ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುನ್ನೋಟ ಎದುರಿರಲು ಜಗವೆಂಬ
ರಂಗದಿ ಜೊತೆಯಾದೆಯಲ್ಲ
ಕಣ್ಣೋಟ ಬೆರೆತಿರಲು ಮೈ ತುಂಬ
ರೋಮಾಂಚನವು ನಲ್ಲ

ಬರಿದಾದ ಎದೆನೆಲಕ್ಕೆ ಒಲವಿನ
ಸುರಿಮಳೆಯ ಸುರಿಸಿರುವೆ
ಬರಡಾದ ಹೃದಯವ ಕೊನರಿಸಿ
ಪ್ರೀತಿ ಬಳ್ಳಿಯ ಹಬ್ಬಿಸಿರುವೆ

ಕಾದು ಕನವರಿಸುತಿರುವ ಜೀವಕ್ಕೆ
ಪ್ರೇಮದೋಲೆ ಬರೆದವನು
ವಾದದಲ್ಲಿ ಸೋತಿರಲು ತೋಳ್ತೆಕ್ಕೆ
ಯಲಿ ಬಂಧಿಸಿ ರಮಿಸಿದವನು

ನಲುಗಿರುವ ಪಲ್ಲಂಗ ಹೇಳುತಿದೆ
ಪ್ರಣಯ ರಾಗದ ಕಥೆಯ
ತಾರೆಗಳ ತಂದಿರಿಸಿ ಅನುರಾಗಕೆಂದೆ
ಒಪ್ಪಿ ಅಪ್ಪಿದೆ ಆ ನಿನ್ನ ನಡೆಯ

ಶೃಂಗಾರ ಭಾವದ ರಸಿಕನು ನೀನು
ಬಾಳೆoಬ ಪಥದಿ ಕೈ ಹಿಡಿದೆ
ಬಂಗಾರದೊಡವೆ ಬೇಡವೆಂದವನು
ಬಳಸಿ ಮುತ್ತಲಿ ಶೃಂಗರಿಸಿದೆ.

———————–

About The Author

2 thoughts on “ಮಾಲಾ ಚೆಲುವನ ಹಳ್ಳಿ ಅವರ ಕವಿತೆ-ಪ್ರಣಯ ರಾಗ”

Leave a Reply

You cannot copy content of this page

Scroll to Top