ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಳೆ ಬಾರದಾಗ ನನ್ನೂರಲ್ಲಿ ಹರಕೆ
ಕಪ್ಪೆಗೂ ಮದುವೆ
ಕತ್ತೆಗೂ ಮೆರವಣಿಗೆ
ಇಳೆಯಲ್ಲಾ ಹಸಿರು ಹೊದೆಯಲಿ ಎಂಬ ಪ್ರಾರ್ಥನೆ!
ಹೊಳೆವ ಸೂರ್ಯನಿಗೆ ಶಾಪ!

ಈಗ ಭಾರೀ ಮಳೆಗೆ
ಧರೆಯೆಲ್ಲ ತೊಳೆದು ಕಸಕಡ್ಡಿ ಕೊಳೆ
ಕಳೆದು ಮನಸ್ಸು ನಿರಾಳ
ಆದರೂ
ಗೊಣಗಾಟ ನಿರಂತರ
ಹಾಳಾದ್ದು ಮಳೆ ಎಲ್ಲೆಲ್ಲೂ ಪಸೆ
ಶೀತೋದ್ಭವ!

ಶಾಪ ಈಗ ಮಳೆರಾಯನಿಗೆ
ಭಾರಿ ಮಳೆ ಸುರಿಸಿದ ವರುಣನಿಗೆ
ನಿರಂತರ ವರಾತ ಹಚ್ಚಿದ ಮಳೆಗೆ

ಹಾಳು ಮಾಡಿದೆ ಇವಳ ಸ್ನೇಹಿತೆಯ
ಮೊಮ್ಮಗನ ಮುಂಜಿ
ಮತ್ತಿಲ್ಲಿ ಇನ್ನಾರದ್ದೋ ದೌಲತ್ತಿನ
ಮೆರವಣಿಗೆಯ ವೈಭವದ ನೋಟ!

ಸೂರ್ಯ ದೇವನ ದರ್ಶನಕ್ಕೆ ಈಗ
ನೂಕು ನುಗ್ಗುಲು
ಹೊಳೆವ ಸೂರ್ಯನೀಗ
ಶಾಪಮುಕ್ತ! ಜಗದ್ವ್ಯಂದ್ಯ!

ಎಲ್ಲರೂ ನಮ್ಮವರೇ
ನೀವು ನಾವು ಅವಳು ಮತ್ತು

ಕಪ್ಪೆ ,ಕತ್ತೆ,
ಹೊಳೆ ಹೊಳೆವ ಸೂರ್ಯ
ಕೊಳೆ ತೊಳೆವ ವರುಣ!

ಪೃಥ್ವಿ ಗುಂಡಗಿದೆ
ಕಾಲ ಚಕ್ರ ತಿರುಗುತ್ತಲೂ ಇದೆ!
ಮನುಷ್ಯ ಹಾಗೇ ಬದುಕಿದ್ದಾನೆ!


About The Author

1 thought on “‘ಕಾಲಚಕ್ರ’ ಡಾ.ಡೋ.ನಾ.ವೆಂಕಟೇಶ ಅವರ ಕವಿತೆ”

Leave a Reply

You cannot copy content of this page

Scroll to Top