಇದ್ದ ಒಂದು ಗೂಡಿನ ಅಂಗಡಿಯಿಂದ ತೆಗೆದುಕೊಳ್ಳುತ್ತಿದ್ದು ಒಂದು ಪುಸ್ತಕ ಇಟ್ಟು ಅದರಲ್ಲಿ ಎಂಟ್ರಿ ಮಾಡಿಸಿ ಸಹಿ ಹಾಕುತ್ತಿದ್ದು ಅಷ್ಟೇ, ಅಲ್ಲಿಯೂ ಬಹಳ ಜನ ಪುಸ್ತಕ ಓದುತ್ತಿದ್ದು ಒಂದು ರೀತಿ ಸಾಹಿತ್ಯಕ ವಾತಾವರಣ ಇತ್ತು. ಇನ್ನು ಸುಲೋಚನಾ ನಾನು ಅಂತೂ ಸರಿ ಒಂದೇ ತರಹದ ಪುಸ್ತಕದ ಹುಳುಗಳು ತುಂಬಾ ಚೆನ್ನಾಗಿತ್ತು. ಈ ವಿಷಯದಲ್ಲಿ ನಿಮ್ಮಿಬ್ಬರಿಗೂ ಒಂದೇ ಗುಣ ಎಂದು ಹೇಳಿ ಪದೋನ್ನತಿ ತೆಗೆದುಕೊಳ್ಳಲು ಕಾರಣರಾದ ಟಿ ಎಂ ಪರಶಿವಮೂರ್ತಿಯವರಿಗೆ ಧನ್ಯವಾದಗಳನ್ನು ತಿಳಿಸಲೇ ಬೇಕು.ಸುಲೋಚನಾ ಅವರು ಅಷ್ಟೇ ತುಂಬಾ ಹೊಂದಾಣಿಕೆಯ ಗುಣದವರು. ನಮ್ಮಿಬ್ಬರಿಗೂ ಒಂದೇ ಒಂದು ಬಾರಿಯಾದರೂ  ಬಿನ್ನಾಭಿಪ್ರಾಯ ಬರಲಿಲ್ಲ. ಕಡೆಯವರೆಗೂ ಮೊದಲ ದಿನದ ಸ್ನೇಹ ಮುಂದುವರೆದುಕೊಂಡು ಬಂದಿತು. ನಿಜಕ್ಕೂ ಅವರ ಅಗಲಿಕೆ ನನಗಂತೂ ಒಂದು ತುಂಬಲಾರದ ನಷ್ಟ .ಇದುವರೆಗೂ ಅವರ ಬಗ್ಗೆ ಬರೆಯಲೇ ಸಾಧ್ಯವಾಗಿರಲಿಲ್ಲ ಈಗಲೇ ಅವರ ವಿಷಯ ಕಣ್ಣೀರಿಲ್ಲದೆ ಬರೆಯಲು ಸಾಧ್ಯವಾಗುತ್ತಿರುವುದು.ನಮ್ಮ ಮನೆಯಿದ್ದ ಕುಶಾಲನಗರ ಬಡಾವಣೆ ಎತ್ತರದಲ್ಲಿ ಇದ್ದುದರಿಂದ ಊರಿನ ದೇವಸ್ಥಾನ ನದಿ ತೀರ ಎಲ್ಲಾ ಕಿಟಕಿಯಿಂದಲೇ ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು ಆ ಹಸಿರು ಮೇಲೆ ಜಿಟಿಪಿಟಿ ಮಳೆ ಕಿಟಕಿಯ ಬಳಿ ಕುಳಿತರೆ ಸಾಕು ಒಳ್ಳೆಯ ಸುಮನೋಹರ ದೃಶ್ಯ.ಅಲ್ಲಿದ್ದಾಗಲೇ ಸೆಪ್ಟೆಂಬರ್ 1998ರಲ್ಲಿ ನನ್ನ ತಂಗಿ ವೈಶಾಲಿಯ ಮಗ ನಿಶ್ಚಯ್ ಹುಟ್ಟಿದ್ದು ಆ ಸಮಯದಲ್ಲಿ ನಾನು 15 ದಿನ ರಜೆ ಹಾಕಿ ಮೈಸೂರಿಗೆ ಬಂದಿದ್ದೆ. ನಮ್ಮ ಮನೆಯ ಮೊಟ್ಟ ಮೊದಲ ಮೊಮ್ಮಗು ಅವನು ಎಲ್ಲರಿಗೂ ತುಂಬಾ ಖುಷಿಯಾಗಿತ್ತು. ಗರ್ಭಿಣಿಯಾಗಿದ್ದಾಗ ವೈಶಾಲಿ ಒಮ್ಮೆ ಅವಳ ಪತಿಯೊಂದಿಗೆ ಬೈಕ್ ನಲ್ಲೆ ಸಕಲೇಶಪುರಕ್ಕೆ ಬಂದಿದ್ದಳು ಎಲ್ಲರಿಂದ ಬೈಗುಳಗಳನ್ನು ತಿಂದಿದ್ದಳು.ಇನ್ನು ಫೆಲೋಶಿಪ್ ಪರೀಕ್ಷೆಗಳ ವಿಷಯಕ್ಕೆ ಬಂದರೆ ಓದಲು ಮನಸೇ ಬಂದಿರಲಿಲ್ಲ ಆದರೆ ಮೂರು ಪರೀಕ್ಷೆಗಳನ್ನು ತೆಗೆದುಕೊಂಡಾಗ ಮಧ್ಯೆ ಸಕಲೇಶಪುರಕ್ಕೆ ಹೋಗಲು ಸಾಧ್ಯವಿರದ ಕಾರಣ ರಜೆ ಸಿಗುತ್ತಿತ್ತು ಹಾಗಾಗಿ ಒಂದು ವಾರ ಮೈಸೂರಿನಲ್ಲಿ ಇರಬಹುದು ಎಂಬ ಆಸೆಗೆ ಅಲ್ಲಿದ್ದ ಎರಡು ವರ್ಷವೂ ನಾಮಕಾವಸ್ತೆಗೆ ಪರೀಕ್ಷೆ ತೆಗೆದುಕೊಂಡು ಬಂದು ಅರ್ಧ ಗಂಟೆ ಪರೀಕ್ಷೆ ಅಟೆಂಡ್ ಮಾಡಿ ವಾಪಸ್ ಹೋಗುತ್ತಿದ್ದುದು.ಹೀಗೇ ನಡೆದುಕೊಂಡು ಹೋಗುವಾಗ ನಾವಿದ್ದ ಮನೆಯ ಓನರ್ ರಾಜಮ್ಮ ಅವರ ಕಿರಿಕ್ ಆರಂಭವಾಯಿತು ಯಾರೋ ಅವರಿಗೆ ಆಫೀಸಿನಿಂದ ಮನೆಯನ್ನು ಲೀಸ್ ಮಾಡಿಸಿದರೆ ಎಲ್ ಐ ಸಿ ಇಂದಲೇ ಬಾಡಿಗೆ ಪಾವತಿ ಆಗುತ್ತದೆ. ಈಗ ಇರುವವರು ಬಿಟ್ಟರೂ ತಕ್ಷಣ ಮತ್ತೆ ಎಲ್ಐಸಿಯವರೆ ಬರಬಹುದು ಎಂಬ ವಿಷಯ ತಿಳಿದಿತ್ತು .ಹಾಗಾಗಿ ಮನೆಯನ್ನು ಲೀಸ್ ಮಾಡಿಸಿ ಎಂದು ಒಂದೇ ವರಾತ ಹಚ್ಚಿದರು. ಹಾಗೆ ಲೀಸ್ ಮಾಡಿಸಿದರೆ ನಮಗೆ ತೊಂದರೆ ಆಗುತ್ತಿತ್ತು. ನಾವು ಕೊಡುವ ಬಾಡಿಗೆಗಿಂತ ಮನೆಭತ್ಯ ಹೆಚ್ಚು ಬರುತ್ತಿತ್ತು .ಆರ್ಥಿಕವಾಗಿ ನಷ್ಟವಾಗುತ್ತಿತ್ತು. ಆದರೆ ಅವರಿಗೆ ಬರುವ ಹಣಕ್ಕಂತೂ ಏನು ವ್ಯತ್ಯಯ ಆಗುತ್ತಿರಲಿಲ್ಲ ನಾವು ಕೊಟ್ಟರೆ ಏನು ಎಲ್ಐಸಿ ಇಂದ ಬಂದರೆ ಏನು? ಆದರೆ ಆಕೆ ಕೇಳಲೇ ಸಿದ್ಧವಿರಲಿಲ್ಲ. ಲೀಸ್ ಮಾಡಿಸದಿದ್ದಲ್ಲಿ ಮನೆ ಬಿಟ್ಟುಬಿಡಿ ಎಂದು ಖಡಾ ಖಂಡಿತವಾಗಿ ಹೇಳಿದರು .ಮತ್ತೆ ಮಾಡುವುದೇನು ಬೇರೆ ಮನೆಯ ಹುಡುಕಾಟಕ್ಕೆ ತೊಡಗಿದೆವು. ಈ ಬಾರಿ ರವೀಶ್ ಅವರೇ ಬಂದು ಮನೆ ಹುಡುಕಲು ಸಹಾಯ ಮಾಡಿದರು.ಸಕಲೇಶಪುರದ ದೇವಸ್ಥಾನದ ಬೀದಿ ಸಂತೆಗೆ ಹತ್ತಿರದ ಗಾಯತ್ರಿ ಟೆಂಟ್ ಪಕ್ಕದ ಬಿಲ್ಡಿಂಗ್. ಮುಖ್ಯರಸ್ತೆಯಲ್ಲಿ ಬೇಕರಿ ನಡೆಸುತ್ತಿದ್ದವರು ಈ ಮನೆಯನ್ನು ಕಟ್ಟಿಸಿದ್ದರು .ಎರಡನೆಯ ಅಂತಸ್ತಿನಲ್ಲಿ ಎರಡು ಮನೆಗಳು. ಎದುರು ಬದುರು. ಅದರಲ್ಲಿ ಬೀದಿಯ ಕಡೆಗೆ ಮುಖ ಮಾಡಿದ ಮನೆಗೆ ನಾವು ಹೋಗುವುದು ಎಂದು ನಿರ್ಧಾರವಾಯಿತು ಹೊಸ ಮನೆ ಚೆನ್ನಾಗಿತ್ತು. ಹೋಗುತ್ತಲೇ ಇದ್ದ ಹಾಲ್ ವರಾಂಡದಷ್ಟೇ ಚಿಕ್ಕದಿತ್ತು .ಒಂದು ರೂಮ್ ಸ್ವಲ್ಪ ಪರವಾಗಿಲ್ಲ ಅಡುಗೆ ಮನೆ ಮಾತ್ರ ಹಾಲ್ ನಷ್ಟೇ ದೊಡ್ಡದಾಗಿ ಇತ್ತು. ಪಾತ್ರೆ ತೊಳೆಯಲು ಸಿಂಕ್ ಕಟ್ಟೆ ಎಲ್ಲಾ ಒಂದು ರೀತಿ ಚೆನ್ನಾಗಿ ಅನುಕೂಲಕರವಾಗಿ ಈಗಿರುವ ಮನೆಗಿಂತ ಚೆನ್ನಾಗಿಯು ಇತ್ತು. ಮೈಸೂರಿನಿಂದ ಬರುವಾಗ ದೇವಸ್ಥಾನದ ಬಳಿಯೇ ತಿಳಿದುಕೊಂಡರೆ ಮನೆಗೆ ಹೋಗಿ ನಂತರ ಆಫೀಸಿಗೆ ಬರಲು ಅನುಕೂಲವಾಗಿತ್ತು. ಇಲ್ಲಿ ಕೊಡುತ್ತಿದ್ದಷ್ಟೇ ಬಾಡಿಗೆ ಅಷ್ಟೇ ಅಡ್ವಾನ್ಸ್ ಇದ್ದಿದ್ರಿಂದ ಆರ್ಥಿಕವಾಗಿಯೂ ಏನು ತೊಂದರೆ ಅನಿಸಲಿಲ್ಲ. ಮನೆ ಬಿಡುತ್ತೇವೆ ಎಂದು ಹೇಳಿದಾಗ ಆಕೆಗೆ ಒಂದು ತರಹ ಆಯಿತು ನಾವು ಅವಳು ಹೇಳಿದಂತೆ ನಡೆಯಲಿಲ್ಲ ಎಂದು ಬೇಸರ ಇದ್ದರೂ ತೋರ್ಪಡಿಸಿಕೊಳ್ಳದೆ ಅಡ್ವಾನ್ಸ್ ಅನ್ನು ಸಕಾಲಕ್ಕೆ ಕೊಟ್ಟು ಸಹಕರಿಸಿದರು ಪಾಪ. ಆದರೆ ಅವರ ಲೆಕ್ಕಾಚಾರ ತಪ್ಪಿತಲ್ಲ  ನಮಗೆ ಬೇಗ ಮನೆ ಸಿಕ್ಕಿತಲ್ಲ ಅದು ನಮ್ಮ ಪುಣ್ಯ. ಈ ಮನೆಗೆ ರಸ್ತೆಯ ಕಡೆ ಒಂದು ಸಣ್ಣ ಬಾಲ್ಕನಿ ಸಹ ಇದ್ದು ಸಂಜೆಯ ವೇಳೆ ಕುಳಿತುಕೊಳ್ಳಲು ಅಲ್ಲೇ ಕುಳಿತು ಓದಲು ಎಲ್ಲಾ ಅನುಕೂಲವಿತ್ತು. ಆದರೆ ಕರೆಂಟು ಇಲ್ಲದಿದ್ದಾಗ ಮಾತ್ರ ಎರಡೆರಡು ಅಂತಸ್ತು ನೀರು ಬರಬೇಕಾಗಿದ್ದು ಮಾತ್ರ ದೊಡ್ಡ ಪನಿಶ್ಮೆಂಟ್. 3 _ 4 ಬಾರಿ ಆ ರೀತಿ ವಿದ್ಯುತ್ ನಿಲುಗಡೆಯಾಗಿ ನೀರು ಹೊರುವಂತಾಗಿತ್ತು. ಈ ಸಮಯದಲ್ಲಿ ನಮ್ಮ ತಂದೆಯವರಿಗೆ 60 ವರ್ಷ ತುಂಬಿತು ಷಷ್ಠ್ಯಬ್ದಿ ಸಮಾರಂಭವನ್ನು ಸಹ ಮೈಸೂರಿನಲ್ಲಿ ನಾವು ಮೂರು ಜನ ಅಕ್ಕ-ತಂಗಿಯರು ಸೇರಿ ಆಚರಿಸಿದೆವು. ವೈಶಾಲಿ ಆಗ ೩ ತಿಂಗಳ ಬಾಣಂತಿ. ನಮ್ಮ ತಾಯಿಗಂತೂ ತುಂಬಾ ಸಂತೋಷವಾಗಿತ್ತು.ಆನಂತರ ನಿಶ್ಚಯ್ ನಾಮಕರಣ. ಹೀಗೆ ಒಂದರ ಹಿಂದೊಂದು ಶುಭ ಸಮಾರಂಭಗಳು ನಡೆಯುತ್ತಿದ್ದವು. ನಮ್ಮ ಸೋದರತ್ತೆಯ ಮಗ ಶ್ರೀನಾಥನ ಮದುವೆ  ಆಗಲೇ ನಡೆದದ್ದು. ಆ ಸಮಯದಲ್ಲಿ ನಮಗೆ ಆಡಿಟ್ ನಡೆಯುತ್ತಿದ್ದುದರಿಂದ ನಾನು ಮದುವೆಗೆ ಹೋಗಲಾಗಲಿಲ್ಲ. ಸೋದರಮಾವ ಸೋಮುಮಾವನ ಮಗಳು ನಂದಿನಿ ಮದುವೆಗೆ ಅಮ್ಮ ಹೋಗಲೇಬೇಕಿತ್ತು. ನನ್ನ ತಂಗಿ ಬಾಣಂತಿ. ನಾನು ರಜೆ ಹಾಕಿ ಮೈಸೂರಿಗೆ ಹೋಗಿ ಅಮ್ಮನನ್ನು ಮದುವೆಗೆ ಕಳಿಸಿದೆ.ಚಿಕ್ಕಪ್ಪನ ಮಗ ಸಂಜೀವನ ಮದುವೆ ಬೆಂಗಳೂರಲ್ಲಿ ಆಯಿತು. ಶನಿವಾರ ಮಧ್ಯಾಹ್ನ ಆಫೀಸು ಮುಗಿಸಿ ಹೊರಟಿದ್ದು. ಗೊತ್ತಾಗದೆ ಷಟಲ್ ಬಸ್ನಲ್ಲಿ ಕೂತು ತಡವಾಗಿ ಬೆಂಗಳೂರು ತಲುಪಿದ್ದೊಂದು ದೊಡ್ಡ ಸಾಹಸ. ನಮ್ಮ ನಿಗಮದಲ್ಲಿ ಹೊಸದಾಗಿ ಪದೋನ್ನತಿ ಹೊಂದಿದವರಿಗೆ ತರಬೇತಿ ಕಾರ್ಯಕ್ರಮ ಇರುತ್ತದೆ .ಹೀಗಾಗಿ ನನಗೆ 25 5 98 ರಿಂದ 28 5 98ರ ವರೆಗೆ ಹೈದರಾಬಾದಿನ ಡೆಕ್ಕನ್ ಕಾಂಟಿನೆಂಟಲ್ ಹೋಟೆಲ್ ನಲ್ಲಿ ತರಬೇತಿಗೆ ಕರೆ ಬಂದಿತ್ತು .ನನ್ನೊಂದಿಗೆ ನಂದ ಶ್ರೀ ಕಟ್ಟಿ ಅಂದರೆ ಈ ಮುಂಚೆ ವಿಭಾಗೀಯ ಕಚೇರಿಯಲ್ಲಿ ನನ್ನ ಜೊತೆಗಿದ್ದ ನನ್ನದೇ ಬ್ಯಾಚ್ನ ಗೆಳತಿ. ಅವಳಿಗೆ ಮದುವೆಯಾಗಿ ಬೆಳಗಾವಿಗೆ

Read Post »

You cannot copy content of this page

Scroll to Top