ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಲೂನ್ ಅಡಿಯಲಿ ನೆರಳು
ಹೊಟ್ಟೆ ಬರಿದು ತುಂಬದ ಕರುಳು
ಹರಿದ ಬಟ್ಟೆ ಬದುಕಲಿ ಇರುಳು
ನಲಿವ ನೀಡಿ ಸಹಜತೆಗೆ ಮರಳು

ಕಾಸಿಗೆ ಪಡೆವರು ಈ ಖುಷಿಯ
ಎದೆಯ ನೋವು ಬೇಡದ ವಿಷಯ
ಅರಿಯರು ಮನದ ಆಳದ ಗಾಯ
ದಣಿವರಿಯದೆ ದುಡಿವ ಈ ಕಾಯ

ಕ್ಷಣಿಕ ನಲಿವು ನೀರಿನ ಬುಗ್ಗೆಯಂತೆ
ಕಾಡುವ ಯೋಚನೆ ನಾಳೆಯ ಚಿಂತೆ
ಹಿಡಿದ ಚಿತ್ರವು ಹೇಳುವ ಕತೆ
ನಿಜವಲ್ಲ ಅದು ಹೇಳುವ ಗೀತೆ

ಇಂದಿನದು ಬೇಗನೆ ಹಿಂದೆ ಸರಿದು
ಮುಂದೆ ಕಾಣದ ಹಾದಿ ಇರುವುದು
ಕೂಸ ತೂಗಲು ತೊಟ್ಟಿಲು ಇರದು
ಇರುವುದ ಬಿಟ್ಟು ಇರದುದ ನೆನೆದು!!

About The Author

3 thoughts on “ನಿರಂಜನ ಕೆ ನಾಯಕ ಅವರ ಕವಿತೆ- ನೋವು”

Leave a Reply

You cannot copy content of this page

Scroll to Top