ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೂಕ ಮಾತಿದು ಬಿಕ್ಕುತ ಕೂತಿದೆ
ಅರಿವರಿಲ್ಲಿ ಯಾರು
ಮೌನದ ಮನೆಯೊಳು ಘರ್ಷಣೆ ನಡೆದಿದೆ
ಅರಿವರಿಲ್ಲಿ ಯಾರು

ಭಾವವು ಒಂಟಿಯ ಓಟವ ನಿಲಿಸಿದೆ
ಬಾಳಿನ ಬಯಲೊಳಗೆ
ಪೂರ್ವದ ಶಾಪಕೆ ಪ್ರಸ್ತುತ ಮರುಗಿದೆ
ಅರಿವರಿಲ್ಲಿ ಯಾರು

ಆರ್ತವ ಆಲಿಸೋ ಕರ್ಣಗಳಿಲ್ಲ
ಬರೀ ಅರ್ಥಕೆ ಬೆಲೆಯಿಲ್ಲಿ
ಬಯಕೆಯ ಬಂಡಿಯ ಗಾಲಿಯು ಸವೆದಿದೆ
ಅರಿವರಿಲ್ಲಿ ಯಾರು

ಪಾತ್ರವು ಇರದೇ ನಾಟಕ ಮಾಡಿವೆ
ಬದುಕಿನ ಕ್ಷಣಗಳೀಗ
ಭರವಸೆ ನಾವೆಗೆ ಬಿರುಕದು
ಬಿಟ್ಟಿದೆ ಅರಿವರಿಲ್ಲಿ ಯಾರು

ನಗಿಸುವ ನಯನದ ನೆಮ್ಮದಿ ಕುಂದಿವೆ
ಸುಡುತಿರೋ ಬತ್ತಿಯಂತೆ
ಒಲವಿನ ‘ಮಾಲೆ’ಯು ಮನದಲೇ
ಮುದುಡಿದೆ ಅರಿವರಿಲ್ಲಿ ಯಾರು


——————————————

About The Author

Leave a Reply

You cannot copy content of this page

Scroll to Top