ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ವಿಶ್ವಾಸ್‌ ಗೌಡ ಅವರ ಕೃತಿ “ನೆಮ್ಮದಿಯ ವಿಳಾಸವೆಲ್ಲಿದೆ?”ಒಂದು ಅವಲೋಕನ, ಮಧು ಮಾಲತಿ

ಪುಸ್ತಕ ಸಂಗಾತಿ ವಿಶ್ವಾಸ್‌ ಗೌಡ ಅವರ ಕೃತಿ “ನೆಮ್ಮದಿಯ ವಿಳಾಸವೆಲ್ಲಿದೆ?” ಒಂದು ಅವಲೋಕನ, ಮಧು ಮಾಲತಿ ಪತ್ರಕರ್ತ ˌ ಸಾಹಿತಿ ಹಾಗೂ ಅಂಕಣಕಾರರಾದ ಶ್ರೀ ವಿಶ್ವಾಸ್  ಡಿ ಗೌಡರ “”ನೆಮ್ಮದಿಯ ವಿಳಾಸವೆಲ್ಲಿದೆ”” ಕೃತಿಯನ್ನು ಖಂಡಿತಾ ಒಂದೊಮ್ಮೆ ಓದಲೇಬೇಕು .ಈ ಕೃತಿಯ ಶೀರ್ಷಿಕೆಯೇ ಬಹಳ ಆಪ್ತವಾಗುತ್ತದೆ. ಏಕೆಂದರೆ ಪ್ರತಿಯೊಬ್ಬರೂ ಸಹ ಎಷ್ಟೇ ಸುಖಿಯಾಗಿದ್ದರೂ ಈ ನೆಮ್ಮದಿಯನ್ನು ಕ್ಷಣವೂ ಅರಸುವವರೇ .ಈ ನೆಮ್ಮದಿಯ ವಿಳಾಸವ ಹುಡುಕಿ ಹುಡುಕಿ ಸೋತವರೇ ಹೆಚ್ಚು. ಅದರ ವಿಳಾಸವನ್ನು ಅರಸುವವರಿಗಾಗಿಯೇ ವಿಶ್ವಾಸ್ ಗೌಡರು ಈ ಕೃತಿಯನ್ನು ಬರೆದಿರಬಹುದು. ಏಕೆಂದರೆ ಇಲ್ಲಿರುವ ಪ್ರತಿ ಕಥೆಯು ಮನಸ್ಸಿಗೆ ತುಂಬಾ ಹತ್ತಿರವಾದಂತೆ ತೋರುತ್ತದೆ .ಪ್ರತೀ ಕಥೆಯಲ್ಲೂ ಓದುಗ ತನ್ನನ್ನೇ ಅಲ್ಲಿ ಬಿಂಬಿಸುತ್ತ ಹೋದಂತಿದೆ. ಇಲ್ಲಿರುವ ಪ್ರಸಂಗಗಳು ಒಂದಿಲ್ಲೊಂದು ರೀತಿಯಲ್ಲಿ ಎಲ್ಲರ ಜೀವನದಲ್ಲೂ ಘಟಿಸಿಯೇ ಇರುತ್ತದೆ .ಇಂತಹ ಘಟನೆಗಳನ್ನೇ ಕಥೆಯ ಜೀವಾಳವಾಗಿಸಿಕೊಂಡು ಸರಳ ಸುಂದರವಾಗಿ ಹೆಣೆಯುತ್ತಾ ಓದುಗನೆದೆಗೆ ಶಾಶ್ವತವಾಗಿ ಇಳಿಸುವಲ್ಲಿ ವಿಶ್ವಾಸ್ ಗೌಡರ ಪ್ರಭುದ್ಧತೆ ಎದ್ದು ಕಾಣುತ್ತದೆ.ಇಲ್ಲಿ ಬರುವ ಅಪ್ಪ ಮಕ್ಕಳ ಭಾವನಾತ್ಮಕ ಸಂಬಂಧಗಳ ಬರಹಗಳು ಓದುಗನ ಕಣ್ಣೆವೆಗಳನ್ನು ತುಂಬದೇ ಇರಲಾರದು .ಮಗಳಿಗಾಗಿ ಜೀವನವನ್ನೇ ಮುಡಿಪಿಡುವ ಅಪ್ಪ ˌಇಹಲೋಕ ತ್ಯಜಿಸಿಯು ಮಗನ ನೌಕರಿಗಾಗಿ ಅದೃಶ್ಯದಲ್ಲೂ ದೃಶ್ಯದಂತೆ ಗೋಚರಿಸಿ ಕಚೇರಿಗೆ ಅಲೆವ ಅಪ್ಪ ˌಖಾಯಿಲೆಯಿಂದ ಮೂಗನಾದ ಮಗನಿಗಾಗಿ ಮಾತಿದ್ದರೂ ಮೌನಕೋಟೆಯೊಳಗೆ ಬಂಧಿಯಾಗಿ ಜೀವಮಾನವಿಡೀ ಮೂಗನಾಗಿ ಬದುಕಿದ ಅಪ್ಪ ಹೀಗೆ ಅಪ್ಪನ ವ್ಯಕ್ತಿತ್ವ ಪ್ರತೀಕಥೆಯಲ್ಲೂ ಹಿಮಾಲಯಕ್ಕಿಂತ ಎತ್ತರದ ಸ್ಥಾನದಲ್ಲೇ ನಿಲ್ಲುತ್ತದೆ.ಈ ಕಾರಣಗಳಿಗಾಗಿ ಈ ಕೃತಿ ಮತ್ತಷ್ಟು ಆಪ್ತವಾಗುತ್ತಾ ಸಾಗುತ್ತದೆ .ಪ್ರೇಮ ಪ್ರಸಂಗಗಳ ಕಥೆಗಳಿಗೆ ಒಳಹೊಕ್ಕರೆ ಪ್ರೀತಿಯ  ಶರಧಿಯಲ್ಲಿ ಮಿಂದೆದ್ದವರೇ ನಾವೆಲ್ಲರೂ. ಅತೀ ನವಿರಾದ ನಾಜೂಕಾದ ಪದಪುಂಜಗಳು ಮತ್ತೆ ಮತ್ತೆ ಸೆಳೆಯುತ್ತವೆ . ಪ್ರತೀ ಓದುಗನೂ ಓದುತ್ತಿದ್ದಂತೆ ತನ್ನದೇ ಪ್ರೇಮ ಕಥೆ ಎಂಬಷ್ಟು ಅಲ್ಲಿ ಕಳೆದು ಹೋಗುತ್ತಾನೆ. ಇಲ್ಲಿ ಬರುವ ಪ್ರೀತಿಯ ಸೆಳೆತಗಳು ˌ ಮೊದಲ ಪ್ರೇಮ ˌ ಪ್ರೇಮ ನಿವೇದನೆಗೆ ತಲ್ಲಣ ಗೊಳ್ಳುವ ಮನಸ್ಸು ˌಸಿಕ್ಕಿಯೂ ಸಿಗದ ಪ್ರೇಮ ಇವೆಲ್ಲದರ ನಡುವೆ ಒಂದಷ್ಟು ಹೊತ್ತು ಓದುಗ ಪ್ರಭು ತನ್ನ ಜೀವನವನ್ನೇ ಅಲ್ಲಿ ಪ್ರತಿಬಿಂಬಿಸಿಕೊಳ್ಳುತ್ತಾನೆ. ಓದುತ್ತಾ  ಓದುತ್ತಾ ಆಧ್ರಗೊಳ್ಳುತ್ತಾನೆ . ನೆಮ್ಮದಿಯ ವಿಳಾಸವನ್ನು ಅರಸುತ್ತ ಅರಸುತ್ತ ಮತ್ತೆ ಮತ್ತೆ ಕೃತಿಯ ಮೇಲೆ ಕಣ್ಣಾಡಿಸುವಷ್ಟು ಬರಹಗಳು ಸೆಳೆಯುತ್ತವೆ.ಎಂದೋ ಅನುಭವಿಸಿದ ನೋವು ˌನಲಿವು ˌ ಸಂಕಟಗಳು ˌ ನಮ್ಮವರನ್ನೇ ಅರಿಯಲಾಗದ ಸ್ಥಿತಿ ˌ  ದಕ್ಕಿಯೂ ದಕ್ಕದ ಪ್ರೀತಿ ಇವೆಲ್ಲವುಗಳ ಸುತ್ತ ನಮ್ಮ ಬದುಕು ಗಿರಕಿ ಹೊಡೆಯುತ್ತಿರುತ್ತದೆ .ಇಂತಹ ಘಟನೆಗಳೇ ವಿಶ್ವಾಸ್ ಗೌಡರ ಬರಹದ ಕೇಂದ್ರ ಬಿಂದು.  ಸುಮ್ಮನೇ  ಕೈಗೊತ್ತಿಕೊಂಡರೂ ಕೃತಿಯನ್ನು ಸಂಪೂರ್ಣ ಓದುವವರೆಗೂ ಅದು ತನ್ನತ್ತ ಸೆಳೆಯುತ್ತಲೇ ಇರುತ್ತದೆ. ಸಾಹಿತ್ಯದಲ್ಲಿ ಅಭಿರುಚಿ ಇರುವವರು ಒಮ್ಮೆಯಾದರೂ ಈ ಕೃತಿಯನ್ನು ಪಡೆದು ಓದಲೇಬೇಕೆನ್ನುವಷ್ಟು ಕೃತಿ ಸಿದ್ಧಗೊಂಡಿದೆ .ಈ ಮೂಲಕ ವಿಶ್ವಾಸ ಡಿ ಗೌಡರಿಗೆ ಶುಭಾಶಯಗಳನ್ನು ಕೋರುತ್ತಾ  ಓದುವೆಡೆಗೆ ಸಾಗೋಣ. ಮಧು ಮಾಲತಿ‌ ರುದ್ರೇಶ್

ವಿಶ್ವಾಸ್‌ ಗೌಡ ಅವರ ಕೃತಿ “ನೆಮ್ಮದಿಯ ವಿಳಾಸವೆಲ್ಲಿದೆ?”ಒಂದು ಅವಲೋಕನ, ಮಧು ಮಾಲತಿ Read Post »

ಕಾವ್ಯಯಾನ, ಗಝಲ್

“ಕವಿ ಗಾಲಿಬ್‌ ಜನ್ಮದಿನಕ್ಕೊಂದು ಗಜಲ್”‌ಎಮ್ಮಾರ್ಕೆ

ಕಾವ್ಯ ಸಂಗಾತಿ ಎಮ್ಮಾರ್ಕೆ “ಕವಿ ಗಾಲಿಬ್‌ ಜನ್ಮದಿನಕ್ಕೊಂದು ಗಜಲ್”‌ ಕಂಬನಿ ಹನಿಗಳಿಗೆ ಭೇದವಿಲ್ಲ ಹರಿಯುತ್ತವೆ ಗಾಲಿಬ್ಅತಿ ಸಂತಸಕೂ,ಸಂತಾಪಕೂ ಸುರಿಯುತ್ತವೆ ಗಾಲಿಬ್ ತೊಳೆದಷ್ಟೂ ಸ್ವಚ್ಛವಾಗುವಂತೆ ಕಂಬನಿ ಕಣ್ತೊಳೆವುದುಕೆಲ ಹೊತ್ತಿಗೆ ಹನಿಗಳು ಕಣ್ಣ ತೊರೆಯುತ್ತವೆ ಗಾಲಿಬ್ ಸಂತಾಪವು ರಜೆ ಮೇಲಿರಲು ಸಂತಸಗಳದ್ದೇ ಹಾವಳಿಅನಂದದ ಜತೆ ಬಾಷ್ಪಗಳಾಗಿ ಬೆರೆಯುತ್ತವೆ ಗಾಲಿಬ್ ಒಬ್ಬೊಬ್ಬರ ಕಣ್ಣೀರಿನ ಕಥೆ ಒಂದೊಂದು ಥರವೇ ಇದೆಮೊಸಳೆ ಆಶ್ರುಗಳು ಮೋಸದಿ ಕರೆಯುತ್ತವೆ ಗಾಲಿಬ್ ಈ ಕುಂಬಾರನಿಗೂ ಕಂಬನಿಗೂ ಖಾಸಾ ದೋಸ್ತಿಯಿದೆಬೇಕೆಂದಾಗ ಬೊಗಸೆಗಟ್ಟಲೆ ದೊರೆಯುತ್ತವೆ ಗಾಲಿಬ್ ಎಮ್ಮಾರ್ಕೆ

“ಕವಿ ಗಾಲಿಬ್‌ ಜನ್ಮದಿನಕ್ಕೊಂದು ಗಜಲ್”‌ಎಮ್ಮಾರ್ಕೆ Read Post »

ಇತರೆ, ಜೀವನ

“ಕೀಳರಿಮೆ ಎಂಬ ಮಾನಸಿಕ ಸಂಕೋಲೆಯನ್ನು ಕಳಚಿ ಹಾಕಿ”ಜಿ. ಎಸ್. ಶರಣು

ಜೀವನ ಸಂಗಾತಿ ಜಿ. ಎಸ್. ಶರಣು “ಕೀಳರಿಮೆ ಎಂಬ ಮಾನಸಿಕ ಸಂಕೋಲೆಯನ್ನು ಕಳಚಿ ಹಾಕಿ” ಕೀಳರಿಮೆ ಎಂಬ ಮಾನಸಿಕ ಸಂಕೋಲೆಯನ್ನು ಕಳಚಿ ಹಾಕಿ, ನಿಮ್ಮ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಿ. ಈ ಜಗತ್ತಿನಲ್ಲಿ ಪ್ರಕೃತಿ ಸೃಷ್ಟಿಸಿರುವ ಕೋಟಿ ಕೋಟಿ ಜೀವಿಗಳಲ್ಲಿ, ಒಬ್ಬರ ಬೆರಳಚ್ಚಿನಂತೆ ಮತ್ತೊಬ್ಬರ ಬೆರಳಚ್ಚು ಇರುವುದಿಲ್ಲ. ಪ್ರಕೃತಿಯ ಈ ನಿಯಮವೇ ಸಾರಿ ಹೇಳುತ್ತದೆ, ಪ್ರತಿಯೊಬ್ಬ ವ್ಯಕ್ತಿಯೂ ಅನನ್ಯ ಮತ್ತು ಅದ್ಭುತ ಎಂದು. ಆದರೂ ವಿಪರ್ಯಾಸವೆಂದರೆ, ನಾವು ಈ ಸತ್ಯವನ್ನು ಮರೆತು, ನಮ್ಮನ್ನು ನಾವು ಬೇರೆಯವರೊಂದಿಗೆ ಹೋಲಿಸಿಕೊಳ್ಳುತ್ತಾ, ನಮ್ಮ ಬಗ್ಗೆ ನಾವೇ ಕೀಳಾಗಿ ಕಾಣಲು ಆರಂಭಿಸುತ್ತೇವೆ. “ನಾನು ಅವನಿಗಿಂತ ದಡ್ಡ, ನಾನು ಅವಳಷ್ಟು ಸುಂದರವಾಗಿಲ್ಲ, ನನ್ನ ಬಳಿ ಏನೂ ಇಲ್ಲ” ಎಂಬ ಕೀಳರಿಮೆ ಎಂಬುದು ನಮ್ಮ ಮನಸ್ಸನ್ನು ಕೊರೆಯುವ ಗೆದ್ದಲು ಹುಳುವಿನಂತೆ. ಅದು ನಿಧಾನವಾಗಿ ನಮ್ಮ ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವವನ್ನೇ ನಾಶಮಾಡಿಬಿಡುತ್ತದೆ. ಕೀಳರಿಮೆ ಬೆಳೆಯಲು ಮುಖ್ಯ ಕಾರಣವೇ ಹೋಲಿಕೆ. ನಾವು ಯಾವಾಗಲೂ ನಮ್ಮ ಜೀವನದ ಕಷ್ಟದ ಪುಟಗಳನ್ನು, ಬೇರೆಯವರ ಜೀವನದ ಹೈಲೈಟ್ಸ್ ಜೊತೆ ಹೋಲಿಕೆ ಮಾಡುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ನಗುತ್ತಿರುವ ಫೋಟೋ ಹಾಕಿದ ತಕ್ಷಣ, ಅವರ ಬದುಕು ಪರಿಪೂರ್ಣವಾಗಿದೆ ಮತ್ತು ನಮ್ಮ ಬದುಕು ಹಾಳಾಗಿದೆ ಎಂದು ತೀರ್ಮಾನಕ್ಕೆ ಬರುತ್ತೇವೆ. ಆದರೆ ನೆನಪಿಡಿ, ಸೂರ್ಯ ಮತ್ತು ಚಂದ್ರ ಇಬ್ಬರೂ ಆಕಾಶದಲ್ಲೇ ಇದ್ದಾರೆ ಮತ್ತು ಇಬ್ಬರೂ ಹೊಳೆಯುತ್ತಾರೆ. ಆದರೆ ಅವರಿಬ್ಬರ ಸಮಯ ಬೇರೆ ಬೇರೆ. ಸೂರ್ಯನ ಜೊತೆ ಚಂದ್ರನನ್ನು ಹೋಲಿಸಿ, “ಚಂದ್ರ ಸೂರ್ಯನಷ್ಟು ಹೊಳೆಯುವುದಿಲ್ಲ” ಎಂದು ಹೀಯಾಳಿಸುವುದು ಎಷ್ಟು ತಪ್ಪೋ, ನಮ್ಮ ಬದುಕನ್ನು ಬೇರೆಯವರ ಬದುಕಿನೊಂದಿಗೆ ಹೋಲಿಸಿಕೊಂಡು ಕೊರಗುವುದು ಅಷ್ಟೇ ತಪ್ಪು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಮಯ, ಅವರದ್ದೇ ಆದ ದಾರಿ ಮತ್ತು ಅವರದ್ದೇ ಆದ ಯುದ್ಧವಿರುತ್ತದೆ. ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರಬೇಕು ಎಂದರೆ, ನೀವು ಜಗತ್ತನ್ನೇ ಗೆದ್ದು ಬರಬೇಕಿಲ್ಲ. ನೀವು ಬೆಳಿಗ್ಗೆ ಎದ್ದು, ನಿಮ್ಮ ಜವಾಬ್ದಾರಿಗಳನ್ನು ನಿಭಾಯಿಸಿ, ಕಷ್ಟದ ದಿನವೊಂದನ್ನು ಯಶಸ್ವಿಯಾಗಿ ಮುಗಿಸಿದ್ದೀರಿ ಎಂದರೆ, ಅದುವೇ ಹೆಮ್ಮೆ ಪಡುವ ವಿಷಯ. ನೀವು ಎಷ್ಟೋ ಸೋಲುಗಳನ್ನು ಕಂಡಿದ್ದರೂ, ಇಂದಿಗೂ ಛಲ ಬಿಡದೆ ಬದುಕುತ್ತಿದ್ದೀರಿ ಎಂದರೆ, ಅದು ನಿಮ್ಮ ಶಕ್ತಿ. ನಿಮ್ಮ ನಡಿಗೆ ನಿಧಾನವಾಗಿರಬಹುದು, ಆದರೆ ನೀವು ನಿಂತಿಲ್ಲವಲ್ಲ, ಅದು ಮುಖ್ಯ. ಕೀಳರಿಮೆ ಬರುವುದು ನಾವು ಏನನ್ನು ಹೊಂದಿಲ್ಲ ಎಂಬುದರ ಕಡೆಗೆ ಗಮನ ಕೊಟ್ಟಾಗ, ಆದರೆ ಹೆಮ್ಮೆ ಬರುವುದು ನಾವು ಏನನ್ನು ಹೊಂದಿದ್ದೇವೆ ಮತ್ತು ನಾವು ಎಂತಹ ವ್ಯಕ್ತಿಯಾಗಿದ್ದೇವೆ ಎಂಬುದನ್ನು ಗಮನಿಸಿದಾಗ. ಇಲ್ಲಿ ಒಂದು ಸೂಕ್ಷ್ಮವಾದ ಗೆರೆ ಇದೆ. ಹೆಮ್ಮೆ ಪಡುವುದು ಎಂದರೆ ಅಹಂಕಾರ ಪಡುವುದಲ್ಲ. “ನಾನೇ ಶ್ರೇಷ್ಠ” ಎನ್ನುವುದು ಅಹಂಕಾರ, ಇದು ಪತನಕ್ಕೆ ದಾರಿ. ಆದರೆ “ನಾನು ಅನನ್ಯ, ನನ್ನ ಸಾಮರ್ಥ್ಯದ ಮೇಲೆ ನನಗೆ ನಂಬಿಕೆ ಇದೆ” ಎನ್ನುವುದು ಸ್ವಾಭಿಮಾನ. ಕೀಳರಿಮೆ ನಿಮ್ಮನ್ನು ಒಂದು ಕತ್ತಲ ಕೋಣೆಯಲ್ಲಿ ಕೂಡಿ ಹಾಕಿದರೆ, ಸ್ವಾಭಿಮಾನ ನಿಮಗೆ ಜಗತ್ತನ್ನು ಎದುರಿಸುವ ಧೈರ್ಯ ನೀಡುತ್ತದೆ. ನೀವು ಕುಳ್ಳಗಿರಲಿ, ಬಡವರಾಗಿರಲಿ ಅಥವಾ ಹೆಚ್ಚು ಓದಿಲ್ಲದಿರಲಿ, ಇವು ಯಾವುವೂ ನಿಮ್ಮ ಮೌಲ್ಯವನ್ನು ನಿರ್ಧರಿಸುವುದಿಲ್ಲ. ನಿಮ್ಮ ಮೌಲ್ಯವನ್ನು ನಿರ್ಧರಿಸುವುದು ನಿಮ್ಮ ಪ್ರಾಮಾಣಿಕತೆ, ನಿಮ್ಮ ಶ್ರಮ ಮತ್ತು ನಿಮ್ಮ ಒಳ್ಳೆಯತನ ಮಾತ್ರ. ಒಂದು ಮೀನು ಮರದ ಮೇಲೆ ಹತ್ತಲು ಸಾಧ್ಯವಿಲ್ಲ ಎಂದು ಕೊರಗುತ್ತಾ ಕುಳಿತರೆ, ಅದು ತನ್ನ ಜೀವನವಿಡೀ ತಾನು ಮೂರ್ಖ ಎಂದು ಭಾವಿಸಿ ಸಾಯುತ್ತದೆ. ಮೀನಿನ ಹೆಮ್ಮೆ ಇರುವುದು ಈಜುವುದರಲ್ಲಿ, ಮರದ ಮೇಲೆ ಹತ್ತುವುದರಲ್ಲಲ್ಲ. ನೀವೂ ಅಷ್ಟೇ, ನಿಮ್ಮ ಕ್ಷೇತ್ರ ಬೇರೆ, ನಿಮ್ಮ ಪ್ರತಿಭೆ ಬೇರೆ. ಬೇರೆಯವರು ಮಾಡಿದ್ದನ್ನು ನೀವು ಮಾಡಲು ಆಗುತ್ತಿಲ್ಲ ಎಂದು ಕೀಳರಿಮೆ ಪಟ್ಟುಕೊಳ್ಳಬೇಡಿ. ನಿಮಗಿರುವ ಶಕ್ತಿಯನ್ನು ಗುರುತಿಸಿ. ನಿಮ್ಮ ನ್ಯೂನತೆಗಳನ್ನು ಒಪ್ಪಿಕೊಳ್ಳಿ, ಏಕೆಂದರೆ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ತಪ್ಪು ಮಾಡುವುದು ಮನುಷ್ಯ ಸಹಜ ಗುಣ, ಅದನ್ನು ತಿದ್ದಿಕೊಂಡು ಮುನ್ನಡೆಯುವವನೇ ಸಾಧಕ. ನಿಮ್ಮ ಬೆನ್ನು ತಟ್ಟಲು ಬೇರೆ ಯಾರೋ ಬರಬೇಕಿಲ್ಲ. ಕನ್ನಡಿ ಮುಂದೆ ನಿಂತು, ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು, “ನಾನು ಎಷ್ಟೇ ಕಷ್ಟ ಬಂದರೂ ಇಲ್ಲಿಯವರೆಗೆ ಬಂದು ನಿಂತಿದ್ದೇನೆ. ನಾನು ನನ್ನ ಬಗ್ಗೆ ಹೆಮ್ಮೆ ಪಡುತ್ತೇನೆ” ಎಂದು ಹೇಳಿಕೊಳ್ಳಿ. ನೀವು ನಿಮ್ಮನ್ನು ಗೌರವಿಸಲು ಕಲಿತಾಗ ಮಾತ್ರ, ಜಗತ್ತು ನಿಮ್ಮನ್ನು ಗೌರವಿಸಲು ಆರಂಭಿಸುತ್ತದೆ. ತಲೆ ತಗ್ಗಿಸಿ ನಡೆಯಬೇಡಿ, ಏಕೆಂದರೆ ನೀವು ಈ ಭೂಮಿಯ ಮೇಲೆ ಇರಲು ಅರ್ಹರು. ಕೀಳರಿಮೆ ಎಂಬ ಭಾರವನ್ನು ಇಳಿಸಿ, ಆತ್ಮವಿಶ್ವಾಸದ ಕಿರೀಟವನ್ನು ಧರಿಸಿ. ನೀವು ನಿಮ್ಮ ಕಥೆಯ ಹೀರೊ ನೀವೇ ಆಗಿದ್ದೀರಿ. ಏಕೆಂದರೆ, ನೀವು ಯಾವುದೋ ಪರೀಕ್ಷೆಯಲ್ಲಿ ಪಾಸಾಗಿದ್ದಿರಿ, ನೀವು ದುಡಿದು ತಿನ್ನುತ್ತಿದ್ದಿರಿ, ನಿಮಗೆ ಸ್ವಾಭಿಮಾನ ಇದೆ, ನಿಮಗೆ ವಾಸವಿರಲು ಸ್ಥಳ ಇದೆ. ಆದರೆ ನೀವು ಮುಟ್ಟಬೇಕಾದ ನಿಮ್ಮ ಗುರಿಯನ್ನು, ಬೇರೆಯವರ ಗುರಿಯನ್ನಲ್ಲ, ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಇರಲಿ. ಕೀಳರಿಮೆ ಅಲ್ಲ. ಜಿ. ಎಸ್. ಶರಣು

“ಕೀಳರಿಮೆ ಎಂಬ ಮಾನಸಿಕ ಸಂಕೋಲೆಯನ್ನು ಕಳಚಿ ಹಾಕಿ”ಜಿ. ಎಸ್. ಶರಣು Read Post »

ಕಾವ್ಯಯಾನ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಅವರ “ಬಣ್ಣದ ಬದುಕು”

ಕಾವ್ಯ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಬಣ್ಣದ ಬದುಕು” ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಬಣ್ಣದ ಬದುಕು” ​ಕೆಲವುನಂಬಿಕೆಗಳೇ ಹಾಗೆಕಣ್ಣು ಮುಚ್ಚಿನಡೆದಾಗಲೆಲ್ಲಾ..ಜೊತೆಗಿದ್ದೇಹೃದಯದ ಬಡಿತವನ್ನೇಅಡವಿಡುವ ಹಾಗೆ! ​ಕೆಲವುಕಣ್ಣುಗಳೇ ಹಾಗೆನೋಡು-ನೋಡುತ್ತಲೇಆಂತರ್ಯವನು ತಿವಿದುಅಗಿಯುವ ಹಾಗೆ ​ಕೆಲವುಬಂಧಗಳೇ ಹಾಗೆಹೊರಗಿನಿಂದರೇಷ್ಮೆಯ ನೂಲಿನಂತೆ..ಆದರೆಒಳಗೊಳಗೆಉರುಳಾಗಿ ಕಾಡುವ  ಹಾಗೆ! ​ಕೆಲವುನೆರಳುಗಳೇ ಹಾಗೆಬೆಳಕಿದ್ದಾಗಬೆನ್ನಿಗಂಟಿಕೊಂಡಿದ್ದು..ಕತ್ತಲಾಗುತ್ತಿದ್ದಂತೆಯೇಕಾಣದಂತೆ……. ಮಾಯವಾಗುವ ಹಾಗೆ! ​ಕೆಲವುಹಣ್ಣುಗಳೇ ಹಾಗೆಉಣ್ಣು-ಉಣ್ಣುವಾಗಲೇಒಂದು ಬದಿ ಸಿಹಿಮಗದೊಂದು ಬದಿ ಕಹಿಯ ಹಾಗೆ ​ಕೆಲವುಬಣ್ಣಗಳೇ ಹಾಗೆಮನದೊಳಗೆಕೊಳೆಯಿದ್ದರೂ ಹೊರಗೆನಗು-ನಗುತ್ತಲೇಪ್ರಪಾತಕ್ಕೆ ನೂಕುವ ಹಾಗೆ! ​ಕೆಲವುಹೆಣ್ಣುಗಳೇ ಹಾಗೆಮುದ್ದಿಸಿ ಮೈಮರೆಸುತ್ತಲೇನಿದ್ದೆಯಲ್ಲೇ ಮೆಲ್ಲಗೆಉಸಿರುಗಟ್ಟಿಸುವ ಹಾಗೆ! ​ಈ ಮಣ್ಣೂ ಸಹ ಹಾಗೆಯೇ…ತನಗೆ ಬೇಕೆಂದಾಗತಕ್ಷಣವೇ ಕರೆದುಅಪ್ಪಿಕೊಂಡು ಶಾಶ್ವತವಾಗಿಮಲಗಿಸಿಕೊಳ್ಳುವ ಹಾಗೆ! ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಅವರ “ಬಣ್ಣದ ಬದುಕು” Read Post »

ಕಾವ್ಯಯಾನ

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ, “ಪ್ರೀತಿ ಸಿಂಚನ”

ಕಾವ್ಯ ಸಂಗಾತಿ ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ, “ಪ್ರೀತಿ ಸಿಂಚನ” ನಿನ್ನೆದೆಯ ಹಸಿ ಹಸಿ ಪ್ರೀತಿ ಒರತೆಸಿಂಚನವಾಗಿದೆ ಮನದ ಬುಗ್ಗೆಯಲಿ ಮತ್ತೆ ಕನಸು ಹೊತ್ತು ಸಾಗಿದೆನಿನ್ನಧರ ಮಧುರ ಮುತ್ತಿಗೆ ಮಿಡುಕಿದಂತಾಯಿತು ಎದೆಯ ವೀಣೆಯಾರು ನುಡಿಸಿದರೊ ಪ್ರೇಮ ರಾಗವ ತಲ್ಲಣದ ಮನದಲಿ ಕಡಲ ಭೋರ್ಗರೆತನಿನ್ನ ಬೆರಳ ಸ್ಪರ್ಶದ ಅಪ್ಪುಗೆಯ ಸಾಂತ್ವಾನ ಶೀತ ಗಾಳಿಯ ಪ್ರೀತಿಗೆ ನೆನಪಿನ ಕಂಬಳಿ ಹೊದ್ದು  ಬೆಚ್ಚನೆಯ ಮುತ್ತನಿಟ್ಟು ಮಲಗು ಅಪ್ಪಿಕೊಳ್ಳುವೆ ಕನಸಿನಲಿ  ಬೇಡ ಬಿಡು ಒಸರುವ ತೊರೆ ಪ್ರೀತಿ ಭೂತಗನ್ನಡಿಯ ಹುಸಿ ಪ್ರೇಮ ಎಂದೆಯಾ  ಮೆಚ್ಚಿಕೊಳ್ಳುವ  ಮನಸ್ಸಿಲ್ಲದಿದ್ದರೆ ಕೊಚ್ಚಿ ಹಾಕಿಬಿಡು ಭಾವವನ್ನು ಚುಚ್ಚಬೇಡ ಹಚ್ಚಿಕೊಂಡ ಎದೆಯ ದನಿಗೆಬಿಚ್ಚು ಮನಸ್ಸಿನ ತುಡಿತಕೆ ನಾ ಬರುವ ದಾರಿಗೆ ನಿರೀಕ್ಷೆಯ ಹೂಹಾಸುಬಂದೇ ಬರುವೆನು ಕ್ಷಣದಲ್ಲಿ ನಿನ್ನ ಹೃದಯ ಗೂಡಿಗೆ ಡಾ. ಮೀನಾಕ್ಷಿ ಪಾಟೀಲ

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ, “ಪ್ರೀತಿ ಸಿಂಚನ” Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ದುಃಸ್ವಪ್ನಗಳಿಗೆ ಹೆದರಿ ನಿದ್ದೆಮಾಡದಿದ್ದರೆ ಹೇಗೆ ಸಖಿಕಲ್ಲು-ಮುಳ್ಳಿಗೆ ಹೆದರಿ ಹೆಜ್ಜೆಯಿಡದಿದ್ದರೆ ಹೇಗೆ ಸಖಿ ಕತ್ತಲಲ್ಲೂ ಬೆಳಕನು ಹೊತ್ತು ಚಂದಿರ ಬರುವನಂತೆಕವಿದ ಇರುಳಿಗೆ ಹೆದರಿ ಕಣ್ತೆರೆಯದಿದ್ದರೆ ಹೇಗೆ ಸಖಿ ಆ ಮರುಭೂಮಿಯಲ್ಲೂ ಬುಗ್ಗೆ ಲಗ್ಗೆಯಿಡುವದಂತೆಬಿರುಬಿಸಿಲಿಗೆ ಹೆದರಿ ಹೊರಬರದಿದ್ದರೆ ಹೇಗೆ ಸಖಿ ಕಲ್ಲು ಉಳಿಯ ಪೆಟ್ಟು ಉಂಡು ಶಿಲೆಯಾಗುವದಂತೆಹಣೆ ಬರಹಕೆ ಹೆದರಿ ತಲೆಯೆತ್ತದಿದ್ದರೆ ಹೇಗೆ ಸಖಿ ಕುಂಬಾರನೆದೆ ಪಾತ್ರೆ ಸುಟ್ಟಷ್ಟೇ ಗಟ್ಟಿಯಾಗುವದಂತೆಕಡುಕಷ್ಟಗಳಿಗೆ ಹೆದರಿ ಎದುರಿಸದಿದ್ದರೆ ಹೇಗೆ ಸಖಿ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಇತರೆ

“ಶಾಲಾ ಮಕ್ಕಳಲ್ಲಿ ದೈಹಿಕ ಆಕರ್ಷಣೆ… ಪರಿಣಾಮ ಮತ್ತು ಪರಿಹಾರಗಳು” ವೀಣಾ ಹೇಮಂತ್‌ ಗೌಡ ಪಾಟೀಲ್

ಕಾವ್ಯ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಶಾಲಾ ಮಕ್ಕಳಲ್ಲಿ ದೈಹಿಕ ಆಕರ್ಷಣೆ… ಪರಿಣಾಮ ಮತ್ತು ಪರಿಹಾರಗಳು” ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಇರುವ ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿ ಅಲ್ಲಲ್ಲಿ ಪುಟ್ಟ ಬಾಲಕಿಯರು ಗರ್ಭಿಣಿಯರಾಗಿರುವ ಮಕ್ಕಳನ್ನು ಹೆತ್ತಿರುವ ವಿಷಯಗಳನ್ನು ಮಾಧ್ಯಮಗಳಲ್ಲಿ ಓದುತ್ತಲೇ ಇದ್ದೇವೆ. ಆತಂಕಕ್ಕೆ ಈಡು ಮಾಡುವ ಇಂತಹ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿರಲು ಕಾರಣ ಮಕ್ಕಳಲ್ಲಿ ಇರುವ ಅಜ್ಞಾನವೇ ಕಾರಣ. ಬಾಲ್ಯ ವಿವಾಹದಿಂದ ಆಗುವ ಅನಾಹುತಗಳ ಕುರಿತು ಕೂಡ ಅಲ್ಲಲ್ಲಿ ನೋಡುವ, ಕೇಳುವ, ಎಷ್ಟೋ ಬಾರಿ ಕೆಲ ಜನರು ಮೂಕ ಸಾಕ್ಷಿಗಳಾಗುವ ಪರಿಸ್ಥಿತಿ  ಇರುತ್ತದೆ. ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಈ ನಿಟ್ಟಿನಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕೂಡ ಈ ರೀತಿಯ ಘಟನೆಗಳು ಆಗಲು ಕಾರಣ ಏನು?? .ಇದೇನಿದು ಎತ್ತಣ ಮಾಮರ ಎತ್ತಣ ಕೋಗಿಲೆ ಎಲ್ಲಿಂದೆಲ್ಲಿಯ ಸಂಬಂಧ? ಎಂದು ನೀವು ಕೇಳಬಹುದು! ಖಂಡಿತವಾಗಿಯೂ ಇವೆರಡಕ್ಕೂ ಮತ್ತಷ್ಟು ವಿಷಯಗಳು  ಸಂಬಂಧಿಸಿವೆ. ಒಂದೆಡೆ ಆಸ್ಪತ್ರೆಗಳಲ್ಲಿ ಚಿಕ್ಕ ವಯಸ್ಸಿನ ಬಾಲಕಿಯರು ಮಕ್ಕಳನ್ನು ಹೆತ್ತು ಮಗು ಇಲ್ಲವೇ ತಾಯಿಯ ಮರಣವಾಗುತ್ತಿರುವುದನ್ನು ನಾವು ನೋಡುತ್ತಿದ್ದರೆ ಮತ್ತೊಂದೆಡೆ ಹೆಣ್ಣು ಮಕ್ಕಳು ಅರಿಯದ ವಯಸ್ಸಿನಲ್ಲಿ ದೈಹಿಕ ಆಕರ್ಷಣೆಗೆ ಒಳಗಾಗಿ ಅದನ್ನೇ ಪ್ರೀತಿ ಎಂದು ಭಾವಿಸಿ ತಮ್ಮ ಮನದೊಂದಿಗೆ ತನುವನ್ನು ಕೂಡ ಅರ್ಪಿಸಿ ಅದರ ಪರಿಣಾಮವಾಗಿ ಗರ್ಭಿಣಿಯರಾಗುತ್ತಿದ್ದಾರೆ. ಸಮಾಜ ಬಾಹಿರ ವಿವಾಹ ಬಾಹಿರ ಕೃತ್ಯ ಎಂಬ ಅರಿವಾಗುವ ಹೊತ್ತಿಗೆ ಸಮಯ ಮೀರಿ ಹೋಗಿರುತ್ತದೆ. ಇಂತಹ ಸಮಯದಲ್ಲಿ ಹೆಣ್ಣು ಮಕ್ಕಳನ್ನು ಮಡಿಲ ಕೆಂಡ ಎಂದು ಭಾವಿಸಿ, ಮತ್ತೆ ಕೆಲವೊಮ್ಮೆ ಜವಾಬ್ದಾರಿ ಕಳೆದುಕೊಳ್ಳಬೇಕು ಎಂಬ ಆಶಯದಿಂದ ಕಾನೂನಿಗೆ ವಿರುದ್ಧವಾದುದು ಎಂದು ಗೊತ್ತಿದ್ದರೂ ಕೂಡ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡುವ ಸಾಹಸಕ್ಕೆ ಪಾಲಕರು ಇಳಿಯುತ್ತಾರೆ. ಹೆಣ್ಣಿರಲಿ ಗಂಡಿರಲಿ ತಪ್ಪು ಯಾರಿಂದಲೇ ನಡೆದರೂ, ಪ್ರಕೃತಿ ಸಹಜವಾದ ಈ ಕ್ರಿಯೆಯ ಹೊಣೆಗಾರಿಕೆಯನ್ನು   ಅನುಭವಿಸುವ ಜವಾಬ್ದಾರಿ ಹೆಣ್ಣು ಮಕ್ಕಳ ಮೇಲಿದೆ. ಎಲ್ಲದಕ್ಕೂ ಅಂತಿಮವಾಗಿ ಹೆಣ್ಣನ್ನೇ ಹೊಣೆಯಾಗಿಸುವ, ಜವಾಬ್ದಾರಿಯಾಗಿಸುವ, ಅಂತಿಮವಾಗಿ ಗುರಿಯಾಗಿಸುವ ಈ ಸಮಾಜದಲ್ಲಿ ಕೇವಲ ಬಾಲ್ಯ ವಿವಾಹ ನಿಷೇಧ ಮಾಡಿದರೆ ಸಾಲದು, ಸುರಕ್ಷಿತ ವಸತಿ ಸಹಿತ ಶಿಕ್ಷಣ ನೀಡಿದರೂ ಸಾಲದು ಬದಲಾಗಿ ಎಲ್ಲ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳು ಹಾಗೂ ಲೈಂಗಿಕತೆಯ ಕುರಿತ ಅರಿವು ಮೂಡಿಸಬೇಕು. ಜೀವನ ಮೌಲ್ಯಗಳು ನಾವು ನಮ್ಮ ಬದುಕಿನಲ್ಲಿ  ಪರಿಪಾಲಿಸಲೇಬೇಕಾದ ಅಲಿಖಿತ ಸಂವಿಧಾನವಿದ್ದಂತೆ.ಪಾಲಕರಿಂದ, ಕುಟುಂಬದಿಂದ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಎಲ್ಲ ಬಲ್ಲ ಮೂಲಗಳಿಂದ ದೊರೆಯುವ ಮೌಲ್ಯಗಳ ಪಾಠ ನಮ್ಮ ಬದುಕಿಗೆ ದಾರಿದೀಪವಾಗಲೇಬೇಕು. ಯಾವ ರೀತಿ ದೇವರ ಗರ್ಭಗುಡಿಯಲ್ಲಿ ಎಲ್ಲರಿಗೂ ಪ್ರವೇಶ ಇರುವುದಿಲ್ಲವೋ ಹಾಗೆಯೇ ನಮ್ಮ ಮೈಮನಗಳ ಗರ್ಭಗುಡಿಯಲ್ಲಿ ಯಾರಿಗೂ ಪ್ರವೇಶಕ್ಕೆ ಅವಕಾಶ ಕೊಡಬಾರದು ಎಂಬ ತಿಳುವಳಿಕೆಯನ್ನು ಮಕ್ಕಳಲ್ಲಿ ಮೂಡಿಸಬೇಕು…. ವಿಶೇಷವಾಗಿ ಈ ವಯಸ್ಸಿನಲ್ಲಿ ಉಂಟಾಗುವ ದೈಹಿಕ ಆಕರ್ಷಣೆಗಳ ನಿರ್ವಹಣೆಯನ್ನು ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳ ಕುರಿತು ಮಕ್ಕಳಲ್ಲಿ ಅರಿವನ್ನು ಮೂಡಿಸಬೇಕು. ಈ ಹಿಂದಿನಂತೆ ಕೂಡು ಕುಟುಂಬಗಳು ನಮ್ಮಲ್ಲಿ ಇಲ್ಲವಾದರೂ ಆ ಕೌಟುಂಬಿಕ ಮೌಲ್ಯಗಳು ಉಳಿದುಕೊಂಡಿವೆ. ಉದ್ಯೋಗ, ವ್ಯವಹಾರ ನಿಮಿತ್ತ ತಮ್ಮ ಕುಟುಂಬದಿಂದ ದೂರವಾಗಿ ಬೇರೆಯ ಊರುಗಳಲ್ಲಿ ನೆಲೆಸಿರುವ ದಂಪತಿಗಳು ತಮ್ಮ ಮಕ್ಕಳಿಗೆ ಕೌಟುಂಬಿಕ ಮೌಲ್ಯಗಳ ಅರಿವಿನ ಜೊತೆಗೆ ಸಂಬಂಧಗಳಲ್ಲಿ ಇರುವ ಸೌಹಾರ್ದ ಭಾವದ ಮಾರ್ದವತೆಯ ಅರಿವನ್ನು, ಜವಾಬ್ದಾರಿಯನ್ನು ಮೂಡಿಸಬೇಕು. ಚಿಕ್ಕಂದಿನಿಂದಲೇ ಮಕ್ಕಳಿಗೆ ಸಾಮಾಜಿಕ ನೀತಿ, ನಿಯಮಾವಳಿಗಳ ಕುರಿತು ಭಯವನ್ನಲ್ಲ!! ಎಚ್ಚರಿಕೆಯನ್ನು ಮೂಡಿಸಬೇಕು.ಮಕ್ಕಳನ್ನು ತೀರಾ ಮುಚ್ಚಟೆಯಾಗಿ ಬೆಳೆಸದೆ ಸಮಾಜದ ಆಗುಹೋಗುಗಳ ಪರಿಣಾಮಗಳ ಅರಿವನ್ನು ಹೊಂದಿರುವ ರೀತಿಯಲ್ಲಿ ಬೆಳೆಸಬೇಕು. ತಪ್ಪು ಸರಿಗಳ ಪರಿಕಲ್ಪನೆ ಮಕ್ಕಳಲ್ಲಿ ಮೂಡಲೇಬೇಕು. ಯಾವುದೇ ವಿಷಯದ ಕುರಿತು ಮಕ್ಕಳು ಪಾಲಕರ ನಾಳ ಕೇಳುವ ನಿಟ್ಟಿನಲ್ಲಿ ಮಕ್ಕಳೊಂದಿಗೆ ಮಾತನಾಡುವಷ್ಟು ತಾಳ್ಮೆ, ಸಮಯ ಮತ್ತು ವ್ಯವಧಾನವನ್ನು ಹೊಂದಿರಬೇಕು. ಮಕ್ಕಳು ಪಾಲಕರನ್ನು ಪ್ರಶ್ನಿಸುವ ಬದಲು ಗೂಗಲ್ ನ ಮೊರೆ ಹೋದರೆ ಅದು ಒಂದು ರೀತಿಯಲ್ಲಿ ‘ಗಣಪನನ್ನು ಮಾಡು ಎಂದರೆ ಅವರಪ್ಪನನ್ನು ಮಾಡಿದಂತೆ ‘ ಆಗುತ್ತದೆ. ಮಕ್ಕಳು ತಿಳಿದುಕೊಳ್ಳಬೇಕಾದ ವಿಷಯಕ್ಕಿಂತ ನೂರು ಪಟ್ಟು ಹೆಚ್ಚು ವಿಷಯಗಳ ಕುರಿತು ಅನವಶ್ಯಕ ಕುತೂಹಲ, ಆಸಕ್ತಿ ಹುಟ್ಟಿಸುವಂತಹ ವಿಷಯ ನಿರೂಪಣೆಯನ್ನು ಶ್ರವಣ, ದೃಶ್ಯ ಮಾಧ್ಯಮಗಳಲ್ಲಿ ಪಡೆಯಬಹುದು. ಇಲ್ಲಿ ಎಷ್ಟೋ ಬಾರಿ ಮನವನ್ನು ಅರಳಿಸುವ ಬದಲಾಗಿ ಕೆರಳಿಸುವ ರೀತಿಯಲ್ಲಿ ವಿಷಯಗಳು ಮಕ್ಕಳಿಗೆ ತಲುಪಬಹುದು…. ಇದಕ್ಕೆ ಬದಲಾಗಿ ಪಾಲಕರು ತಮ್ಮ ಇತಿ ಮಿತಿಯಲ್ಲಿ ವಿಷಯಗಳನ್ನು ವೈಜ್ಞಾನಿಕವಾಗಿ ವಿವರಿಸಬಹುದು. ಶಾಲೆಗಳಲ್ಲಾದರೂ ಅಷ್ಟೇ… ಗಂಡು ಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಹೈಸ್ಕೂಲು ಹಾಗೂ ಕಾಲೇಜು ಹಂತದಲ್ಲಿ ಕೂಡ ಯಾವುದೇ ರೀತಿಯ ಲೈಂಗಿಕ ಶಿಕ್ಷಣದ ಅರಿವನ್ನು ಮೂಡಿಸುವ ತರಬೇತಿಗಳು ಇಲ್ಲ. ಅವರು ಕೇಳುವ, ಅರಿಯುವ ವಿಷಯಗಳು ಅವರಂತೆಯೇ ಇರುವ ಅಬೋಧ ಸ್ನೇಹಿತರ ಕಪೋಲ ಕಲ್ಪಿತ ವಿಷಯಗಳಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರುತ್ತದೆ. ಅವಿಭಕ್ತ ಕುಟುಂಬಗಳಲ್ಲಿ… ನಮಗೆ ದೊರೆಯದ್ದು ನಮ್ಮ ಮಕ್ಕಳಿಗಾದರೂ ದೊರೆಯಲಿ ಎಂಬ ಭಾವದಲ್ಲಿ ಮಕ್ಕಳು ಕೇಳುವ ಮುನ್ನವೇ ಅವರಿಗೆ ಎಲ್ಲವನ್ನು ಕೊಡ ಮಾಡುವ ಪಾಲಕರು, ಅವಶ್ಯಕತೆಗಿಂತ ಅನವಶ್ಯಕವಾದ ಆಹಾರ ಪದಾರ್ಥಗಳಲ್ಲಿ ಆಸಕ್ತಿಯನ್ನು ಹುಟ್ಟಿಸುವ ಮಾಧ್ಯಮಗಳು ಹಾಗೂ ಅಂತಹ ಪದಾರ್ಥಗಳ ಸೇವನೆಯಿಂದ ಹೆಚ್ಚುವರಿ ಹಾರ್ಮೋನುಗಳ ಬಿಡುಗಡೆಯಾಗಿ ಪ್ರಾಪ್ತ ವಯಸ್ಸಿಗೆ ಮುನ್ನವೇ ಹದಿವಯಸ್ಸಿನ ಹಸಿ-ಬಿಸಿ ಕಲ್ಪನೆಗಳನ್ನು ಮೂಡಿಸಿಕೊಳ್ಳುವ ಮಕ್ಕಳು ಪಾಲಕರಿಗೆ ಸಮಸ್ಯೆಯಾಗಿದ್ದಾರೆ. ಇನ್ನು ಶಾಲೆಯ ಕೆಲಸಗಳಿಗೆ ಬೇಕೇ ಬೇಕು ಎಂದು ಹಠ ಮಾಡಿ ಕೊಂಡುಕೊಳ್ಳುವ ಮೊಬೈಲ್, ಟ್ಯಾಬ್ ನಂತಹ ಗ್ಯಾಜೆಟ್ ಗಳು ಕೂಡ ಮಕ್ಕಳ ಮನಸ್ಸನ್ನು ಕೆಡಿಸುತ್ತಿವೆ. ಪ್ರೈವೆಸಿ ಎಂಬ ಹೆಸರಿನಲ್ಲಿ ಎಲ್ಲದಕ್ಕೂ ಪಾಸ್ವರ್ಡ್ ಇಟ್ಟು ಅದು ಯಾರ ಕೈಗೂ ಸಿಗದಂತೆ ಎಚ್ಚರ ವಹಿಸುವ ಮಕ್ಕಳು ಹಾದಿ ತಪ್ಪಲು ಮತ್ತಿನ್ನೇನು ಬೇಕು? ಸಾಮಾಜಿಕವಾಗಿ ಎಲ್ಲ ವಿಷಯಗಳಿಂದ ದೂರವಾಗಿರುವ ಕುಟುಂಬಗಳ ಮಕ್ಕಳು, ಕೌಟುಂಬಿಕ ಕಲಹ, ಪಾಲಕರ  ವಿಚ್ಛೇದನದ ಭೀತಿ, ಬಡತನ ಬೇರೊಬ್ಬರ ಐಷಾರಾಮಿ ಬದುಕನ್ನು ಕಂಡು ಹಾಗೆಯೇ ಇರಬೇಕೆಂದು ಆಶಿಸುವ ಮಕ್ಕಳು, ಪ್ರಸ್ತುತ ಸಮಾಜ ಇರುವುದೇ ಹೀಗೆ ಎಂಬ ಭ್ರಾಂತಿಯನ್ನು ಹುಟ್ಟು ಹಾಕುವ ಸಾಮಾಜಿಕ ಜಾಲತಾಣಗಳು, ಬೇರೊಬ್ಬರ ತಲೆ ಹೊಡೆದು ಆಸ್ತಿ ಮಾಡಿ ಅದನ್ನು ಅನುಭವಿಸುವುದೇ ಬದುಕಿನ ಮಹತ್ವದ ಸಾಧನೆ, ಮಚ್ಚು ಲಾಂಗುಗಳನ್ನು ಕೈಯಲ್ಲಿ ಹಿಡಿದು ತಿರುಗುವವನೇ ನಿಜವಾದ ಹೀರೋ, ಮನದ ಕಾಮನೆಗಳನ್ನು ಬಡಿದೆಬ್ಬಿಸುವ ಹಸಿ ಬಿಸಿ ಪ್ರಣಯದ ದೃಶ್ಯಗಳನ್ನು ಬಿಂಬಿಸುವ ಚಲನಚಿತ್ರಗಳು…. ಇವುಗಳ ಪರಿಣಾಮವಾಗಿ ಮಕ್ಕಳು ನೈತಿಕತೆಯ ಪರಿಧಿಯನ್ನು ದಾಟಿ ಹಾಳಾಗಿ ಹೋಗುತ್ತಿದ್ದಾರೆ. ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಹೆಚ್ಚಿನ ಜವಾಬ್ದಾರಿ ಮಕ್ಕಳಿಗಾಗಿ ಉತ್ತಮ ಮೌಲ್ಯಯುತ ಬದುಕನ್ನು ಕಟ್ಟಿ ಕೊಡುವುದು ಆಗಿದೆ. ಪರಿಹಾರ ನಮ್ಮ ಕೈಯಲ್ಲಿಯೇ ಇದ್ದರೂ ಅದಷ್ಟು ಸುಲಭ ಸಾಧ್ಯವಿಲ್ಲ ಎಂಬ ಮಾತುಗಳು ಪಾಲಕರದ್ದಾಗಿವೆ…ನಿಜ! ಆದರೆ ಪ್ರಯತ್ನ ಪಡುವುದರಲ್ಲಿ ತಪ್ಪಿಲ್ಲ ಅಲ್ಲವೇ ? *ಪಾಲಕರ ( ತಂದೆ ಮತ್ತು ತಾಯಿ ) ನಡುವಿನ ಸೌಹಾರ್ದ ಸಂಬಂಧ ಮಕ್ಕಳಲ್ಲಿ ಧೈರ್ಯವನ್ನು, ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಅಭದ್ರತೆಯ ನೆಲೆಯಲ್ಲಿ ಮಕ್ಕಳು ತಪ್ಪು ಹಾದಿಗೆ ಎಳಸುವುದು ಹೆಚ್ಚು. * ಮಾಧ್ಯಮಿಕ ಶಾಲೆಯಿಂದಲೇ ಮಕ್ಕಳಿಗೆ ನಮ್ಮ ದೇಹದ ಕುರಿತು ವೈಜ್ಞಾನಿಕ ವಿವರಣೆಯ ಜೊತೆಗೆ ಅವುಗಳ ಕಾರ್ಯ ವ್ಯಾಪ್ತಿಯ ಕುರಿತು ಅರಿವು ಮೂಡಿಸಬೇಕು. ಹದಿಹರೆಯದ ಅಲ್ಲಲ್ಲ…. ಹತ್ತರಿಂದ ಇಪ್ಪತ್ತರ ವಯಸ್ಸಿನವರೆಗಿನ ದೈಹಿಕ, ಮಾನಸಿಕ, ಪ್ರಚೋದನೆಗಳ ನಿರ್ವಹಣೆಯ ನಿಟ್ಟಿನಲ್ಲಿ ಮಕ್ಕಳನ್ನು ಹಾಡು, ನೃತ್ಯ, ನಾಟಕ, ಸಂಗೀತ, ಕ್ರೀಡೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಬೇಕು. ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮಕ್ಕಳ ಮನಸ್ಸಿನಲ್ಲಿ ಹರೆಯದ ಹುಚ್ಚು ಕೋಡಿಯಂತಹ ಭಾವನಾತ್ಮಕ ಒತ್ತಡಗಳು ಹರಿದುಹೋಗುತ್ತವೆ. *ಸುಳ್ಳೇ ಆದರೂ ಸರಿ ನಾಟಕ, ನೃತ್ಯ, ಹಾಡುಗಳಲ್ಲಿ ನವರಸಗಳನ್ನು ಅಭಿನಯಿಸುವ, ಪ್ರದರ್ಶಿಸುವ ಮೂಲಕ ಮಕ್ಕಳ ಭಾವನೆಗಳ ಕಟ್ಟು ಸಹಜವಾಗಿ ಮತ್ತು ಸರಿಯಾದ ರೀತಿಯಲ್ಲಿ ಒಡೆದು ಹೋಗುವ ಕಾರಣ ಇಂತಹ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದು ಅತ್ಯವಶ್ಯಕ.ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮಕ್ಕಳು ನಿಧಾನವಾಗಿ ಶಿಸ್ತು, ಸಂಯಮ, ಶ್ರದ್ಧೆ ಹಾಗೂ ತಾಳ್ಮೆಯನ್ನು ಬದುಕಿನಲ್ಲಿ ರೂಡಿಸಿಕೊಳ್ಳುತ್ತಾರೆ. ಭಾವನಾತ್ಮಕ ಮತ್ತು ವಾಸ್ತವ ಜಗತ್ತಿನ ನಡುವಿನ ಅಂತರವನ್ನು ಕಂಡುಕೊಳ್ಳುತ್ತಾರೆ. ಬದುಕೇ ಬೇರೆ ಭಾವನೆಗಳೇ ಬೇರೆ ಎಂಬ ಅರಿವನ್ನು ಹೊಂದುತ್ತಾರೆ. *ಸಹವಾಸ…. ಸಮಾನ ಮನಸ್ಕರ ಸಹವಾಸಕ್ಕಿಂತ ಬದುಕಿನಲ್ಲಿ ಉತ್ತಮ ಗುರಿ, ಶ್ರದ್ಧೆ ಹೊಂದಿರುವ ಸ್ನೇಹಿತರ ಜೊತೆಗೆ ಸ್ನೇಹವನ್ನು ಇಟ್ಟುಕೊಳ್ಳುವುದು ಒಳ್ಳೆಯದು ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಹೂವಿನ ಜೊತೆ ನಾರು ಕೂಡ ಸ್ವರ್ಗಕ್ಕೆ ಹೋಗುತ್ತದೆ ಎಂದು ಹೇಳುತ್ತಾರಲ್ಲವೇ ಹಾಗೆಯೇ ಉತ್ತಮರ ಒಡನಾಟ ಬದುಕಿನಲ್ಲಿ ಉನ್ನತವಾದದನ್ನು ಸಾಧಿಸಲು ಅವಶ್ಯಕ ಎಂಬುದನ್ನು ಮಕ್ಕಳಿಗೆ ಮನಗಾಣಿಸಬೇಕು. * ನುರಿತ ತಜ್ಞ ವೈದ್ಯರಿಂದ, ಸಮಾಲೋಚಕರಿಂದ ಲೈಂಗಿಕ ಶಿಕ್ಷಣದ ಅರಿವನ್ನು ಮೂಡಿಸಬೇಕು. ದೇಹ ಮತ್ತು ಮನಸ್ಸುಗಳ ಶುಚಿತ್ವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಕುರಿತು ಮಕ್ಕಳಿಗೆ ಅರಿವನ್ನು ಮೂಡಿಸಬೇಕು. ತಮ್ಮ ಮನದಲ್ಲಿ ಮೂಡುತ್ತಿರುವ ಭಾವನೆಗಳನ್ನು ಯಾವ ರೀತಿ ನಿಯಂತ್ರಿಸುವ ಹಾಗೂ ಅವುಗಳನ್ನು ಸಮರ್ಥವಾಗಿ ನಿರ್ವಹಿಸುವ ಹೊಣೆಗಾರಿಕೆಯ ಅರಿವನ್ನು ಮೂಡಿಸಬೇಕು. * ಒಂದೊಮ್ಮೆ ತಪ್ಪು ಮಾಡಿದ್ದೆ ಆದರೆ ಅದರ ಪರಿಣಾಮಗಳ ಅರಿವನ್ನು ಕೂಡ ಗೊತ್ತು ಪಡಿಸಬೇಕು.  ಇದೆಲ್ಲದರ ಹೊರತಾಗಿಯೂ ನಮ್ಮ ನೆಲದ ಕಾನೂನಿನ ಕುರಿತು ಪಾಲಕರು ಮತ್ತು ಶಿಕ್ಷಕರ ಜವಾಬ್ದಾರಿ  ಇರಲೇಬೇಕು. ಪ್ರೊಟೆಕ್ಷನ್ ಆಫ್ ಚೈಲ್ಡ್ ಫ್ರಮ್ ಸೆಕ್ಷುಯಲ್ ಆಫೆನ್ಸಸ್ (POCSO) ಕಾಯ್ದೆಯ ಅರಿವನ್ನು ಮಕ್ಕಳಿಗೆ ಮೂಡಿಸಬೇಕು. ಮಕ್ಕಳ ಮೇಲೆ ನಡೆಯುವ ಲೈಂಗಿಕ ಶೋಷಣೆಯ ಕುರಿತು ಮುಕ್ತವಾಗಿ ಅವರೊಂದಿಗೆ ಮಾತನಾಡುವ ಚರ್ಚಿಸುವ ಸಮಾಲೋಚಿಸುವ ಅಗತ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಅರಿವಿಗೆ ಬರುವ ಮುನ್ನವೇ ಸಂಭವಿಸಬಹುದಾದ ಅಪರಾಧಗಳ ಸುಳಿಯಲ್ಲಿ ಮಕ್ಕಳು ಸಿಲುಕಿ ಒದ್ದಾಡಬಾರದು ಅಲ್ಲವೇ? ಈ ನಿಟ್ಟಿನಲ್ಲಿ ಬುದ್ಧಿಜೀವಿಗಳು, ಸಾಮಾಜಿಕ ಮನ ಶಾಸ್ತ್ರ ಪರಿಣತರು, ಶಿಕ್ಷಣ ತಜ್ಞರೊಂದಿಗೆ ಸರಕಾರಗಳು ಸಮಾಲೋಚನೆ ಮಾಡಿ ಮುಂದುವರೆಯಬೇಕು. ಮಕ್ಕಳ ಭವಿಷ್ಯಕ್ಕೆ ಹೊಸ ಹಾದಿಯನ್ನು ತೋರಬೇಕು ಎಂಬ ಆಶಯದೊಂದಿಗೆ ವೀಣಾ ಹೇಮಂತಗೌಡ ಪಾಟೀಲ್

“ಶಾಲಾ ಮಕ್ಕಳಲ್ಲಿ ದೈಹಿಕ ಆಕರ್ಷಣೆ… ಪರಿಣಾಮ ಮತ್ತು ಪರಿಹಾರಗಳು” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ನಿಮ್ಮೊಂದಿಗೆ

“ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರ” ನಾಗೊಂಡಹಳ್ಳಿ ಸುನಿಲ್

ಕಾವ್ಯ ಸಂಗಾತಿ ನಾಗೊಂಡಹಳ್ಳಿ ಸುನಿಲ್ “ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರ” ವಿಶಾಲವಾದ ಬಟಾಬಯಲು ನಡುವಲ್ಲೊಂದು ಮನೆಆ ಮನೆಯ ಮೂಲೆಯಲ್ಲೊಂದು ಕೋಣೆತಿರುಗುತ್ತಿದೆ ಕೋಣೆಯಲ್ಲಿ ತಣ್ಣನೆಯ ಫ್ಯಾನುಅವನ ಉದ್ವೇಗಕ್ಕಾಗಿಯೋ ಅವಳ ಆವೇಗಾಕ್ಕಾಗಿಯೋ ಪ್ರೇಮ ಕಾಮಗಳ ಪರಾಕಾಷ್ಠೆಗೆನೆರೆಹೊರೆಗೆ ಸದ್ದು ಕೇಳಿಸದಿರಲೆಂದುಮೈ ಜುಮ್ಮೆನ್ನುವ ಗಡುವಿಗೆಕಿವಿಗಡಚುವಂತೆ ಏರಿಸಿದಗಮನಿಸದ ಹಾಡು ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರಕಳಚಿಟ್ಟ ಬಟ್ಟೆಯೂ ನೆನಪಿಸುತ್ತಿಲ್ಲಬಂಧಿಸಿದ ಭಾವನೆಗಳ ತಳಮಳದಲ್ಲಿಅವರಿಬ್ಬರೂ ತನ್ಮಯರುಲೋಕದ ರೂಢಿಯಲ್ಲಿ ಅವ್ಯಕ್ತಮೂಕ ವಿಸ್ಮಿತರು ಬೆವರ ಹನಿ ಘಮಗುಡಲೆಂದುಮೈ ತುಂಬಾ ತಣ್ಣಗೆ ಚುಮುಕಿಸಿದಸುಗಂಧ ದ್ರವ್ಯಬೆಚ್ಚನೆಯ ಬೆವರ ಹನಿಗೆ ಬಣ್ಣ ಕಳೆದುಕೊಂಡಿತೆನ್ನುವ ಭಯ ಕಳೆದುಕೊಂಡದ್ದೋ, ದಕ್ಕಿಸಿಕೊಂಡದ್ದೋಎಲ್ಲವನ್ನೂ ಒಮ್ಮೆಲೆ ಸುಖಿಸಿಕೊಂಡಸ್ಖಲನದ ರಾತ್ರಿಯೋಅರಿವಿಲ್ಲದ ಖಾತ್ರಿಯೋ ತಿಳಿಯದು ರವಿಗೆ ಇಬ್ಬನಿ ಕರಗುವಂತೆಮಳೆಗೆ ಮಣ್ಣ ತಣುವಾದಂತೆಸ್ಪರ್ಶದೊಳಗಿನ ಹಣ್ಣುರುಚಿ ನೀಡಿದ ಹೊತ್ತಿಗೆಈಗೆಲ್ಲವೂ ಆ ಕೋಣೆಯಮೂಲೆಯಲ್ಲಿಅದೇ ಕಡುಗಪ್ಪಿನ ಮೂಲೆಯಲ್ಲಿಬೆಳದಿಂಗಳ ಬಯಕೆಗೆ ಲೀನವಾಗಿದೆ ಬಟಾಬಯಲಿನ ನಡುಮನೆಯಲ್ಲೊಂದುಫ್ಯಾನೂ ಇನ್ನೂ ತಣ್ಣಗೆ ತಿರುಗುತ್ತಿದೆಇನ್ನೂ ತಣ್ಣಗೆ ತಿರುಗುತ್ತಿದೆ ನಾಗೊಂಡಹಳ್ಳಿ ಸುನಿಲ್         

“ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರ” ನಾಗೊಂಡಹಳ್ಳಿ ಸುನಿಲ್ Read Post »

ಕಾವ್ಯಯಾನ

ಭಾರತಿ ಅಶೋಕ್‌ “ಶಿಲುಬೆಗೇರಿಸುವ ಕಾಲ”

ಕಾವ್ಯ ಸಂಗಾತಿ ಭಾರತಿ ಅಶೋಕ್‌ “ಶಿಲುಬೆಗೇರಿಸುವ ಕಾಲ” ಅವಳುದಿನವೂ ಶಿಲುವೆಗೇರುತ್ತಾಳೆಸಂಸಾರ ಬಂಡಿಯ ನೊಗವ ಕತ್ತಿಗೆಬಿಗಿದುಕೊಂಡು. ಕತ್ತು ಬಗ್ಗಿಸಿಒಮ್ಮೆ ದೀರ್ಘ ಉಸಿರೆಳೆದು ಸುಧಾರಿಸಿಕೊಳ್ಳಲಾಗದಭಾರ ಹೊತ್ತು ಎಳೆಯುತ್ತಲೇ ಇದ್ದಾಳೆ ಬಂಡಿಯ ಅವಳಿಗೆಮೈ ತುಂಬಾ ಕೈಗಳು, ಕೈಗೊಂದರಂತೆ ಜವಬ್ಧಾರಿಯಮೊಳೆ ಹೊಡೆಯಲಾಗಿದೆ ಅದಕವಳ ತಕರಾರಿಲ್ಲ ಶತಮಾನಗಳಿಂದಅವಳ ದೇಹ ಮನಸ್ಸುಗಳ ಮೇಲೆಕ್ರೌರ್ಯ ಮೆರೆದವರನವಳು ಶಿಲುಬೆಗೇರಿಸುವಕಾಲ ಈಗ ಸನ್ನಿಹಿತವಾಗಿದೆ. ಭಾರತಿ ಅಶೋಕ್

ಭಾರತಿ ಅಶೋಕ್‌ “ಶಿಲುಬೆಗೇರಿಸುವ ಕಾಲ” Read Post »

ಕಾವ್ಯಯಾನ

ಪರವಿನ ಬಾನು ಯಲಿಗಾರ ಅವರ “ನಾರಿ”

ಕಾವ್ಯ ಸಂಗಾತಿ ಪರವಿನ ಬಾನು ಯಲಿಗಾರ “ನಾರಿ” ನೀನೇಷ್ಟುಸಾಧಿಸಿದರೆನು ,ತಪ್ಪುತ್ತಿಲ್ಲವಲ್ಲ  ನಿನ್ನ ಮೇಲಿನ ದೌರ್ಜನ್ಯ . ನೀನೇಷ್ಟು ಓದಿದರೆನು , ನಿನ್ನ ಪಾಲಿನನ್ಯಾಯಕ್ಕಗಿ ನಿ ಹೋರಾಡುವುದು ತಪ್ಪಲಿಲ್ಲ. ನೀನ್ಯಾವ  ಅಧಿಕಾರ ಪಡೆದರೇನು ,ನಿನಗೇ ರಕ್ಷಣೆ ಇನ್ನೂ ಸಿಕ್ಕಿಲ್ಲ . ನೀನೆಷ್ಟು ಹಕ್ಕಿನ ಪಾಠ ಮಾಡಿದರೇನು ,ನಿನ್ನ ಮನೆಯಲ್ಲೇ ನಿನ್ನ ಹಕ್ಕು ಗೌಣ . ನಿನಗೆಷ್ಟು ಪದವಿ ಪುರಸ್ಕಾರ ದಕ್ಕಿದರೇನು ,ನಿನಾಗಿರುವೆ ಮತ್ತೊಬ್ಬರ ಅಡಿಯಾಳು . ನೀ ಛಾಪು ಮೂಡಿಸಿದರೆನು ,ಅನ್ಯ ಗೃಹದಲ್ಲಿ ಕಾಲೂರಿ ,ನಿನಗೇ  ನೆಲೆ ಇಲ್ಲ  , ನೀ ಇರುವಲ್ಲಿ . ನೀನಾಗಿರುವೆ ಯಾವಾಗಲೂ ದ್ವಿತೀಯಳು ,ಆದರೆ  , ಆದ್ವಿತೀಯಳಾಗುವ ದಿನ ಬಂದೆ ಬರುವುದು ,  ಒಂದು ದಿನ ….. ——————— ಪರವೀನ ಬಾನು ಯಲಿಗಾರ

ಪರವಿನ ಬಾನು ಯಲಿಗಾರ ಅವರ “ನಾರಿ” Read Post »

You cannot copy content of this page

Scroll to Top