ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೇಳಿ ಕಳೆದು ಕೊಳ್ಳುವುದಕ್ಕಿಂತ
ಹೇಳದೆ ಮನಸ್ಸಿನಲ್ಲಿ
ಉಳಿಸಿಕೊಳ್ಳುವುದೇ ಚೆಂದ
ಹೇಳದೆ ಕೊರಗುತ್ತಾ ಕುಳಿತುಕೊಳ್ಳುವುದಕ್ಕಿಂತ
ಹೇಳಿ ಮನದ ಭಾವನೆಗಳನ್ನು ಸರಿಪಡಿಸಿಕೊಳ್ಳುವುದೇ
ಪ್ರೀತಿಯ ಬಂಧ
ಪಡೆದುಕೊಳ್ಳಬೇಕು ಒಲವಿನಿಂದ ಕಳೆದುಕೊಳ್ಳಬಾರದು ಮುನಿಸಿನಿಂದ ಬಿಟ್ಟುಕೊಡಬೇಕು ಪ್ರೀತಿಯಿಂದ
ಕಣ್ಣೀರು ಸುರಿಸುವುದಕ್ಕಿಂತ ಹಂಚಿಕೊಳ್ಳಬೇಕು ನಲಿವಿನಿಂದ ಯಾವುದನ್ನು ಕಳೆದುಕೊಳ್ಳಬಾರದು ಕೋಪದ ಮಾತಿನಿಂದ
ವಿಮುಖರಾಗಬಾರದು ಎಂದಿಗೂ
ಬದುಕಿನಿಂದ
ಸರಿಪಡಿಸಿ ಕೊಳ್ಳಬೇಕು
ಸಂಬಂಧವನ್ನು ಮಾತು ಕತೆಯಿಂದ  
ಗುಣವಾಗುಣಗಳನ್ನು ತಿದ್ದಿಕೊಳ್ಳಬೇಕು
ಜಾಣ್ಮೆಯಿಂದ
ಎಲ್ಲರ ಮನವನ್ನು ಗೆಲ್ಲಬೇಕು
ನಮ್ಮ ಒಳ್ಳೆಯತನದಿಂದ
ಎಲ್ಲರನ್ನೂ ಹುರಿದುಂಬಿಸುತ್ತ
ಬಾಳಬೇಕು ಕರುಣೆಯಿಂದ
ವೃದ್ಧಿಯಾಗಲಿ ಮಾನವೀಯ
ಮೌಲ್ಯಗಳು
ಬಿಗಿಯಾಗಲಿ ಶಾಂತಿ
ಸೌಹಾರ್ಧತೆಯ ಸಂಬಂಧಗಳು


About The Author

1 thought on “ನಾಗರಾಜ ಜಿ. ಎನ್. ಬಾಡ ಕವಿತೆ-ಅನುಬಂಧ”

Leave a Reply

You cannot copy content of this page

Scroll to Top