ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭೂಮಿ ಬರಡಾಗಿ ಗಿಡ ಮರ ಒಣಗಿ
ಮರೆಯಾದರೂ,
ಕೆಂಡವಾಗಿ ಕಾಯುತ್ತಿದೆ ನೆಲ.
ದುಡಿದುಡಿದು ಸವ್ಹೆದೋದ
ನನ್ನ ಜನ ಬೇಲಿ ಮೇಳೆಯ
ಮರೆಯಲ್ಲಿ ನಿಂತು,
ಒಡಲಲ್ಲಿ ಜೀವ ಹಿಡಿದಿಟ್ಟು
ಅನ್ನಕ್ಕಾಗಿ ಉಸಿರ ಬಿಗಿದಿಟ್ಟು
ಕಾಯುತ —-
ಬಾಳೆಲ್ಲ ಹಿಂಗಾಯ್ತು,
ಗೋಳಿನ ಪದವಾಯ್ತು
ಮುಂದೊಂದು ದಿನ
ಉರಿವ ಧರೆಗೆ ಭೋರ್ಗರೆದು
ಮಳೆ ಸುರಿವುದು,
ನೆಲ ತಂಪಾಗುವ ಭರವಸೆಯಲಿ
ಬರುವ ನಾಳೆಗಳ ನೆನೆದು
ಮೌನವೇ ಧ್ವನಿಯಾಗಿ
ಕನಸುಗಳ ನಂಟು ಹೊತ್ತು,
ಕತ್ತಲೆ ಸರಿದೆ ಸರಿಯುವದು ಎಂದು
ಕರಗಿ ಹೋದ ಕನಸಿಗೆ
ಬೇಲಿಯ ಕಟ್ಟುತಿಹರು.
————————

About The Author

3 thoughts on “ಎನ್.ಜಯಚಂದ್ರನ್ ಕವಿತೆ-ಕನಸಿನ ಬೇಲಿ”

Leave a Reply

You cannot copy content of this page

Scroll to Top