ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂದು ನಾವು
ಅಪ್ಪ ಅವ್ವನನ್ನು
ಕಾಡಿ ಬೇಡಿ
ಗೊಂಬೆಗಳಿಗಾಗಿ
ಅಳುತ್ತಿದ್ದೆವು

ಜಾತ್ರೆ ಉತ್ಸವದಲ್ಲಿ
ಹಿರಿಯರಿಗೆ ದೇವರ
ಮೇಲಿನ ಭಕ್ತಿ
ನಮಗೋ ಬಣ್ಣ ಬಣ್ಣದ
ಗೊಂಬೆಗಳ ಮೇಲೆ ಆಸಕ್ತಿ

ಅವ್ವ ಹೇಗೋ ಮಾಡಿ
ಅಪ್ಪನ ತುಡುಗಿನಲಿ
ತನ್ನಲಿದ್ದ ದುಡ್ಡು ಕೊಟ್ಟು
ತಂದಳು ಗೊಂಬೆಗಳ
ಮಿತಿ ಇರಲಿಲ್ಲ ಆನಂದಕೆ

ಮುಗಿದ ಶಾಲೆಯ ಪಾಠ
ದಿನವಿಡೀ ಅವುಗಳ
ಜೊತೆಗೆ ನಮ್ಮ ಆಟ
ದಣಿವು ಬೇಸರ ಮಾಯ
ಗೊಂಬೆಗಳ ಜೊತೆಗೆ ನಿದ್ರೆ

ಮೊನ್ನೆ ನಾನು ಕಪಾಟ
ನೋಡಿದೆ ನಾವು ಆಡಿದ
ಗೊಂಬೆಗಳಿದ್ದವು
ನಮ್ಮ ಮಕ್ಕಳು ಆಡಲೆಂದು
ಹೊರ ತೆಗೆದು ಇಟ್ಟೆ

ಮನೆಯಲ್ಲಿ ಕಂಪ್ಯೂಟರ್
ಮೊಬೈಲ್ಗಳ ಹಾವಳಿ
ಪಾಶ್ಚಿಮಾತ್ಯ ಸಂಗೀತದ ದಾಳಿ
ಏಕಾಂಗಿ ಗೊಂಬೆಗಳ ಕಣ್ಣೀರು
ಆಡಲು ಮಕ್ಕಳ ಕರೆದವು ಬಿಕ್ಕಿ ಬಿಕ್ಕಿ


About The Author

2 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಗೊಂಬೆಗಳ ಕಣ್ಣೀರು”

  1. ನಮ್ಮ ಚೆಂದದ ಬಾಲ್ಯವನ್ನು ಕಟ್ಟಿಕೊಟ್ಟ ಮತ್ತು
    ಇವತ್ತಿನ ಮಕ್ಕಳ ವಿಷಾಧನೀಯ
    ಪರಿಸ್ಥಿತಿಯನ್ನು ಬಿಂಬಿಸುವ ಕವನ ಎಲ್ಲರ
    ಮನವನ್ನು ತಟ್ಟುತ್ತದೆ
    ಗೊಂಬೆಗಳ ಕಣ್ಣೀರು.. ಶೀರ್ಷಿಕೆಯಲ್ಲೇ ಎಲ್ಲವೂ ಅಡಗಿದೆ

    ಸುಶಿ

Leave a Reply

You cannot copy content of this page

Scroll to Top