ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನ್ಸೂರ್ ಮೂಲ್ಕಿ

ಮನಶಾಂತಿ

ಹತ್ತೂರು ಸುತ್ತಿದರು ಬೆಟ್ಟವ ಹತ್ತಿದರು
ಗತ್ತಲ್ಲಿ ನಡೆದರೂ ಗುಟ್ಟಾಗಿ ಉಳಿದರು
ಹೆತ್ತಮ್ಮನ ಮರೆತೆ ಎಂದರೆ
ಮನಶಾಂತಿ ಸಿಗದು ತಮ್ಮ
ನಿನಗೆ ಮನಶಾಂತಿ ಸಿಗದು ತಮ್ಮ

ಭವದ ಮೇಲಿನ ನಾಟ್ಯ ರಂಗದಲ್ಲಿ
ಎಲ್ಲವೂ ನಶ್ವರ ನಶ್ವರ ನಶ್ವರ
ಬೆಳಕು ಹರಿಯುವಲ್ಲಿ ನೆರಳ ಬದುಕಿನಲ್ಲಿ
ದೃಷ್ಟಿಕೋನ ಇರಲಿ ನೇರನೇರ

ನಗುವನ್ನು ಬರಿಸುವ ಮಲ್ಲಿಗೆಯಂತೆ
ಇರಬೇಕು ಮನವು ಹೂವಿನಂತೆ
ತೆಂಗಿನ ಗರಿಗಳು ಬಾನನ್ನೇ ನೋಡುತ್ತಾ ಬಾಗುವಂತೆ
ಬದುಕು ಇರಬೇಕು ಸ್ವಚ್ಛಂದದಂತೆ

ಬೀಸುವ ಬೀಸಣಿಕೆ ಗಾಳಿಯಂತೆ
ಕಷ್ಟವ ಕಷ್ಟದಿ ನುಂಗುತ್ತಾವ
ಗಾಳಿ ನೀರಿನಲ್ಲಿ ತೇಲಿ ಹಾರುವಲ್ಲಿ
ಬದುಕು ಮುಗಿಯುತಾವ ಉಸಿರು ನಿಲ್ಲುತಾವ


ಮನ್ಸೂರ್ ಮೂಲ್ಕಿ

About The Author

Leave a Reply

You cannot copy content of this page

Scroll to Top