ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬಾಗೇಪಲ್ಲಿಯವರ ಕವಿತೆ

ಗಜಲ್
ಜುಲ್ ಕಾಪಿಯಾ

ಹೇಳಲು ಏನೊಂದೂ ಇರಲಿಲ್ಲ ಬರೆಯದಾದೆ
ಹೊಸತೇನೂ ನಡೆಯಲಿಲ್ಲ ನುಡಿಯದಾದೆ

ಸಾಲೊಂದು ಮೂಡಿ ಕೊನೆಗದು ಗಪದ್ಯವಾಯ್ತು
ಕವಿಯೊಬ್ಬರಿಗೆ ಏಕೋ ಹಿಡಿಸಲಿಲ್ಲ ತಿಳಿಯದಾದೆ

ಚೆಲುವೆಯೊಬ್ಬಳು ಮೆಚ್ಚಿ ತಿಳಿಸಿದಳು ಅದನೆ ನನಗೆ
ಕವಿತೆವಸ್ತು ತಾನೆಂದು ಆಕೆ ಅರಿಯಲಿಲ್ಲ ತಿಳಿಸದಾದೆ

ಕವಿತೆ ತಳಹದಿ ತೆಲಗಿನ ಒಂದು ಪ್ರಸಿದ್ಧ ಕಾವ್ಯದ್ದಾಗಿತ್ತು
ಅನುಸರಿಸ ಎನಗೆ ಮನ ಒಪ್ಪಲಿಲ್ಲ ಸುಮ್ಮನಿರದಾದೆ

ಕೃಷ್ಣಾ! ಲೋಕೋ ಭಿನ್ನ ರುಚಿಃ ಎಂಬುದಿದೆ ಗಾದೆ
ಹಲವರು ಓದುವರೆಂದು ತಿಳಿಯಲಿಲ್ಲ ಬರೆಯದಾದೆ.

( ಬರೆದ ಮಾರನೆಯ ದಿನ ಕವಿತೆ ಓದಿದ ಹಿರಿಯ ಪಂಡಿತರೋರ್ವರು ‘ಸಹಜ ಕವಿ “ಎಂದು ಹೊಗಳಿದರು, ಹಾಗಾಗಿ ನಾಲ್ಕನೇ ದ್ವಿಪದಿ ಕೆಳಗಿನ ಸಾಲುಗಳ ಸೇರಿಸುತಿರುವೆ)

ಪಂಡಿತರೊಬ್ಬರು ಓದಿ ಎನ್ನ
^ಸಹಜ ಕವಿ^ ನೀನೆಂದರು
ಏನೂ ಅರ್ಥಕೆ ದಕ್ಕಲಿಲ್ಲ ಖಷಿಪಡದಿರದಾದೆ.


ಬಾಗೇಪಲ್ಲಿ

About The Author

1 thought on “ಬಾಗೇಪಲ್ಲಿಯವರ ಕವಿತೆ”

Leave a Reply

You cannot copy content of this page

Scroll to Top