ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬದುಕೊಂದು ರೂಪ ಪಡೆದು
ನೆಮ್ಮದಿ ಬಾಳು ಒದಗಿ ಬಂದರೆ
ಮೊಗದಲಿಂದು ಮೂಡಿದ ನಗು
ಹುಣ್ಣಿಮೆ ರಾತ್ರಿಯ ಬೆಳದಿಂಗಳು

ಕರ್ಮದ ಕಳೆ ತೊಳೆದು
ಇಂದು ಜೀವನ ಪಾವನಗೊಂಡರೆ
ಆ ಮನಸು ಚುಕ್ಕಿ ಕಳೆಯಿರದ
ಶುಭ್ರತೆಯ ಬಿಳಿ ಹಾಳೆಗಳು

ನೋವು ಸಂಕಟ ಕಳೆದು
ದಿನ ಮನಃಶಾಂತಿಗೊಂಡರೆ
ಭರವಸೆ ಬಳ್ಳಿಯ ಚಿಗುರಿದ
ಹೊಸತನದ ಚಿಗುರುಗಳು

ಸೋಲನ್ನೇ ಮೆಟ್ಟಿಲೀಗಿಸಿ ಗೆದ್ದು
ನಂಬಿಕೆ ಛಲದಿಂದ ಸಾಗಿದರೆ
ಅದು ಮುಂದಿನ ದಿನದ
ನಿನ್ನ ರೋಚಕ ತಿರುವುಗಳು

ದೇವರು ತುಂಬಿದ ಕೊಡವನು
ತುಳುಕದೆ ಮಿತಿಯೊಳಗಿದ್ದರೆ
ನಿನ್ನ ಕೊನೆಯವರೆಗಿನ ಬದುಕು
ಸಂತಸದ ತುತ್ತಿನ ಮುತ್ತುಗಳು


About The Author

Leave a Reply

You cannot copy content of this page

Scroll to Top