ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಳೆ ಭಾರದ ಒಡಲಿಗೂ ಭರವಸೆಯ
ಬೀಜ ಬಿತ್ತಿ
ತುತ್ತಿನ ಚೀಲ ತುಂಬಿಸಲು
ತನ್ನ ಕನಸು ಗಾಳಿಗೆ ತೂರಿ
ನೆಲದವ್ವನ ನಂಬಿದವ

ಯಾರ ಹಂಗು ಮೂಲಾಜಿಗು
ಭಾಗದೆ ನೆಗಿಲಲಿ ವಸುಧೆಯ
ಬಗೆದು ಬೆವರ ಹನಿ ಉಣಿಸಿ
ಸುಡುವ ಬಿಸಿಲಿಗೆ ಮೈ ತಾಗಿಸಿ
ಉತ್ತಿ ಉಡಿಯ ತುಂಬಿಸಿ

ಹಸಿವಿನ ಪರಿವೆಯ ಮರೆತು
ಹಸಿರು ಉಡಿಸುವ ಕಾಯಕದಿ
ಬೆರೆತು ತನ್ನೆಲ್ಲ ವ್ಯಾಮೋಹವ
ಮರೆತು ನೆಲದವ್ವನ ಹಸಿರಿಗೆ
ಉಸಿರಾಗಿ ಜೀವ ತೇಯುತ

ಲೋಕದ ಪರಿವೆ ಮರೆತು
ಕಾಯ ಕಾಯಕದಿ ಬೆರೆತು
ಜಗದೊಡಲ ತುಂಬಿಸಲು
ನಿತ್ಯ ಹೊತ್ತುಗಳ ಪರಿವೆಯ
ಮರೆತು ದುಡಿವ ತ್ಯಾಗಿ ರೈತಣ್ಣ


About The Author

Leave a Reply

You cannot copy content of this page

Scroll to Top