ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಮಾಧಿಯೊಳಗಿಂದ
ಎದ್ದು ಬಂದ ಆ ಸ್ವರವು
ತನ್ನ ಸಾವಿನ ಕಾರಣವ ಹೇಳಲು
ತೋರಿಸುತಿದೆ ಕಾತುರವ..

ಅದೆಷ್ಟು ಮಳೆಗಾಲ,
ಚಳಿಗಾಲದ ಸುತ್ತ
ಕಣ್ಕಟ್ಟುವಂತಿದೆ
ಅಸ್ಥಿಪಂಜರಗಳ ಚಿತ್ರ..
ಕಾನನವೇ ಬೆಳೆದಿದೆ
ಅಪರಿಚಿತ ಶವಗಳ ಗೊಬ್ಬರದಿಂದ
ಲೆಕ್ಕವಿಲ್ಲದಷ್ಟು ದೇಹಗಳನು
ಹೊರತೆಗೆಯಲಾಗಿದೆ ನದಿಯಿಂದ

ಕೊನೆಯಿಲ್ಲದ ಹಿಂಸೆ,
ಕಿವುಡಾದ ಆಕ್ರಂದನ
ನ್ಯಾಯಕ್ಕೆ ಮೊರೆಯಿಟ್ಟವರಿಗೆ
ಮಾಡುವರು ಅವಮಾನ..

ಕಾಣೆಯಾದವರ
ಚಹರೆಯೆ ಇಲ್ಲ..
ಅಮಾಯಕರ ಜೀವಕ್ಕೆ
ಬೆಲೆಯೇ ಇಲ್ಲ..
ಅನ್ಯಾಯವ ಕೇಳುವವರಿಲ್ಲ
ಸಹಾಯಕ್ಕೆ ಯಾರೂ ಬರಲಿಲ್ಲ..

ಕೈಚೆಲ್ಲಿ ಕುಳಿತ ಅಧಿಕಾರಿಗಳ ವರ್ಗ..
ಪ್ರಶ್ನೆ ಮಾಡಲು ಬಂದವರಿಗೆ
ವರ್ಗಾವಣೆಯ ಭಾಗ್ಯ..
ಮಾರಿಕೊಂಡಿವೆ
ಕೆಲ ಸುದ್ದಿ ಮಾಧ್ಯಮಗಳು
ರಾಜಕೀಯದವರ ಮನೆಯಲ್ಲಿ
ನೋಟಿನ ಕಂತೆಗಳು..

ಒಗ್ಗಟ್ಟಾಗಬೇಕಿದೆ,
ಹೆಡೆಮುರಿ ಕಟ್ಟಲು
ಭಯವೇಕೆ ಇನ್ನು
ಸಾವೇ ಎದುರಾದರೂ
ಅಮಾಯಕರ ಬಲಿ,
ಹೆಣ್ಮಕ್ಕಳ ಅತ್ಯಾಚಾರ
ರಕ್ಕಸರ ಕ್ರೂರತನಕೆ
ಧರ್ಮದ ಮುಖವಾಡ..

ಇನ್ನು ಕಾಲ ಮುಂಚಿಲ್ಲ
ಜನರ ಕೂಗು ನಿಂತಿಲ್ಲ..
ಅಧರ್ಮಕ್ಕೂ ಕೊನೆಯೆಂಬುದಿದೆ..
ಹೋರಾಟಕ್ಕೂ ಜಯವೆಂಬುದಿದೆ..


About The Author

3 thoughts on “ಸಿಂಧು ಭಾರ್ಗವ ಅವರ ಕವಿತೆ “ಸಮಾಧಿಯೊಳಗಿಂದ””

Leave a Reply

You cannot copy content of this page

Scroll to Top