ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಸಂತ ಕಾಲದಿ ಕೋಗಿಲೆಯ ಇಂಪಾದ ಕುಹೂ ಕುಹೂ ಧ್ವನಿಯ ಕೇಳುವ ಮುನ್ನ ಪದಗಳ ಕಟ್ಟೋಣ ಬಾ
ಹೊಸ ಮಳೆಯು ಬಂದು ಹಳೆ ನೀರನ್ನು ಕೊಚ್ಚಿಕೊಂಡು ಹೋಗುವ ಮುಂಚೆ ಗಟ್ಟಿಯಾಗಿ ನಿಲ್ಲೋಣ ಬಾ

ಮುಂಗಾರು ಮಳೆಯ ಬರಸಿಡಿವ ಮಳೆಗೆ ಮಣ್ಣು ಘಮ ಸೂಸಿದಾಗ ಮನಸು ಹಗುರಾಗುವುದಿಲ್ಲವೇ
ಮುಂಜಾವಲಿ ಎದ್ದು ನೇಗಿಲ ಹಿಡಿದು ಹೊಲಕ್ಕೆ ಹೋಗುವ ರೈತನ ನೋಡಿ ನಗು ಮೊಗದಿ ಹರಸಿ ನಮಿಸೋಣ ಬಾ

ಹಸಿದ ಹೊಟ್ಟೆಯಲಿ ರಟ್ಟೆ ಮುರಿದು ದುಡಿವ ದೀನ ದಲಿತರು ಸರದಿ ಸಾಲಿನಲಿನಿಂತಾಗ ಧನಿಕನಾ ದರ್ಪ ಸಲ್ಲದು
ಕುಸುಮ ಬಾಡುವ ಮೊದಲು ದುಂಬಿಗಳು ಮಕರಂದ ಹೀರುವಂತೆ ಯೌವ್ವನವ ಸವಿಯೋಣ ಬಾ

ನೆತ್ತಿ ಮೇಲಿನ ಸೂರ್ಯ ಪಡುವಣದಿ ಮುಳುಗುವಾಗ ಕೇಸರಿ ಕಿರಣಗಳನ್ನು ಬೀರುವನು
ತತ್ತಿ ಇಡದ ಕೋಳಿ ಬೆಚ್ಚಗೆ ಮಲಗಿರುವ ಮನುಕುಲವನ್ನು ಎಬ್ಬಿಸುವ ಕೂಗು ಕೇಳೋಣ ಬಾ

ಮಾಮರದ ರೆಂಬೆ ಕೊಂಬೆಗಳು ಚಿಗುರಿ ತಂಪನ್ನು ಸೂಸುವಾಗ ಜೋಕಾಲಿ ಕಟ್ಟಿ ಜೀಕುವನು ಕಂಸ
ಬೀಜ ಮೊಳೆತು ಮರವಾಗುವಾಗ ನೆಲದೊಳಗೆ ಬೇರು ಬಿಟ್ಟು ಗಟ್ಟಿಗೊಳ್ಳುವಂತೆ ದೃಢವಾಗಿ ಬೆಳೆಯೋಣ ಬಾ


About The Author

Leave a Reply

You cannot copy content of this page

Scroll to Top