ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಸ್ತ್ರೀವಾದ…. ಹೊರಳದಿರಲಿ ವಿಘಟನೆಯತ್ತ ! ವೀಣಾ ಹೇಮಂತ್‌ ಗೌಡ ಪಾಟೀಲ್

ಮಹಿಳಾ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಸ್ತ್ರೀವಾದ…. ಹೊರಳದಿರಲಿ ವಿಘಟನೆಯತ್ತ !   ಗೃಹಿಣಿ ಎಂದೊಡನೆ ನಮ್ಮ ಕಣ್ಣ ಮುಂದೆ ಬರುವುದು ಅಂದವಾದ ಸೀರೆ, ಚಂದದ ಕುಪ್ಪಸ ತೊಟ್ಟ, ಜಡೆ ಹೆಣೆದು ತಲೆಯಲ್ಲಿ ಹೂ ಮುಡಿದು,ಹಿತ ಮಿತವಾದ ಅಲಂಕಾರ, ಹಣೆಯಲ್ಲಿ ಕುಂಕುಮದ ಬೊಟ್ಟಿಟ್ಟ ಹೆಣ್ಣು ಮಗಳ ಚಿತ್ರ ಕಣ್ಣ ಮುಂದೆ ಬರುತ್ತದೆ . ಕೊರಳಲ್ಲಿ ಗಂಡ ಕಟ್ಟಿದ ತಾಳಿ, ಕೈಗಳಲ್ಲಿ ಹಸಿರು ಕೆಂಪು ಬಳೆಗಳು, ಕಿವಿಯೋಲೆ ಮತ್ತು ಕಾಲಲ್ಲಿ ಬೆಳ್ಳಿಯ ಕಾಲ್ಗೆಜ್ಜೆ ಮತ್ತು ಕಾಲುಂಗುರಗಳು ಆಕೆಯ ಬಾಹ್ಯಆಭೂಷಣಗಳಾದರೆ ಹಿರಿಯರಿಗೆ ಕೊಡುವ ಗೌರವ, ಗಂಡನಲ್ಲಿ ಪ್ರೀತಿ, ಮಕ್ಕಳ ಮೇಲೆ ಮಮತೆ ಮತ್ತು ಮನೆಗೆ ಬಂದು ಹೋಗುವ ಅತಿಥಿಗಳಲ್ಲಿ ಪ್ರೀತ್ಯಾದರ ತೋರುವ ಹೆಣ್ಣು ಮಗಳು ಮನೆಯ ಕಳೆಯನ್ನು ಹೆಚ್ಚಿಸುತ್ತಾಳೆ. ಅದೆಷ್ಟೇ ಕಾಲ ಬದಲಾಗಿದ್ದರು ಕೂಡ ಹೆಣ್ಣುಮಕ್ಕಳು ಸ್ತ್ರೀತ್ವದ ಪ್ರತೀಕವಾಗಿ, ಮಮತೆ ವಾತ್ಸಲ್ಯಗಳ ಪ್ರತಿರೂಪವಾಗಿ ಹುಟ್ಟಿದ ತವರುಮನೆ ಮತ್ತು ಮೆಟ್ಟಿದ ಗಂಡನ ಮನೆ ಎರಡನ್ನೂ ಸಂಭಾಳಿಸಿಕೊಂಡು ಹೋಗುವಲ್ಲಿ ನಿಷ್ಣಾತೆ. ನೂರಾರು ವರ್ಷಗಳು ಸಂದು ಹೋದರೂ ಅಮ್ಮ ಎಂದರೆ ಆಡಿ ಬಂದ ತನ್ನ ಮಗುವಿನ ಮುಖವನ್ನು ಸೀರೆಯ ಸೆರಗಿನಿಂದ ಒರೆಸಿ ಮುದ್ದಿಡುವ ತಾಯಿಯೇ ನೆನಪಾಗುತ್ತಾಳೆ. ಈಗ ಕಾಲ ಬದಲಾಗಿದೆ, ಅಮ್ಮನ ದಿರಿಸು ಬದಲಾಗಿದೆ… ನಿಜ ಆದರೆ ತಾಯಿಯ ಮಮತೆ, ಪ್ರೀತಿ ಮಾತ್ರ ಯಾವತ್ತೂ ನಿತ್ಯಹರಿದ್ವರ್ಣ ಕಾಡಿನಂತೆ.  ಆದರೆ ಇತ್ತೀಚಿನ ದಿನಗಳಲ್ಲಿ ಸ್ತ್ರೀ ಸ್ವಾತಂತ್ರ್ಯದ ಹೆಸರಿನಲ್ಲಿ, ವೈಯುಕ್ತಿಕ ಸ್ವೇಚ್ಚೆಯ ಹುಚ್ಚಿನಲ್ಲಿ ಸ್ತ್ರೀವಾದ ವಿಘಟನೆಯತ್ತ ಸಾಗುತ್ತಿದೆ. ಪುರುಷನಿಗೆ ನಾವೇನು ಕಮ್ಮಿ ಎನ್ನುತ್ತಾ ಹೆಣ್ಣು ಮಕ್ಕಳು ಪುರುಷನಿಗೆ ಸರಿಸಮನಾಗಿ ದುಡಿಯುತ್ತಿರುವುದೇನೋ ಸರಿಯೇ. ಹೆಣ್ಣು ಮಕ್ಕಳು ಪುರುಷನಿಗೆ ಯಾವುದರಲ್ಲೂ ಕಮ್ಮಿ ಇಲ್ಲ… ಇಲ್ಲಿ ಯಾರು ಯಾರನ್ನು ಹೆಚ್ಚು ಕಮ್ಮಿ ಎಂದು ತಾರತಮ್ಯ ಮಾಡುವುದೂ ಬೇಕಿಲ್ಲ. ನಿಸರ್ಗ ಸಹಜವಾಗಿ ಇರುವ ನಮ್ಮ ದೈಹಿಕ, ಮಾನಸಿಕ ಅಗತ್ಯತೆಗಳಿಗೆ ತಕ್ಕಂತೆ ಈಗಾಗಲೇ ನಾವುಗಳು ನಮ್ಮ ಕರ್ತವ್ಯಗಳನ್ನು ಶತಶತಮಾನಗಳಿಂದ ನಿರ್ವಹಿಸುತ್ತಾ ಬಂದಿದ್ದೇವೆ.  ಎಷ್ಟೋ ಬಾರಿ ಹೆಣ್ಣು ಮಕ್ಕಳು ಪುರುಷನಿಗೆ ಸರಿ ಸಮನಾಗಿ ಹೊಲಗಳಲ್ಲಿ,ಯುದ್ಧಗಳಲ್ಲಿ, ಔದ್ಯೋಗಿಕ ರಂಗಗಳಲ್ಲಿ ಕಾರ್ಯನಿರ್ವಹಿಸಿದ್ದಾಳೆ,ಆದರೆ ಆಕೆ ಎಂದೂ ವಿಘಟನೆಯತ್ತ ಮನಸ್ಸು ಮಾಡಿಲ್ಲ. ಅದುವೇ ಆಕೆಯ ಅಂತಃಸ್ಸತ್ವ. ಹೆಣ್ಣು ಬೆಂದ ಮನಗಳಿಗೆ ತಂಪನೆರೆವ ತಾಯಿ ಗುಣದವಳು, ದಣಿದ ಮನಕ್ಕೆ ಚೇತನ ತುಂಬಬಲ್ಲವಳು, ಸೋತು ಬಳಲಿದ ಪತಿಗೆ ಹೆಗಲಾಗಿ ನಿಲ್ಲಬಲ್ಲಳು. ಮಮತೆಯ ಕಡಲಾಗಿ ಪ್ರೀತಿಯ ಧಾರೆಯನ್ನು ಹರಿಸಬಲ್ಲವಳು, ತಪ್ಪು ಮಾಡಿದವರನ್ನು ಕ್ಷಮಿಸಬಲ್ಲವಳು, ಕಾರ್ಯೇ ಶು ದಾಸಿ, ಕರಣೇ ಶು ಮಂತ್ರಿ, ಭೋಜ್ಜೆ ಶು ಮಾತಾ, ರೂಪೇ ಶು ಲಕ್ಷ್ಮಿ, ಶಯನೇಶು ರಂಭ, ಕ್ಷಮಯಾಧರಿತ್ರಿ ಎಂದು ನಮ್ಮ ಪ್ರಾಚೀನರು ಹೊಗಳಿದ್ದಾರೆ. ಇದರ ಜೊತೆ ಜೊತೆಗೆ ಹೆಣ್ಣು ಕ್ಷಮೆಯಾಧರಿತ್ರಿಯಾಗಿದ್ದರೂ… ತಪ್ಪು ಮಾಡಿದರೆ ಶಿಕ್ಷಿಸಬಲ್ಲ ದೇವಿ ಸ್ವರೂಪಳಾಗಿದ್ದಾಳೆ.    ಇಂದಿಗೂ ಪುರುಷ ಪ್ರಧಾನ ವ್ಯವಸ್ಥೆ ಅಡಿಯಲ್ಲಿ ಬೆಳೆದ ಬಹಳಷ್ಟು ಗಂಡಸರ ಸಂವೇದನಾರಹಿತ ವರ್ತನೆಯಿಂದ ಹೆಣ್ಣು ಮಕ್ಕಳು ನಲುಗಿ ಹೋಗಿದ್ದಾರೆ. ಹೆಣ್ಣನ್ನು ತೊತ್ತಿನಂತೆ ನಡೆಸಿಕೊಳ್ಳುತ್ತಿರುವ ಪುರುಷಪ್ರಧಾನ ವ್ಯವಸ್ಥೆಯು ಆಕೆಯೂ ಓರ್ವ ವ್ಯಕ್ತಿ, ಆಕೆಗೂ ಒಂದು ವ್ಯಕ್ತಿತ್ವವಿದೆ ಆಸೆ ಆಕಾಂಕ್ಷೆಗಳಿವೆ ಎಂಬುದನ್ನು ಮರೆತಂತೆ ವರ್ತಿಸುತ್ತದೆ… ಕೆಲವೊಮ್ಮೆ ಹೆಣ್ಣಿಗೆ ಹೆಣ್ಣೆ ಶತ್ರು ಎಂಬಂತೆ ಹೆಣ್ಣು ಮಕ್ಕಳು ವರ್ತಿಸುವುದು ಬೇಸರದ ಸಂಗತಿ.   ಬಹುಶಹ ತಮ್ಮ ತಾಯಂದಿರು ಅನುಭವಿಸಿರುವ ನೋವುಗಳನ್ನು, ಹಿಂಸೆ,ಅವಮಾನಗಳನ್ನು, ಪ್ರತಿಯೊಂದು ಪೈಸೆ ದುಡ್ಡಿಗಾಗಿ ಗಂಡಸರ ಮುಂದೆ ಕೈ ಚಾಚುವುದನ್ನು ಕಂಡಿರುವ ಇಂದಿನ ಹೆಣ್ಣು ಮಕ್ಕಳು ಸ್ವತಂತ್ರವಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ಪಡೆದಿದ್ದಾರೆ. ಅಮ್ಮನ ನಗುಮುಖದ ಹಿಂದಿನ ನೋವು, ಪ್ರೀತಿಯ ಹಿಂದಿನ ಅವ್ಯಕ್ತ ಭೀತಿ, ಗಟ್ಟಿ ಧೈರ್ಯದ ಮುಖವಾಡದ ಹಿಂದಿನ ಅಳುಕು ಆತಂಕ ಹಿಂಜರಿಕೆಗಳನ್ನು ನೋಡಿರುವ ಹೆಣ್ಣು ಮಕ್ಕಳು ತಮ್ಮ ತಾಯಿಯಂತೆ ತಾವು ಎಲ್ಲವನ್ನು ಸಹಿಸಿಕೊಂಡಿರಬಾರದು ಎಂದು ನಿರ್ಧರಿಸಿ ಅಂತೆಯೇ ನಡೆಯುತ್ತಿರುವುದು ತಪ್ಪಲ್ಲ. ಗಂಡಿಗೆ ಸಮನಾಗಿ ವಿದ್ಯೆ ವಿದ್ವತ್ತುಗಳನ್ನು ಪಡೆದು ಉದ್ಯೋಗಗಳನ್ನು ಕೂಡ ಹೊಂದಿರುವ ಅವರ ಜ್ಞಾನ ಕೌಶಲಗಳನ್ನು ಮೆಚ್ಚಲೇಬೇಕು.  ಕೇವಲ ಎರಡು-ಮೂರು ದಶಕಗಳ ಹಿಂದೆ ಉದ್ಯೋಗಸ್ಥರಾಗಿದ್ದ ಹೆಣ್ಣು ಮಕ್ಕಳು ಕಚೇರಿ ಮತ್ತು ಮನೆ ಎರಡೂ ಕಡೆ ದುಡಿದು ಹೈರಾಣಾಗುತ್ತಿದ್ದರು. ಪುರುಷ ಸಹಜ ಅಹಂಕಾರದಿಂದಿದ್ದ ಗಂಡಸರು ಮನೆಯಲ್ಲಿ ಹೆಂಡತಿಗೆ ಯಾವ ರೀತಿಯ ಸಹಾಯ ಮಾಡದೆ ಇದ್ದರೂ ಕೂಡ ನನ್ನಮ್ಮನಂತೆ ಅಡುಗೆ ಮಾಡಲು ಬರುವುದಿಲ್ಲ,ಮನೆ ವಾರ್ತೆ ನನ್ನಮ್ಮನನ್ನು ನೋಡಿ ಕಲಿ ಎಂದು ಹಂಗಿಸಿ ಉದ್ಯೋಗಸ್ಥ ಮಹಿಳೆಯರಲ್ಲಿ ಕೀಳರಿಮೆಯನ್ನು ಉಂಟು ಮಾಡುತ್ತಿದ್ದರು. ಇದರ ಜೊತೆಗೆ ಚಿಕ್ಕ ವಯಸ್ಸಿನ ಮಕ್ಕಳಿದ್ದರಂತೂ ಆ ಉದ್ಯೋಗಸ್ಥ ಮಹಿಳೆಯರಿಗೆ ತನ್ನ ಮಕ್ಕಳಿಗೆ ಅವಶ್ಯಕವಾದ ಕಾಳಜಿ ಮತ್ತು ಪ್ರೀತಿಯನ್ನು ನೀಡಲಾಗದವಳು ಎಂಬಂತೆ ಬಿಂಬಿಸಿ ನೋಯಿಸುತ್ತಿದ್ದರು. ಖುದ್ದು ಉದ್ಯೋಗಸ್ಥ ಮಹಿಳೆ ಕೂಡ ತನ್ನನ್ನು ಮತ್ತು ತನ್ನ ಆರೋಗ್ಯವನ್ನು ಕಡೆಗಣಿಸಿ ಮನೆ ಅತ್ತೆ, ಮಾವ, ಗಂಡ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಸಿದ್ದಳಾಗುವಂತೆ ಪ್ರೇರೇಪಿಸುತ್ತಿದ್ದರು. ನೌಕರಿ ಮಾಡಲು ಆಕೆಗೆ ಬಿಟ್ಟಿರುವುದೇ ಆಕೆಗೆ ತಾವು ಮಾಡುತ್ತಿರುವ ಉಪಕಾರ ಎಂಬಂತೆ ವರ್ತಿಸುವುದು ಸಹಜವಾಗಿತ್ತು. ಆದರೆ ಕಾಲ ಬದಲಾಗಿದೆ.. ತಮ್ಮ ತಾಯಂದಿರ ನೋವನ್ನು ಕಂಡಿರುವ ಗಂಡುಮಕ್ಕಳು, ತಾವು ಪ್ರೀತಿಸಿದ ಯುವತಿಯನ್ನೇ ಮದುವೆಯಾದವರು, ಕಾಲದ ಪ್ರವಾಹದಲ್ಲಿ ಹೆಣ್ಣಿನ ಅಸ್ತಿತ್ವದ ಮಹತ್ವ ವನ್ನು ಗುರುತಿಸಿದವರು, ಸಮಾನತೆಯ ಮಹತ್ವ ಅರಿತ ಆಧುನಿಕ ಹುಡುಗರು ತಮ್ಮ ಪತ್ನಿಯಲ್ಲಿ.. ಸಂಗಾತಿಯನ್ನು ಸ್ನೇಹಿತೆಯನ್ನು ಕಂಡುಕೊಂಡಿದ್ದು, ಆಕೆಗೆ ಸಮನಾಗಿ ಅಲ್ಲದೆ ಹೋದರೂ, ಮನೆಗೆಲಸದಲ್ಲಿ ಆಕೆಗೆ ಸಹಾಯ ಮಾಡುತ್ತಿದ್ದಾರೆ. ಇದು ಇಂದಿನ ಅಗತ್ಯತೆಗಳಲ್ಲಿ ಒಂದಾಗಿದ್ದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.    ಈ ಹಿಂದೆ ಕಂಡು ಬರುತ್ತಿದ್ದ ಅತ್ತೆ ಸೊಸೆ ಎಂದರೆ ಎಣ್ಣೆ ಸೀಗೆಕಾಯಿ ಸಂಬಂಧ ಎಂಬಂತಹ ಮಾತುಗಳು ಸವಕಲಾಗಿವೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಒಬ್ಬರಿನ್ನೊಬ್ಬರಿಗೆ ಆಸರೆಯಾಗಿ ನಡೆಯುವ ಅತ್ತೆ ಸೊಸೆ ಮಾದರಿ ಕೂಡ ಒಳ್ಳೆಯ ಬೆಳವಣಿಗೆ. ತನ್ನತ್ತೆ ತನ್ನನ್ನು ನಡೆಸಿಕೊಂಡಂತೆ ತಾನು ತನ್ನ ಸೊಸೆಯನ್ನು ನೋಡಬಾರದು ಎಂಬ ಮಾನಸಿಕ ಪ್ರಬುದ್ಧತೆಯನ್ನು ಅತ್ತೆಯರು ಹೊಂದಿದ್ದರೆ ಕುಟುಂಬ ಎಂದ ಮೇಲೆ ಹೊಂದಿಕೊಂಡು ಹೋಗುವುದು ಸಹಜ ಎಂಬ ಭಾವ ಸೊಸೆಯಂದಿರಲ್ಲಿ ಬಂದಿದ್ದು ಮೊದಲಿನಂತೆ ಅತಿಯಾದ ಕಿತ್ತಾಟಗಳು, ಜಗಳಗಳು ಇಲ್ಲದೆ ಮನೆ ಶಾಂತಿಯ ಗೂಡಾಗಿದೆ. ಕೆಲವೊಂದು ಅಪವಾದಗಳನ್ನು ಹೊರತುಪಡಿಸಿ ಸಂಸಾರದಲ್ಲಿ ಸಾಮರಸ್ಯ ಪ್ರಧಾನತೆಯನ್ನು ಪಡೆದಿದೆ.  ಆದರೆ ಇತ್ತೀಚಿನ ಕೆಲ ಬೆಳವಣಿಗೆಗಳ ಪ್ರಕಾರಸ್ವಾತಂತ್ರ್ಯದ ಹೆಸರಿನಲ್ಲಿ ಕೆಲವು ಹೆಣ್ಣು ಮಕ್ಕಳು ಸ್ವೇಚ್ಛೆಯಿಂದ ವರ್ತಿಸುತ್ತಿದ್ದಾರೆ, ಗಂಡಸರಿಗೆ ನಾವೇನು ಕಮ್ಮಿ ಆಧುನಿಕತೆಯ ಸೋಗಿನಲ್ಲಿ ದುಶ್ಚಟಗಳನ್ನು ರೂಢಿಸಿಕೊಂಡು ಧೂಮಪಾನ ಮದ್ಯಪಾನ ಗಳ ಜೊತೆಗೆ ಮಾದಕ ಪದಾರ್ಥಗಳ ಸೇವನೆ ಮಾಡುತ್ತಾ ಅರೆ ಬಟ್ಟೆ ಉಡುಪು ತೊಡುತ್ತಾ ಅಂಗ ಪ್ರದರ್ಶನ ಮಾಡುತ್ತಿದ್ದಾರೆ. ಎಲ್ಲೋ ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಮಾತ್ರವಲ್ಲದೆ ಸಣ್ಣ ಪುಟ್ಟ ನಗರ ತಾಲೂಕು ಪ್ರದೇಶಗಳಲ್ಲಿಯೂ ನಡೆಯುತ್ತಿರುವ ಹೆಣ್ಣು ಮಕ್ಕಳ ಸ್ವೇಚ್ಚೆಯ ವರ್ತನೆ ನಮ್ಮ ಸಂಸ್ಕೃತಿಯ ಅದೆಷ್ಟು ಅಧಪತನಕ್ಕೆ ಇಳಿಯುತ್ತಿದೆ ಎಂಬುದನ್ನು ತೋರುತ್ತದೆ. ತಾವು ಕೂಡ ಆಧುನಿಕತೆಯ ಪ್ರವಾಹದ ಭಾಗವಾಗಿರಲು ಇಚ್ಛಿಸುವ ಹೆಣ್ಣು ಮಕ್ಕಳು ಎಷ್ಟೋ ಬಾರಿ ತಂದೆ ತಾಯಿಗೆ ಗೊತ್ತಿಲ್ಲದಂತೆ ಈ ಕೃತ್ಯಗಳಿಗೆಳಸುತ್ತಾರೆ.  ಇದಕ್ಕೆ ಪಾಲಕರಾದ ನಾವುಗಳೇ ಕಾರಣ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತವಿರುವ ವೈಯುಕ್ತಿಕ ಸ್ವಾತಂತ್ರ್ಯಕ್ಕೆ ಬೆಲೆ ಕೊಡುವ ಉದ್ದೇಶದಿಂದ ಪಾಲಕರು ನಮ್ಮ ಸನಾತನ ಸಂಸ್ಕೃತಿಯ ಮೂಲ ಬೇರುಗಳನ್ನು ಪರಿಚಯಿಸದೇ ಇರುವುದು, ಸ್ತ್ರೀತ್ವದ ಹೆಮ್ಮೆಯನ್ನು ಮಕ್ಕಳಿಗೆ ತಿಳಿಯಪಡಿಸದಿರುವುದು, ತಮ್ಮೆಲ್ಲ ಕೆಲಸ ಕಾರ್ಯಗಳಿಗೆ ಹೆಣ್ಣು ಮಕ್ಕಳ ಮೇಲೆ ಅವಲಂಬಿತರಾಗಿದ್ದು ಕೂಡ ಖುದ್ದು ಮನೆಯಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸದೇ ಇರುವುದನ್ನು ಕಾಣುವ ಬಹಳಷ್ಟು ಹೆಣ್ಣುಮಕ್ಕಳು ಎಲ್ಲವನ್ನೂ ಎಲ್ಲರನ್ನೂ ಧಿಕ್ಕರಿಸುತ್ತೇವೆ ಎಂಬ ಹಪಹಪಿಯಲ್ಲಿ ತಮ್ಮನ್ನು ತಾವು ದುಷ್ಟ ಚಟಗಳಿಗೆ ಒಡ್ಡಿಕೊಳ್ಳುವುದು ಅವರ ಮಾನಸಿಕ ಅಸ್ವಸ್ಥತೆಯನ್ನು ತೋರುತ್ತದೆ. ಅಂತಹ ಹೆಣ್ಣು ಮಕ್ಕಳಿಗೆ ಎಲ್ಲ ತಾಯಂದಿರ ಪರವಾಗಿ ಕೆಲ ಹಿತ ನುಡಿಗಳು ಪ್ರವಾಹದ ಭಾಗವಾಗಿ ನಾವು ಹೀಗೆ ವರ್ತಿಸುತ್ತೇವೆ ಎಂಬುದು ನಿಮ್ಮ ಅಭಿಪ್ರಾಯವಾದರೆ… ಆ ಪ್ರವಾಹ ಒಮ್ಮುಖವಾದುದು ಅದು ಕೂಡ ಇಳಿಜಾರಿನತ್ತ ಸಾಗುವುದು ಎಂಬುದು ನಿಮ್ಮ ಅರಿವಿನಲ್ಲಿರಲಿ. ಯಾವ ವಿಷಯವನ್ನು ನಿಮ್ಮ ಪಾಲಕರು ಮತ್ತು ಮನೆಯ ಹಿರಿಯ ಸದಸ್ಯರ ಮುಂದೆ ನೀವು ಮುಚ್ಚಿಡಲು ಪ್ರಯತ್ನಿಸುತ್ತೀರಿ ಎನ್ನುವುದಾದರೆ ಅದು ತಪ್ಪು ಎಂಬುದು ನಿಮ್ಮ ಅಂತಪ್ರಜ್ಞೆಗೆ ಈಗಾಗಲೇ ಗೊತ್ತಿದೆ ಎಂದರ್ಥ. ಹಾಗಿದ್ದರೆ ತಪ್ಪನ್ನು ಮಾಡಲು ಅದೇಕೆ ಅಷ್ಟು ಆತುರ, ಕಾತುರ ಎಂಬುದನ್ನು ನಿಮ್ಮನ್ನು ನೀವೇ ಪ್ರಶ್ನೆಸಿಕೊಂಡಾಗ ತುಸು ತಡವಾಗಿಯಾದರೂ ನಿಮಗೆ ಅರಿವಾಗುತ್ತದೆ. ಆಧುನಿಕತೆ ಎನ್ನುವುದು ನಿಮ್ಮ ವೇಷಭೂಷಣಗಳಲ್ಲಾಗಲಿ ನಿಮ್ಮ ಹವ್ಯಾಸಗಳು ಆಗಲಿ ತೋರಬೇಕಿಲ್ಲ… ಬದಲಾಗಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ನಿಮ್ಮ ಮಾತು, ಕೃತಿ ಮತ್ತು ವಿಚಾರಧಾರೆಗಳಲ್ಲಿ ಆಧುನಿಕತೆಯ ಸ್ಪರ್ಶವಿರಬೇಕು. ಹೆಣ್ಣು ಗಂಡಿಗಿಂತಲೂ ಹೆಚ್ಚು ಸಮರ್ಥಳು ಮತ್ತು ತನ್ನ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸಬಲ್ಲಳು, ಎಂತಹದೇ ವಿಪತ್ತಿನ ಪರಿಸ್ಥಿತಿಯಲ್ಲಿಯೂ ಕೂಡ ಎದುರಿಸಿ ಬಾಳಬಲ್ಲಳು ಎಂಬ ಕಾರಣದಿಂದಲೇ ಪ್ರಕೃತಿಯು ಆಕೆಗೆ ತಾಯ್ತನದ ಶಕ್ತಿಯನ್ನು ನೀಡಿರುವುದು, ಒಂದೊಳ್ಳೆಯ ಸಮಾಜ ನಿರ್ಮಾಣಕ್ಕಾಗಿ ಹೆಣ್ಣು ಮಕ್ಕಳು ನೀಡುವ ಅಹರ್ನಿಶಿ ಕೊಡುಗೆ ಎಂದರೆ ಉತ್ತಮ ಮಕ್ಕಳನ್ನು ಈ ಸಮಾಜಕ್ಕೆ ಕಾಣಿಕೆಯಾಗಿ ಒಪ್ಪಿಸುವುದು. ಹಾಗೆಂದು ಮೌಂಟ್ ಎವರೆಸ್ಟ್ ಹತ್ತುವಾಗ ಸೀರೆ ಉಡಿ ಎಂದು ಹೇಳುತ್ತಿಲ್ಲ, ನಿಮ್ಮ ಉಡುಪುಗಳು ಸಬ್ಬತೆಯ ಗಡಿಯನ್ನು ದಾಟದಿರಲಿ, ನಿಮ್ಮ ಕುಟುಂಬದ ಸಂಸ್ಕಾರವನ್ನು ಎತ್ತಿ ತೋರಿಸುವ ಉಡುಪುಗಳು ನಿಮಗೆ ಭೂಷಣವಾಗಿರಲಿ…. ಯಾಕೆಂದರೆ ನೀವು ಧರಿಸುವ ಬಟ್ಟೆಗಳು ನಿಮ್ಮ ಪಾಲಕರ ಪಾಲಕತ್ವವನ್ನು, ಚಾರಿತ್ರ್ಯವನ್ನು ಎತ್ತಿ ತೋರುತ್ತವೆ…. ಅಯ್ಯೋ ಊರಿಗೆಲ್ಲ ಬುದ್ಧಿ ಹೇಳ್ತಾರೆ ಇವರ ಮಕ್ಕಳು ಹೇಗೆ ಅಂತ ನಮಗೆ ಗೊತ್ತಿಲ್ವಾ ಎಂಬ ಒಂದು ಪುಟ್ಟ ಮಾತು ಪಾಲಕರಿಗೆ ಶೂಲದಂತೆ ಭಾಸವಾಗುತ್ತದೆ.  ಒಂದೇ ಮನೆಯಲ್ಲಿರುವ ಕುಟುಂಬ ಸದಸ್ಯರ ನಡುವೆಯೇ ಸಾಕಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ ಅಂತದ್ದರಲ್ಲಿ ಬೇರೊಂದು ಮನೆಯಿಂದ ಬರುವ ಹೆಣ್ಣು ಮಗಳು ತಮ್ಮ ಕುಟುಂಬಕ್ಕೆ ಹೊಂದಿಕೊಳ್ಳಲು ಅನುವು ಮಾಡಿಕೊಡಬೇಕು… ignorance is bliss ಎಂಬ ಮಾತಿನಂತೆ ಕೆಲ ವಿಷಯಗಳನ್ನು ನಮ್ಮ ಅಹಮ್ಮಿಗೆ ಪೆಟ್ಟು ಬಿದ್ದಿತ್ತು ಎಂದು ಭಾವಿಸದೆ ಕಡ್ಡಿಯನ್ನು ಗುಡ್ಡ ಮಾಡದೆ ಕಂಡೂ ಕಾಣದಂತೆ ತೇಲಿಸಿ ಬಿಡಬೇಕು. ತೀರಾ ಅನಿವಾರ್ಯವಲ್ಲದ ಹೊರತು ಕುಟುಂಬವನ್ನು ಒಡೆದು ನಾನು, ನನ್ನ ಗಂಡ ಮಕ್ಕಳು ಮತ್ತು ನನ್ನ ಮನೆ ಎಂದು ಬೇರೊಂದು ಮನೆ ಮಾಡಿಕೊಳ್ಳದೆ ತಾಳಿದವನು ಬಾಳಿಯಾನು ಎಂಬ ಉಕ್ತಿಯಂತೆ ಹಿರಿಯರೊಂದಿಗೆ ಹೊಂದಿಕೊಂಡು ಬಾಳಿದರೆ ನಿಮ್ಮ ಹುಟ್ಟಿದ ಮನೆಗೆ ನೀವು ಗೌರವ ತಂದು ಕೊಡುವುದಲ್ಲದೆ ನಿಮ್ಮ ಸಂಗಾತಿಯ ಪ್ರೀತ್ಯಾದರ ಗಳಿಗೆ ಭಾಜನರಾಗುವಿರಿ. ನಿಮ್ಮ ಮಕ್ಕಳು ಅಜ್ಜಿ ತಾತ ಅತ್ತೆ ಚಿಕ್ಕಪ್ಪ ಚಿಕ್ಕಮ್ಮ ಮುಂತಾದ ಸಂಬಂಧಗಳ ಪ್ರೀತಿಯ ಬಂಧನದಲ್ಲಿ ಬೆಳೆದು ಉನ್ನತ ಸಂಸ್ಕಾರಗಳನ್ನು ಹೊಂದಲು ಕಾರಣರಾಗುವಿರಿ. ಸಮುದ್ರದಲ್ಲಿ ಏರಿಳಿತಗಳು ಇರುವಂತೆಯೇ ಸಂಸಾರ ಎಂದ ಮೇಲೆ ಸುಖ ದುಃಖ, ಇದ್ದೇ ಇರುತ್ತದೆ. ಇಂದಿಗೂ ಸಂಸಾರದ ಭಾರವನ್ನು ಹೊತ್ತಿರುವುದು ಹೆಣ್ಣು ಮಕ್ಕಳೇ. ಅತ್ಯಂತ ಸಮಾಧಾನ ಚಿತ್ತದಿಂದ ಮನೆಯ ಎಲ್ಲ ಆಗುಹೋಗುಗಳನ್ನು ನೋಡಿಕೊಂಡು ಹೋಗುವ ಹೆಣ್ಣು ಮಕ್ಕಳು ಈ ಸಮಾಜಕ್ಕೆ ಕೊಡುವ ಅತಿ ದೊಡ್ಡ ಕೊಡುಗೆ ಎಂದರೆ ತಮ್ಮ ಮಕ್ಕಳಲ್ಲಿ ಅತ್ಯುನ್ನತ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಮಾಡುವ ಮೂಲಕ ಈ ಸಮಾಜಕ್ಕೆ ಕೊಡುಗೆಯಾಗಿ ಕೊಡುವುದು, ಸಾಮಾಜಿಕ ಶಾಂತಿ, ಸಾಮರಸ್ಯವನ್ನು ಕಾಪಾಡುವ ಮೂಲಕ ದೇಶದ ಐಕ್ಯತೆಯನ್ನು ಉಳಿಸಿ ಬೆಳೆಸುವುದು. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಎಂದೂ ಹಿಂದೆ ಬೀಳಬಾರದು. ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಮಾನವೀಯ ಮೌಲ್ಯಗಳ ಪುನರುತ್ಥಾನಗೊಳಿಸುವ ಸಾಮೂಹಿಕ ಪ್ರಯತ್ನದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ…. ಇಂತಹ ಸಾಂಘಿಕ ಪ್ರಯತ್ನವನ್ನು ಮಾಡುವ ಮೂಲಕ ಹೆಣ್ಣು

“ಸ್ತ್ರೀವಾದ…. ಹೊರಳದಿರಲಿ ವಿಘಟನೆಯತ್ತ ! ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಕಾವ್ಯಯಾನ

“ಬದುಕಿನ ಬಂಡಿಯ ಬರಹಗಾರ” ಕವಿತೆ ಜಯಶ್ರೀ.ಭ.ಭಂಡಾರಿ

ಕಾವ್ಯಸಂಗಾತಿ “ಬದುಕಿನ ಬಂಡಿಯ ಬರಹಗಾರ” ಜಯಶ್ರೀ.ಭ.ಭಂಡಾರಿ ಕನಸು ಕಂಗಳ ಹುಡುಗಿ ಕವಿತೆ ನಾನುಮನವ ಕದ್ದು ಮಧುವ.ತಂದವ ನೀನುಹೇಗೋ ಬಂದೆ ಮೆದುವಾದೆ ನಾನುಅಮೃತ ಧಾರೆ ಎರೆದು ಬಂಧುವಾದೆ ನಯನದಲಿ ನಿನ್ನದೇ ಹೊನ್ನ ಬೆಳಕುಕೆನ್ನೆಯ ರಂಗಿನಲಿ ಹೊಳಪಿನ ತಳುಕುಮುಂಗುರುಳಿಗೆ ಸೋತ ಮಾಯಗಾರಮನದ ಬೇಗೆ ನೀಗಿ ನಿಧಿಯಾದವನು. ಬಾಳಪಥಕೆ ಮುನ್ನುಡಿ ಬರೆದು ಜೊತೆಯಾದೆಭರವಸೆ ತುಂಬುತ ಬದುಕಿನ ಬವಣೆ ನೀಗಿದೆ.ಒಲವು ಗೆಲುವುಗಳ ಸರಸ ಸರದಾರ ನೀನಾದೆದಿನದ ಕಾವ್ಯ ರಾಣಿಗೆ ಮಧುರ ಸಾಹಿತ್ಯವಾದೆ ನೀನೆಲ್ಲೋ ನಾನಲ್ಲೆ ರಾಗವಾಗಿ ಬಳಿ ಬಂದೆಮೈಮರೆತು ಬರೆಯುವ ಪರಿಕಂಡು ಬೇಸರಿಸಿದೆಮುಂಗುರುಳ ಸರಿಸಿ ಮುತ್ತ ನೀಡಲು ಅವಸರಿಸಿದೆಕವಿತೆ ಹುಟ್ಟುವ ಹೊತ್ತು ಕಾಡದೆ ದೂರ ಇರಬಾರದೆ ನೀನೆ ನನ್ನ ಪಾಲಿನ ಕವಿತೆ ಬೇರೆ ಏನು ಬೇಕಿಲ್ಲಮಡಿಲಲ್ಲಿ ತಲೆ ಇಟ್ಟು ಮಲಗುವೆ ಯಾರ ಹಂಗಿಲ್ಲದಿನವೂ ಅದೇ ಹಾಡು ಅದೇ ಕಥೆ ದೂರ ನೂಕೆಲ್ಲನಿನಗೆ ನಾನು ನನಗೆ ನೀನು ಸಂಸಾರ ನೊಗಕ್ಕೆ ಸಾಕಲ್ಲ ರಾತ್ರಿ ರಾಣಿ ಅರಳಿ ಘಮಿಸುತ್ತಿದೆ ನೋಡಬಾರದೇಸುಂದರ ಮೋಹಕ ಕ್ಷಣಕ್ಕೆ ಮುಖ ತಿರುಗಲಾರದೇ ನಕ್ಷತ್ರಗಳು ಮುಸಿ ಮುಸಿ ನಗುತಿವೆ ಕೇಳಬಾರದೇಬರೆದು ಮುಗಿಸುವ ಮುನ್ನ ಹೇ ಗೆಳತಿ ನಗಬಾರದೆ ಜಯಶ್ರೀ.ಭ.ಭಂಡಾರಿ.

“ಬದುಕಿನ ಬಂಡಿಯ ಬರಹಗಾರ” ಕವಿತೆ ಜಯಶ್ರೀ.ಭ.ಭಂಡಾರಿ Read Post »

ಕಾವ್ಯಯಾನ

“ವಿಶ್ವ ಜಲ ದಿನಕ್ಕೆ ನಾಲ್ಕುಹನಿಗಳು” ಗೊರೂರು ಅನಂತರಾಜು

ಕಾವ್ಯ ಸಂಗಾತಿ ಗೊರೂರು ಅನಂತರಾಜು “ವಿಶ್ವ ಜಲ ದಿನಕ್ಕೆ ನಾಲ್ಕುಹನಿಗಳು” ಹನಿಮೂನ್ ನನಗೆ ಸಿಹಿಯಲ್ಲಏಕೆಂದರೆ ನಮ್ಮೂರ ಕೆರೆಬಾವಿಯಲ್ಲಿ ಹನಿ ನೀರಿಲ್ಲ ಮಳೆ ಬರಲೆಂದು ನಮ್ಮೂರ ಮಂದಿಕಡಿದರು ಮಾರಿಗೆ ನೂರಾರುಕುರಿ ಕೋಳಿ ಹಂದಿಹರಿದ ರಕ್ತ ನೋಡಿಸುರಿಸಿದ ಮಳೆರಾಯ ಕಣ್ಣೀರ ಕೋಡಿ ನಮ್ಮೂರ ಕೆರೆಗೆ ಮಳೆಯ ಹನಿಗಳು ಸೇರಿತುಂಬಿದ ಒಡಲಲ್ಲಿನವಮಾಸಗಳ ಸಿರಿ ಮಳೆ ಬಿದ್ದಲ್ಲಿ ನದಿ ಉಕ್ಕಿಜಲಾಶಯಕ್ಕೆ ಒಳ ಹರಿವು ಹೆಚ್ಚುಹಸಿರು ಕ್ರಾಂತಿಗೆ ಕೆರೆ ಕಟ್ಟೆ ಕಟ್ಟಿಸಿಒಳ ಅರಿವು ಹೆಚ್ಚು ಗೊರೂರು ಅನಂತರಾಜು

“ವಿಶ್ವ ಜಲ ದಿನಕ್ಕೆ ನಾಲ್ಕುಹನಿಗಳು” ಗೊರೂರು ಅನಂತರಾಜು Read Post »

ಇತರೆ

ಮಕ್ಕಳಿಗಾಗಿ ಬೇಸಿಗೆ ರಜೆಯ ಸಂಭ್ರಮಕ್ಕೊಂದು ಕಾದಂಬರಿ ರಸಪ್ರಶ್ನೆ ಸ್ಪರ್ಧೆ

ಮಕ್ಕಳ ಸಂಗಾತಿ ಮಕ್ಕಳಿಗಾಗಿ ಬೇಸಿಗೆ ರಜೆಯ ಸಂಭ್ರಮಕ್ಕೊಂದು ಕಾದಂಬರಿ ರಸಪ್ರಶ್ನೆ ಸ್ಪರ್ಧೆ ಮಕ್ಕಳಿಗಾಗಿ ಬೇಸಿಗೆ ರಜೆಯ ಸಂಭ್ರಮಕ್ಕೊಂದು ಕಾದಂಬರಿ ರಸಪ್ರಶ್ನೆ ಸ್ಪರ್ಧೆಕಂಚುಗಾರನಹಳ್ಳಿ ಸತೀಶ್ ಅವರು ರಚಿಸಿದ “ಭೈರ” ಮಕ್ಕಳ ಕಾದಂಬರಿಯು ಮನೆ ಮಾತಾಗಿದೆ. ಈ ಕಾದಂಬರಿಯು ವಿಶೇಷ ಕಥಾವಸ್ತುವನ್ನುಳ್ಳ ಕಾದಂಬರಿಯಾಗಿದೆ. ಬಳಸಿದ ಭಾಷೆ ಸರಳವಾಗಿದ್ದು, ಎಲ್ಲ ವಯೋಮಾನದ ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ. 74 ಪುಟಗಳ ಕತೆಯನ್ನು ಹೊಂದಿದ್ದು, ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಜೊತೆಗೆ ಇನ್ನೊಂದು ವಿಶೇಷ ಏನೆಂದರೆ ಈಗಾಗಲೇ ಈ “ಭೈರ” ಕಾದಂಬರಿಯು ಪ್ರತಿಷ್ಠಿತ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. * ಶಿವಮೊಗ್ಗದ ಕರ್ನಾಟಕ ಸಂಘದಿಂದ 2024 ನೇ ಸಾಲಿನ ನಾ. ಡಿಸೋಜ ಮಕ್ಕಳ ಸಾಹಿತ್ಯ ಪ್ರಶಸ್ತಿ• ಬೆಳಗಾವಿಯ ಹೊಂಬೆಳಕು ಪ್ರತಿಷ್ಠಾನದಿಂದ ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ• ಬೆಂಗಳೂರಿನ ಕರ್ನಾಟಕ ಸಾಹಿತ್ಯ ಪರಿಷತ್ತು ವತಿಯಿಂದ 2024 ನೇ ಸಾಲಿನ ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ಪುಸ್ತಕದತ್ತಿ ಪ್ರಶಸ್ತಿ ರಸಪ್ರಶ್ನೆ ಸ್ಪರ್ಧೆಯ ನಿಯಮಗಳು • ಸ್ಪರ್ಧೆಯಲ್ಲಿ ಭಾಗವಹಿಸಲು ಮಕ್ಕಳ ವಯಸ್ಸಿನ ಮಿತಿ 6 ರಿಂದ 16 ವರ್ಷ ಮಾತ್ರ• 120=00 ಹಣ ಸಂದಾಯ ಮಾಡಿ “ಭೈರ” ಮಕ್ಕಳ ಕಾದಂಬರಿ ಪುಸ್ತಕವನ್ನು ಪಡೆಯಬೇಕು.• ಪುಸ್ತಕ ಓದಲು 15 ರಿಂದ 20 ದಿನಗಳ ಸಮಯದ ಅವಕಾಶ ಇರುತ್ತದೆ.• ಪುಸ್ತಕಗಳನ್ನು ತೆಗೆದುಕೊಳ್ಳಲು ಕೊನೆಯ ದಿನಾಂಕ 20-04-2026• ಸ್ಪರ್ಧೆ ನಡೆಯುವ ದಿನಾಂಕ 30-04-2026• ಮೊಬೈಲ್ ಆಪ್ ಮೂಲಕ ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರಶ್ನೆಗಳು ಭೈರ ಕಾದಂಬರಿಯನ್ನು ಕುರಿತಾಗಿಯೇ ಇರುತ್ತವೆ. ನೀವು ಉತ್ತರಿಸುವಾಗ ಸಮಯ ಕೂಡ ರೆಕಾರ್ಡ್ ಆಗುವುದರಿಂದ ಸ್ಪರ್ಧೆ ಪ್ರಾಮಾಣಿಕವಾಗಿಯೇ ನಡೆಯುತ್ತದೆ.• ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಎಂದು ನಾಲ್ಕು ಬಹುಮಾನಗಳನ್ನು ನೀಡಲಾಗುತ್ತದೆ.• ಪ್ರಥಮ ಬಹುಮಾನ 750=00 ರೂ   ದ್ವಿತೀಯ ಬಹುಮಾನ 600=00 ರೂ   ತೃತೀಯ ಬಹುಮಾನ 450=00 ರೂ   ಸಮಾಧಾನಕರ 300=00 ರೂ• ಭಾಗವಹಿಸುವ ಸ್ಪರ್ಧಿಯು ಮೊದಲೇ ನಮಗೆ ತಿಳಿಸಿದಂತಹ ಫೋನ್ ನಂಬರ್ ದಿಂದ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸುವುದು.• ಒಂದು ಸಾರಿ ಉತ್ತರಗಳನ್ನು ಸಲ್ಲಿಸಿದ ನಂತರ ಮತ್ತೊಮ್ಮೆ ಅವಕಾಶವಿಲ್ಲ.• ಪ್ರಶ್ನೆಗಳು ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಸರಳವಾಗಿರುತ್ತವೆ.• ಫಲಿತಾಂಶ ಘೋಷಣೆ : 05-05-2026• ಬಹುಮಾನದ ಹಣವನ್ನು ಫೋನ್ ಪೇ ಮಾಡಲಾಗುವುದು. ಜೊತೆಗೆ ಆಕರ್ಷಕ ಪ್ರಮಾಣ ಪತ್ರ ನೀಡಲಾಗುವುದು.• ರಸಪ್ರಶ್ನೆಯ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಕೊಡಲಾಗುವುದು.• ಸಂಪರ್ಕಿಸಿ : 9945095539, 9972932126 ಆದಕಾರಣ ತಾವುಗಳು ತಮ್ಮ ಮನೆಯ ಮಕ್ಕಳಿಗೆ ಕಾದಂಬರಿ ಓದಿಸಿ, ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ. ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ದೂರವಾಣಿಯ ಮೂಲಕ ಸಂಪರ್ಕಿಸಿ. ಸ್ಪರ್ಧೆಯ ಆಯೋಜಕರು+6ಭುವನೇಶ್ವರಿ ರು. ಅಂಗಡಿನರಗುಂದ (9945095539)

ಮಕ್ಕಳಿಗಾಗಿ ಬೇಸಿಗೆ ರಜೆಯ ಸಂಭ್ರಮಕ್ಕೊಂದು ಕಾದಂಬರಿ ರಸಪ್ರಶ್ನೆ ಸ್ಪರ್ಧೆ Read Post »

ಕಾವ್ಯಯಾನ

ಮಹಾಂತೇಶ್.ಬಿ.ನಿಟ್ಟೂರು “ಯುದ್ಧ ಅಂದ್ರೆ ಸುಮ್ನೆ ಏನು?”

ಕಾವ್ಯಸಂಗಾತಿ ಮಹಾಂತೇಶ್.ಬಿ.ನಿಟ್ಟೂರು “ಯುದ್ಧ ಅಂದ್ರೆ ಸುಮ್ನೆ ಏನು?” ಪ್ರತಿಷ್ಠೆಗಾಗಿ ಪಣಬಲಾಬಲಕ್ಕಾಗಿ ಬಣ;ಹೊಡೆದಾಡಿ ಬಡಿದಾಡಿಒಂದಿವಸ ರಣಾಂಗಣದಲ್ಲಿಹೆಂಗೆಂಗೋ ಬಿದ್ದ ಹೆಣ ಗೆಲ್ಲಲೇಬೇಕು ಎಂದವನಿಗೆ ಸೋಲುಸೋತು ಸುಣ್ಣವಾಗಿ ನೆಲಕ್ಕೆಬೀಳುವಾಗ ಅದೃಷ್ಟವಶಾತ್ ಗೆಲುವು;ಇವೆರಡೂ ನಾಣ್ಯದ ಎರಡು ಮುಖಗಳುಕಂಡೂ ಕಾಣದಂತೆ ಕಳಚಿಬೀಳುತ್ತಿವೆ ಮುಖವಾಡಗಳು ಇತಿಹಾಸದ ಹಾಸುಗಲ್ಲಿನ ಮೇಲೆಬಿದ್ದ ರಕ್ತದ ಕಲೆ ಇನ್ನೂ ಒಣಗಿಲ್ಲ ಭೂಮಿಯನ್ನು ಹತ್ತಾರುಪಟ್ಟು ಸುಡುವಷ್ಟುಮದ್ದು ಗುಂಡು ಬಾಂಬುಗಳಸುಧಾರಿತ ಹೊಸ ತಳಿಗಳು;ವಿಜ್ಞಾನದ ಬಳುವಳಿಗಳು ಆರಂಭದ ಹೊರತು ಅಂತ್ಯಅರಿಯದು ಯುದ್ಧೋನ್ಮಾದ ಸೂರ್ಯೋದಯ, ಚಂದ್ರೋದಯಕ್ಕೆಪರಮಾಶ್ಚರ್ಯ; ನಿನ್ನೆ ಕಂಡ ಬೃಹತ್ಕಟ್ಟಡಗಳು ಇಂದು ನೆಲಸಮಕಾಡು, ಪ್ರಾಣಿ, ಪಕ್ಷಿ ಸಂಕುಲ ಸುಟ್ಟು ಭಸ್ಮ ಸರ್ವನಾಶದ ಕಿಚ್ಚು ಹೊತ್ತಿನರಕದ ಹೆಬ್ಬಾಗಿಲು ತೆರೆಯುತ್ತಿರುವಾಗನಾಳೆ ಮತ್ತೇನೋ…ಮತ್ತಿನ್ನೇನೋ… ಯುದ್ಧ ಅಂದ್ರೆ ಸುಮ್ನೆ ಏನು!? ಮಹಾಂತೇಶ್.ಬಿ.ನಿಟ್ಟೂರು,        

ಮಹಾಂತೇಶ್.ಬಿ.ನಿಟ್ಟೂರು “ಯುದ್ಧ ಅಂದ್ರೆ ಸುಮ್ನೆ ಏನು?” Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ” ಕಾವ್ಯ ದಿನ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಕಾವ್ಯ ದಿನ” ಕಾವ್ಯ ಬರೆಯಲುಸ್ಪೂರ್ತಿಯಾದ ನಿಮಗೆಅಭಿನಂದನೆಗಳುಶುಭಾಶಯ ನನ್ನಅನಂತ ನಮನಗಳು // ನನ್ನ ಕಾವ್ಯಬರೆಯಲುಹುರಿದುಂಬಿಸಿಓದುವ ಕವಿಮನಗಳಿಗೆಲ್ಲಶುಭಾಶಯಶುಭಕಾಮನೆಗಳು // ಕಾವ್ಯ ಬರೆದಕವನ ಸಂಕಲನಪುಸ್ತಕ ಬಿಡುಗಡೆಮಾಡಿದ ಗಣ್ಯರಿಗೆಶುಭಾಶಯಶುಭ ನಮನಗಳು // ಕಾವ್ಯ ಬರೆಯುತ್ತಿರುವಕನ್ನಡ ನಾಡಿನಎಲ್ಲ ಕವಿಗಳಿಗೆಶುಭಾಶಯ ನಿಮಗೆಶುಭ ಹಾರೈಕೆಗಳು // ಮನದ ಭಾವನೆಗಳನ್ನುಕವನದ ರೂಪದಲ್ಲಿಹೊರ ತರುವಎಲ್ಲ ಹೃದಯಗಳಿಗೆಅನಂತ ಧನ್ಯವಾದಗಳು// ಇಂದು ವಿಶ್ವ ಕಾವ್ಯದಿನ ವರುಷವೆಲ್ಲವಿಶ್ವದ ತುಂಬೆಲ್ಲಪ್ರಜ್ವಲಿಸಿ ಪಸರಿಸಲಿಕಾವ್ಯ ಸುಧೆ  ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ” ಕಾವ್ಯ ದಿನ” Read Post »

ಅನುವಾದ

ವೇಲ್ಫುಲ ನಾರಾಯಣ ಅವರ ತೆಲುಗುಕವಿತೆ “ಉದ್ಯಾನ ಗೀತ”ದ ಕನ್ನಡಾನುವಾದ ಕೋಡೀಹಳ್ಳಿ ಮುರಳೀಮೋಹನ್

ಅನುವಾದ ಸಂಗಾತಿ ಉದ್ಯಾನಗೀತ ತೆಲುಗು ಮೂಲ :ವೇಲ್ಪುಲ ನಾರಾಯಣಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್  ಭಾರವಾಗಿ ಸುರಿದ ಹಿಮರಾಶಿಯಮುತ್ತುಗಳಾಗಿಸಿ ರೂಪಾಂತರಿಸಿ,ಮೃದು ಕಿರಣಗಳ ಸೂರ್ಯೋದಯವಮಿನುಗುತ್ತಲೇ ಸ್ವಾಗತಿಸುತಿದೆ. ನಡೆಗೆ ಬಂದವರ ಮಾತುಕತೆಯಲ್ಲಿಸಭ್ಯತೆಯ ಲಹರಿ ಕೇಳುತ್ತಿದೆ,ಸಂತಸದ ನಗುವಿನ ಪರವಶದಿ ನಾದಗಳೆಲ್ಲವೂ ಸಂಗೀತವಾಗುತ್ತಿದೆ.ದಣಿವಿನಲಿ ಮೌನವಾಗಿ ಕುಳಿತರೆಚದುರಿದ ಮನಕೆ ಆಸರೆಯಾಗಿ,ಬಾಳ ಪಯಣದ ಯುದ್ಧಗಳ ಮಧ್ಯೆಶಕ್ತಿಯ ತುಂಬುವ ಶಾಂತಿ ಸರೋವರವಿದು. ಎಲೆಗಳು ಉದುರಿದ ಮರಗಳಲಿನವಚೈತನ್ಯದ ಚಲನೆಯಿದೆ,ಚಿಗುರೊಡೆಯುವ ಕೊಂಬೆಗಳ ನಡುವೆಭವಿಷ್ಯದ ಕೋಗಿಲೆಯ ಕುಹೂಗಾನವಿದೆ. ಸುಂಟರಗಾಳಿಯ ಸವಾಲಿಗೂಬಗ್ಗದ ಬೆನ್ನಲಬಿನ ಧೈರ್ಯವಿದು,ಬಿದ್ದವರ ಎದೆಯಲಿ ಮತ್ತೆ ಏಳುವಪ್ರೇರಣೆಯ ದೀಪವಿದು. ಅನ್ಯಾಯದ ಅಂಧಕಾರವ ಸೀಳುವಆಶೆಗಳ ಅಗ್ನಿಜ್ವಾಲೆಯಾಗಿ,ಬಂಧನದ ಬೇಡಿಗಳನು ಮುರಿದುಬೀಸುವ ಸ್ವಾತಂತ್ರ್ಯದ ಗಾಳಿಯಾಗಿದೆ. ಕಣ್ಣೀರಿನ ಕಾಲುವೆಯ ಕಲ್ಲೋಲದಿಹೊಸ ಕ್ರಾಂತಿಯ ಕಿಡಿ ಎಬ್ಬಿಸಿ,ದೌರ್ಜನ್ಯದ ಅರಣ್ಯವ ಸುಡುವವಿಪ್ಲವದ ವಸಂತವಾಗಲಿ. ಬದುಕಿನ ಓಟದ ಒರಟು ಹಾದಿಯಲಿಪ್ರಕೃತಿಯ ಮಡಿಲ ಅರಳಿದ ಹೂವಾಗಿ,ಪ್ರತಿ ಮುಂಜಾವಿನ ಹೊಸ ಉತ್ಸಾಹದ ಉಸಿರಾಗಲಿ ಈ ‘ಉದ್ಯಾನಗೀತ’. ತೆಲುಗು ಮೂಲ :ವೇಲ್ಪುಲ ನಾರಾಯಣಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್

ವೇಲ್ಫುಲ ನಾರಾಯಣ ಅವರ ತೆಲುಗುಕವಿತೆ “ಉದ್ಯಾನ ಗೀತ”ದ ಕನ್ನಡಾನುವಾದ ಕೋಡೀಹಳ್ಳಿ ಮುರಳೀಮೋಹನ್ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-115 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಸುಮತಿಯ ಆರೋಗ್ಯದಲ್ಲಿ ವ್ಯತ್ಯಾಸ ಲೋಟದ ತುಂಬಾ ನೀರನ್ನು ತುಂಬಿಕೊಂಡು ಬಂದು ಆ ಹುಡುಗಿ ಸುಮತಿಯ ಕೈಕೆ ಕೊಟ್ಟಳು. ಸುಮತಿ ನೀರನ್ನು ಗಟಗಟನೆ ಕುಡಿದಳು ಆದರೆ ಒಮ್ಮೆಲೇ ವಾಕರಿಕೆ ಬಂದಂತಾಗಿ ಮುಖ ಕಿವುಚಿಕೊಂಡಳು. ಒಂದೇ ಸಮನೆ ನೀರನ್ನು ಕುಡಿದಿದ್ದಕ್ಕಾಗಿ ತಾಯಿಗೆ ಹೀಗೆ ಆಗುತ್ತಿರಬೇಕು ಎಂದು ಮಗಳು ತಾಯಿಯ ಬೆನ್ನನ್ನು ಮೆತ್ತಗೆ ಸವರಿದಳು. ಸುಮತಿಯ ಪರಿಸ್ಥಿತಿಯನ್ನು ಕಂಡು ಮಗಳಿಗೆ ಒಳಗೊಳಗೆ ಏನೋ ಚಿಂತೆ. ಅಮ್ಮನಿಗೆ ಆರೋಗ್ಯದಲ್ಲಿ ಏನೋ ವ್ಯತ್ಯಾಸವಾಗಿದೆ ಎಂದು ಮಗಳಿಗೆ ಅನಿಸಿತು. ಸುಮತಿಯನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದಳು. ಮುಖ ಸ್ವಲ್ಪ ಊದಿರುವಂತೆ ಕಾಣಿಸಿತು. ಕಣ್ಣಿನ ಸುತ್ತಲೂ ಸ್ವಲ್ಪ ಬಾತು ಕೊಂಡಂತೆ ಇದೆ. ಕೈಕಾಲು ಸಹ ಸ್ವಲ್ಪ ಊದಿಕೊಂಡಿದೆ. ಆದಷ್ಟು ಬೇಗ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದು ತೀರ್ಮಾನಿಸಿ.,…. ಅಮ್ಮ ನಾನು ಬೇಗ ಸ್ನಾನ ಮುಗಿಸಿ ಬರುತ್ತೇನೆ…. ಎಂದು ಹೇಳಿ, ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳನ್ನು ಕರೆದು….”ಬೇಗ ತಿಂಡಿ ಮಾಡಿ, ನಾನು ನನ್ನ ತಾಯಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಬೇಕಿದೆ”…. ಎಂದಳು. ಮಕ್ಕಳು ಸರಿ ಎಂದು ತಲೆ ಆಡಿಸಿ ತಿಂಡಿ ಮಾಡಲು ಅಡುಗೆ ಮನೆಗೆ ಹೋದರು. ಅಡುಗೆಯವರು ಊರಿಗೆ ಹೋಗಿದ್ದ ಕಾರಣ ಸದ್ಯಕ್ಕೆ ಮಕ್ಕಳೇ ತಿಂಡಿ ಮಧ್ಯಾಹ್ನಕ್ಕೆ ಅಡುಗೆ ಮಾಡಿಕೊಳ್ಳುತ್ತಿದ್ದರು. ಜೊತೆಗೆ ಸುಮತಿ ಮಗಳು ಸಹಾಯ ಕೂಡ ಸಹಾಯ ಮಾಡುತ್ತಿದ್ದಳು. ಮನಸ್ಸಿನಲ್ಲಿ ಸ್ವಲ್ಪ ಆತಂಕವನ್ನು ತುಂಬಿಕೊಂಡೇ ಮಗಳು ಬೇಗನೆ ಸ್ನಾನ ಮುಗಿಸಿದಳು. ಅನಾಥಾಶ್ರಮದ ಮಕ್ಕಳು ತಾಯಿ ಮಗಳು ಇಬ್ಬರಿಗೂ ಚಪಾತಿ ಟೊಮೇಟೊ ಚಟ್ನಿ ಮಾಡಿ ತಿನ್ನಲು ಕೊಟ್ಟರು. ಸುಮತಿಗೆ ಹೆಚ್ಚು ನಡೆಯಲು ಸಾಧ್ಯವಿಲ್ಲ ಎಂದು ಮಗಳಿಗೆ ಅನಿಸಿತು. ಅನಾಥಾಶ್ರಮದ ಹುಡುಗನೊಬ್ಬನನ್ನು ಕರೆದು ದಾರಿಯಲ್ಲಿ ಹೋಗುವ ಯಾವುದಾದರೂ ಆಟೋರಿಕ್ಷಾವನ್ನು ನಿಲ್ಲಿಸಿ ಅನಾಥಾಶ್ರಮ ಅಂಗಳಕ್ಕೆ ಕರೆದುಕೊಂಡು ಬರುವಂತೆ ಹೇಳಿದಳು. ಸ್ವಲ್ಪ ಹೊತ್ತಿನಲ್ಲೇ ಆಟೋ ಬಂದಿತು. ತಾಯಿಯನ್ನು ಕರೆದುಕೊಂಡು ಮಗಳು ಆಟೋ ಹತ್ತಿದಳು. ದೊಡ್ಡ ಮಕ್ಕಳನ್ನು ಉದ್ದೇಶಿಸಿ…. “ಎಲ್ಲರಿಗೂ ತಿಂಡಿಯನ್ನು ಕೊಟ್ಟು ರೆಡಿಯಾಗಿ, ಬಾಗಿಲಿಗೆ ಬೀಗ ಹಾಕಿಕೊಂಡು ಹತ್ತಿರದಲ್ಲಿರುವ ಡಮ್ ಅಂಡ್ ಢಫ್ ಶಾಲೆಯ ಮೇಲ್ವಿಚಾರಕರ ಕೈಲಿ ಕೀಲಿಯನ್ನು ಕೊಟ್ಟು ಶಾಲೆಗೆ ಹೋಗಿ”…. ಎಂದು ತಿಳಿಸಿದಳು. ಹತ್ತಿರದಲ್ಲಿಯೇ ಸಕಲೇಶಪುರದ ಸರ್ಕಾರಿ ಆಸ್ಪತ್ರೆ ಇದ್ದ ಕಾರಣ ಆಟೋ ಬೇಗನೆ ಆಸ್ಪತ್ರೆಯನ್ನು ತಲುಪಿತು. ಸುಮತಿಯನ್ನು ಆಟೋದಿಂದ ನಿಧಾನವಾಗಿ ಇಳಿಸಿ, ಆಸ್ಪತ್ರೆಯ ವರಾಂಡದ ಬೆಂಚಿನ ಮೇಲೆ ಕುಳ್ಳಿರಿಸಿ, ಕಂಪೌಂಡರ್ ಹತ್ತಿರ ಹೋಗಿ ಚೀಟಿಯನ್ನು ಬರೆಸಿಕೊಂಡು ಬಂದಳು. ನಂತರ ಸುಮತಿಯ ಕೈ ಹಿಡಿದು ನಿಧಾನವಾಗಿ ನಡೆಸಿಕೊಂಡು ಫಿಜಿಷಿಯನ್ ವೈದ್ಯರ ಕೊಠಡಿಯ ಬಳಿಗೆ ಹೋದಳು. ಅಲ್ಲಿಯೇ ಇದ್ದ ಬೆಂಚಿನ ಮೇಲೆ ಸುಮತಿಗೆ ಕುಳಿತುಕೊಳ್ಳಲು ಹೇಳಿ ಸರತಿಯ ಸಾರಿನಲ್ಲಿ ತಾನು ನಿಂತಳು. ಅಟೆಂಡರ್ ಕರೆದಾಗ ತಾಯಿಯನ್ನು ನಿಧಾನವಾಗಿ ಎಬ್ಬಿಸಿ ಒಳಗೆ ಕರೆದುಕೊಂಡು ಹೋದಳು. ಸುಮತಿಯನ್ನು ಕಂಡ ಕೂಡಲೇ ವೈದ್ಯರು…. “ಏನು ಸುಮತಿಯವರೇ ಹೇಗಿದ್ದೀರಾ?… ಎಂದು ಕೇಳಿದರು. ಸುಮತಿ ವೈದ್ಯರ ಮುಖವನ್ನು ನೋಡಿದಳು. ಅವಳಿಗೆ ವೈದ್ಯರ ಮುಖ ಅಸ್ಪಷ್ಟವಾಗಿ ಕಾಣಿಸಿತು. ಕನ್ನಡಕವನ್ನು ತೆಗೆದು ಸೀರೆಯ ಸರಗಿನಿಂದ ಒರಸಿಕೊಂಡು ಪುನಃ ಹಾಕಿಕೊಂಡಳು… “ಸರ್ ಕೆಲವು ದಿನಗಳಿಂದ ನನ್ನ ಆರೋಗ್ಯ ಸರಿ ಇಲ್ಲ…. ತುಂಬಾ ಆಯಾಸವಾಗುತ್ತಿದೆ… ಏನನ್ನೂ ತಿನ್ನಲು ಸಾಧ್ಯವಾಗುತ್ತಿಲ್ಲ…. ಆಹಾರವನ್ನು ತಿಂದರೆ, ನೀರು ಕುಡಿದರೆ ವಾಂತಿ ಬರುವ ಹಾಗೆ ಆಗುತ್ತಿದೆ”…. ಎಂದಳು. ಸುಮತಿಯನ್ನು ಪರಿಶೀಲಿಸಿದ ವೈದ್ಯರು ಮಗಳನ್ನು ನೋಡುತ್ತಾ…. “ನಾನು ಕೆಲವು ರಕ್ತ ಪರೀಕ್ಷೆ ಹಾಗೂ ಎಕ್ಸರೇ ಪರೀಕ್ಷೆಗೆ ಈ ಚೀಟಿಯಲ್ಲಿ ಬರೆದು ಕೊಡುತ್ತೇನೆ…. ಅಮ್ಮನನ್ನು ಕರೆದುಕೊಂಡು ಹೋಗಿ ಈ ಪರೀಕ್ಷೆಗಳನ್ನು ಮಾಡಿಸಿಕೊಂಡು ಅವುಗಳ ವರದಿಯನ್ನು ತಂದು ನನಗೆ ತೋರಿಸಮ್ಮ”….. ಎಂದು ಹೇಳಿದರು. ಮಗಳು…”ಸರಿ ಸರ್”…. ಎಂದು ಹೇಳುತ್ತಾ ಸುಮತಿಯ ಕೈ ಹಿಡಿದುಕೊಂಡು ನಿಧಾನವಾಗಿ ನಡೆಸಿಕೊಂಡು ರಕ್ತ ಪರೀಕ್ಷೆ ಕೇಂದ್ರದ ಬಳಿಗೆ ಕರೆದುಕೊಂಡು ಹೋದಳು. ರಕ್ತ ಪರೀಕ್ಷೆ ಮಾಡಿಸಿದ ನಂತರ ಎಕ್ಸರೇ ಪರೀಕ್ಷೆ ಮಾಡುವಲ್ಲಿಗೆ ಕರೆದುಕೊಂಡು ಹೋದಳು. ಎಕ್ಸರೇ ಪರೀಕ್ಷಿಸುವಾತ ಎಕ್ಸರೇ ಯಂತ್ರದ ಮುಂದೆ ಸುಮತಿಯನ್ನು ನಿಲ್ಲಿಸಿ, ಪರೀಕ್ಷೆ ಮಾಡಲು ಪ್ರಾರಂಭಿಸಿದರು…. “ಅಮ್ಮಾ ನೀವು ಸೀರೆಯ ಸೆರಗಲ್ಲಿ ಏನನ್ನು ಇಟ್ಟುಕೊಂಡಿದ್ದೀರಿ?…. ಅದನ್ನು ಮಗಳ ಕೈಗೆ ಕೊಡಿ”…. ಎಂದರು. ಆತನ ಮಾತನ್ನು ಕೇಳಿ ಸುಮತಿ…” ಸರ್ ನನ್ನ ಕೈಲಿ ಏನೂ ಇಲ್ಲ”… ಎಂದಳು. ಎಕ್ಸರೇ ಪರೀಕ್ಷಿಸುವಾತ ಸಂಶಯ ಬಂದು ಮತ್ತೆ ಪರೀಕ್ಷಿಸಿದನು. ಏಕೆ ಏನೋ ಅಡ್ಡ ಇರುವಂತೆ ಕಾಣಿಸುತ್ತಿದೆಯಲ್ಲಾ ಎಂದುಕೊಳ್ಳುತ್ತಾ ಮತ್ತೆ ಮತ್ತೆ ಪರೀಕ್ಷಿಸಿದನು. ಎಕ್ಸರೇ ಪರೀಕ್ಷೆ ಮುಗಿದ ನಂತರ ಸ್ವಲ್ಪ ಹೊತ್ತು ಅಲ್ಲಿಯೇ ಹೊರಗೆ ಕಾದು ಕುಳಿತುಕೊಳ್ಳಲು ಹೇಳಿದರು. ಎಕ್ಸರೇ ಪರೀಕ್ಷಿಸುವಾತ ಹೇಳಿದ ಮಾತೇ ಮಗಳ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು. ಆತ ಏಕೆ ಹಾಗೆ ಹೇಳಿರಬಹುದು? ಎಂದು ಯೋಚಿಸುತ್ತಾ ತಾಯಿಯ ಕೈ ಮೇಲೆ ಕೈ ಇಟ್ಟು…. ಏನು ಇರೋದಿಲ್ಲ ಅಮ್ಮಾ…. ಎಂದು ಹೇಳಿ, ಆತ ಏಕೆ ಹಾಗೆ ಹೇಳಿರಬಹುದು? ಎಂದು ಆಲೋಚಿಸುತ್ತಾ ಕುಳಿತಳು. ಸ್ವಲ್ಪ ಹೊತ್ತು ಕಾದು ಕುಳಿತ ನಂತರ ಎಕ್ಸರೇ ವರದಿ ಬಂದಿತು. ಆತ ಮಗಳನ್ನು ಒಳಗೆ ಕರೆದು…. “ಆದಷ್ಟು ಬೇಗ ನಿನ್ನ ಅಮ್ಮನ ವರದಿಯನ್ನು ವೈದ್ಯರಿಗೆ ತೋರಿಸು… ಹೆಚ್ಚು ತಡ ಮಾಡಬೇಡ”…. ಎಂದು ಹೇಳಿದರು. ಅವರು ಹೇಳಿದ ಮಾತಿನಿಂದ ಮಗಳಿಗೆ ಆತಂಕವಾಯಿತು. ಎಕ್ಸರೇ ಪರೀಕ್ಷಿಸುವವನ ಮುಖವನ್ನು ನೋಡಿದಳು…. “ನಾನು ಇಲ್ಲಿ ಏನನ್ನು ಹೇಳಲು ಸಾಧ್ಯವಿಲ್ಲ…. ಬೇಗ ತೆಗೆದುಕೊಂಡು ಹೋಗಿ ವೈದ್ಯರಿಗೆ ತೋರಿಸು ಅವರು ಎಲ್ಲವನ್ನೂ ನಿಮಗೆ ತಿಳಿಸುತ್ತಾರೆ”…. ಎಂದರು. ಅವರು ಹೇಳಿದ ಮಾತನ್ನು ಕೇಳಿ ಆತಂಕದಿಂದಲೇ ತಾಯಿಯ ಕೈಯನ್ನು ಹಿಡಿದು ನಿಧಾನವಾಗಿ ಎಬ್ಬಿಸಿ ವೈದ್ಯರ ಕೊಠಡಿಯ ಬಳಿಗೆ ಕರೆದುಕೊಂಡು ಹೋದಳು. ಅಟೆಂಡರ್ ಕೈಲಿ ವರದಿಯನ್ನು ಕೊಟ್ಟಾಗ ಆತ ಆ ವರದಿಯನ್ನು ತೆಗೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದನು. ಅಟೆಂಡರ್ ಹೊರಗೆ ಬಂದು ತಾಯಿ ಮಗಳು ಇಬ್ಬರನ್ನೂ ವೈದ್ಯರು ಕರೆಯುತ್ತಿದ್ದಾರೆ ಎಂದು ತಿಳಿಸಿದನು. ಇಬ್ಬರೂ ವೈದ್ಯರ ಕೊಠಡಿಯ ಒಳಗೆ ಪ್ರವೇಶಸಿದರು. ಒಳಗೆ ಹೋದಾಗ ವೈದ್ಯರು ಎಕ್ಸರೇ ಫಿಲಂ ಅನ್ನು ಕೂಲಂಕುಶವಾಗಿ ಪರೀಕ್ಷಿಸಿ ನೋಡುತ್ತಿದ್ದರು.ತಾಯಿ ಮತ್ತು ಮಗಳು ಒಳಗೆ ಬಂದಾಗ ಕುಳಿತುಕೊಳ್ಳುವಂತೆ ಹೇಳಿ, ಸುಮತಿಯನ್ನು ಉದ್ದೇಶಿಸಿ…. “ಸುಮತಿ…ಯಾವಾಗನಿಂದ ನಿಮಗೆ ಅಸ್ವಸ್ಥತೆ ಅನಿಸುತ್ತಿತ್ತು? ಎಂದು ಕೇಳಿದರು…. “ಬಹಳ ದಿನಗಳಿಂದ ನನ್ನನ್ನು ಸ್ವಲ್ಪ ಅಸ್ವಸ್ಥತೆ ಕಾಡುತ್ತಿದೆ…. ನಿಮ್ಮ ಸೂಚನೆಯಂತೆ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ…. ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದೇನೆ…. ಕೆಲವೊಮ್ಮೆ ಊಟದಲ್ಲಿ ಪಥ್ಯ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ”…. ಎಂದಳು.

Read Post »

ಅಂಕಣ ಸಂಗಾತಿ, ವೀಣಾ-ವಾಣಿ

“ಯುಥನೇಶಿಯ…. ದಯಾಮರಣಕ್ಕೆ ಅಸ್ತು” ವೀಣಾ ಹೇಮಂತ್‌ ಗೌಡ ಪಾಟೀಲ್.

ಬದುಕಿನ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್. “ಯುಥನೇಶಿಯ…. ದಯಾಮರಣಕ್ಕೆ ಅಸ್ತು”  ಕಳೆದ ಹಲವಾರು ದಶಕಗಳಿಂದ ಭಾರತ ದೇಶದಲ್ಲಿ ದಯಾಮರಣ ಎಂಬ ಕಾನೂನನ್ನು ಜಾರಿಗೆ ತರಲು ಒತ್ತಾಯಿಸಲಾಗುತ್ತಿತ್ತು. ಇದೀಗ ಆ ಕಾನೂನನ್ನು ಕೆಲ ನಿರ್ದಿಷ್ಟ ನಿರ್ದೇಶನಗಳೊಂದಿಗೆ ಆದೇಶ ಮಾಡಲಾಗಿದೆ. ಏನಿದು ದಯಾ ಮರಣ? ವ್ಯಕ್ತಿಯು ಬದುಕಿದ್ದಾಗಲೇ ಆತನ ದೇಹದ ಎಲ್ಲಾ ಅಂಗಗಳು ನಿಷ್ಕ್ರಿಯಗೊಂಡು ಮುಂದೆ ಆತ ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಆತನನ್ನು ಜೋಪಾನ ಮಾಡುವವರು ಅಸಹಾಯಕತೆಯಿಂದ ಕೈ ಚೆಲ್ಲಿದಾಗ, ಇನ್ನೆಂದೂ ಆತ ವಾಸಿ ಹೊಂದುವುದಿಲ್ಲ ಎಂಬ ಪರಿಸ್ಥಿತಿಯಲ್ಲಿ ಔಷಧಿ ಇಲ್ಲವೇ ಇಂಜೆಕ್ಷನ್ ನೀಡುವ ಮೂಲಕ ಆತನಿಗೆ ಮರಣವನ್ನು ದಯಪಾಲಿಸುವ ಕಾನೂನಾತ್ಮಕ ಒಪ್ಪಿಗೆಯನ್ನು ದಯಾ ಮರಣ ಎಂದು ಹೇಳಬಹುದು.  ಈ ಹಿಂದೆ ಸಾಕಷ್ಟು ಬಾರಿ ಬಹಳಷ್ಟು ಜನ ತಮ್ಮ ಆರೋಗ್ಯ ಸಮಸ್ಯೆಗಳಿಂದ ಬೇಸತ್ತು ಇನ್ನೆಂದೂ ವಾಸಿಯಾಗದ ಕಾಯಿಲೆಗಳಿಂದ ನೊಂದು ದಯಾ ಮರಣಕ್ಕೆ ಅರ್ಜಿ ಹಾಕಿ ರಾಷ್ಟ್ರಪತಿಗಳವರೆಗೆ ಪತ್ರಗಳು ಹೋಗಿದ್ದ ಪ್ರಕರಣಗಳು ಉಂಟು… ಆದರೆ ಭಾರತದ ಜೀವಪರ ಸಂಘಟನೆಗಳು ಈ ದಯಾಮರಣ ಪ್ರಕ್ರಿಯೆಯ ವಿರುದ್ಧ ಹೋರಾಟವನ್ನು ಆರಂಭಿಸಿತ್ತು. ಗೊತ್ತಿದ್ದು ಕೂಡ ಯಾವುದೇ ಒಂದು ಜೀವಿಯ ಬದುಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂಬುದು ಅವರ ವಾದವಾಗಿತ್ತು…. ಇದು ನಿಜ ಕೂಡ.ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಕನಸುಗಳನ್ನು ಹೊತ್ತು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅರುಣ ಶಾಮ್ ಭಾಗ್ ಎಂಬ  ಯುವತಿ ಮುಂಬೈಯ ಕೆ ಎಂ ಆಸ್ಪತ್ರೆಗೆ ನರ್ಸ್ ಆಗಿ ಕೆಲಸಕ್ಕೆ ಸೇರಿದಳು.1973ರ ನವಂಬರ್ 27 ರಂದು ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರುಣಾಳನ್ನು ವಾರ್ಡ್ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೋಹನ್ ಲಾಲ್ ಭಾರ್ತಾ ಎಂಬ ಯುವಕ ಅತ್ಯಾಚಾರ ಮಾಡಲು ಪ್ರಯತ್ನಿಸಿ ಪ್ರತಿರೋಧಿಸಿದ ಆಕೆಯ ಕೊರಳಿಗೆ ಕಬ್ಬಿಣದ ಸರಪಳಿಯಿಂದ ಬಿಗಿದ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ. ಕುತ್ತಿಗೆಗೆ ಬಿಗಿದ ಸರಳಿನಿಂದಾಗಿ ಆಕೆಯ ಮೆದುಳಿಗೆ ಸಂಪರ್ಕ ತಪ್ಪಿ ಆಕೆ ಕೋಮಾಕ್ಕೆ ಜಾರಿದಳು. ಆಸ್ಪತ್ರೆಯ ವೈದ್ಯರ ಸಿಬ್ಬಂದಿಗಳ ಅವಿರತ ಪ್ರಯತ್ನದ ಹೊರತಾಗಿಯೂ ಕೂಡ ಆಕೆ ಚೇತರಿಸಿಕೊಳ್ಳಲಿಲ್ಲ. ಕುಟುಂಬದವರು ಕೂಡ ಹಿಂದೆ ಸರಿದರು.1980 ರಲ್ಲಿ ಆಕೆಯನ್ನು ಆಸ್ಪತ್ರೆಯಿಂದ ಹೊರ ಹಾಕುವ ಪ್ರಯತ್ನವನ್ನು ಮುಂಬೈ ಮಹಾನಗರ ಪಾಲಿಕೆ ಮಾಡಿದರೂ ಅದರ ವಿರುದ್ಧ ಉಗ್ರವಾಗಿ ಧ್ವನಿಯೆತ್ತಿದ ಆಸ್ಪತ್ರೆಯ ನರ್ಸ್ ಗಳ ದೆಸೆಯಿಂದಾಗಿ ಆ ಕಾರ್ಯ ಸ್ಥಗಿತವಾಯಿತು. ಆಸ್ಪತ್ರೆಯ ಒಂದು ಕೋಣೆಯಲ್ಲಿ ಸರಿ ಸುಮಾರು 42 ವರ್ಷಗಳ ಕಾಲ ಆಕೆಯನ್ನು ಮಗುವಿನಂತೆ ಅಲ್ಲಿಯ ನರ್ಸ್ ಗಳು ಜೋಪಾನ ಮಾಡಿದರು.  ಆಕೆಯ ಪರಿಸ್ಥಿತಿಯನ್ನು ಕಂಡು ಕೇಳಿ ನೊಂದ ಪಿಂಕಿ ವಿರಾನಿ ಎಂಬ ವಕೀಲರು ಆಕೆಗೆ ದಯಾಮರಣವನ್ನು ನೀಡಬೇಕಾಗಿ ನ್ಯಾಯಾಲಯದ ಮೊರೆ ಹೋದರು. ಆದರೆ ಹಲವಾರು ಪರ ವಿರೋಧಗಳ ಕಾರಣಕ್ಕೆ ದಯಾಮರಣದ ವಿಷಯ ಜನರ ಗಮನವನ್ನು ಸೆಳೆದಿತ್ತು. ಸುಮಾರು 42 ವರ್ಷಗಳ ಕಾಲ ಕೋಮಾದಲ್ಲಿಯೇ ಇದ್ದ ಅರುಣ 2015ರಲ್ಲಿ ನ್ಯೂಮೋನಿಯಾಗೆ ತುತ್ತಾಗಿ ಸಹಜ ಸಾವನ್ನು ಅಪ್ಪಿದರು ಇದೀಗ ಮತ್ತೆ ದಯಾಮರಣದ ಕುರಿತ ವಿಷಯ ಮುನ್ನೆಲೆಗೆ ಬರಲು ಕಾರಣವಾಗಿದ್ದು ಹಾಗೂ ದಯಾಮರಣವನ್ನು ಕಾನೂನು ಬದ್ಧವಾಗಿ ನೀಡಲು ಮುಂದಾಗಿದ್ದು ಕಳೆದ 13 ವರ್ಷಗಳಿಂದ ಕೋಮದಲ್ಲಿದ್ದು ಮುಂದಿನ ದಿನಮಾನಗಳಲ್ಲಿಯೂ ಕೂಡ ಆರೋಗ್ಯದಲ್ಲಿ ಚೇತರಿಕೆ ಕಾಣುವ ಯಾವುದೇ ಲಕ್ಷಣಗಳು ಇಲ್ಲದ ಕಾರಣ ದೆಹಲಿಯ ಸುಪ್ರೀಂ ಕೋರ್ಟ್ ಅವರಿಗೆ ದಯಾಮರಣವನ್ನು ನೀಡಲು ಒಪ್ಪಿಕೊಂಡಿದ್ದು ಈಗಾಗಲೇ ಎಲ್ಲಾ ಪ್ರಕ್ರಿಯೆಗಳು ಆರಂಭವಾಗಿವೆ. .ಮೂಲತಃ ದೆಹಲಿಯವರಾದ ಹರೀಶ್ ರಾಣಾ ಅವರು ಚಂಡಿಗಡದ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ಓದುತ್ತಿದ್ದರು. 2013 ಆಗಸ್ಟ್ 20ರಂದು ರಕ್ಷಾಬಂಧನದ ದಿನ ಆಕಸ್ಮಿಕವಾಗಿ ತಾವು ಉಳಿದುಕೊಂಡಿದ್ದ ಹಾಸ್ಟೆಲ್ನ ವಸತಿಗೃಹದ ನಾಲ್ಕನೇ ಮಹಡಿಯಿಂದ ನೆಲಕ್ಕೆ ಬಿದ್ದ ಅವರ ದೇಹದ ಎಲ್ಲ ಭಾಗಗಳು ನಿಷ್ಕ್ರಿಯಗೊಂಡಿದ್ದು ಕಳೆದ 13 ವರ್ಷಗಳಿಂದ ಅವರು ಹಾಸಿಗೆಯಲ್ಲಿಯೇ ಇದ್ದಾರೆ. ಮುಂದೆ ಯಾವುದೇ ಚೇತರಿಕೆಯನ್ನು ಕಾಣುವ ಅವಕಾಶವೇ ಇಲ್ಲದ ಅವರ ಪರಿಸ್ಥಿತಿಯನ್ನು ಕಂಡ ಅವರ ಪಾಲಕರು ಹಲವಾರು ವೈದ್ಯಕೀಯ ಮಂಡಳಿಗಳ ದಾಖಲೆಗಳನ್ನು ಹೊತ್ತು ತಮ್ಮ ಮಗನಿಗೆ ದಯಾಮರಣವನ್ನು ದಯಪಾಲಿಸುವ ಅನುಮತಿ ನೀಡಿ ಎಂದು ಸುಪ್ರೀಂಕೋರ್ಟ್ನ ಮೊರೆ ಹೋಗಿದ್ದರು.  ಹಲವಾರು ಪರಿಶೀಲನೆಗಳ ನಂತರ ಅಂತಿಮವಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಜೆಪಿ ಪರ್ದಿ ವಾಲಾ ಮತ್ತು ಕೆ ವಿ ವಿಶ್ವನಾಥನ್ ಅವರು ಕುಟುಂಬದ ಒಪ್ಪಿಗೆ ಹಾಗೂ ವೈದ್ಯಕೀಯ ಮಂಡಳಿಗಳ ವರದಿಯನ್ನು ಆಧರಿಸಿ ಮೊನ್ನೆ ಮಾರ್ಚ್ 11, 2026 ರಂದು ಸಂಪೂರ್ಣ ಜೀವಚ್ಚವವಾಗಿರುವ ಹರೀಶ್ ರಾಣಾ ಅವರಿಗೆ ನಿಷ್ಕ್ರಿಯ ದಯಾ ಮರಣ ನೀಡಲು ರಾಷ್ಟ್ರ ರಾಜಧಾನಿ ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರಿಗೆ ಆದೇಶ ನೀಡಿದ್ದಾರೆ.  ಈಗಾಗಲೇ ಕೋರ್ಟ್ ಆದೇಶದಂತೆ ಮೊದಲ ಪ್ರಕ್ರಿಯೆ ಆರಂಭವಾಗಿದ್ದು ಅವರಿಗೆ ಬಾಹ್ಯವಾಗಿ ಆಹಾರವನ್ನು ಸೇವಿಸಲು ಬಾಯಿಗೆ ಹಾಕಿರುವ ನಳಿಕೆಗಳನ್ನು ತೆಗೆದು ಹಾಕಿದ್ದು ಹಾಗೂ ದೇಹಕ್ಕೆ ಅಳವಡಿಸಲ್ಪಟ್ಟ ವಿಸರ್ಜನಾ ವ್ಯವಸ್ಥೆಗಳನ್ನು  ತೆಗೆದುಹಾಕಲಾಗಿದೆ.ಆತನಿಗೆ ಪಾಲಕರು ಹಾಗೂ ಕುಟುಂಬದವರು ಅಂತಿಮ ವಿದಾಯ ಹೇಳಿದ್ದಾರೆ. ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಹೋದರಿಯರು ಅವರನ್ನು ಕುರಿತು ಎಲ್ಲರನ್ನೂ ಕ್ಷಮಿಸು, ಎಲ್ಲರಿಗೂ ಕ್ಷಮೆ ಕೇಳು ಹಾಗೂ ಶಾಂತಿಯಿಂದ ಹೊರಟುಬಿಡು ಎಂಬ ಅಂತಿಮ ವಾಕ್ಯಗಳನ್ನು ಹೇಳಿ ಅತ್ಯಂತ ಕರುಣಾಪೂರ್ವಕ ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ. ಹತ್ತು ಹಲವಾರು ಕಾಯಿಲೆಗಳಿಂದ ಸಂಪೂರ್ಣ ದೇಹಗಳು ನಿಷ್ಕ್ರಿಯಗೊಂಡು ಮನೋ ದೈಹಿಕ ಯಾತನೆಯನ್ನು ಅನುಭವಿಸುತ್ತಿರುವ, ಬದುಕಿರುವಾಗಲೇ ಸತ್ತಂತೆ ಇರುವ ಹಲವಾರು ಜನರು ಆಸ್ಪತ್ರೆಯ ಮೂಲೆಯ ಬೆಡ್ಗಳಲ್ಲಿ, ಮನೆಗಳಲ್ಲಿ ಇದ್ದು ಅವರಿಗೆ ಮತ್ತು ಅವರ ಯಾತನೆಯನ್ನು ಕಂಡು ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿಯನ್ನು ಅನುಭವಿಸುತ್ತಿರುವ ಅವರ ಕುಟುಂಬದವರಿಗೆ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ನೆಮ್ಮದಿಯ ನಿಟ್ಟುಸಿರನ್ನು ತಂದಿದೆ. ಯಾವುದೇ ಕಾನೂನುಗಳು ದುರ್ಬಳಕೆಯಾಗಬಾರದು ಎಂಬುದಷ್ಟೇ ಸಮಾಜದ ಕಳಕಳಿ. ಹರೀಶ್ ರಾಣಾಗೆ ಭಾವಪೂರಿತ ವಿದಾಯವನ್ನು ಕೋರುತ್ತಾ ವೀಣಾ ಹೇಮಂತ್ ಗೌಡ ಪಾಟೀಲ್

“ಯುಥನೇಶಿಯ…. ದಯಾಮರಣಕ್ಕೆ ಅಸ್ತು” ವೀಣಾ ಹೇಮಂತ್‌ ಗೌಡ ಪಾಟೀಲ್. Read Post »

ನಿಮ್ಮೊಂದಿಗೆ

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಬೋಳುಮರವೂ ಭರವಸೆ ತೋರುತಿದೆ ಈಗಚಿಗುರೆಲೆ ಹೊಸತು ಸಂದೇಶ ಸಾರುತಿದೆ ಈಗ ಖಾಲಿ ಕೊಂಬೆ ಮೇಲೀಗ ಕೋಗಿಲೆ ದರ್ಬಾರುಕುಹೂ ಕುಹೂ ಕೂಗೋ ರಾಗ ಕೇಳುತಿದೆ ಈಗ ನೋವು-ನಲಿವುಗಳಿದ್ದಾಗಲೇ ಬಾಳಿಗೊಂದರ್ಥಬೇವು ಬೆಲ್ಲ ರುಚಿಯ ಜಿಹ್ವೆ ನೋಡುತಿದೆ ಈಗ ಸೃಷ್ಠಿ‌ ತಾ ಸೊಬಗು ತೋರೇ ಅದೆಂಥ ಗಾರುಡಿಕ್ರೋಧಿನಾಮ ಘಳಿಗೆ ಶುಭ ಕೋರುತಿದೆ ಈಗ ಕುಂಬಾರನಿಗೆ ಯುಗಾದಿಯೇ ಹೊಸ ವರ್ಷವುರತ್ನಪಕ್ಷಿಯೇ ಕಣ್ಣ ಮುಂದಣ ಹಾರುತಿದೆ ಈಗ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

You cannot copy content of this page

Scroll to Top