ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೆತ್ತಲಾಗುತ್ತಿದೆ ಮಡಿವಾಳ
ತೊಳೆದು ಕೊಡು ಹೊಸ ಬಟ್ಟೆ
ಧರಿಸಲಿ ಮೈ ಉಡುಗೆ
ಬಂದು ಹೋಗುವ ನಡುವೆ
ಇಲ್ಲದ ಈ ತೊಡಿಗೆ
ಹೊಲಿದು ಕೊಡು ಹೊಸ ಬಟ್ಟೆ
ಜಾತಿ ಗೀತಿ ಹೊಸ ಬಾಳು
ಹೊಸ ನೀತಿ
ಜಾರುತ್ತಿದೆ ಮೈ ಮನ
ಆಂತರಿಕ ಬಾಹ್ಯ
ಯವ್ವನದಿ ಉದುರುತ್ತಿವೆ ಹಲ್ಲು
ಜೋತು ಬಿದ್ದ ಗಲ್ಲ
ಗಲ್ಲಕ್ಕೆರಡು ಕಿಂಡಿ
ಮುಚ್ಚಿ ಬಿಡು ಬಡಿಗ
ಜಾರುತ್ತಿವೆ ಹೊತ್ತಿಸಿದ
ಕರಿ ಹಂಚು ಹೊತ್ತು
ಮಾಳಿಗೆಗೆ ಮಳೆರಾಯ
ಸೋರುತ್ತಿವೆ ತನುವ
ಸುಡುವ ಬೇಸಿಗೆಗೆ ಎರಡು
ತೊಗಲು ಪಾದುಕೆ
ಹೊಲಿದು ಕೊಡು ಹರಳಯ್ಯ
ಕೊಳೆತು ನಾರುತ್ತಿವೆ
ಸತ್ತ ಹಸು ಕೋಣಗಳು
ಎಳೆದು ತನ್ನಿ ಮಾದರ ಚೆನ್ನಯ್ಯ
ಸ್ವಚ್ಛವಾಗುವುದಿ ಗುಡಿಯು
ಸೋತು ಸುಣ್ಣವಾಗಿದೆ ತನು
ಕುಂಬಾರ
ತಡಮಾಡದೇ ತಂದು ಬಿಡು
ಮಡಿಕೆ
ಬಿಗಿದ ಕನ್ನಿಗೆ ಜೋಡೆತ್ತು
ಹೊಸೆದು ಬಿಡು ಹಗ್ಗ ಮಿನಿ
ಬಾರುಕೋಲ ಡೋಹರ
ಹದಮಾಡಿದ ಹಸಿ ಚರ್ಮ
ಮರೆಯ ಬೇಡ ಮರುಳೆ
ಕಾಯ ಅಲ್ಲವಿದು ನಿನ್ನದು
ಸೆಳೆದು ಹೋಗುವ ತೆರೆ ಯ
ಮೇಲ್ಗಡೆ ಅಂಬಿಗ
ದಾಟಿಸೋಗು ಇದೊಮ್ಮೆ
ಹೊಳೆಯ


About The Author

3 thoughts on “ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ-ಒಂದೊಮ್ಮೆ ದಾಟಿಸು ಹೊಳೆಯ ಅಂಬಿಗ”

  1. Shobha Mallikarjun

    ಪ್ರೌಢವಾದ ಅರ್ಥಪೂರ್ಣವಾದ ಕವಿತೆ ಮೇಡಂ

Leave a Reply

You cannot copy content of this page

Scroll to Top