ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ಅವ್ವನ ಮಡಿಲು”ಡಾ ವಿಜಯಲಕ್ಷ್ಮಿ ಪುಟ್ಟಿ

ಕಾವ್ಯ ಸಂಗಾತಿ ಡಾ ವಿಜಯಲಕ್ಷ್ಮಿ ಪುಟ್ಟಿ “ಅವ್ವನ ಮಡಿಲು” ​ಅವ್ವ, ನೀನೆಷ್ಟು ನೆನಪಾಗುತ್ತಿ ಗೊತ್ತಾ?ಜಗತ್ತಿನ ಭಾರವೆಲ್ಲ ಹೆಗಲ ಮೇಲಿರುವಾಗ,ಬಾಲ್ಯದ ಆ ನಿಶ್ಚಿಂತೆಯ ದಿನಗಳು ಕಾಡುತ್ತಿವೆನಿನ್ನ ಸೆರಗಿನ ನೆರಳಲ್ಲಿ ಹಾಯಾಗಿ ಮಲಗುವ ಆಸೆ ಹೆಚ್ಚುತ್ತಿದೆ. ​ಮನಸಿಗೆ ಬೇಜಾರಾದಾಗಲೆಲ್ಲ,ಸಂತೈಸಲು ಸಾವಿರ ಜನರಿದ್ದರೂಅವರ ಮಾತುಗಳಲ್ಲಿ ಸಿಗದ ಆ ನೆಮ್ಮದಿ,ನಿನ್ನ ಮಡಿಲಲ್ಲಿ ತಲೆ ಇಟ್ಟು ಮಲಗಿದಾಗ ಸಿಗುತ್ತಿತ್ತು. ​ಕಣ್ಣೀರು ಸುರಿಸಿದರೆ ಪದೇ ಪದೇ ಕೇಳದೆ,ತಲೆ ಸವರಿ ಸಮಾಧಾನ ಪಡಿಸುತ್ತಿದ್ದ ಆ ನಿನ್ನ ಕೈಗಳು..ಮತ್ತೆ ಬೇಕೆನಿಸುತ್ತಿದೆ ಅವ್ವ,ನಿನ್ನ ಮಡಿಲಲ್ಲಿ ಮಗುವಾಗಿ ಕರಗುವ ಹಂಬಲವಾಗುತ್ತಿದೆ. ​ಯಾರೇ ಏನೇ ಅಂದರೂ, ಎಷ್ಟೇ ಬೆಳೆದರೂ,ನನಗೆ ನೀನೇ ಸಾಟಿಯಿಲ್ಲದ ದೇವತೆ..ನಿನ್ನ ಮಡಿಲ ಆ ಬೆಚ್ಚಗಿನ ಅಪ್ಪುಗೆಯೇ,ನನ್ನ ಬದುಕಿನ ಅತಿ ದೊಡ್ಡ ಆಸ್ತಿ. ಡಾ ವಿಜಯಲಕ್ಷ್ಮಿ ಪುಟ್ಟಿ

“ಅವ್ವನ ಮಡಿಲು”ಡಾ ವಿಜಯಲಕ್ಷ್ಮಿ ಪುಟ್ಟಿ Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ “ನಮ್ಮ ಹಳ್ಳಿ”

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ “ನಮ್ಮ ಹಳ್ಳಿ” ಊರ ಮುಂದಿನ ತ್ವಾಟ ಐತಿ ಬಾಳ ಮಾಟಬರ್ತೀ ಏನ ನೀ ಊಟಕ್ಕ//ಪ// ನೀ ಬರ್ತೀ ಅಂದ್ರ ಸಜ್ಜಿ ರೊಟ್ಟಿಹಿಟ್ಟಿನ ಚಕ್ಳಿ ಶೇಂಗಾ ಗುರೆಳ್ಳು ಚಟ್ನಿಹುಳಿಬಾಣ ಮಾದೇಲಿ ಮಾಡಿಬುತ್ತಿ ಕಟ್ಟಿಕೊಂಡ ಬರ್ತೀನಿತೋಪ್ ಸೆರಿಗಿನ ಕಡ್ಡಿ ಸೀರಿ ಉಟ್ಕೊಂಡಗಾಡಿ ನತ್ತ ಇಟ್ಕೊಂಡ ಬರ್ತೀನಿ// ಎತ್ತಿಗೆ ಸಿಂಗಾರ ಮಾಡ್ಕೊಂಡಕೊರಳಿಗೆ ಹುರಿಗೆಜ್ಜೆ ಕಟ್ಟಿಬಂಡಿಗೆ ಕೊಲಾರಿ ಕಟ್ಟಿಕೊಂಡಸಜ್ಜ ಮಾಡಿಕೊಂಡ ಬಿಡಹೊತ್ತಾರೆ ಎದ್ದ ಹೋಗೋಣಉಂಡ  ತಿಂದ ಸುತ್ತಾಡಿ ಬರೋಣ // ನನ್ನವ್ವನ ಹೊಲದಾಗ ಏನಿಲ್ಲ ಏನ ಐತಿ  ಕೇಳ್ತಿ ಏನ ನೀ ಕಿವಿಗೊಟ್ಟಎಳೆನೀರ ಬೇಕಾದ ಹಣ್ಣ ಹಂಪಲಗೋದಿ ಕಡ್ಲಿ ಹುಣಸಿ ಮಾವುಉಳ್ಳಾಗಡ್ಡಿ ಮೆಂತ್ಯೆ ಮೂಲಂಗಿನೆರಳಿಗೆ ಕೊಂಡ್ರಾಕ ಅಲ್ಲಲ್ಲಿ ಬೇವಿನ ಗಿಡ// ಬಾಜು ಜುಳು ಜುಳು ಹರಿಯೋ ಹಳ್ಳಮೂಲಿಗೊಂದ ಭಾವಿ ಸುತ್ತೆಲ್ಲಾ ಬೇಲಿಹೋಗಾಕೈತಿ ಎನ್ ಹೆಚ್ ಫೋರ್ ರಸ್ತಾನಮ್ಮೂರಾಗ ಏನ ಕೊಂಡ್ರು ಸಸ್ತಾಎಲ್ಲಾ ಮಸ್ತ್ ಮಸ್ತ್ ಹಂಗಂತಬಾಳ ಸುತ್ತಿ ಆಗಬ್ಯಾಡ ನೀ ಸುಸ್ತ// ಗಾಣಿಗ್ಯಾರ ಹೊಲ್ದಾಗ ಸಿಹಿ ಕಬ್ಬಹಳಬರ ಹೊಲ್ದಾಗ ಪ್ಯಾರಲ ಹಣ್ಣಮತ್ತಿಕೊಪ್ಪದಾರಲ್ಲೇ ಸವಿಜೇನ ಐತಿಸಾವಕಾರ ಹೊಲ್ದಾಗ ನೋರೊಂದ ದಿನಸಎಲ್ಲಿಲ್ಲ ನೋಡ ನಮ್ಮ ಹಳ್ಳಿ ಅಂತ ಹಳ್ಳಿನಮ್ಮಣ್ಣನ ಪಾಲಿಗೆ ಇದ ಕನ್ನಡದ ಕಾಶ್ಮೀರ// ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ “ನಮ್ಮ ಹಳ್ಳಿ” Read Post »

ಕಾವ್ಯಯಾನ

ಕಾವ್ಯ ಸಂಗಾತಿ ಕವಿತೆಗಳ ರಾಣಿ ಕವಿತೆಗಳ ರಾಣಿ ಬಣ್ಣಿಸಿದ ಕವಿಕಿವಿಗಳಿಗೆ ಇoಪು  ಮಾತಿನ ಸವಿಹರ್ಷಗೊಂಡಿತು ಹೃದಯ ಸಿಹಿಮರೆಯಿತು ಮನದೊಳಗಿನ ಕಹಿ ಕವಿತೆಯ ಸಾಲುಗಳಲಿ ನಾ ಬಂಧಿಯಾದೆಪ್ರೀತಿಯ ಸಾಲಿನಲಿ ನೀ ಬರಹವಾದೆಸಂತಸದ ಮಳೆ ಸುರಿವ ಮುಗಿಲಾದೆಗರಿಬಿಚ್ಚಿ ನರ್ತಿಸುವ ನಾಟ್ಯದ ನವಿಲಾದೆ ಜೀವನದ ಬೇಸರದಲ್ಲಿ ಜೊತೆಯಾದೆಬರವಣಿಗೆಯ ಬೆರಳಲ್ಲಿ ಸಾಲದೆಜೀವನ ಉತ್ಸಾಹಕ್ಕೆ ಕಾರಣವಾದೆಜೀವನದಿ ಬದುಕುವ ಆಸೆ ತಂದೆ ನಾನೇಗೆ ನಿನ್ನನ್ನು ಪದಗಳಲಿ ವರ್ಣಿಸಲಿಶೃಂಗಾರದಲ್ಲಿ ಬಣ್ಣಿಸಿ ನಾನೆಂತು ಚಿತ್ರಿಸಲಿನನ್ನೊಳಗೆ ನೀನಿರುವೆ ಹೇಗೆ ಮೋಹಿಸಲಿಎಂದೆಂದೂ ಜೊತೆಯಾಗಿರು ಈ ಜನ್ಮದಲಿ. ಲತಾ ಎ ಆರ್ ಬಾಳೆಹೊನ್ನೂರು

Read Post »

ಕಾವ್ಯಯಾನ

ಡಾ.ತಾರಾ ಬಿ ಎನ್‌ ಅವರ ಕವಿತೆ “ಆದರ್ಶ”

ಕಾವ್ಯ ಸಂಗಾತಿ ಡಾ.ತಾರಾ ಬಿ ಎನ್‌ “ಆದರ್ಶ” ಅಂಧಕಾರದ ಮಧ್ಯೆ ದೀಪದಂತೆ ಬೆಳಗುವ,ಜೀವನದ ದಾರಿಗೆ ದಿಕ್ಕು ತೋರಿಸುವ ಬೆಳಕುಆದರ್ಶ, ಮನಸ್ಸಿನ ಮೌನದಲ್ಲಿಮೂಡುವ ನಿಶ್ಶಬ್ದ ಶಕ್ತಿಯ ಸಂಕೇತ.ಲಾಭದ ಲೆಕ್ಕವಿಲ್ಲದೆನಡೆಯುವ ಪಥ,ಭಯದ ನೆರಳನ್ನೂ ಮೀರಿ ನಿಲ್ಲುವ ಧೈರ್ಯ,ಆದರ್ಶ. ಸತ್ಯದ ಮಾತಿಗೆ  ಸೋಲುವಬೆಲೆ ಕೊಡುವ  ಅನರ್ಘ್ಯಹೃದಯಕ್ಜೆ ದೃಢ ನಿರ್ಣಯಹೋರಾಟಕ್ಕೆ ಎದೆಗೊಟ್ತುನಿಲ್ಲುವ ಅಸೀಮ ಬಲಆದರ್ಶ. ಕಷ್ಟದ ಕಲ್ಲುಬಂಡೆಗಳಮೇಲೆ ನಡೆದು,ನೋವಿನ ಮುಳ್ಳುಗಳಸಹಿಸಿಕೊಂಡು, ಉಂಡುನ್ಯಾಯದ ದಾರಿಗೆ ತಡೆಗೋಡೆಮಾನವತೆಯಜೀವಂತ ರೂಪ.ಆದರ್ಶ ಖರೀದಿಯಾಗದು, ಹುದ್ದೆಗೂ ಸೀಮಿತವಲ್ಲ,ಪ್ರತಿ ಸಣ್ಣ ಕಾರ್ಯದಲ್ಲೂನೈತಿಕತೆಯ ಸುವಾಸನೆಹರಡುವ ಗುಣ.ಬಿದ್ದಾಗ ಎತ್ತಿಕೊಳ್ಳುವಸೋತಾಗ ಧೈರ್ಯ ತುಂಬುವನೋಟದಲ್ಲಿ,ಅನ್ಯಾಯದ ಎದುರುಮೌನ  ಮುರಿಯುವ ಅಸ್ತಿತ್ವ ತೋರುತ ನಿಲುವುದು.ಆದರ್ಶ ಸಾವಿರ  ಜ ನಕೆ ಪ್ರೇರಣೆ,ಸತ್ಯ ಶುದ್ಧ ಚಿಂತನೆಸಮಾಜದ ಭವಿಷ್ಯನಿರ್ಮಾಣ.ಸುಳ್ಳಿನ ಸೌಲಭ್ಯವಲ್ಲ,ಸತ್ಯದ ಕಠಿಣತೆಉಸಿರಾಗಿಸಿಕೊಳ್ಳುವುದೇಆದರ್ಶ ಡಾ ತಾರಾ ಬಿ ಎನ್

ಡಾ.ತಾರಾ ಬಿ ಎನ್‌ ಅವರ ಕವಿತೆ “ಆದರ್ಶ” Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

“ಸಾವಿರದ ಶರಣರು ಮಾಲಿಕೆ” ಗುರುವಿನ ಗುರು ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳು

ಶರಣರ ಸಂಗಾತಿ ಸಾವಿಲ್ಲದ ಶರಣರು ಶಶಿಕಾಂತ್‌ ಪಟ್ಟಣ ರಾಮದುರ್ಗಾ ಗುರುವಿನ ಗುರು ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳು  ಯಳಂದೂರು ಶ್ರೀ  ಬಸವಲಿಂಗ ಶಿವಯೋಗಿಗಳು ಚಾಮರಾಜನಗರ ಜಿಲ್ಲೆಯ ಕಾರಾಪುರದ ಗ್ರಾಮದ. ಮಧ್ಯಮ ವ್ಯಾಪಾರ ಕಾಯಕದ ಲಿಂಗಾಯತ ಬಣಜಿಗ ಕುಟುಂಬದಲ್ಲಿ ಜನಿಸಿದರು.  ಬಾಲ್ಯದಲ್ಲಿ ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳು ಶ್ರೀ ಸಿದ್ಧಾರೂಢರ ಕೃಪೆ ಕಟಾಕ್ಷಕ್ಕೆ ಒಳಗಾದರು. ಮುಂದೆ ಗದುಗಿನ ತೋಂಟದಾರ್ಯ ಮಠದ ಅಧಿಪತಿಯಾದರು.  ಒಬ್ಬ ಪ್ರಮುಖ ಲಿಂಗಾಯತ  ಆಧ್ಯಾತ್ಮಿಕ ನಾಯಕರು ಮತ್ತು ವ್ಯಕ್ತಿ, ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಗುರುಗಳು  ಮತ್ತು ಪೂಜ್ಯರು, ತಮ್ಮ ಆಧ್ಯಾತ್ಮಿಕ ಕೊಡುಗೆಗಳಿಂದ ಶ್ರೀ ಹಾನಗಲ್ ಕುಮಾರ ಸ್ವಾಮೀಜಿಗೆ ಚೈತನ್ಯ ದೀಕ್ಷೆ ನೀಡಿ ತಮ್ಮ ಬಳಿಗೆ 12 ವರುಷ ವಿದ್ಯಾರ್ಜನೆಗೆ ಇಟ್ಟು ಕೊಂಡಿದ್ದರು.  ಶ್ರೀ ಶಿವಯೋಗ ಮಂದಿರ ಮತ್ತು ಲಿಂಗಾಯತ  ಧರ್ಮದ ಬೆಳವಣಿಗೆಗೆ ಕಾರಣರಾದರು, ಇವರನ್ನು “ಗುರುವಿನ ಗುರು” ಎಂದು ಗೌರವಿಸಲಾಗುತ್ತದೆ.   *ಬದುಕು ಮತ್ತು  ಕೊಡುಗೆಗಳು:* _____________________ ಆಧ್ಯಾತ್ಮಿಕ ನಾಯಕತ್ವ: ಯಳಂದೂರು ತಾಲ್ಲೂಕಿನ ಕಾರಾಪುರ ವಿರಕ್ತಮಠದ ಪ್ರಮುಖ ಗುರುಗಳಾಗಿದ್ದರು. ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಗುರುಗಳಾಗಿ, ಅವರ ಆಧ್ಯಾತ್ಮಿಕ ಪರಂಪರೆಯನ್ನು ಮುಂದುವರಿಸಿದರು. ಮಹಾಸಭೆಯಲ್ಲಿ ಪಾತ್ರ: ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಮಹಾಸಭೆಯ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಶ್ರೀ ಶಿವಯೋಗ ಮಂದಿರ:  ಶ್ರೀ ಶಿವಯೋಗ ಮಂದಿರದ ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಅವರ ಕೊಡುಗೆ ಮಹತ್ವದ್ದು. ಮಂದಿರದ ತಾಳೆ ಗ್ರಂಥಗಳ ರಕ್ಷಣೆ ಮತ್ತು ಗ್ರಂಥಾಲಯ ಸ್ಥಾಪನೆಯಲ್ಲಿ ಅವರ ಪ್ರಭಾವವಿತ್ತು. *ಧಾರ್ಮಿಕ ಮತ್ತು ಸಾಮಾಜಿಕ ಕೊಡುಗೆ:*  ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಾ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದರು.  , ಯಳಂದೂರು ಬಸವಲಿಂಗ ಶಿವಯೋಗಿಗಳು ಲಿಂಗಾಯತ  ಧರ್ಮದ ಜಾಗೃತಿ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಒಬ್ಬ ಮಹಾನ್ ಶಿವಯೋಗಿಗಳು.  ಪರಮ ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು. * *ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪನೆ*  ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ  ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು ಶ್ರೀ ಬಿದರಿ  ಸದಾಶಿವ ಮಹಾಸ್ವಾಮಿಗಳು  ಪರಮ ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು. ವೈರಾಗ್ಯದ ಮಲ್ಲಣ್ಣಾರ್ಯರ ನಿರಂತರ ಪ್ರಯತ್ನ ಮತ್ತು ವಾರದ ಮಲ್ಲಪ್ಪನವರ ಆರ್ಥಿಕ ಸಹಾಯ ಅರಟಾಳ ರುದ್ರಗೌಡರ ನಿರಂತರ ಯೋಜನೆ ಮುಖ್ಯ ಕಾರಣ.   *ಗುರುವಿನ ಗುರು ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳು* ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳು  ಕಾರಾಪುರ ವಿರಕ್ತಮಠ ಚಾಮರಾಜನಗರ ಜಿಲ್ಲೆ ಅಂದು ಶ್ರೀ  ಹಾನಗಲ್ ಕುಮಾರ ಸ್ವಾಮೀಜಿ ಅವರು  ಯಳಂದೂರು ಶ್ರೀ ಬಸವಲಿಂಗ  ಶಿವಯೋಗಿಗಳ ಲಿಂಗ ಹಸ್ತದಿಂದ ಗುರು ಕಾರುಣ್ಯ ಚೈತನ್ಯ ದೀಕ್ಷೆ ಪಡೆದರು. ಮುಂದೆ ಹಾನಗಲ್ ಶ್ರೀ  ಕುಮಾರ ಶಿವಯೋಗಿಗಳು ಶಿವಯೋಗ ಮಂದಿರ ನಿರ್ಮಾಣಕ್ಕೆ ಮುಂದಾಗಿ ತಮ್ಮ ದೀಕ್ಷಾ ಗುರುಗಳಾದ ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಆಶ್ರಯಕ್ಕೆ ನಿಂತರು. ಶಿವಯೋಗ ಮಂದಿರದ ವಟುಗಳಿಗೆ ಶ್ರೀ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಸಾಕ್ಷಾತ್ ದೇವರು ಅರುವಿನ ಗುರು.ಹೀಗಾಗಿ  ಇಂತಹ ದೊಡ್ಡ ಕುಮಾರ ಶಿವಯೋಗಿಗಳ ಗುರುಗಳು ಭಕ್ತ ವರ್ಗದ ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳು   ಯಳಂದೂರು ತಾಲ್ಲೂಕಿನ ಶ್ರೀ ಕಾರಾಪುರ ವಿರಕ್ತಮಠವು ಕರ್ನಾಟಕ ಧಾರ್ಮಿಕ ಇತಿಹಾಸಕ್ಕೆ ಮಹತ್ತರ ಕೊಡುಗೆ ನೀಡಿದೆ  *ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಲಿಂಗ ಸಮಾಧಿ* ಮೂವತ್ತಾರು  ವರ್ಷಗಳ ಹಿಂದೆ ನಾನು  ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಚರಿತ್ರೆ ಹುಟ್ಟು ಬಾಲ್ಯ ಮತ್ತು ಅವರ ಶಿಷ್ಯ ಪರಂಪರೆಯನ್ನು ಹುಡುಕುತ್ತಾ ಮೊದಲು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠಕ್ಕೆ ಹೋಗಿದ್ದೆ. ಅಲ್ಲಿನ ಅನೇಕ ಹಿರಿಯರ ಮೌಖಿಕ ಚರ್ಚೆಗಳನ್ನು ಆಧರಿಸಿ ಗದಗ ತೋಂಟದಾರ್ಯ ಮಠದಲ್ಲಿ ಅವರ ಚರಿತ್ರೆಗೆ ಶೋಧ ನಡೆಸಿದೆ. ಆಶ್ಚರ್ಯ ಎಂದರೆ  ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳು ಗದಗ ತೋಂಟದಾರ್ಯ ಮಠದ ಜಗದ್ಗುರುಗಳಾಗಿದ್ದರು.  ಇವರ ಲಿಂಗೈಕ್ಯವಾದ ಸಮಾಧಿಯ ಕುರುಹು ನನಗೆ ಸಿಗಲಿಲ್ಲ ಆಗ ಒಬ್ಬ ವಯೋವೃದ್ಧರು ನನಗೆ ಸರ್ ಅಣ್ಣಿಗೇರಿಯಲ್ಲಿ ಒಬ್ಬ ಒಂದು ಲಿಂಗಾಯತ ಧರ್ಮದ ಗದ್ದುಗೆ ಇದೆಯೆಂದು ಹೇಳಿದರು. ಅವರ ಮಾತಿನ ಜಾಡು ಹಿಡಿದುಕೊಂಡು ಅಣ್ಣಿಗೇರಿಗೆ ಹೋಗುವ ಪ್ರಯತ್ನ ಮಾಡಿದೆ.  ನನ್ನ ತಾಯಿಯ ತವರು ಮನೆ ಮುಳುಗುಂದ ವಾಲಿ ಮನೆತನ. ಅಲ್ಲಿಂದ ನಾನು ಶ್ರೀ ಬಸವರಾಜ ವಾಲಿ ಎಂಬ ನನ್ನ ಮಾವನವರೊಂದಿಗೆ ಅಣ್ಣಿಗೇರಿಗೆ ಬಂದೆನು. ಆಗ ತೋಂಟದಾರ್ಯ ಮಠದ ಒಂದು ಗದ್ದುಗೆ ಕಣ್ಣಿಗೆ ಬಿತ್ತು. ಆ ಗದ್ದುಗೆಯ ಗುಡಿಯ ಸುತ್ತಲೂ ಕುರುಳು ಬೆರಣಿ ಉರುವಲು ತಟ್ಟುತ್ತಿದ್ದರು. ಅಣ್ಣಿಗೇರಿ ಗ್ರಾಮಸ್ಥರು ಇದು ನಮ್ಮ ಹಿಂದಿನ ಅಜ್ಜಾರ ಗದ್ದುಗೆ ಎಂದು ಹೇಳಿದರು. ಗ್ರಾಮೀಣ ಭಾಗದ ಜನರಿಗೆ ಅಷ್ಟೊಂದು ಹೆಸರುಗಳು ನೆನಪಿಗೆ ಇರಲಿಲ್ಲ. ಆಗ ನನಗೆ ಇವರು ಗದುಗಿನ ತೋಂಟದಾರ್ಯ ಮಠದ ಪರಂಪರೆ ಜಗದ್ಗುರು ಆಗಿದ್ದರು ಎಂಬ ಸಾಕ್ಷಿ ಸಿಕ್ಕಿತ್ತು. ಇದನ್ನು ಅವಲಂಬಿತವಾಗಿ ಇಟ್ಟು ಕೊಂಡು ಇದು ತೋಂಟದಾರ್ಯ ಮಠದ ಪರಂಪರೆ ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಗದ್ದುಗೆ ಎಂದು ತೀರ್ಮಾನ ಮಾಡಲು ಅನುಕೂಲವಾಯಿತು. ಇದನ್ನು ಗದುಗಿನ ಅಂದಿನ ಜಗದ್ಗುರುಗಳು ಅಪ್ಪಟ ಬಸವ ಪ್ರೇಮಿ  ಶ್ರೀ ಡಾ ಸಿದ್ಧಲಿಂಗ ಸ್ವಾಮೀಜಿ ಅವರಿಗೆ  ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಗದ್ದುಗೆ ವಿಷಯ ಪ್ರಸ್ತಾಪ ಮಾಡಿದೆ. ಆಗ ಶ್ರೀ ಡಾ ಸಿದ್ಧಲಿಂಗ ಸ್ವಾಮೀಜಿ ಅವರು ಅಣ್ಣಿಗೇರಿಯ ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಗದ್ದುಗೆ ಸ್ವಚ್ಛ ಮಾಡಲು ಹೇಳಿ ಮುಂದೆ ಬೋರ್ಡ್ ಹಚ್ಚಿಸುವ ವ್ಯವಸ್ಥೆ ಮಾಡಿ ಐತಿಹಾಸಿಕ ಪ್ರಜ್ಞೆಯನ್ನು ಮೆರೆದರು. ಇದನ್ನು ಮುಂದೆ ತೋಂಟದಾರ್ಯ ಮಠದ ಶ್ರೀ ಎಸ್ ಎಸ್ ಪಟ್ಟಣಶೆಟ್ಟಿ ಆಡಳಿತಾಧಿಕಾರಿಗಳು ಅವರಿಗೆ ಹೇಳಿದ್ದು ನೆನಪಿದೆ. ಇದನ್ನು ಸ್ವತಃ  ಎಸ್ ಎಸ್ ಪಟ್ಟಣಶೆಟ್ಟಿ ಆಡಳಿತಾಧಿಕಾರಿಗಳು ನನಗೆ ಹೇಳಿದರು.  ಅಸ್ಪಷ್ಟವಾಗಿದ್ದ ಸಂಗತಿ ಮತ್ತು ಕೆಲವರಿಗೆ ಮಾತ್ರ ಗೊತ್ತಿದ್ದ ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಗದ್ದುಗೆ ಅಧಿಕೃತವಾಗಿ ದಾಖಲಾಗುವಲ್ಲಿ ಲಿಂಗೈಕ್ಯ ಡಾ ಸಿದ್ಧಲಿಂಗ ಸ್ವಾಮಿಗಳು ಮತ್ತು ಅದನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುತ್ತಿದ್ದರು. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

“ಸಾವಿರದ ಶರಣರು ಮಾಲಿಕೆ” ಗುರುವಿನ ಗುರು ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳು Read Post »

ಕಾವ್ಯಯಾನ

ಇಂದಿರಾ ಮೋಟೆಬೆನ್ನೂರ ಕವಿತೆ, “ಪ್ರೀತಿಸಿದ ತಪ್ಪಿಗೆ..”

ಕಾವ್ಯ ಸಂಗಾತಿ ಇಂದಿರಾ ಮೋಟೆಬೆನ್ನೂರ “ಪ್ರೀತಿಸಿದ ತಪ್ಪಿಗೆ..” ಇಂದು ಈ ಮುಸ್ಸಂಜೆಯಲಿ….ಯಾರೋ ಎಲ್ಲೋಪ್ರೀತಿಸುವ ಹೃದಯಕೆನೋವುಣಿಸಿರಬೇಕು…ಅಕಾಲದಲ್ಲಿ ಆಕಾಶ್ಆರ್ಭಟಿಸಿ ಭೋರ್ಗರೆದುಹೀಗೆ ಸುರಿಯಬೇಕಾದರೆ…ಸದ್ದಿಲ್ಲದೇ ಒಡೆದಎದೆ ತುಣುಕುಗಳುಮುಗಿಲಲಿ ಶೋಕಗೀತೆನುಡಿಸುತಿವೆ…. ಯಾರೋ ಎಲ್ಲೋಹೂವಂತ ಮನಸನುಮಾತಿನ ಮುಳ್ಳುಗಳಿಂದಚುಚ್ಚಿ ನೋಯಿಸಿರಬೇಕು…ಹೆಪ್ಪುಗಟ್ಟಿದ ದುಃಖಕಪ್ಪು ಮೋಡದ ಒಡಲಬಗೆದು ಭೋರೆಂದುಭುವಿಯ ಅಪ್ಪುತಿದೆ… ಯಾರೋ ಎಲ್ಲೋಸ್ನೇಹ ತುಂಬಿದ ಕಂಗಳಿಗೆಅಪಮಾನ  ಆಪಾದನೆಪಟ್ಟಿ ಕಟ್ಟಿರಬೇಕು….ಗರಬಡೆದ ಮುಗಿಲೂ ದುಃಖಿಸಿಬಿಕ್ಕಿಸಳುತ ಮುತ್ತುಮಳೆಸುತ್ತ ಸುರಿಸುತಿದೆ ನೋಡು.. ತಪ್ಪು ಮಾಡದ ಜೀವಬಿಟ್ಟ ಬಿಸಿಯುಸಿರ ಕಾವಿಗೆಸುಟ್ಟು ಸುಡುವ ಸೂರ್ಯನೇ  ನಲುಗಿ ಮರೆಯಾಗಿ ಹೋದ….ಹೂಹೃದಯ ಒಡೆದು ಚೂರಾಗಿದೆಬಿರುಮಾತಿನ ಬಾಣಗಳಿಗೆ…ಪ್ರೀತಿಸಿದ ತಪ್ಪಿಗೆ….. ಇಂದಿರಾ ಮೋಟೆಬೆನ್ನೂರ

ಇಂದಿರಾ ಮೋಟೆಬೆನ್ನೂರ ಕವಿತೆ, “ಪ್ರೀತಿಸಿದ ತಪ್ಪಿಗೆ..” Read Post »

ಕಾವ್ಯಯಾನ

ಶ್ರೀನಿವಾಸ್‌ ಕೆ ಎಂ ಕವಿತೆ-ಸಂಕ್ರಮಣ

ಕಾವ್ಯ ಸಂಗಾತಿ ಶ್ರೀನಿವಾಸ್‌ ಕೆ ಎಂ ಸಂಕ್ರಮಣ ಬುವಿ ಬಾನ ನಡುವೆಯೂಅವಿನಾಭಾವದ ಬಿಡಿಸಲಾರದ  ನಂಟುದಕ್ಷಿಣದ ಪಂಥದಿಂದ ಉತ್ತರದ ಕಡೆಪಥ ಬದಲಿಸುವ ರವಿಯ ಸಂಕ್ರಮಣ. ಕತ್ತಲೆ ಜಗತ್ತು;ಬೆಳದಿಂಗಳ ಒನಪುತಾರೆಗಳ ನಡುವೆ;ಚಂದಿರನ ಸಖ್ಯಪಿಸುಗುಡುವ ಗಾಳಿ;ಮೈ ಕೊರೆವ ಚಳಿ ನಿನ್ನದೆ ಒಲವ ಬೆಳದಿಂಗಳು; ಸಂಕ್ರಮಣದ ಸುಗ್ಗಿಮಾಗುವುದು ಎಂದರೆ;ಅನುಭವದ ಹದ ಬೆರೆತಹಬೆಯಾಡುವ ಮುದ್ದೆ,ಕಾಳು-ಕಡ್ಡಿ,  ಭತ್ತ-ರಾಗಿಒಪ್ಪ ಓರಣ; ರಾಶಿಯ ನಡುವೆ  ನಗುವಮಾಮರದ ಚಿಗುರು.  ಮಾಗಿ ಕಳೆಯೆ,ನವುರಾದ ಭಾವಗಳ;ಉಣ ಬಡಿಸುವ ಬುತ್ತಿತೆರೆದಷ್ಟು  ಸವಿಯಲು; ಅನುಭವದ ಸ್ವಾದ!ನಿಸರ್ಗದ ಅದ್ಭುತ ಚಣ; ಅದೇ ಸುಗ್ಗಿ ಸಂಕ್ರಮಣ ಶ್ರೀನಿವಾಸ ಕೆ ಎಂ

ಶ್ರೀನಿವಾಸ್‌ ಕೆ ಎಂ ಕವಿತೆ-ಸಂಕ್ರಮಣ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಅಂಕಣ ಸಂಗಾತಿ ಧಾರಾವಾಹಿಕಂತು=106 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಪಾರಾಗಿ ಬಂದ ಮಕ್ಕಳು ತನ್ನನ್ನು ಬಲವಾಗಿ ಹಿಂದಿನಿಂದ ಹಿಡಿದುಕೊಂಡವನು ಯಾರೆಂದು ಅವಳಿಗೆ ಊಹಿಸಲು ಸಾಧ್ಯವಿರಲಿಲ್ಲ. ಈ ದಿನ ತನಗೆ ಆಪತ್ತು ಖಂಡಿತ ಹಾಗಾಗಿ ಹೇಗಾದರೂ ಮಾಡಿ ಇವನಿಂದ ಬಿಡಿಸಿಕೊಳ್ಳಬೇಕು. ಎಂದು ಮನದಲ್ಲೇ ಅಂದುಕೊಂಡು “ಕೃಷ್ಣಾ ನನಗೆ ಶಕ್ತಿ ಕೊಡು” ಎಂದು ಕೇಳಿಕೊಂಡಳು. ಕೈಯಲ್ಲಿ ಪುಸ್ತಕ ಹಾಗೂ ಮಡಚಿಟ್ಟಿದ್ದ ಕೊಡೆ ಇತ್ತು. ಅವಳು ಪುಸ್ತಕವನ್ನು ಎದೆಗಾನಿಸಿಕೊಂಡು ನಡೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಳು. ವಸ್ತ್ರವನ್ನು ಧರಿಸಿದ್ದರೂ ಶಲ್ಯವನ್ನು ಹೊದ್ದುಕೊಂಡಿದ್ದರೂ ಕ್ಯಾಮರಾ ಕಣ್ಣುಗಳಿಂದ ವಕ್ಷಸ್ಥಳವನ್ನೇ ದಿಟ್ಟಿಸಿ ನೋಡುವ ಲಂಪಟರ ನೋಟಕ್ಕೆ ಬೇಸತ್ತು ಪುಸ್ತಕವನ್ನು ಎದೆಗವಚಿಕೊಂಡು ನಡೆಯುತ್ತಿದ್ದಳು. ತನ್ನನ್ನು ಬಲವಾಗಿ ಹಿಡಿದುಕೊಂಡವನ ಕರಗಳಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಕೈಯಲ್ಲಿದ್ದ ಕೊಡೆಯ ಹಿಡಿಯಿಂದ ಬಲವಾಗಿ ಒತ್ತಿದಳು. ಬಹುಶಃ ಆತನಿಗೆ ಹೊಟ್ಟೆಗೆ ಏನೋ ಚುಚ್ಚಿದಂತ ಅನುಭವ ಆಗಿರಬೇಕು ಹಿಡಿತವನ್ನು ಸ್ವಲ್ಪ ಸಡಿಲಿಸಿದ. ಇದು ಗಮನಕ್ಕೆ ಬಂದ ಕೂಡಲೇ ಆ ಹುಡುಗಿ ಹಿಂತಿರುಗಿ ನೋಡದೆ ಮಡಚಿದ್ದ ಕೊಡೆಯನ್ನು ಹಿಡಿದುಕೊಂಡು ಅದರ ಹಿಡಿಯಿಂದ ಮತ್ತೊಮ್ಮೆ ಬಲವಾಗಿ ಹೊಟ್ಟೆಗೆ ಗುದ್ದಿದಳು. ಬಹುಶಃ ಅವಳನ್ನು ಹಿಡಿದುಕೊಂಡಾತ ಹೆಚ್ಚು ಎತ್ತರವಿಲ್ಲದವನಿದ್ದಿರಬೇಕು. ಅವನ ಮರ್ಮಾಂಗಕ್ಕೆ ಕೊಡೆಯ ಹಿಡಿಯ ಹೊಡೆತ ಬಲವಾಗಿ ಬಿದ್ದುದರಿಂದ ಅಮ್ಮಾ ಎಂದು ಜೋರಾಗಿ ಕಿರುಚಿಕೊಂಡು ಆತ ಅವಳನ್ನು ಬಿಟ್ಟು ನೆಲದ ಮೇಲೆ ದೊಪ್ಪನೆ ಕುಳಿತುಬಿಟ್ಟ.  ಆತನ ಸ್ನೇಹಿತ …”ಏನಾಯ್ತೋ ನಿನಗೆ”….ಎನ್ನುತ್ತಾ ಆತನನ್ನು ಹಿಡಿಯುವ ಪ್ರಯತ್ನ ಮಾಡಿದಾಗ ಟಾರ್ಚ್ ಕೈಯಿಂದ ಕೆಳಗೆ ಬಿದ್ದ ಸದ್ದು ಕೇಳಿಸಿತು. ಕೂಡಲೇ ಆ ಹುಡುಗಿ ಜಾಗ್ರತಳಾಗಿ ಪುಸ್ತಕವನ್ನೆಲ್ಲ ಅಲ್ಲಿ ಬಿಸಾಡಿ ತನ್ನ ತಂಗಿಯ ಕೈ ಹಿಡಿದು ಮಾತಾಡದೆ ಎಳೆದುಕೊಂಡು ನೆಲಗೇಟಿನ ಗ್ರಿಲ್ ಮೇಲೆ ಹೆಜ್ಜೆ ಇಟ್ಟು ವೇಗವಾಗಿ ಓಡಲು ಶುರು ಮಾಡಿದಳು. ತಂಗಿಯು ತನ್ನ ತೋಳಲ್ಲಿದ್ದ ಪುಸ್ತಕದ ಚೀಲವನ್ನು ಕೆಳಗೆ ಬಿಸಾಡಿ ಅಕ್ಕನೊಂದಿಗೆ ಓಡಿದಳು. ಎಲ್ಲಿ ತಮ್ಮ ಹಿಂದೆ ಅವರು ಬರುತ್ತಿವರೋ ಎಂದು ಹೆದರುತ್ತ ಎಷ್ಟು ಸಾಧ್ಯವೋ ಅಷ್ಟು ವೇಗದಲ್ಲಿ ಓಡುವ ಪ್ರಯತ್ನವನ್ನು ಮಾಡಿದರು. ಮಣ್ಣಿನ ಕಚ್ಚಾ ದಾರಿಯಲ್ಲಿ ಅಲ್ಲಲ್ಲಿ ಕಲ್ಲುಗಳು ಎದ್ದಿದ್ದವು. ಜೊತೆಗೆ ಕತ್ತಲು ಬೇರೆ, ಓಡುತ್ತಿರುವಾಗ ತಂಗಿ ಎಡವಿ ಬಿದ್ದಳು. ಬಿದ್ದ ತಂಗಿಯನ್ನು ಹಿಡಿದೆತ್ತಿ….”ಬಾ ಆದಷ್ಟು ಬೇಗ ಹೋಗೋಣ ….ಇಲ್ಲದಿದ್ದರೆ ನಮಗೆ ಆಪತ್ತು ಖಂಡಿತ”… ಎಂದಾಗ ಮಂಡಿ ತರಚಿ ಹೆಬ್ಬೆರಳು ಕೂಡ ನೋಯುತ್ತಿದ್ದರೂ ಅಕ್ಕನ ಮಾತಿಗೆ ಸರಿ ಎಂದು ಜೊತೆಗೆ ತಾನೂ ಓಡಿದಳು. ಇಳಿಜಾರು ದಾಟಿದ ನಂತರ ತಿರುವಿನ ಪಕ್ಕದಲ್ಲಿಯೇ ರೈಟರ್ ಮನೆ ಇತ್ತು. ಅಕ್ಕ ಓಡುತ್ತಲೇ ಹೋಗಿ ರೈಟರ್ ಮನೆಯ ಬಾಗಿಲನ್ನು ತಟ್ಟಿದಳು…” ಸರ್ ದಯವಿಟ್ಟು ಬಾಗಿಲು ತೆಗೆಯಿರಿ”… ಎಂದು ಜೋರಾಗಿ ಬಾಗಿಲನ್ನು ಬಡಿದಳು. ಆಗತಾನೆ ರಾತ್ರಿಯ ಊಟ ಮುಗಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲೆಂದು ಕುಳಿತಿದ್ದ ರೈಟರ್ ಬಾಗಿಲು ಜೋರಾಗಿ ಬಡಿಯುವ ಸದ್ದಿಗೆ ಬೇಗನೆ ಬಂದು ಬಾಗಿಲು ತೆರೆದರು. ನೋಡಿದರೆ ಸುಮತಿಯ ಇಬ್ಬರು ಮಕ್ಕಳೂ ಏದುಸಿರು ಬಿಡುತ್ತಾ ನಿಂತಿದ್ದರು. ಬಹಳ ಹೆದರಿದಂತೆ ಕಂಡರು.  “ಏನಾಯ್ತು ಮಕ್ಕಳೇ?…. ಯಾಕೆ ಹೀಗೆ ಹೆದರುತ್ತಾ ನಿಂತಿರುವಿರಿ?… ಎಂದು ರೈಟರ್ ಕೇಳಿದಾಗ ಹೇಳಲು ಬಾಯಿ ತೆರೆದಳಾದರೂ ಅವಳಿಂದ ಮಾತು ಬರಲಿಲ್ಲ ಬಾಯಿ ಒಣಗಿ ಹೋಗಿತ್ತು. ಅದನ್ನರಿತ ರೈಟರ್ ತನ್ನ ಪತ್ನಿಯನ್ನು ಕೂಗಿ ಸ್ವಲ್ಪ ನೀರು ತೆಗೆದುಕೊಂಡು ಬಾ ಎಂದು ಹೇಳಿದರು. ಒಂದು ಗುಟುಕು ನೀರು ಕುಡಿದ ಹುಡುಗಿ ನಡುಗುತ್ತಲೇ ಎಲ್ಲಾ ವಿವರವನ್ನು ತಿಳಿಸಿದಳು. ತಂಗಿಯು ಹೆದರಿ ಗಾಬರಿಯಿಂದ ನಿಂತಿದ್ದಳು ಜೊತೆಗೆ ಅವಳಿಗೆ ಕಾಲು ಕೂಡ ತುಂಬಾ ನೋಯುತ್ತಿತ್ತು. ಸುಮತಿಯ ಮಗಳ ಮಾತನ್ನು ಆಲಿಸಿದ ರೈಟರ್ ಒಳಗೆ ಹೋಗಿ ಟಾರ್ಚ್ ತಂದು…”ನಡೆಯಿರಿ ಮಕ್ಕಳೇ ನಾನು ನಿಮ್ಮ ಜೊತೆ ಬರುತ್ತೇನೆ…. ನೋಡೋಣ ನೆಲಗೀಟಿನ ಬಳಿ ಯಾರಿದ್ದರೆ ನೋಡೋಣ?….. ಎಂದು ಹೇಳುತ್ತಾ ಮಕ್ಕಳ ಜೊತೆ ಅವರು ಅಲ್ಲಿಯವರೆಗೆ ಹೋದರು. ಅಲ್ಲಿ ಯಾರೂ ಇರಲಿಲ್ಲ. ಬಹುಶಃ ತಮ್ಮಿಂದ ಬಿಡಿಸಿಕೊಂಡು ಓಡಿದ ಮಕ್ಕಳು ಯಾರನ್ನಾದರೂ ಕರೆದುಕೊಂಡು ಬರಬಹುದು ಎನ್ನುವ ಅರಿವಿದ್ದುದರಿಂದ ಅವರಿಬ್ಬರೂ ಅದಾಗಲೇ ಅಲ್ಲಿಂದ ಹೊರಟಿದ್ದರು. ಮಕ್ಕಳ ಪುಸ್ತಕ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಎಲ್ಲಾದರೂ ತೋಟದೊಳಗೆ ಅಡಗಿ ಕುಳಿತಿರಬಹುದು ಎನ್ನುವ ಗುಮಾನಿಯಿಂದ ರೈಟರ್ ಒಂದಷ್ಟು ದೂರದವರೆಗೂ ಟಾರ್ಚ್ ಲೈಟ್ ಹಾಕಿ ಹುಡುಕಿದರು. ಅಲ್ಲಿ ಯಾರೂ ಇರಲಿಲ್ಲ. ಮಕ್ಕಳಿಗೆ ಧೈರ್ಯ ಹೇಳುತ್ತಾ ಜೊತೆಗೆ ಕರೆದುಕೊಂಡು ಮನೆಯ ಕಡೆಗೆ ಹೊರಟರು. ರೈಟರ್ ಮನೆಯ ಒಂದು ತಿರುವಿನ ನಂತರವೇ ಸುಮತಿ ವಾಸಿಸುತ್ತಿದ್ದ ಮನೆ ಇದ್ದಿದ್ದು. ಹಾಗಾಗಿ ಮಕ್ಕಳು ರೈಟರ್ ರವರಿಗೆ ಧನ್ಯವಾದ ಹೇಳಿ ಅಲ್ಲಿಂದ ಹೊರಟರು. ಅಕ್ಕ ತಂಗಿಯರಿಬ್ಬರೂ ಆತಂಕದಲ್ಲಿದ್ದರು. ಯಾವುದೋ ಒಂದು ದುರ್ಘಟನೆಯಿಂದ ಕೂದಲೆಳೆಯಲ್ಲಿ ಪಾರಾದ ಸಮಾಧಾನವೂ ಇತ್ತು. ಮಕ್ಕಳು ಇಷ್ಟೊತ್ತಾದರೂ ಮನೆಗೆ ಬರದ ಕಾರಣ ಸುಮತಿ ಮನೆಯಿಂದ ಆಚೆ ಬಂದು ನಲ್ಲಿಯ ಕಟ್ಟೆಯ ಬಳಿ ನಿಂತು ದಾರಿಯೆಡೆಗೆ ನೋಡುತ್ತಿದ್ದಳು. ಎರಡು ನೆರಳು ತನ್ನಡೆಗೆ ಬರುತ್ತಿರುವುದು ಕಾಣಿಸಿತು. ಅಕ್ಕ-ತಂಗಿಯರಿಬ್ಬರು ದಾರಿಯಲ್ಲಿ ನಡೆದು ಬರುವಾಗ ನಗುತ್ತಾ, ತಮಾಷೆ ಮಾಡುತ್ತಾ ಬರುವವರು, ಇಂದು ಮೌನವಾಗಿ ನಡೆದು ಬರುತ್ತಿದ್ದರು. ಅವರ ಮೌನವನ್ನು ನೋಡಿ ಸುಮತಿ ತಾನು ಒಂದೆರಡು ಹೆಜ್ಜೆ ಮುಂದೆ ನಡೆದಳು. ಕತ್ತಲಿನಲ್ಲೂ ಅಮ್ಮನ ಆಕೃತಿ ಮಕ್ಕಳಿಗೆ ಗೋಚರಿಸಿತು. ಇಬ್ಬರೂ ಓಡೋಡಿ ಬಂದು ಅಮ್ಮನನ್ನು ಬಿಗಿಯಾಗಿ ಅಪ್ಪಿಕೊಂಡರು. ಮಕ್ಕಳ ಈ ಚರ್ಯೆ ಸುಮತಿಗೆ ಹೊಸದೆನಿಸಿತು. ಅವ್ಯಕ್ತ ಭಯವೊಂದು ಮನವನ್ನು ಕಾಡಿ ಗಾಬರಿಯಾದಳು….”ಏನಾಯ್ತು ಮಕ್ಕಳೇ, ಏಕೆ ಇಂದು ಇಷ್ಟು ಮೌನವಾಗಿದ್ದೀರಿ?!!.. ಎಂದು ಕೇಳಿದಾಗ ಎರಡನೇ ಮಗಳು ಸಣ್ಣಗೆ ಬಿಕ್ಕುತ್ತಿರುವುದು ಸುಮತಿಯ ಅರಿವಿಗೆ ಬಂತು. ಅವಳ ಬಿಕ್ಕುವಿಕೆ ಕೇಳಿ ಸುಮತಿಯ ಹೃದಯ ಸಣ್ಣಗೆ ನಡುಗಿತು. ಮೂರನೇ ಮಗಳು….,”ಅಮ್ಮಾ ಕಾಲು ನೋಯುತ್ತಿದೆ…. ನಡಿ ಬೇಗ ಮನೆಗೆ ಹೋಗೋಣ…. ಅಲ್ಲಿ ಹೋಗಿ ಮಾತನಾಡೋಣ”…. ಎಂದಳು. ಮಕ್ಕಳು ದಾರಿಯಲ್ಲಿ ಬಿದ್ದಿರಬಹುದು. ಹೆಚ್ಚು ಪೆಟ್ಟಾಗಿರಬಹುದು. ಹಾಗಾಗಿ ಎರಡನೇ ಮಗಳು ಬಿಕ್ಕುತ್ತಿರಬಹುದು. ಎಂದು ತಿಳಿದ ಸುಮತಿ….. “ಬನ್ನಿ ಮಕ್ಕಳೇ, ಅಡುಗೆ ಮಾಡಿದ್ದೇನೆ ಬಿಸಿಯಾದ ಊಟವನ್ನು ತಿನ್ನುವಿರಂತೆ”….ಎಂದು ಮೂರನೇ ಮಗಳ ಕೈ ಹಿಡಿದು ನಿಧಾನವಾಗಿ ಮೆಟ್ಟಲುಗಳನ್ನು ಇಳಿದಳು. ಎರಡನೇ ಮಗಳು ಬಿಕ್ಕುತ್ತಲೇ ಅವರಿಬ್ಬರನ್ನು ಹಿಂಬಾಲಿಸಿದಳು. 

Read Post »

ಪುಸ್ತಕ ಸಂಗಾತಿ

“ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿ”ಅವಲೋಕನ,ಡಾ.ಬಸವರಾಜ ಗೌಡನಬಾವಿ

ಪುಸ್ತಕ ಸಂಗಾತಿ ಡಾ.ಬಸವರಾಜ ಗೌಡನಬಾವಿ “ಬರಗೂರು ರಾಮಚಂದ್ರಪ್ಪನವರ  ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿ”ಅವಲೋಕನ,   ಮನುಷ್ಯನನ್ನು ಪ್ರೀತಿಸಿದರೆ ಮಾತ್ರ ಮಾನವೀಯತೆಗೆ ಅರ್ಥ ಬರುತ್ತದೆ. ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ. ಇಂದು ಭಾರತದ ಸೌಹಾರ್ದ ವಾತಾವರಣ ಕದಡುತ್ತಿದೆ. ಇಂತಹ ವಾತಾವರಣದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿಯೂ ಮನುಷ್ಯ ಸಂಬಂಧಗಳ ಬೆಸೆಯುವ ಕನಸನ್ನು ಹೊತ್ತು ಬರುತ್ತಿದೆ. ಬರಗೂರು ರಾಮಚಂದ್ರಪ್ಪನವರು ತಮ್ಮ ಕೃತಿಯ ಮೂಲಕ ದೇಶದಲ್ಲಿರುವ ತಾರತಮ್ಯ, ಅಸಮಾನತೆ, ಮೂಲಭೂತವಾದಿತನ, ದ್ವೇಷ, ಈರ್ಷ್ಯೆಗಳು ಸಮಾನತೆ, ಸೌಹಾರ್ದತೆಯ ಆಶಯಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು  ವಿಷಾದಿಸುತ್ತಾರೆ. ಬರಗೂರು ರಾಮಚಂದ್ರಪ್ಪನವರು ವಿವಿಧ ಸಂದರ್ಭದಲ್ಲಿ ಬರೆದ ಮಹತ್ವದ ಲೇಖನಗಳನ್ನು ಈ ಕೃತಿಯಲ್ಲಿ ಜೊಡಿಸಿಕೊಟ್ಟಿದ್ದಾರೆ. ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಎನ್ನುವ ಈ ಕೃತಿ ಒಟ್ಟು ಹತ್ತು ಲೇಖನಗಳನ್ನು ಒಳಗೊಂಡಿದೆ. ಸೌಹಾರ್ದತೆ ಮತ್ತು ಸಮಾನತೆ ಭಾರತದ ಎರಡು ಕಣ್ಣುಗಳು. ಸೌಹಾರ್ದತೆ ಎಂದರೆ ಪಕ್ಷಪಾತವಲ್ಲ, ಪೂರ್ವಗ್ರಹವಲ್ಲ, ಯಾವುದರ ಪರವೂ, ವಿರೋಧವೂ ಅಲ್ಲ. ಎಲ್ಲ ಅವಿವೇಕಗಳನ್ನು ಮೀರಿದ ವಿವೇಕ ಹಾದಿ. ಇಲ್ಲಿ ನಾವು ವಿವೇಕಾನಂದರ ಧೀರೋದಾತ್ತ ನಿಲುವನ್ನು ಕಾಣುತ್ತವೆ. ಅವರ ಪ್ರಖರ ಸಾಮಾಜಿಕ ವ್ಯಕ್ತಿತ್ವ, ದೀನ, ದಲಿತರ ಉದ್ಧಾರವೇ ಧರ್ಮದ ಮೂಲತತ್ವ ಎನ್ನುವಲ್ಲಿ ಅವರ ವೈಚಾರಿಕತೆ ಸತ್ಯದ ಅನಾವರಣವಾಗುತ್ತದೆ. ಗಾಂಧೀಜಿಯು ಪರಧರ್ಮ ಸಹಿಷ್ಣುತೆಯ ಪ್ರತೀಕ. ಧರ್ಮವು ರಾಷ್ಟ್ರೀಯತೆಯ ಮಾನದಂಡವಲ್ಲ. ಅದೇನಿದ್ದರೂ ಮನುಷ್ಯ ಮತ್ತು ದೇವರ ನಡುವಿನ ವೈಯಕ್ತಿಕ ಸಂಬಂಧ ಎಂದು ಹೇಳುವ ಮೂಲಕ ಪರಧರ್ಮ ಸಹಿಷ್ಣುತೆಯನ್ನು ಪ್ರಬಲವಾಗಿ ಪ್ರತಿಪಾದಿಸುವ ಗಾಂಧೀಜಿಯ ವಿಚಾರಧಾರೆ ರಾಷ್ಟ್ರೀಯತೆಗೂ ಧರ್ಮನಿಷ್ಠೆಗೂ ಸಂಬಂಧವನ್ನು ಕಲ್ಪಿಸುತ್ತಿರುವ ಈ ಸಂದರ್ಭದಲ್ಲಿ ತುಂಬಾ ಅಗತ್ಯವೆಂದು ತಿಳಿಸುತ್ತದೆ. ಅವರ ಸತ್ಯನಿಷ್ಠೆ, ಪರಧರ್ಮ ಸಹಿಷ್ಣುತೆ, ಪ್ರಾಮಾಣಿಕತೆ ಯಾರಿಗೂ, ಯಾವತ್ತಿಗೂ ಆದರ್ಶವೇ, ಅನುಕರಣೀಯವೇ ಆಗಿದೆ. ಗಾಂಧಿ ಎಲ್ಲಾ ಧರ್ಮಿಯರಿಗೂ ಪರಧರ್ಮ ಸಹಿಷ್ಣುತೆ ಉಳ್ಳವರಿಗೂ ಸಾಂಕೇತಿಕ ದಾರಿದೀಪವಾಗಿದ್ದಾರೆ.  ಸಾಮಾಜಿಕ ಪ್ರಜಾಪ್ರಭುತ್ವವನ್ನು ಕುರಿತಂತೆ ಅಂಬೇಡ್ಕರರ ವಿಚಾರಗಳನ್ನು ಕೃತಿ ದಾಖಲಿಸುತ್ತದೆ. ಸಾಮಾಜಿಕ ಪ್ರಜಾಪ್ರಭುತ್ವ ಎಂದರೇನು ಎನ್ನುವ ಪ್ರಶ್ನೆಗೆ ಅದೊಂದು ಜೀವ ಕ್ರಮ. ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಗಳನ್ನು ಜೀವನ ತತ್ವವನ್ನಾಗಿಸಿಕೊಂಡ ಕ್ರಮ. ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆ ಎಂಬ ಮೂಲತತ್ವಗಳಿಗೆ ಧರ್ಮವು ಮನ್ನಣೆ ನೀಡಲೇಬೇಕು. ಇಲ್ಲದಿದ್ದರೆ ಧರ್ಮವು ನಾಶವಾಗುತ್ತದೆ. ನಿಜವಾದ ಧರ್ಮವಿರುವುದು ಮಾನವನ ಹೃದಯದಲ್ಲೇ ಹೊರತು ಶಾಸ್ತ್ರಗಳಲ್ಲಿ ಅಲ್ಲ ಎನ್ನುವುದು ಮನುಷ್ಯ ಬದುಕಿನ ವಾಸ್ತವದ ಮಾತು. ಈ ಮಾತು ಕುವೆಂಪು ಅವರ ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿವುದೇನು? ಎಂಬ ಸಾಲನ್ನು ನೆನಪಿಸುವುದಲ್ಲದೇ ಬದುಕಿನ ವಾಸ್ತವ ಮತ್ತು ಭಾವನಾತ್ಮಕತೆಯ ವೈರುಧ್ಯಗಳನ್ನು ತೆರೆದಿಡುತ್ತದೆ.  ಮನುಷ್ಯರನ್ನು ಹುಡುಕುತ್ತಾ ಹೊರಡುವ ಕೃತಿ ಮನುಷ್ಯರ ಬದಲು ಜಾತಿ ಧರ್ಮಗಳ ಲೆಕ್ಕ ಕೊಡುವ ಸಮಾಜವನ್ನು ಕಂಡು ವ್ಯಥೆಪಡುತ್ತದೆ. ಕನ್ನಡತ್ವದಲ್ಲಿ ಮನುಷ್ಯತ್ವದ ಪರಂಪರೆಯನ್ನು ಕಂಡುಕೊಂಡು ಭವಿಷತ್ತಿನ ಆಶಾವಾದವನ್ನು ಪ್ರಕಟಿಸುತ್ತದೆ. ಅದೇ ಸಮಯದಲ್ಲಿ ತಾಯ್ತನವನ್ನು ಕಳೆದುಕೊಳ್ಳುತ್ತಿರುವ ಸಮಾಜದ ಬಗ್ಗೆಯೂ ಮರುಕಪಡುತ್ತದೆ. ಈ ಕೃತಿಯನ್ನು ಸ್ವೀಕರಿಸುವ ಜನಕ್ಕೆ ತಾಯ್ತನದ ಕರುಳು ಇಲ್ಲದೇ ಹೋದರೂ ಕನಿಷ್ಠ ತಾಯ್ತನದ ಹಂಬಲವಾದರೂ ಹುಟ್ಟಲಿ ಎನ್ನುವ ಆಶಯವನ್ನು ಕೃತಿ ವ್ಯಕ್ತಪಡಿಸುತ್ತದೆ. ಡಾ.ಬಸವರಾಜ ಗೌಡನಬಾವಿ

“ಬರಗೂರು ರಾಮಚಂದ್ರಪ್ಪನವರ ಸೌಹಾರ್ದ ಭಾರತ ಸಮಾನತೆಯ ಸ್ನೇಹಿತ ಕೃತಿ”ಅವಲೋಕನ,ಡಾ.ಬಸವರಾಜ ಗೌಡನಬಾವಿ Read Post »

You cannot copy content of this page

Scroll to Top