ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭಾರ ಹೊತ್ತ ಕಾರ್ಮೋಡ
ದುಃಖಿಸಿ ಕರಗಿ ಸುರಿಸಿತು
ಕಣ್ಣೀರ ವರ್ಷಧಾರೆ
ಸಮಾಧಾನಿಸಿ ಇಳೆಗಪ್ಪಳಿಸಿ

ಗುಡುಗು ಸಿಡಿಲಿನ ಸದ್ದಿಗೆ
ಬೆದರಿತೋ ಕಾರ್ಮೋಡ
ಹಿಡಿತ ತಪ್ಪಿ ಭೂರಮೆಗೆ
ಹನಿ ಹನಿಯಾಗಿ ಜಾರಿತು

ನೋವನ್ನು ಸೀಳಿ ಸುಳಿವ ಗಾಳಿ
ಏದುಸಿರು ಬಿಡುತ ನುಸುಳಿ
ಜಾರುವ ಹನಿಗಳ ಎಲ್ಲೋ
ಸರಿಸಿ ದೂರ ದೂರ ತಳ್ಳಿ

ನೆಲವೊಣಗಿ ಬಾಯ್ದೆರೆದಿರಲು
ಹನಿಗಳು ಇಳೆಯ ಚಿಗುರಿರಲು
ನಗುವ ಮೊದಲೇ ಸುಡುಬಿಸಿಲು
ಮತ್ತೆ ಸುಟ್ಟು ಬರ ಅವರಿಸಿದೆ

ಕಮರಿದ ಬರಡು ಒಡಲಿಗೆ
ಸೋನೆ ಹನಿ ಭಾವ ಬಿತ್ತದೆ
ಚಿಗುರಿದ ಚಿಗುರು ಅಗಲಿದೆ
ಇಳೆ ಹನಿಗಳ ಸ್ಪರ್ಶ ಕಾಣದೆ

ಹಂಬಲಿಸುವ ಭುವಿ ಬಾನು
ಸಮ್ಮಿಲನಕ್ಕೆ ಅಡ್ಡಿಯಾದಂತಿದೆ
ಕರಗಿ ನೀರಾಗುವ ಮೋಡ
ಕರಗದೆ ಹೋದರೆ ಗಟ್ಟಿತನವು

ಮೃದುತನವ ಸೆಳೆದು
ಗಡಸುತನವನ್ನು ಸರಿಸಿ
ಸುರಿಸಿದ ಹನಿಗಳೆ ಮುಂದೆ
ನೆಮ್ಮದಿಯ ತೊರೆಗಳು


About The Author

1 thought on “ಸತೀಶ್ ಬಿಳಿಯೂರು ಅವರ ಕವಿತೆ-ಮೃದು ಭಾವ”

Leave a Reply

You cannot copy content of this page

Scroll to Top