ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಗಾತಿ ನೀನಾದೆ
ತಂಗಾಳಿ ನೀ ತಂದೆ
ಸನಿಹದಲಿ ನೀ ಬರಲು
ಒಲವಿನಲಿ ಮಿಂದೆದ್ದೆ
ನನ್ನೆದೆಯ ಹಾಡಿಗೆ
ಕೊರಳಾಗಿ ನೀ ಬಂದೆ
ನನ್ನುಸಿರ ರಾಗಕೆ
ಇನಿದನಿಯ ನೀ ತಂದೆ
ಕವಿದ ಕಾರ್ಮೋಡವ ಸರಿಸಿ
ಹೊಸ ಬೆಳಕ ನೀ ತಂದೆ
ನನ್ನೆಲ್ಲ ನೋವುಗಳ ಸರಿಸಿ
ಹೊಸ ಖುಷಿಯ ನೀ ತಂದೆ
ಇರುಳಲ್ಲಿ ಬೆಳಗುವ ಚಂದಿರನಂತೆ
ನನಗಾಗಿ ನೀ ಬಂದೆ
ಜಗದ ಖುಷಿಯನೆಲ್ಲ
ನನಗಾಗಿ ನೀ ತಂದೆ
ಶಿಸ್ತು ಸಂಯಮವ
ಬಾಳಲ್ಲಿ ನೀ ತಂದೆ
ಮನದ ಭಾವನೆಗಳ
ಕದವನ್ನು ನೀ ತೆರೆದೆ
ಬರಡಾದ ಭಾವನೆಗಳನ್ನು ಸರಿಸಿ
ಜೀವ ಸೆಲೆಯ ಚಿಮ್ಮಿಸಿದೆ
ಬದುಕಿನ ದಾರಿಯನು
ನೀ ಸುಂದರ ಗೊಳಿಸಿದೆ
ಬದುಕಲ್ಲಿ ಹೊಸ
ಭರವಸೆಯ ಬೆಳಕಾಗಿ ಬಂದೆ
ನನ್ನಲ್ಲಿ ನೂರಾರು ನವ
ಕನಸುಗಳ ತಂದೆ
ಅವಿಸ್ಮರಣೀಯ ಕ್ಷಣಗಳಿಗೆ
ನೀ ಸಾಕ್ಷಿಯಾದೆ


About The Author

2 thoughts on “ನಾಗರಾಜ ಜಿ. ಎನ್. ಬಾಡ ಕವಿತೆ-ನಿನ್ನಿಂದಲೇ..”

  1. ಪ್ರೀತಿ ನಿರಂತರ ಬದುಕಿಗೆ ಸ್ಫೂರ್ತಿಯನ್ನು ನೀಡುವ ಸುಂದರ ಅಸ್ಮಿತೆ. ಅಲ್ಲೆಲ್ಲಾ ಒಂದು ಆರಾಧನೆ ಮನಸ್ಸು ತುಂಬಿ ನಿಂತರೆ ಬದುಕು ಪಲ್ಲವಿಸುತ್ತದೆ. ಸಹಜ ಸಾಲುಗಳ ಹಿರಿತನದೊಟ್ಟಿಗೆ ಒಲವಲ್ಲಿ ಕರಗಿಬಿಡುವ ಹೃದಯದ ಮಾತಿದೆ. ಚೆಂದದ ಸಾಲುಗಳಲ್ಲಿ ಬಣ್ಣಗಳಿವೆ. ರೂಪಗಳಿವೆ. ಭಾವಗಳಿವೆ. ಪ್ರೀತಿಸುವ ಮಾತುಗಳಿವೆ……… ಎಲ್ಲಕ್ಕಿಂತ ಹೆಚ್ಚಾಗಿ ಬದುಕನ್ನು ಬದುಕಿಸುವ ಭರವಸೆ ಭಾವ ಇದೆ……

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ.
    ಕುಮಟಾ……

Leave a Reply

You cannot copy content of this page

Scroll to Top