ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವರು ಹೋದ ಹಾದಿಯಲ್ಲಿ
ನಾವು ಹೋಗಲಿಲ್ಲ
ಸತ್ಯ ಸಮತೆ ಶಾಂತಿ ಪ್ರೀತಿ
ಅವರ ವಿಶ್ವ ಪ್ರೇಮದ ಮಂತ್ರವು.

ಕಳಚಿ ಲಿಂಗವ ಮರೆತು ಜಂಗಮ
ಕಾವಿ ಮಠಗಳ ಸಂಗಮ
ಬಸವ ಮುದ್ರೆ ಮೆರೆಸಿ ನಾವು
ದುಡ್ಡು ಮಾಡುವ ತಂತ್ರವು.

ಶ್ರಮವೆ ಪೂಜೆ ಇಲ್ಲ ಪ್ರಾರ್ಥನೆ
ಹಂಚಿ ಬಾಳುವ ಯೋಗವು
ಶರಣ ಹಾದಿ ಕಲ್ಲು ಮುಳ್ಳು
ವಚನ ನಡೆಯ ಊರುಗೋಲು

ಅಕ್ಕ ಅಲ್ಲಮ ದಾಸ ದುಗ್ಗಳೆ
ವಿಶ್ವ ಕ್ರಾಂತಿಯ ಮದ್ದಳೆ
ಜಗಕೆ ಬೇಕು ಬುದ್ಧ ಬಸವರು
ನ್ಯಾಯ ಪಥವ ಹಿಡಿಯಲು

ಅವರ ಸಾವು ನೋವು ನೆನಪು
ಯುದ್ಧ ಗೆದ್ಧ ಯೋಧರು
ತಾವು ಸತ್ತು ವಚನ ಕೊಟ್ಟರು
ಸೂರ್ಯ ಚಂದ್ರರ ಸಾಕ್ಷಿಯು


About The Author

4 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-‘ಅವರು ಹೋದ ಹಾದಿಯಲ್ಲಿ”

  1. ಸತ್ಯ ಸಮತೆ ಶಾಂತಿ ಪ್ರೀತಿ
    ಭಾವ ತುಂಬಿದ ಕವನ
    ಸೂರ್ಯ ಚಂದ್ರರೆ ಸಾಕ್ಷಿ

  2. ಮಾರ್ಮಿಕ ವಿಚಾರಗಳಿರುವ ಕವನ ಸರ್

    ಡಾ ಗೀತಾ ಡಿಗ್ಗೆ

  3. ಜಗಕೆ ಬೇಕು ಬುದ್ಧ ಬಸವರು
    ನ್ಯಾಯ ಪಥವ ಹಿಡಿಯಲು
    ಸತ್ಯಯುತವಾದ ಕಳಕಳಿಯ ನುಡಿಗಳು

    ಸುಶಿ

Leave a Reply

You cannot copy content of this page

Scroll to Top