ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನರನಿಗಿದೆ ನರ
ನರಳುವ ನೋವಲಿ ತರತರ
ಮರಕ್ಕಿಲ್ಲ ನರ
ತಂತು ಉಲ್ಲಾಸದ ಸಡಗರ
ಜನರಿಗೆ ಬರುವುದು ಜ್ವರ
ಬಳಲುವರು ತತ್ತರ
ಮರಕ್ಕೆ ಬರದು ಜ್ವರ
ನೀಡುವುದು ಆರೋಗ್ಯದ ಉಸಿರ
ಜನ ಜೀವನ ನಶ್ವರ
ವನದ ಸಿರಿ ಅಪಾರ
ಮರ ಭೂಮಿಗೆ ಆಧಾರ
ನರ ಭೂಮಿಗೆ ಭಾರ
ನರನಾಗುವ ಒಮ್ಮೊಮ್ಮೆ ವಾನರ
ಮಾಡುವ ವ್ಯಭಿಚಾರ ತೀರಾ
ವಿನಾಶದ ಅಂಚಿನಲ್ಲಿಹುದು ಜನಸಾಗರ
ಎಡೆಯಿಲ್ಲದೆ ನಡೆಸುವರು ಕ್ರೂರ ಪ್ರಹಾರ
ವನಸಿರಿಯ ಅಳಿಸುವ ಜನರ ಹಸಿವೆಗುಂಟೆ ಉತ್ತರ?


About The Author

Leave a Reply

You cannot copy content of this page

Scroll to Top