ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿತ್ಯವು ದುಡಿಯುತ ಕಾಯವ ದಣಿಸಿ
ಬೆವರಲಿ ಭಕ್ತಿಯ ಮಳೆಯ ಸುರಿಸಿ
ರಟ್ಟೆಯ‌ ಶಕ್ತಿಯ ಧರಣಿಗೆ ಸವೆಸಿ
ಮೇಘನ ನಂಬಿ ಬೀಜವ ಹಾಕಿಸಿ

ಬಿಸಿಲು ಮಳೆಗೆ ದೇಹವ ದಂಡಿಸಿ
ಚಳಿಗಾಳಿಗೆ ಬೆದರದೆ ಮೈಯನು ತಾಗಿಸಿ
ಚಿಗುರಿದ ಸಸಿಯ ಜತನವ ಮಾಡುತ
ನಿಯತ್ತಲಿ ದುಡಿದು ಬೆಳೆಯನು ಪಡೆಯುತ

ಧರಣಿಯ ಜನರಿಗೆ ಅನ್ನವ ಹಂಚುತ
ಬೆವರಿನ ಶಕ್ತಿಯ ಜಗಕೆ ಪಸರಿಸುತ
ಅನ್ನುವ ಬೆಳೆದು ದೈವಕೆ ನಮಿಸುತ
ಅವಿರತ ದುಡಿಯುವ ಕರ್ಮಯೋಗಿ ರೈತ

ಹೊಟ್ಟೆಕಿಚ್ಚಿನ ಸೋಂಕು ತಾಕದ
ದ್ವೇಷ ಅಸೂಯೆಯ ಗಾಳಿಯು ಬೀಸದ
ಜಗತ್ತಿನ ಆರ್ಥಿಕತೆಯ ಅಭಿವೃದ್ದಿಯ ಧೀಮಂತ
ಹಂಚಿತಿನ್ನುವ ಮಾನವೀಯತೆಯ ಮಾದರಿ ಸಂತ


About The Author

Leave a Reply

You cannot copy content of this page

Scroll to Top