ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬದುಕೆಂಬ ಸಾಗರದ ನೋವೆಂಬ ಕಡಲಿಗೆ
ಸಾರಥಿಯು ನಾವಿಬ್ಬರು ಹುಟ್ಟು ಹಿಡಿಯಲು

ಜೋರಾದ ಬಿರುಗಾಳಿ ಬಂದಿರಲು ಬಾಳಿಗೆ
ನಿಲುವು ಕಾಣದಂತೆ ಕೆಂಗೆಟ್ಟು ಹೋಗಲು

ದೂರದ ಮಾರುತ ಕಣ್ಣಿಗೆ ಸುಂದರವು
ಬಳಿ ಹೋದರೆ ತಿಳಿದೀತು ಮನಕೆಲ್ಲವು

ಯಾರಿಗೆ ಯಾರಿಲ್ಲ ಕಲಿಯುಗದ ಬಾಳಿಗೆ
ನೀರ ಮೇಲಿನ ಗುಳ್ಳಿ ನಿಜವಾಯಿತು

ಹಣೆಗಟ್ಟಿಯೆಂದು ಕಲ್ಲಿಗೆ ಬಡೆದುಕೊಂಡರೆ
ದೇಹಕೆ ನೋವೆಂದು ತಿಳಿಯದೆ ಮೂರ್ಖರೆ

ನೋವಿನಲಿ ಸುಳಿವಿಲ್ಲ ನಿಸ್ವಾರ್ಥ ಬದುಕಿಗೆ
ಹಣವಿದ್ದರೆ ಬಳಗಕೆ ನಾವೆಲ್ಲಾ ಬೇಕಾಗುವೆವು


ಸವಿತಾ ಮುದ್ಗಲ್

About The Author

Leave a Reply

You cannot copy content of this page

Scroll to Top