ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತುಂಬಿ ತುಳುಕುತ್ತಿದೆ
ಎನ್ನ ಮನ
ನಿನ್ನ ವಿರಾಟ
ಅಗಮ್ಯ ಸೃಷ್ಟಿ ನೋಡಿ
ಬ್ರಹ್ಮಾಂಡದ ಮೋಡಿ
ಸತ್ಯ ಶೋಧಿಸುವ ಪದ್ಮಪಾಣಿ

ಕಣ್ತುಂಬಿ ಬಂದಿದೆ
ನಿನ್ನ ಸೃಷ್ಟಿಯ ವಿಕಲ್ಪ ನೋಡಿ
ತಲೆಯೆತ್ತಿ ಎತ್ತರಕ್ಕೆ ನಿಂತ
ವೃಕ್ಷಗಳ ಸಾಲುಗಳು
ಬಾನ ಚಾಚಿ ಹಬ್ಬಿ ಹೆಣೆದ ಬಳ್ಳಿ
ಹಚ್ಚ ಹಸಿರು ಬನವು
ಎತ್ತಿ ಸ್ವಾಭಿಮಾನದ ಸಿರಿಯು

ಕಿವಿಯು ತುಂಬಿ ಬಂದಿದೆನ್ನ
ಝರಿ ಹಳ್ಳಗಳ ಕಲವರಹವ
ಹಕ್ಕಿ ಪಕ್ಷಿಗಳ ಇಂಚರಧ್ವನಿ
ಪ್ರಕೃತಿಯ ತಿರುಳು
ನಿತ್ಯ ಸುಖಕೆ ಪಥವ
ತೋರುವ ತಾಣವು

ಕುಳಿತಿರಲು ಧ್ಯಾನದಿ
ನಿನ್ನ ಸಿರಿಯ ಮಧ್ಯದಿ
ಎದೆ ತುಂಬಿ ತುಳುಕಿತು
ಅರಳಿತು ಮಂದಾರ
ಎಂಟನೆಯ ಎಳೆತನದ ದಾರಿ
ನೀ ಯಾರು ಯಾಕೆ ಇಲ್ಲಿಗೆ
ಮೂಡಿ ಬಂದೆಡೆ ಪ್ರಶ್ನೆ
ಹೊಸ ಹುಮ್ಮಸ್ಸಿಗೆ
ಎಸೆದಿಹುದು ದಾರಿ
ಬ್ರಹ್ಮಾಂಡವೇ ನೀನು
ನೀನೇ ಬ್ರಹ್ಮಾಂಡ
ಮನವು ಹಳವಂತೆ ಹರಿದು
ನೆಲೆಸಿತ್ತು ಶಾಂತಿಯು

ತುಂಬಿ ಬಂದಿತು ಭಾವ ಉಕ್ಕಿ
ಶಕ್ತಿ ಭಕ್ತಿಯಲಿ ಒಂದಾಗಲು
ಸತ್ಯ ಧರ್ಮಕ್ಕೆ ಒಂದೇ ದಾರಿ
ಪರಿಶುದ್ಧ ಪ್ರೇಮ ಪ್ರೀತಿ

ಮಧುರ ಸತ್ಯಕ್ಕೆ
ಅನಾವರಣವು.


About The Author

3 thoughts on “ಸವಿತಾ ದೇಶಮುಖ ಕವಿತೆ- ತುಂಬಿ ಬಂದಿದೆ”

  1. Sripad Algudkar

    ಪ್ರಕೃತಿಯ ನಡುವೆ ವಿಸ್ಮಯದ ಸೃಷ್ಟಿ ಸುಂದರ ಕವನ

Leave a Reply

You cannot copy content of this page

Scroll to Top